<p>1972ರ ಭಾರತೀಯ ವನ್ಯಜೀವಿ ರಕ್ಷಣಾ ಕಾಯಿದೆಯ ಪ್ರಕಾರ ಅಭಯಾರಣ್ಯಗಳಲ್ಲಿ ವನ್ಯಪ್ರಾಣಿಗಳಿಗೆ ಅನುಕೂಲತೆಗಳ ಸೃಷ್ಟಿ ಮತ್ತು ಅವುಗಳ ರಕ್ಷಣೆಗೆ ಸಂಬಂಧಿಸಿದ ಕೆಲಸಗಳನ್ನು ಬಿಟ್ಟು ಎಲ್ಲಾ ವಿಧವಾದ ಮಾನವ ಚಟುವಟಿಕೆಗಳನ್ನು ನಿಷೇಧಿಸಿ ಜೀವಿವೈವಿಧ್ಯತೆಯ ಅಭಿವೃದ್ಧಿಯ ಹೊಣೆಯನ್ನು ಪ್ರಕೃತಿಗೆ ಬಿಡಲಾಗಿದೆ. ಈ ಕಾಯಿದೆಯಡಿ ನಿರ್ವಹಿಸಬೇಕಾದ ಕೆಲಸಗಳನ್ನು ನಿರ್ಧರಿಸುವ ಅಧಿಕಾರವನ್ನು ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಇದೆ.<br /> <br /> ಈ ಜವಾಬ್ದಾರಿಯನ್ನು ಅರಿತು ಮುಖ್ಯ ವನ್ಯಜೀವಿ ಪರಿಪಾಲಕರು ವನ್ಯಜೀವಿಗಳ ಬೀಡುಗಳನ್ನು ಪರಿಶೀಲಿಸುತ್ತಾ ಅವುಗಳಲ್ಲಿ ಬೆಂಕಿ ಆಕರ್ಷಿಸುವ ಒಣಗಿದ ಬಿದಿರು ಮೆಳೆಗಳು, ಅತಿಯಾಗಿ ಒಣಗಿದ ಮರ ಮುಟ್ಟುಗಳನ್ನು ನಿಯಮಾನುಸಾರ ತೆಗೆಸಲು ಕ್ರಮ ಕೈಗೊಳ್ಳಬೇಕು.<br /> <br /> ದಟ್ಟವಾಗಿ ಎಲೆ ಉದುರಿಸುತ್ತಾ ಬೇಸಿಗೆ ಬೆಂಕಿ ಆಕರ್ಷಿಸುವ ತೇಗದ ಮರಗಳ ತೋಪುಗಳು ಮತ್ತು ದಟ್ಟ ಹುಲ್ಲುಗಾವಲುಗಳನ್ನು ಗುರುತಿಸಬೇಕು. ಅವುಗಳನ್ನು ಬೇಸಿಗೆ ಪ್ರಾರಂಭವಾಗುವುದಕ್ಕೆ ಮುಂಚೆ ಸುಡಿಸಿ, ಕಾಡಿಗೆ ಅಕಸ್ಮಿಕ ಬೆಂಕಿ ತಗುಲಿದರೂ ಅದನ್ನು ನಂದಿಸಲು ಸಾಧ್ಯವಾಗುವಂತೆ ಅಲ್ಲಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಿಕೊಳ್ಳಬೇಕು. <br /> <br /> ಸಿಬ್ಬಂದಿ ಕೂಲಿ ಕಾರ್ಮಿಕರನ್ನು ನೇಮಿಸಿ, ವಾಹನ ಸೌಕರ್ಯ ಕೊಟ್ಟು ಅಭಯಾರಣ್ಯಗಳನ್ನು ರಕ್ಷಿಸುವುದರ ಜೊತೆಗೆ ಹುಲ್ಲು ಬೆಳೆಯಲು ಅವಕಾಶ ಕೊಡದಂತೆ ಮರಗಳ ತಲೆ ಕಡಿಸುವುದು, ಕಳೆಗಳನ್ನು ಕೀಳಿಸಿ ಹುಲ್ಲು ಬೆಳೆಯುವಂತೆ ಪರಿಸರವನ್ನು ನಿರ್ಮಿಸುವುದು ಅವರ ಜವಾಬ್ದಾರಿಯಾಗಿರುತ್ತದೆ.