<p>ಮನಸ್ವಿ ಆಡಲಿಕ್ಕೆ ಹೋರಗೆ ಹೋಗಿ ಇನ್ನು 10 ನಿಮಿಷವೂ ಕಳೆದಿಲ್ಲ ಅದಾಗ್ಲೆ ಅವರಮ್ಮ ಅವಳನ್ನು ಕರೆದುಕೊಂಡು ಒಳಕ್ಕೆ ನಡೆದೇ ಬಿಟ್ಳು. ಶಾಲೆಯಲ್ಲಿನ ಕೃಷ್ಣಾಷ್ಟಮಿ, ವಾರ್ಷಿಕೋತ್ಸವ ಇನ್ನಿತರ ಯಾವುದೇ ಸಮಾರಂಭಗಳಿಗೂ ಅವಳ ಪ್ರವೇಶ ನಿಷಿದ್ಧ ಎನ್ನುವುದನ್ನು ಅವರಮ್ಮ ನಿರ್ಧರಿಸಿಕೊಂಡಾಗಿತ್ತು. <br /> <br /> ಆರು ವರ್ಷದ ಮನಸ್ವಿಗೆ ಈ ರೀತಿಯ ಅನುಭವ ಹೊಸದೇನಲ್ಲ. ಆದ್ರೆ ಅಮ್ಮ ಯಾಕೆ ಹೀಗೆ ಅನ್ನೂದು ಮಾತ್ರ ಗೊತ್ತಾಗುತ್ತಿರಲಿಲ್ಲ ಅವಳಿಗೆ. ಪಾಪ ಆ ಕೂಸಿಗೆ ಹೇಗೆ ಗೊತ್ತಾಗ ಬೇಕು? ಅವಳ `ಬಿಳಿ ಕೂದಲು~ ಅವ್ರ ಅಮ್ಮನ್ನ ಸಂಕಟಕ್ಕೆ ದೂಡುತ್ತಿದೆ ಅಂತ. ಓರಗೆಯ ಮಕ್ಕಳು ಅವಳನ್ನು `ಅಜ್ಜಿ, ಅಜ್ಜಿ~ ಎಂದು ಗೋಳುಹೊಯ್ದುಕೊಳ್ಳೋದು, ಅಲ್ಲದೆ ಅವಳ ನೆರೆತ ಕೂದಲು ಇವಳನ್ನು ಕಂಡು ಪದೇ ಪದೇ ಅಣಕಿಸುತ್ತಿರುವಂತೆ ಭಾಸವಾಗುತ್ತಿತ್ತು.<br /> <br /> ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಶಾಂಪು, ಎಣ್ಣೆ ಪ್ರಯೋಗ ಮಾಡಿದ್ದಾಯಿತು ಆದ್ರೂ ಫಲಿತಾಂಶ ಮಾತ್ರ ಶೂನ್ಯ. ಸಮಸ್ಯೆ ಕಠಿಣವಾಗುವುದೇ ಆಗ . ಬಾಲ ನೆರೆಗೆ ಕಾರಣ, ಪರಿಹಾರ ಸರಿಯಾಗಿ ತಿಳಿದುಕೂಳ್ಳದೆ ಮಗುವಿನ ವ್ಯಕ್ತಿತ್ವವನ್ನು ಕುಂಠಿತಗೋಳಿಸುತ್ತಿರುವುದು ಇಂದು ನಾವು ಮಾಡುತ್ತಿರುವ ಬಹು ದೊಡ್ಡ ತಪ್ಪು.<br /> <strong><br /> ಏನಿದು ಬಾಲನರೆ?</strong><br /> ಮಗುವಿನ ಶೈಶವಾವಸ್ಥೆಯಿಂದ ಹಿಡಿದು ವೃದ್ಧಾಪ್ಯದವರೆಗೂ ದೇಹದ ಪ್ರತಿಯೊಂದು ಅಂಗಗಳು ಒಂದ್ಲ್ಲಿಲೊಂದು ಬದಲಾವಣೆಗೆ ಒಳಪಡುತ್ತಿರುತ್ತವೆ, ಅದು ಪ್ರಕೃತಿ ಸಹಜ. ಅದೇ ತರಹ ಕೂದಲು ಕಪ್ಪು ಬಣ್ಣ ಪಡೆಯಲು `ಮೇಲಾನಿನ್~ ಎನ್ನುವ ರಾಸಾಯನಿಕದ ಸಹಾಯ ಪಡೆಯುತ್ತದೆ. <br /> <br /> ಮೇಲಾನಿನ್ ಪ್ರಮಾಣ ಕಡಿಮೆಯಾದಾಗ ಅಥವಾ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾದಾಗ ಕೂದಲು ತನ್ನ ಸಹಜ ಬಣ್ಣವನ್ನು ಕಳೆದುಕೊಳ್ಳುತ್ತದೆ. ಈ ಕ್ರಿಯೆ ಮಗುವಿನಲ್ಲಿ ಬೇಗ ಆರಂಭಗೊಂಡು ಕೂದಲು ಬೆಳ್ಳಗಾದಾಗ ಅದು `ಬಾಲ ನರೆ~ ಎನಿಸಿಕೊಳ್ಳುತ್ತದೆ.