<p>‘ತೂಕ ಮಾಡಲಿಕ್ಕೆ ಆಗದಷ್ಟು ಒಳ್ಳೆಯ ವಿಮರ್ಶೆ, ಪ್ರತಿಕ್ರಿಯೆ ಪತ್ರಿಕೆ-ಮಾಧ್ಯಮಗಳಿಂದ ಸಿಕ್ಕಿದೆ. ನಾವೆಲ್ಲ ಹೊಸಬರಾದರೂ ನಮ್ಮ ಕೆಲಸದ ಬಗ್ಗೆ ಚಿತ್ರರಂಗದ ಹಿರಿಯರು, ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ತುಂಬಾ ಖುಷಿಯಾಗಿದೆ....’<br /> <br /> ‘ಒಲವೇ ಮಂದಾರ’ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಬೆಚ್ಚನೆ ಪ್ರತಿಕ್ರಿಯೆ ಬಗ್ಗೆ ಖುಷಿಯಿಂದ ಮಾತನಾಡುತ್ತಿದ್ದ ನಿರ್ಮಾಪಕ ಬಿ.ಗೋವಿಂದರಾಜ್ ಅವರ ಮಾತು, ಖುಷಿಯಿಂದ ವಿಷಾದದತ್ತ ಸಾಗಿತು-<br /> <br /> ‘ಪಿವಿಆರ್ನವರು ಹೀಗೇಕೆ ಮಾಡ್ತಿದಾರೋ ಗೊತ್ತಾಗ್ತಿಲ್ಲ. ಒಬ್ಬರೇ ಇರಲಿ, ಇಬ್ಬರೇ ಇರಲಿ- ಹಿಂದಿ, ಇಂಗ್ಲಿಷ್ ಸಿನಿಮಾಗಳು ಓಡ್ತಾನೇ ಇರ್ತವೆ. ಆದರೆ ಒಳ್ಳೇ ಕಲೆಕ್ಷನ್ ಇದ್ರೂ ಕನ್ನಡ ಚಿತ್ರಗಳು ಮಾತ್ರ ಪಿವಿಆರ್ನಲ್ಲಿ ವಾರ ದಾಟೋದೇ ಇಲ್ಲ’. ಗೋವಿಂದರಾಜ್ ಮಾತಿನಲ್ಲಿ ವಿಷಾದವೂ ಇತ್ತು. ಆರೋಪವೂ ಇತ್ತು.<br /> <br /> ‘ಒಳ್ಳೇ ಕಲೆಕ್ಷನ್ ಇದ್ರೂ ಕೂಡ ಹೇಳ್ದೇ ಕೇಳ್ದೇ ನಮ್ಮ ಸಿನಿಮಾ ತೆಗೆದು ಹಾಕಿದ್ದಾರೆ. ಕೊನೆಕೊನೆಗಂತೂ ಸುಮಾರು ಎಂಬತ್ತು ಪ್ರೇಕ್ಷಕರು ಥಿಯೇಟರ್ನಲ್ಲಿದ್ದರು. ಪಿವಿಆರ್ನ ಈ ಧೋರಣೆ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲೇಬೇಕು. ನಾವು ಹೊಸಬರು. ನಮಗಾದ ಅನ್ಯಾಯದ ಬಗ್ಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದ ಹಿರಿಯರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಕಾನೂನು ಸಾಧ್ಯತೆಗಳ ಚೌಕಟ್ಟನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ಈ ಕಹಿಯ ಹೊರತಾಗಿಯೂ ಬೆಂಗಳೂರಿನ ಇಪ್ಪತ್ತು ಥಿಯೇಟರ್ಗಳು ಪ್ರಿಂಟ್ಸ್ ಕೇಳ್ತಿರೋದು ಸಂತೋಷಕ್ಕೆ ಕಾರಣವಾಗಿದೆ. ಈವರೆಗಿನ ಕಲೆಕ್ಷನ್ ಲೆಕ್ಕ ಹಾಕಿಲ್ಲ. ಅಂದರೆ ಲೆಕ್ಕ ಮಾಡೋವಷ್ಟು ಕಲೆಕ್ಷನ್ ಆಗಿಲ್ಲ ಅಂದ್ಕೊಳ್ಳಿ’ ಎಂದು ಗೋವಿಂದರಾಜು ಮುಗುಳ್ನಕ್ಕರು. <br /> <br /> ಚೊಚ್ಚಿಲ ಚಿತ್ರಕ್ಕೆ ಸಿಕ್ಕ ಉತ್ತೇಜನ ನಿರ್ದೇಶಕ ಜಯತೀರ್ಥ ಅವರನ್ನೂ ಪುಳಕಗೊಳಿಸಿತ್ತು. ‘ನಿರ್ಮಾಪಕರು ಸಂತೃಪ್ತರಾದರೆ ನಾವು ಬದುಕಿದಂತೆ. ಈ ಚಿತ್ರ ಬಿಡುಗಡೆಯಾಗುವ ಮೊದಲು