<br /> <br /> ಕಳೆದ 40 ವರ್ಷಗಳಿಂದ ಅಭಯಾರಣ್ಯಗಳಲ್ಲಿ ಪ್ರಕೃತಿಯಲ್ಲಿ ಸಹಜವಾಗಿ ವಿಲೀನವಾಗಲು ಬಿಟ್ಟಿರುವ ಒಣಗಿದ ಬಿದಿರು ಮೆಳೆಗಳು, ಮರ ಮುಟ್ಟುಗಳನ್ನು ತೆಗೆಸದೆ ಇರುವುದರಿಂದ ಅವುಗಳ ಪ್ರಮಾಣ ದಟ್ಟವಾಗಿದ್ದು ಸ್ವಲ್ಪ ಬೆಂಕಿ ಬಿದ್ದರೂ ಹೊತ್ತಿ ಉರಿಯುವ ಸ್ಥಿತಿಯಲ್ಲಿರುತ್ತವೆ. ದಟ್ಟವಾಗಿ ಬೀಳುವ ತೇಗದ ತರಗೆಲೆಗಳ ರಾಶಿ ಪೆಟ್ರೋಲಿನಂತಿರುತ್ತದೆ. <br /> <br /> `ಅವುಗಳು ಪ್ರಕೃತಿಯಲ್ಲಿ ಲೀನವಾಗುತ್ತವೆ, ಅವುಗಳನ್ನು ತೆಗೆಸುವ, ಮುನ್ನೆಚ್ಚರಿಕೆ ಕ್ರಮವಾಗಿ ಸುಡುವ ಅವಶ್ಯಕತೆ ಇಲ್ಲ~ ಎಂದು ವಾದಿಸುತ್ತಾ ಕುಳಿತಿರುವ ಆಭಯಾರಣ್ಯಗಳ ಪರಿಪಾಲಕರ ಧೋರಣೆಯೇ ಇಂದಿನ ಭಯಾನಕ ಬೆಂಕಿಗೆ ಕಾರಣ.<br /> <br /> ಇದರಿಂದಲೇ ಸಣ್ಣ, ವಯಸ್ಸಾದ ಪ್ರಾಣಿಗಳು, ಪಕ್ಷಿಗಳು, ಅವುಗಳ ಮೊಟ್ಟೆ, ಗೂಡು ಮತ್ತು ಸೂಕ್ಷ್ಮ ಕ್ರಿಮಿಕೀಟಗಳು ಹಾಗೂ ಸಸ್ಯರಾಶಿಯ ಬೀಜಗಳು, ಸಸಿಗಳೆಲ್ಲ ಕಾಳ್ಗಿಚ್ಚಿಗೆ ಸಿಕ್ಕಿ ನಾಶವಾಗಿವೆ.<br /> <br /> ಬಿದಿರು ಲಡ್ಡಾಗಿ ಮಣ್ಣಿನಲ್ಲಿ ಸೇರಿಹೋಗಲು 15 ವರ್ಷ, ಕಟ್ಟಿಗೆ ಗೆದ್ದಲು ತಿಂದು ಮಣ್ಣಾಗಲು 20ರಿಂದ 25 ವರ್ಷಗಳು ಬೇಕು. ಅಲ್ಲಿಯವರೆಗೆ ಯಾವ ಅಭಯಾರಣ್ಯವನ್ನೂ ಬೇಸಿಗೆಯಲ್ಲಿ ಬೆಂಕಿ ಬೀಳದಂತೆ ರಕ್ಷಿಸಲು ಸಾಧ್ಯವೇ ಎಂಬುದನ್ನು ಈ ಪರಿಪಾಲಕರು ಯೋಚಿಸಬೇಕು. ಹಾಗೆಯೇ ಒಣಗಿದ ಬಿದಿರು, ಕಟ್ಟಿಗೆ ಬೆಂಕಿಗೆ ಆಹುತಿಯಾಗದೆ ಹೇಗೆ ನಿಸರ್ಗದಲ್ಲಿ ಸೇರಿ ಹೋಗುತ್ತದೆ ಎಂಬುದನ್ನು ಇವರು ಮನಗಾಣಬೇಕಾಗುತ್ತದೆ.