<p>ತಿಂಗಳ ಹಿಂದಷ್ಟೇ ಚಿತ್ರೀಕರಣ ಪ್ರಾರಂಭಿಸಿದ್ದ `ಅಲೆಮಾರಿ~ ಚಿತ್ರತಂಡ ಸುದ್ದಿಮಿತ್ರರಿಗೆ ಮತ್ತೆ ಎದುರಾಯಿತು. ಸತತ ಚಿತ್ರೀಕರಣ ನಡೆಸಿ ಅರ್ಧಭಾಗವನ್ನು ಆಗಲೇ ಮುಗಿಸಿದ್ದೇವೆ ಎಂಬ ವರದಿ ಒಪ್ಪಿಸುವ ಸಲುವಾಗಿ ಚಿತ್ರದ ಬಳಗ ಮಾತಿಗಿಳಿಯಿತು.<br /> <br /> ಅಶ್ವಿನಿ ಆಡಿಯೋದ ಬೇರೆ ಚಿತ್ರಗಳ ಧ್ವನಿಮುದ್ರಿಕೆಗಳಲ್ಲಿ ಕೇಳಿಸಿದ್ದ ಚಿತ್ರದ ಶೀರ್ಷಿಕೆ ಗೀತೆ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಈ ಹಾಡಿನ ಮೊಬೈಲ್ ರಿಂಗ್ಟೋನ್ ಅನ್ನು ದೀಪಾವಳಿಗೆ ಬಿಡುಗಡೆ ಮಾಡುವ ಇರಾದೆ ನಮ್ಮದು ಎಂದು ಚಿತ್ರತಂಡ ಸುದ್ದಿಗೋಷ್ಠಿಯ ಮುಖ್ಯ ಉದ್ದೇಶವನ್ನು ಬಿಚ್ಚಿಟ್ಟಿತು.<br /> <br /> `ಒಂದು ಹಾಡು ಸೇರಿದಂತೆ ಶೇಕಡಾ 60ರಷ್ಟು ಭಾಗ ಟಾಕಿ ಚಿತ್ರೀಕರಣ ಮುಗಿದಿದೆ. ಇನ್ನು ಐದು ಹಾಡು ಮತ್ತು ಉಳಿದ ಟಾಕಿ ಭಾಗದ ಚಿತ್ರೀಕರಣ ಶೀಘ್ರವೇ ಮುಗಿಯಲಿದೆ~ ಎಂದರು ನಿರ್ಮಾಪಕ ಬಿ.ಕೆ.ಶ್ರೀನಿವಾಸ್.<br /> <br /> ಅಶ್ವಿನಿ ಆಡಿಯೋದ ಕೃಷ್ಣಪ್ರಸಾದ್- `ನಿರ್ದೇಶಕ ಸಂತು ಅವರನ್ನು ನಿರ್ಮಾಪಕರು ತಮ್ಮ ಬಳಿ ಬಂದಾಗ ಈತನೇನು ಸಿನಿಮಾ ಮಾಡುತ್ತಾನೆ ಎಂದು ನಿರ್ಲಕ್ಷಿಸಿದ್ದೆ.<br /> <br /> ಆದರೆ ಉತ್ತಮ ನಿರ್ದೇಶಕನಾಗುವ ಭರವಸೆಯನ್ನು ಅವರೀಗಲೇ ಮೂಡಿಸಿದ್ದಾರೆ~ ಎಂದು ನಿರ್ಮಾಪಕ ಶ್ರೀನಿವಾಸ್ರ ಹೊಗಳಿಕೆಗೆ ನಿಂತರು.ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಸಂತುಗೆ ಇದುವರೆಗೆ ಸಾಗಿರುವ ಚಿತ್ರೀಕರಣ ನೆಮ್ಮದಿ ನೀಡಿದೆ. <br /> <br /> ಚಿತ್ರೀಕರಣದ ಉಳಿದ ಭಾಗವನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸುವ ಬಯಕೆ ಅವರದು. ಚಿತ್ರತಂಡದಲ್ಲಿ ನಾನೇ ಹೊಸಬ. ನುರಿತ ಕಲಾವಿದರು ಇರುವುದರಿಂದ ಸುಲಭವಾಗಿಯೇ ಚಿತ್ರೀಕರಣ ನಡೆಯುತ್ತಿದೆ. <br /> <br /> ಸದ್ಯ ಬೆಂಗಳೂರಿನಲ್ಲಿ ಮಾತ್ರ ಚಿತ್ರೀಕರಣ ನಡೆದಿದ್ದು, ಉಳಿದ ಪ್ರಮುಖ ಸನ್ನಿವೇಶಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗುವುದು ಎಂದು ಹೇಳಿದರು.<br /> <br /> ಬೇರೆ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ತೆರಳಿದ್ದರಿಂದ ನಾಯಕ ನಟ ಯೋಗೀಶ್ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು. `ಜೋಶ್~, `ಮನಸಾಲಜಿ~ ಚಿತ್ರಗಳಲ್ಲಿ ನಾಯಕನಟರಾಗಿ ಕಾಣಿಸಿಕೊಂಡಿದ್ದ ರಾಕೇಶ್ ಅಡಿಗ `ಅಲೆಮಾರಿ~ಗಾಗಿ ಮಚ್ಚು ಹಿಡಿಯುವ ಖಳನಾಯಕನಾಗಿ ನಟಿಸಿದ್ದಾರೆ.<br /> <br /> ಇದು ತಮಗೆ ಹೊಸ ಇಮೇಜ್ ತಂದು ಕೊಡುವ ಪಾತ್ರ ಎಂದರು ರಾಕೇಶ್. ನಾಯಕನಟನಾಗುವ ಹಂಬಲವಿದ್ದರೂ ವಿಲನ್ ಪಾತ್ರ ಮಾಡುವುದು ತಪ್ಪೇನಲ್ಲ. ಇದು ಹೊಸ ಅನುಭವ ನೀಡುತ್ತದೆ. ಪಾತ್ರಕ್ಕಾಗಿ ಸಾಕಷ್ಟು ಹೋಮ್ವರ್ಕ್ ಮಾಡುತ್ತಿದ್ದೇನೆ ಎಂದು ಹೇಳಿದರು.<br /> <br /> ಒಳ್ಳೆಯ ಚಿತ್ರತಂಡದ ಜೊತೆ ವಿಭಿನ್ನ ಮತ್ತು ಒಳ್ಳೆಯ ಪಾತ್ರ ಮಾಡುತ್ತಿರುವ ಖುಷಿಯನ್ನು ರಾಧಿಕಾ ಪಂಡಿತ್ ಹಂಚಿಕೊಂಡರು. `ಸಂತು ಭರವಸೆಯ ನಿರ್ದೇಶಕ~ ಎನ್ನುವುದು ಅವರ ಪ್ರಶಂಸೆ. ಸಂಪ್ರದಾಯಸ್ಥ ಕುಟುಂಬದ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿರುವ ರಾಧಿಕಾಗೆ ಇದು ಸಾಕಷ್ಟು ಮುದ ನೀಡಿದ ಪಾತ್ರವಂತೆ.<br /> <br /> ನವೆಂಬರ್ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಅಲೆಮಾರಿಯ ಅಲೆದಾಟದ ಕಥೆ ನೋಡಲು ಜನವರಿಯವರೆಗೆ ಕಾಯಬೇಕಷ್ಟೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿಂಗಳ ಹಿಂದಷ್ಟೇ ಚಿತ್ರೀಕರಣ ಪ್ರಾರಂಭಿಸಿದ್ದ `ಅಲೆಮಾರಿ~ ಚಿತ್ರತಂಡ ಸುದ್ದಿಮಿತ್ರರಿಗೆ ಮತ್ತೆ ಎದುರಾಯಿತು. ಸತತ ಚಿತ್ರೀಕರಣ ನಡೆಸಿ ಅರ್ಧಭಾಗವನ್ನು ಆಗಲೇ ಮುಗಿಸಿದ್ದೇವೆ ಎಂಬ ವರದಿ ಒಪ್ಪಿಸುವ ಸಲುವಾಗಿ ಚಿತ್ರದ ಬಳಗ ಮಾತಿಗಿಳಿಯಿತು.<br /> <br /> ಅಶ್ವಿನಿ ಆಡಿಯೋದ ಬೇರೆ ಚಿತ್ರಗಳ ಧ್ವನಿಮುದ್ರಿಕೆಗಳಲ್ಲಿ ಕೇಳಿಸಿದ್ದ ಚಿತ್ರದ ಶೀರ್ಷಿಕೆ ಗೀತೆ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಈ ಹಾಡಿನ ಮೊಬೈಲ್ ರಿಂಗ್ಟೋನ್ ಅನ್ನು ದೀಪಾವಳಿಗೆ ಬಿಡುಗಡೆ ಮಾಡುವ ಇರಾದೆ ನಮ್ಮದು ಎಂದು ಚಿತ್ರತಂಡ ಸುದ್ದಿಗೋಷ್ಠಿಯ ಮುಖ್ಯ ಉದ್ದೇಶವನ್ನು ಬಿಚ್ಚಿಟ್ಟಿತು.