ನಾವು ಹೊಸಬರು ಯಾರ್ಯಾರೋ ಆಗಿದ್ವಿ. ಈಗ ಸೆಲೆಬ್ರಿಟಿಗಳಂತಾಗಿದ್ದೀವಿ. ಎಲ್ಲ ಕಡೆಯಿಂದ ಫೋನ್ ಮಾಡ್ತಿದಾರೆ. ಸಿನಿಮಾ ಚೆನ್ನಾಗಿದೆ ಅಂತ ಹೇಳ್ತಿದಾರೆ’ ಎಂದು ಭಾವುಕರಾದರು. ‘ಚಿತ್ರದ ಪ್ರಚಾರ ಕಾರ್ಯಕ್ಕೆ ಬೇರೆ ನಿರ್ದೇಶಕರನ್ನು ಬಳಸಿಕೊಳ್ಳುವ ಯೋಚನೆ ಇದೆ’ ಎಂದೂ ಜಯತೀರ್ಥ ಹೇಳಿದರು.<br /> <br /> ಛಾಯಾಗ್ರಾಹಕ ರವಿಕುಮಾರ್- ‘ನಮ್ಮ ಮೊದಲ ಪ್ರಯತ್ನ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂಡಸ್ಟ್ರಿಯವರು ಮುಂದಿನ ಹೆಜ್ಜೆಗೆ ಉತ್ಸಾಹ ತುಂಬ್ತಿದಾರೆ. ಮೊದಲ ಅವಕಾಶಕ್ಕೇ ಇಷ್ಟೊಂದು ಭರವಸೆ ಸಿಕ್ಕಿದ್ದು ನೋಡಿ ಉತ್ಸಾಹದ ಜೊತೆ ಭಯವೂ ಹುಟ್ಟಿದೆ’ ಎಂದರು. ಚಿತ್ರದ ತಾಂತ್ರಿಕ ವರ್ಗ ಮತ್ತು ಸಹಾಯಕರ ಸಹಕಾರ-ಕಾರ್ಯತತ್ಪರತೆಯನ್ನು ರವಿಕುಮಾರ್ ನೆನಪಿಸಿಕೊಂಡರು. <br /> <br /> ಮೊದಲ ಬಾರಿಗೆ ನಾಯಕನಾಗಿರುವ ಶ್ರೀಕಾಂತ್, ನಟಿ ವೀಣಾ ಸುಂದರ್, ಪ್ರಧಾನ ನಿರ್ಮಾಪಕ ಸಂಪತ್ಕುಮಾರ್ ಮಂದಾರ ನಿರ್ಮಾಣದ ಅನುಭವಗಳನ್ನು ಮೆಲುಕು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ತೂಕ ಮಾಡಲಿಕ್ಕೆ ಆಗದಷ್ಟು ಒಳ್ಳೆಯ ವಿಮರ್ಶೆ, ಪ್ರತಿಕ್ರಿಯೆ ಪತ್ರಿಕೆ-ಮಾಧ್ಯಮಗಳಿಂದ ಸಿಕ್ಕಿದೆ. ನಾವೆಲ್ಲ ಹೊಸಬರಾದರೂ ನಮ್ಮ ಕೆಲಸದ ಬಗ್ಗೆ ಚಿತ್ರರಂಗದ ಹಿರಿಯರು, ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ತುಂಬಾ ಖುಷಿಯಾಗಿದೆ....’<br /> <br /> ‘ಒಲವೇ ಮಂದಾರ’ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಬೆಚ್ಚನೆ ಪ್ರತಿಕ್ರಿಯೆ ಬಗ್ಗೆ ಖುಷಿಯಿಂದ ಮಾತನಾಡುತ್ತಿದ್ದ ನಿರ್ಮಾಪಕ ಬಿ.ಗೋವಿಂದರಾಜ್ ಅವರ ಮಾತು, ಖುಷಿಯಿಂದ ವಿಷಾದದತ್ತ ಸಾಗಿತು-<br /> <br /> ‘ಪಿವಿಆರ್ನವರು ಹೀಗೇಕೆ ಮಾಡ್ತಿದಾರೋ ಗೊತ್ತಾಗ್ತಿಲ್ಲ. ಒಬ್ಬರೇ ಇರಲಿ, ಇಬ್ಬರೇ ಇರಲಿ- ಹಿಂದಿ, ಇಂಗ್ಲಿಷ್ ಸಿನಿಮಾಗಳು ಓಡ್ತಾನೇ ಇರ್ತವೆ. ಆದರೆ ಒಳ್ಳೇ ಕಲೆಕ್ಷನ್ ಇದ್ರೂ ಕನ್ನಡ ಚಿತ್ರಗಳು ಮಾತ್ರ ಪಿವಿಆರ್ನಲ್ಲಿ ವಾರ ದಾಟೋದೇ ಇಲ್ಲ’. ಗೋವಿಂದರಾಜ್ ಮಾತಿನಲ್ಲಿ ವಿಷಾದವೂ ಇತ್ತು. ಆರೋಪವೂ ಇತ್ತು.