<br /> <br /> ಈಗ ಬೆಂಕಿ ಅನಾಹುತಕ್ಕೆ ಕಾರಣಗಳನ್ನು ಪತ್ತೆ ಹಚ್ಚಲು ಸರ್ಕಾರ ನೇಮಿಸಿರುವ ಸಮಿತಿಯ ವರದಿಯಿಂದ ಮುಂದೆ ಅರಣ್ಯಗಳಿಗೆ ಬೆಂಕಿ ಬೀಳುವುದನ್ನು ತಡೆಗಟ್ಟಲು ಎಂದಿಗೂ ಸಾಧ್ಯವಾಗುವುದಿಲ್ಲ. ಪ್ರಾಣಿಗಳ ರಕ್ಷಣೆಗೂ ಅನುಕೂಲವಾಗುವುದಿಲ್ಲ.<br /> <br /> ಆ ರೀತಿ ವರದಿಗಳ ಆಧಾರದ ಮೇಲೆ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದ್ದರೆ 1992 ರಲ್ಲಿ ನಾಗರಹೊಳೆಯನ್ನು ಭಸ್ಮಮಾಡಿದ ಬೆಂಕಿ, ಈಗ ಮತ್ತೆ ಮರುಕಳಿಸುತ್ತಿರಲಿಲ್ಲ.<br /> <br /> 2003ರಲ್ಲಿ ಭದ್ರಾ ಅಭಯಾರಣ್ಯವನ್ನು ಭಸ್ಮಮಾಡಿದ ಬೆಂಕಿ ಈಗ ಕಾಣಿಸಿಕೊಳ್ಳುತ್ತಿರಲಿಲ್ಲ. ಶೆಟ್ಟಿಹಳ್ಳಿ, ಕುದುರೆ ಮುಖ, ಬಂಡೀಪುರ ಅಭಯಾರಣ್ಯಗಳಲ್ಲಿ 4-5 ವರ್ಷಗಳಿಗೊಮ್ಮೆ ವನ್ಯಜೀವಿಗಳ ಬೀಡನ್ನು ಸುಡುತ್ತಿರುವ ಬೆಂಕಿ ಈ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.<br /> <br /> ಆದುದರಿಂದ ಈಗ 40 ವರ್ಷಗಳಿಂದ ಅನುಸರಿಸುತ್ತಿರುವ ಅಭಯಾರಣ್ಯಗಳ ಬೆಂಕಿ ನಿಯಂತ್ರಣ ಚಟುವಟಿಕೆಗಳನ್ನು ಮರುಪರಿಶೀಲಿಸಬೇಕಾಗಿದೆ. ವಾಸ್ತವತೆಯ ಕಡೆ ಮನ ಹರಿಸಿ, ಪ್ರತಿ ವರ್ಷ ಹೆಚ್ಚುತ್ತಿರುವ ಒಣಬಿದಿರು, ಕಟ್ಟಿಗೆ ತೆಗಿಸಿ, ತೇಗದ ತರಗು, ದಟ್ಟ ಒಣ ಹುಲ್ಲುಗಾವಲುಗಳನ್ನು ಮುಂಚಿತವಾಗಿ ಸುಡಿಸಬೇಕು.<br /> <br /> ಆಕಸ್ಮಿಕ ಬೆಂಕಿ ಶಮನಕ್ಕೆ ಆಧುನಿಕ ನಿಯಂತ್ರಣ ಕ್ರಮಗಳನ್ನು ಅನುಸರಿಸಿದರೆ ಅಭಯಾರಣ್ಯಗಳನ್ನು ಭಯಾನಕ ಬೆಂಕಿ ಹಾವಳಿಯಿಂದ ರಕ್ಷಿಸಬಹುದು. ಈ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದು ವನ್ಯಪ್ರಾಣಿಗಳಿಗಾಗುತ್ತಿರುವ ನಷ್ಟವನ್ನು ತಪ್ಪಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>1972ರ ಭಾರತೀಯ ವನ್ಯಜೀವಿ ರಕ್ಷಣಾ ಕಾಯಿದೆಯ ಪ್ರಕಾರ ಅಭಯಾರಣ್ಯಗಳಲ್ಲಿ ವನ್ಯಪ್ರಾಣಿಗಳಿಗೆ ಅನುಕೂಲತೆಗಳ ಸೃಷ್ಟಿ ಮತ್ತು ಅವುಗಳ ರಕ್ಷಣೆಗೆ ಸಂಬಂಧಿಸಿದ ಕೆಲಸಗಳನ್ನು ಬಿಟ್ಟು ಎಲ್ಲಾ ವಿಧವಾದ ಮಾನವ ಚಟುವಟಿಕೆಗಳನ್ನು ನಿಷೇಧಿಸಿ ಜೀವಿವೈವಿಧ್ಯತೆಯ ಅಭಿವೃದ್ಧಿಯ ಹೊಣೆಯನ್ನು ಪ್ರಕೃತಿಗೆ ಬಿಡಲಾಗಿದೆ. ಈ ಕಾಯಿದೆಯಡಿ ನಿರ್ವಹಿಸಬೇಕಾದ ಕೆಲಸಗಳನ್ನು ನಿರ್ಧರಿಸುವ ಅಧಿಕಾರವನ್ನು ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಇದೆ.<br /> <br /> ಈ ಜವಾಬ್ದಾರಿಯನ್ನು ಅರಿತು ಮುಖ್ಯ ವನ್ಯಜೀವಿ ಪರಿಪಾಲಕರು ವನ್ಯಜೀವಿಗಳ ಬೀಡುಗಳನ್ನು ಪರಿಶೀಲಿಸುತ್ತಾ ಅವುಗಳಲ್ಲಿ ಬೆಂಕಿ ಆಕರ್ಷಿಸುವ ಒಣಗಿದ ಬಿದಿರು ಮೆಳೆಗಳು, ಅತಿಯಾಗಿ ಒಣಗಿದ ಮರ ಮುಟ್ಟುಗಳನ್ನು ನಿಯಮಾನುಸಾರ ತೆಗೆಸಲು ಕ್ರಮ ಕೈಗೊಳ್ಳಬೇಕು.<br /> <br /> ದಟ್ಟವಾಗಿ ಎಲೆ ಉದುರಿಸುತ್ತಾ ಬೇಸಿಗೆ ಬೆಂಕಿ ಆಕರ್ಷಿಸುವ ತೇಗದ ಮರಗಳ ತೋಪುಗಳು ಮತ್ತು ದಟ್ಟ ಹುಲ್ಲುಗಾವಲುಗಳನ್ನು ಗುರುತಿಸಬೇಕು. ಅವುಗಳನ್ನು ಬೇಸಿಗೆ ಪ್ರಾರಂಭವಾಗುವುದಕ್ಕೆ ಮುಂಚೆ ಸುಡಿಸಿ, ಕಾಡಿಗೆ ಅಕಸ್ಮಿಕ ಬೆಂಕಿ ತಗುಲಿದರೂ ಅದನ್ನು ನಂದಿಸಲು ಸಾಧ್ಯವಾಗುವಂತೆ ಅಲ್ಲಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಿಕೊಳ್ಳಬೇಕು. <br /> <br /> ಸಿಬ್ಬಂದಿ ಕೂಲಿ ಕಾರ್ಮಿಕರನ್ನು ನೇಮಿಸಿ, ವಾಹನ ಸೌಕರ್ಯ ಕೊಟ್ಟು ಅಭಯಾರಣ್ಯಗಳನ್ನು ರಕ್ಷಿಸುವುದರ ಜೊತೆಗೆ ಹುಲ್ಲು ಬೆಳೆಯಲು ಅವಕಾಶ ಕೊಡದಂತೆ ಮರಗಳ ತಲೆ ಕಡಿಸುವುದು, ಕಳೆಗಳನ್ನು ಕೀಳಿಸಿ ಹುಲ್ಲು ಬೆಳೆಯುವಂತೆ ಪರಿಸರವನ್ನು ನಿರ್ಮಿಸುವುದು ಅವರ ಜವಾಬ್ದಾರಿಯಾಗಿರುತ್ತದೆ.