<br /> ಯಾಕೆ ಹೀಗೆ?<br /> <strong><br /> ಇದಕ್ಕೆ ಹಲವು ಕಾರಣಗಳಿವೆ-</strong><br /> -ಗರ್ಭಾವಸ್ಥೆಯಲ್ಲಿ ತಾಯಿಗೆ ಸರಿಯಾದ ಪೋಷಕಾಂಶಗಳು ದೊರೆಯದೆ ಹೋದಾಗ, ಅದರ್ಲ್ಲಲೂ ವಿಟಮಿನ್ ಬಿ3, ಬಿ5 (ಪ್ಯಾಂಟೋಥೋನಿಕ್ ಆಸಿಡ್) ಬಿ8 (ಬಯೋಟಿನ್), ಜಿಂಕ್, ಕ್ಯಾಲ್ಸಿಯಂ ಕೊರತೆ ಎದುರಾದಾಗ<br /> -ಹುಟ್ಟಿನಿಂದಲೇ ಹೊಟ್ಟಿನ ಸಮಸ್ಯೆ ಇದ್ದರೆ<br /> -ಸರಿಯಾದ ಆರೈಕೆ, ಸ್ವಚ್ಛತೆಯ ಕೊರತೆ<br /> -ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ<br /> -ಶೇಕಡ 50 ರಷ್ಟು ಭಾಗ ವಂಶಾನುಗತವಾಗಿ ಬರುತ್ತದೆ. (ಅಜ್ಜ, ಅಜ್ಜಿ, ಅಥವಾ ಕುಟುಂಬದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ಬಾಲನೆರೆ ಕಂಡುಬರುವ ಪ್ರಮಾಣ ಹೆಚ್ಚು.)<br /> <br /> <strong>ಪರಿಹಾರ ಏನು?</strong><br /> ಇದು ಒಂದು ಭಯಂಕರವಾದ ಸಮಸ್ಯೆ ಎನ್ನುವುದರಿಂದ ಮೊದಲು ಹೊರಬರಬೇಕು... ಬಾಲ ನರೆ ಅವಳ/ನ ಸಹಜ ಸಾಮಾಜಿಕ ಬೆಳವಣಿಗೆಗೆ ಅಡ್ಡಿಯುಂಟು ಮಾಡಬಾರದು ಎಂಬುದನ್ನು ಮೊದಲು ಪಾಲಕರು ನೆನಪಿನಲ್ಲಿಟ್ಟು ಕೊಳ್ಳಬೇಕು.<br /> <br /> -ಮಗುವಿಗೆ ಸರಿಯಾದ ಪೋಷಕಾಂಶದ ಪೂರೈಕೆ ಅತ್ಯಗತ್ಯ. ಹೆಚ್ಚಿನ ಪ್ರೊಟೀನ್, ವಿಟಮಿನ್ಸ್ ಕೊಡುವುದರ ಕಡೆ ಗಮನ ವಹಿಸಬೇಕು.<br /> <br /> -ವಿಟಮಿನ್ ಬಿ3,ಬಿ5,ಬಿ8 ಹೆಚ್ಚಿರುವ ಆಹಾರ ಮುಖ್ಯ. ಮೊಳಕೆ ಕಟ್ಟಿದ ಗೋಧಿ, ಯೀಸ್ಟ್, ಸಿಗಡಿಮೀನು, ಓಟ್ಸ್, ಶೇಂಗಾಬೀಜ, ಬಾದಾಮಿ, ಸೋಯಾಬೀನ್, ಲಿವರ್, ಮಟನ್, ಬೀಫ್, ಮಾವಿನ ಹಣ್ಣು. ಇವುಗಳಲ್ಲಿ ಹೇರಳವಾಗಿ ಸಿಗುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.