<br /> <br /> ‘ಒಳ್ಳೇ ಕಲೆಕ್ಷನ್ ಇದ್ರೂ ಕೂಡ ಹೇಳ್ದೇ ಕೇಳ್ದೇ ನಮ್ಮ ಸಿನಿಮಾ ತೆಗೆದು ಹಾಕಿದ್ದಾರೆ. ಕೊನೆಕೊನೆಗಂತೂ ಸುಮಾರು ಎಂಬತ್ತು ಪ್ರೇಕ್ಷಕರು ಥಿಯೇಟರ್ನಲ್ಲಿದ್ದರು. ಪಿವಿಆರ್ನ ಈ ಧೋರಣೆ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲೇಬೇಕು. ನಾವು ಹೊಸಬರು. ನಮಗಾದ ಅನ್ಯಾಯದ ಬಗ್ಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದ ಹಿರಿಯರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಕಾನೂನು ಸಾಧ್ಯತೆಗಳ ಚೌಕಟ್ಟನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ಈ ಕಹಿಯ ಹೊರತಾಗಿಯೂ ಬೆಂಗಳೂರಿನ ಇಪ್ಪತ್ತು ಥಿಯೇಟರ್ಗಳು ಪ್ರಿಂಟ್ಸ್ ಕೇಳ್ತಿರೋದು ಸಂತೋಷಕ್ಕೆ ಕಾರಣವಾಗಿದೆ. ಈವರೆಗಿನ ಕಲೆಕ್ಷನ್ ಲೆಕ್ಕ ಹಾಕಿಲ್ಲ. ಅಂದರೆ ಲೆಕ್ಕ ಮಾಡೋವಷ್ಟು ಕಲೆಕ್ಷನ್ ಆಗಿಲ್ಲ ಅಂದ್ಕೊಳ್ಳಿ’ ಎಂದು ಗೋವಿಂದರಾಜು ಮುಗುಳ್ನಕ್ಕರು. <br /> <br /> ಚೊಚ್ಚಿಲ ಚಿತ್ರಕ್ಕೆ ಸಿಕ್ಕ ಉತ್ತೇಜನ ನಿರ್ದೇಶಕ ಜಯತೀರ್ಥ ಅವರನ್ನೂ ಪುಳಕಗೊಳಿಸಿತ್ತು. ‘ನಿರ್ಮಾಪಕರು ಸಂತೃಪ್ತರಾದರೆ ನಾವು ಬದುಕಿದಂತೆ. ಈ ಚಿತ್ರ ಬಿಡುಗಡೆಯಾಗುವ ಮೊದಲು ನಾವು ಹೊಸಬರು ಯಾರ್ಯಾರೋ ಆಗಿದ್ವಿ. ಈಗ ಸೆಲೆಬ್ರಿಟಿಗಳಂತಾಗಿದ್ದೀವಿ. ಎಲ್ಲ ಕಡೆಯಿಂದ ಫೋನ್ ಮಾಡ್ತಿದಾರೆ. ಸಿನಿಮಾ ಚೆನ್ನಾಗಿದೆ ಅಂತ ಹೇಳ್ತಿದಾರೆ’ ಎಂದು ಭಾವುಕರಾದರು. ‘ಚಿತ್ರದ ಪ್ರಚಾರ ಕಾರ್ಯಕ್ಕೆ ಬೇರೆ ನಿರ್ದೇಶಕರನ್ನು ಬಳಸಿಕೊಳ್ಳುವ ಯೋಚನೆ ಇದೆ’ ಎಂದೂ ಜಯತೀರ್ಥ ಹೇಳಿದರು.<br /> <br /> ಛಾಯಾಗ್ರಾಹಕ ರವಿಕುಮಾರ್- ‘ನಮ್ಮ ಮೊದಲ ಪ್ರಯತ್ನ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂಡಸ್ಟ್ರಿಯವರು ಮುಂದಿನ ಹೆಜ್ಜೆಗೆ ಉತ್ಸಾಹ ತುಂಬ್ತಿದಾರೆ. ಮೊದಲ ಅವಕಾಶಕ್ಕೇ ಇಷ್ಟೊಂದು ಭರವಸೆ ಸಿಕ್ಕಿದ್ದು ನೋಡಿ ಉತ್ಸಾಹದ ಜೊತೆ ಭಯವೂ ಹುಟ್ಟಿದೆ’ ಎಂದರು. ಚಿತ್ರದ ತಾಂತ್ರಿಕ ವರ್ಗ ಮತ್ತು ಸಹಾಯಕರ ಸಹಕಾರ-ಕಾರ್ಯತತ್ಪರತೆಯನ್ನು ರವಿಕುಮಾರ್ ನೆನಪಿಸಿಕೊಂಡರು. <br /> <br /> ಮೊದಲ ಬಾರಿಗೆ ನಾಯಕನಾಗಿರುವ ಶ್ರೀಕಾಂತ್, ನಟಿ ವೀಣಾ ಸುಂದರ್, ಪ್ರಧಾನ ನಿರ್ಮಾಪಕ ಸಂಪತ್ಕುಮಾರ್ ಮಂದಾರ ನಿರ್ಮಾಣದ ಅನುಭವಗಳನ್ನು ಮೆಲುಕು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>