<br /> <br /> ಕಳೆದ 40 ವರ್ಷಗಳಿಂದ ಅಭಯಾರಣ್ಯಗಳಲ್ಲಿ ಪ್ರಕೃತಿಯಲ್ಲಿ ಸಹಜವಾಗಿ ವಿಲೀನವಾಗಲು ಬಿಟ್ಟಿರುವ ಒಣಗಿದ ಬಿದಿರು ಮೆಳೆಗಳು, ಮರ ಮುಟ್ಟುಗಳನ್ನು ತೆಗೆಸದೆ ಇರುವುದರಿಂದ ಅವುಗಳ ಪ್ರಮಾಣ ದಟ್ಟವಾಗಿದ್ದು ಸ್ವಲ್ಪ ಬೆಂಕಿ ಬಿದ್ದರೂ ಹೊತ್ತಿ ಉರಿಯುವ ಸ್ಥಿತಿಯಲ್ಲಿರುತ್ತವೆ. ದಟ್ಟವಾಗಿ ಬೀಳುವ ತೇಗದ ತರಗೆಲೆಗಳ ರಾಶಿ ಪೆಟ್ರೋಲಿನಂತಿರುತ್ತದೆ. <br /> <br /> `ಅವುಗಳು ಪ್ರಕೃತಿಯಲ್ಲಿ ಲೀನವಾಗುತ್ತವೆ, ಅವುಗಳನ್ನು ತೆಗೆಸುವ, ಮುನ್ನೆಚ್ಚರಿಕೆ ಕ್ರಮವಾಗಿ ಸುಡುವ ಅವಶ್ಯಕತೆ ಇಲ್ಲ~ ಎಂದು ವಾದಿಸುತ್ತಾ ಕುಳಿತಿರುವ ಆಭಯಾರಣ್ಯಗಳ ಪರಿಪಾಲಕರ ಧೋರಣೆಯೇ ಇಂದಿನ ಭಯಾನಕ ಬೆಂಕಿಗೆ ಕಾರಣ.<br /> <br /> ಇದರಿಂದಲೇ ಸಣ್ಣ, ವಯಸ್ಸಾದ ಪ್ರಾಣಿಗಳು, ಪಕ್ಷಿಗಳು, ಅವುಗಳ ಮೊಟ್ಟೆ, ಗೂಡು ಮತ್ತು ಸೂಕ್ಷ್ಮ ಕ್ರಿಮಿಕೀಟಗಳು ಹಾಗೂ ಸಸ್ಯರಾಶಿಯ ಬೀಜಗಳು, ಸಸಿಗಳೆಲ್ಲ ಕಾಳ್ಗಿಚ್ಚಿಗೆ ಸಿಕ್ಕಿ ನಾಶವಾಗಿವೆ.<br /> <br /> ಬಿದಿರು ಲಡ್ಡಾಗಿ ಮಣ್ಣಿನಲ್ಲಿ ಸೇರಿಹೋಗಲು 15 ವರ್ಷ, ಕಟ್ಟಿಗೆ ಗೆದ್ದಲು ತಿಂದು ಮಣ್ಣಾಗಲು 20ರಿಂದ 25 ವರ್ಷಗಳು ಬೇಕು. ಅಲ್ಲಿಯವರೆಗೆ ಯಾವ ಅಭಯಾರಣ್ಯವನ್ನೂ ಬೇಸಿಗೆಯಲ್ಲಿ ಬೆಂಕಿ ಬೀಳದಂತೆ ರಕ್ಷಿಸಲು ಸಾಧ್ಯವೇ ಎಂಬುದನ್ನು ಈ ಪರಿಪಾಲಕರು ಯೋಚಿಸಬೇಕು. ಹಾಗೆಯೇ ಒಣಗಿದ ಬಿದಿರು, ಕಟ್ಟಿಗೆ ಬೆಂಕಿಗೆ ಆಹುತಿಯಾಗದೆ ಹೇಗೆ ನಿಸರ್ಗದಲ್ಲಿ ಸೇರಿ ಹೋಗುತ್ತದೆ ಎಂಬುದನ್ನು ಇವರು ಮನಗಾಣಬೇಕಾಗುತ್ತದೆ.