<br /> <br /> -ಜಿಂಕ್, ಕ್ಯಾಲ್ಸಿಯಂ- ಆಲೂಗಡ್ಡೆ, ಜೋಳ, ಗೋಧಿ, ಬಾದಾಮಿ, ಪಾಲಕ್, ಬೆಂಡೆಕಾಯಿಯಲ್ಲಿ ಹೆಚ್ಚಿರುವುದರಿಂದ ದಿನನಿತ್ಯ ಬಳಕೆಯಲ್ಲಿ ಹೆಚ್ಚಾಗಿ ಬಳಸುವುದರಿಂದಲೂ ಈ ಸಮಸ್ಯೆಯಿಂದ ಪಾರಾಗಬಹುದು.<br /> <br /> -ಮಕ್ಕಳನ್ನು ಆದಷ್ಟು ಜಂಕ್ಫುಡ್ ನಿಂದ ದೂರವಿಡಿ. ಚಾಕೊಲೇಟ್, ಐಸ್ ಕ್ರೀಂ ಇವು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಲ್ಲವು.<br /> <br /> -ಶೇಂಗಾ ಚಿಕ್ಕೆ/ ಉಂಡೆ, ರಾಗಿ ಹಲ್ವ, ಹೆಸರು ಬೇಳೆ ಉಂಡೆ ತಿನ್ನಲು ಕೊಡಿ. ಇವುಗಳ ರುಚಿಯು ಹೆಚ್ಚು ಮತ್ತು ಸತ್ವ ಭರಿತವಾದ ಆಹಾರ . <br /> <br /> -ಕೂದಲನ್ನು ಹೆಚ್ಚಾಗಿ ಒಣಗಲು ಬಿಡಬೇಡಿ.<br /> <br /> -ಮೆಂತ್ಯ, ಕೊಬ್ಬರಿ ಎಣ್ಣೆ, ಕರಿಬೇವು ಇದರಿಂದ ತಯಾರಿಸಿದ ಎಣ್ಣೆ ಉಪಯೋಗಿಸುವುದರಿಂದಲೂ ಪರಿಹಾರ ಕಾಣಬಹುದು.<br /> (ಲೇಖಕರ ಮೊಬೈಲ್: 9741479547) <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮನಸ್ವಿ ಆಡಲಿಕ್ಕೆ ಹೋರಗೆ ಹೋಗಿ ಇನ್ನು 10 ನಿಮಿಷವೂ ಕಳೆದಿಲ್ಲ ಅದಾಗ್ಲೆ ಅವರಮ್ಮ ಅವಳನ್ನು ಕರೆದುಕೊಂಡು ಒಳಕ್ಕೆ ನಡೆದೇ ಬಿಟ್ಳು. ಶಾಲೆಯಲ್ಲಿನ ಕೃಷ್ಣಾಷ್ಟಮಿ, ವಾರ್ಷಿಕೋತ್ಸವ ಇನ್ನಿತರ ಯಾವುದೇ ಸಮಾರಂಭಗಳಿಗೂ ಅವಳ ಪ್ರವೇಶ ನಿಷಿದ್ಧ ಎನ್ನುವುದನ್ನು ಅವರಮ್ಮ ನಿರ್ಧರಿಸಿಕೊಂಡಾಗಿತ್ತು. <br /> <br /> ಆರು ವರ್ಷದ ಮನಸ್ವಿಗೆ ಈ ರೀತಿಯ ಅನುಭವ ಹೊಸದೇನಲ್ಲ. ಆದ್ರೆ ಅಮ್ಮ ಯಾಕೆ ಹೀಗೆ ಅನ್ನೂದು ಮಾತ್ರ ಗೊತ್ತಾಗುತ್ತಿರಲಿಲ್ಲ ಅವಳಿಗೆ. ಪಾಪ ಆ ಕೂಸಿಗೆ ಹೇಗೆ ಗೊತ್ತಾಗ ಬೇಕು? ಅವಳ `ಬಿಳಿ ಕೂದಲು~ ಅವ್ರ ಅಮ್ಮನ್ನ ಸಂಕಟಕ್ಕೆ ದೂಡುತ್ತಿದೆ ಅಂತ. ಓರಗೆಯ ಮಕ್ಕಳು ಅವಳನ್ನು `ಅಜ್ಜಿ, ಅಜ್ಜಿ~ ಎಂದು ಗೋಳುಹೊಯ್ದುಕೊಳ್ಳೋದು, ಅಲ್ಲದೆ ಅವಳ ನೆರೆತ ಕೂದಲು ಇವಳನ್ನು ಕಂಡು ಪದೇ ಪದೇ ಅಣಕಿಸುತ್ತಿರುವಂತೆ ಭಾಸವಾಗುತ್ತಿತ್ತು.<br /> <br /> ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಶಾಂಪು, ಎಣ್ಣೆ ಪ್ರಯೋಗ ಮಾಡಿದ್ದಾಯಿತು ಆದ್ರೂ ಫಲಿತಾಂಶ ಮಾತ್ರ ಶೂನ್ಯ. ಸಮಸ್ಯೆ ಕಠಿಣವಾಗುವುದೇ ಆಗ . ಬಾಲ ನೆರೆಗೆ ಕಾರಣ, ಪರಿಹಾರ ಸರಿಯಾಗಿ ತಿಳಿದುಕೂಳ್ಳದೆ ಮಗುವಿನ ವ್ಯಕ್ತಿತ್ವವನ್ನು ಕುಂಠಿತಗೋಳಿಸುತ್ತಿರುವುದು ಇಂದು ನಾವು ಮಾಡುತ್ತಿರುವ ಬಹು ದೊಡ್ಡ ತಪ್ಪು.<br /> <strong><br /> ಏನಿದು ಬಾಲನರೆ?</strong><br /> ಮಗುವಿನ ಶೈಶವಾವಸ್ಥೆಯಿಂದ ಹಿಡಿದು ವೃದ್ಧಾಪ್ಯದವರೆಗೂ ದೇಹದ ಪ್ರತಿಯೊಂದು ಅಂಗಗಳು ಒಂದ್ಲ್ಲಿಲೊಂದು ಬದಲಾವಣೆಗೆ ಒಳಪಡುತ್ತಿರುತ್ತವೆ, ಅದು ಪ್ರಕೃತಿ ಸಹಜ. ಅದೇ ತರಹ ಕೂದಲು ಕಪ್ಪು ಬಣ್ಣ ಪಡೆಯಲು `ಮೇಲಾನಿನ್~ ಎನ್ನುವ ರಾಸಾಯನಿಕದ ಸಹಾಯ ಪಡೆಯುತ್ತದೆ. <br /> <br /> ಮೇಲಾನಿನ್ ಪ್ರಮಾಣ ಕಡಿಮೆಯಾದಾಗ ಅಥವಾ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾದಾಗ ಕೂದಲು ತನ್ನ ಸಹಜ ಬಣ್ಣವನ್ನು ಕಳೆದುಕೊಳ್ಳುತ್ತದೆ. ಈ ಕ್ರಿಯೆ ಮಗುವಿನಲ್ಲಿ ಬೇಗ ಆರಂಭಗೊಂಡು ಕೂದಲು ಬೆಳ್ಳಗಾದಾಗ ಅದು `ಬಾಲ ನರೆ~ ಎನಿಸಿಕೊಳ್ಳುತ್ತದೆ.<br /> ಯಾಕೆ ಹೀಗೆ?<br /> <strong><br /> ಇದಕ್ಕೆ ಹಲವು ಕಾರಣಗಳಿವೆ-</strong><br /> -ಗರ್ಭಾವಸ್ಥೆಯಲ್ಲಿ ತಾಯಿಗೆ ಸರಿಯಾದ ಪೋಷಕಾಂಶಗಳು ದೊರೆಯದೆ ಹೋದಾಗ, ಅದರ್ಲ್ಲಲೂ ವಿಟಮಿನ್ ಬಿ3, ಬಿ5 (ಪ್ಯಾಂಟೋಥೋನಿಕ್ ಆಸಿಡ್) ಬಿ8 (ಬಯೋಟಿನ್), ಜಿಂಕ್, ಕ್ಯಾಲ್ಸಿಯಂ ಕೊರತೆ ಎದುರಾದಾಗ<br /> -ಹುಟ್ಟಿನಿಂದಲೇ ಹೊಟ್ಟಿನ ಸಮಸ್ಯೆ ಇದ್ದರೆ<br /> -ಸರಿಯಾದ ಆರೈಕೆ, ಸ್ವಚ್ಛತೆಯ ಕೊರತೆ<br /> -ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ<br /> -ಶೇಕಡ 50 ರಷ್ಟು ಭಾಗ ವಂಶಾನುಗತವಾಗಿ ಬರುತ್ತದೆ. (ಅಜ್ಜ, ಅಜ್ಜಿ, ಅಥವಾ ಕುಟುಂಬದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ಬಾಲನೆರೆ ಕಂಡುಬರುವ ಪ್ರಮಾಣ ಹೆಚ್ಚು.)