<br /> <br /> ಈಗ ಬೆಂಕಿ ಅನಾಹುತಕ್ಕೆ ಕಾರಣಗಳನ್ನು ಪತ್ತೆ ಹಚ್ಚಲು ಸರ್ಕಾರ ನೇಮಿಸಿರುವ ಸಮಿತಿಯ ವರದಿಯಿಂದ ಮುಂದೆ ಅರಣ್ಯಗಳಿಗೆ ಬೆಂಕಿ ಬೀಳುವುದನ್ನು ತಡೆಗಟ್ಟಲು ಎಂದಿಗೂ ಸಾಧ್ಯವಾಗುವುದಿಲ್ಲ. ಪ್ರಾಣಿಗಳ ರಕ್ಷಣೆಗೂ ಅನುಕೂಲವಾಗುವುದಿಲ್ಲ.<br /> <br /> ಆ ರೀತಿ ವರದಿಗಳ ಆಧಾರದ ಮೇಲೆ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದ್ದರೆ 1992 ರಲ್ಲಿ ನಾಗರಹೊಳೆಯನ್ನು ಭಸ್ಮಮಾಡಿದ ಬೆಂಕಿ, ಈಗ ಮತ್ತೆ ಮರುಕಳಿಸುತ್ತಿರಲಿಲ್ಲ.<br /> <br /> 2003ರಲ್ಲಿ ಭದ್ರಾ ಅಭಯಾರಣ್ಯವನ್ನು ಭಸ್ಮಮಾಡಿದ ಬೆಂಕಿ ಈಗ ಕಾಣಿಸಿಕೊಳ್ಳುತ್ತಿರಲಿಲ್ಲ. ಶೆಟ್ಟಿಹಳ್ಳಿ, ಕುದುರೆ ಮುಖ, ಬಂಡೀಪುರ ಅಭಯಾರಣ್ಯಗಳಲ್ಲಿ 4-5 ವರ್ಷಗಳಿಗೊಮ್ಮೆ ವನ್ಯಜೀವಿಗಳ ಬೀಡನ್ನು ಸುಡುತ್ತಿರುವ ಬೆಂಕಿ ಈ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.<br /> <br /> ಆದುದರಿಂದ ಈಗ 40 ವರ್ಷಗಳಿಂದ ಅನುಸರಿಸುತ್ತಿರುವ ಅಭಯಾರಣ್ಯಗಳ ಬೆಂಕಿ ನಿಯಂತ್ರಣ ಚಟುವಟಿಕೆಗಳನ್ನು ಮರುಪರಿಶೀಲಿಸಬೇಕಾಗಿದೆ. ವಾಸ್ತವತೆಯ ಕಡೆ ಮನ ಹರಿಸಿ, ಪ್ರತಿ ವರ್ಷ ಹೆಚ್ಚುತ್ತಿರುವ ಒಣಬಿದಿರು, ಕಟ್ಟಿಗೆ ತೆಗಿಸಿ, ತೇಗದ ತರಗು, ದಟ್ಟ ಒಣ ಹುಲ್ಲುಗಾವಲುಗಳನ್ನು ಮುಂಚಿತವಾಗಿ ಸುಡಿಸಬೇಕು.<br /> <br /> ಆಕಸ್ಮಿಕ ಬೆಂಕಿ ಶಮನಕ್ಕೆ ಆಧುನಿಕ ನಿಯಂತ್ರಣ ಕ್ರಮಗಳನ್ನು ಅನುಸರಿಸಿದರೆ ಅಭಯಾರಣ್ಯಗಳನ್ನು ಭಯಾನಕ ಬೆಂಕಿ ಹಾವಳಿಯಿಂದ ರಕ್ಷಿಸಬಹುದು. ಈ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದು ವನ್ಯಪ್ರಾಣಿಗಳಿಗಾಗುತ್ತಿರುವ ನಷ್ಟವನ್ನು ತಪ್ಪಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>