<br /> <br /> <strong>ಪರಿಹಾರ ಏನು?</strong><br /> ಇದು ಒಂದು ಭಯಂಕರವಾದ ಸಮಸ್ಯೆ ಎನ್ನುವುದರಿಂದ ಮೊದಲು ಹೊರಬರಬೇಕು... ಬಾಲ ನರೆ ಅವಳ/ನ ಸಹಜ ಸಾಮಾಜಿಕ ಬೆಳವಣಿಗೆಗೆ ಅಡ್ಡಿಯುಂಟು ಮಾಡಬಾರದು ಎಂಬುದನ್ನು ಮೊದಲು ಪಾಲಕರು ನೆನಪಿನಲ್ಲಿಟ್ಟು ಕೊಳ್ಳಬೇಕು.<br /> <br /> -ಮಗುವಿಗೆ ಸರಿಯಾದ ಪೋಷಕಾಂಶದ ಪೂರೈಕೆ ಅತ್ಯಗತ್ಯ. ಹೆಚ್ಚಿನ ಪ್ರೊಟೀನ್, ವಿಟಮಿನ್ಸ್ ಕೊಡುವುದರ ಕಡೆ ಗಮನ ವಹಿಸಬೇಕು.<br /> <br /> -ವಿಟಮಿನ್ ಬಿ3,ಬಿ5,ಬಿ8 ಹೆಚ್ಚಿರುವ ಆಹಾರ ಮುಖ್ಯ. ಮೊಳಕೆ ಕಟ್ಟಿದ ಗೋಧಿ, ಯೀಸ್ಟ್, ಸಿಗಡಿಮೀನು, ಓಟ್ಸ್, ಶೇಂಗಾಬೀಜ, ಬಾದಾಮಿ, ಸೋಯಾಬೀನ್, ಲಿವರ್, ಮಟನ್, ಬೀಫ್, ಮಾವಿನ ಹಣ್ಣು. ಇವುಗಳಲ್ಲಿ ಹೇರಳವಾಗಿ ಸಿಗುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.<br /> <br /> -ಜಿಂಕ್, ಕ್ಯಾಲ್ಸಿಯಂ- ಆಲೂಗಡ್ಡೆ, ಜೋಳ, ಗೋಧಿ, ಬಾದಾಮಿ, ಪಾಲಕ್, ಬೆಂಡೆಕಾಯಿಯಲ್ಲಿ ಹೆಚ್ಚಿರುವುದರಿಂದ ದಿನನಿತ್ಯ ಬಳಕೆಯಲ್ಲಿ ಹೆಚ್ಚಾಗಿ ಬಳಸುವುದರಿಂದಲೂ ಈ ಸಮಸ್ಯೆಯಿಂದ ಪಾರಾಗಬಹುದು.<br /> <br /> -ಮಕ್ಕಳನ್ನು ಆದಷ್ಟು ಜಂಕ್ಫುಡ್ ನಿಂದ ದೂರವಿಡಿ. ಚಾಕೊಲೇಟ್, ಐಸ್ ಕ್ರೀಂ ಇವು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಲ್ಲವು.<br /> <br /> -ಶೇಂಗಾ ಚಿಕ್ಕೆ/ ಉಂಡೆ, ರಾಗಿ ಹಲ್ವ, ಹೆಸರು ಬೇಳೆ ಉಂಡೆ ತಿನ್ನಲು ಕೊಡಿ. ಇವುಗಳ ರುಚಿಯು ಹೆಚ್ಚು ಮತ್ತು ಸತ್ವ ಭರಿತವಾದ ಆಹಾರ . <br /> <br /> -ಕೂದಲನ್ನು ಹೆಚ್ಚಾಗಿ ಒಣಗಲು ಬಿಡಬೇಡಿ.<br /> <br /> -ಮೆಂತ್ಯ, ಕೊಬ್ಬರಿ ಎಣ್ಣೆ, ಕರಿಬೇವು ಇದರಿಂದ ತಯಾರಿಸಿದ ಎಣ್ಣೆ ಉಪಯೋಗಿಸುವುದರಿಂದಲೂ ಪರಿಹಾರ ಕಾಣಬಹುದು.<br /> (ಲೇಖಕರ ಮೊಬೈಲ್: 9741479547) <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>