<br /> <br /> `ಒಂದು ಹಾಡು ಸೇರಿದಂತೆ ಶೇಕಡಾ 60ರಷ್ಟು ಭಾಗ ಟಾಕಿ ಚಿತ್ರೀಕರಣ ಮುಗಿದಿದೆ. ಇನ್ನು ಐದು ಹಾಡು ಮತ್ತು ಉಳಿದ ಟಾಕಿ ಭಾಗದ ಚಿತ್ರೀಕರಣ ಶೀಘ್ರವೇ ಮುಗಿಯಲಿದೆ~ ಎಂದರು ನಿರ್ಮಾಪಕ ಬಿ.ಕೆ.ಶ್ರೀನಿವಾಸ್.<br /> <br /> ಅಶ್ವಿನಿ ಆಡಿಯೋದ ಕೃಷ್ಣಪ್ರಸಾದ್- `ನಿರ್ದೇಶಕ ಸಂತು ಅವರನ್ನು ನಿರ್ಮಾಪಕರು ತಮ್ಮ ಬಳಿ ಬಂದಾಗ ಈತನೇನು ಸಿನಿಮಾ ಮಾಡುತ್ತಾನೆ ಎಂದು ನಿರ್ಲಕ್ಷಿಸಿದ್ದೆ.<br /> <br /> ಆದರೆ ಉತ್ತಮ ನಿರ್ದೇಶಕನಾಗುವ ಭರವಸೆಯನ್ನು ಅವರೀಗಲೇ ಮೂಡಿಸಿದ್ದಾರೆ~ ಎಂದು ನಿರ್ಮಾಪಕ ಶ್ರೀನಿವಾಸ್ರ ಹೊಗಳಿಕೆಗೆ ನಿಂತರು.ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಸಂತುಗೆ ಇದುವರೆಗೆ ಸಾಗಿರುವ ಚಿತ್ರೀಕರಣ ನೆಮ್ಮದಿ ನೀಡಿದೆ. <br /> <br /> ಚಿತ್ರೀಕರಣದ ಉಳಿದ ಭಾಗವನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸುವ ಬಯಕೆ ಅವರದು. ಚಿತ್ರತಂಡದಲ್ಲಿ ನಾನೇ ಹೊಸಬ. ನುರಿತ ಕಲಾವಿದರು ಇರುವುದರಿಂದ ಸುಲಭವಾಗಿಯೇ ಚಿತ್ರೀಕರಣ ನಡೆಯುತ್ತಿದೆ. <br /> <br /> ಸದ್ಯ ಬೆಂಗಳೂರಿನಲ್ಲಿ ಮಾತ್ರ ಚಿತ್ರೀಕರಣ ನಡೆದಿದ್ದು, ಉಳಿದ ಪ್ರಮುಖ ಸನ್ನಿವೇಶಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗುವುದು ಎಂದು ಹೇಳಿದರು.<br /> <br /> ಬೇರೆ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ತೆರಳಿದ್ದರಿಂದ ನಾಯಕ ನಟ ಯೋಗೀಶ್ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು. `ಜೋಶ್~, `ಮನಸಾಲಜಿ~ ಚಿತ್ರಗಳಲ್ಲಿ ನಾಯಕನಟರಾಗಿ ಕಾಣಿಸಿಕೊಂಡಿದ್ದ ರಾಕೇಶ್ ಅಡಿಗ `ಅಲೆಮಾರಿ~ಗಾಗಿ ಮಚ್ಚು ಹಿಡಿಯುವ ಖಳನಾಯಕನಾಗಿ ನಟಿಸಿದ್ದಾರೆ.<br /> <br /> ಇದು ತಮಗೆ ಹೊಸ ಇಮೇಜ್ ತಂದು ಕೊಡುವ ಪಾತ್ರ ಎಂದರು ರಾಕೇಶ್. ನಾಯಕನಟನಾಗುವ ಹಂಬಲವಿದ್ದರೂ ವಿಲನ್ ಪಾತ್ರ ಮಾಡುವುದು ತಪ್ಪೇನಲ್ಲ. ಇದು ಹೊಸ ಅನುಭವ ನೀಡುತ್ತದೆ. ಪಾತ್ರಕ್ಕಾಗಿ ಸಾಕಷ್ಟು ಹೋಮ್ವರ್ಕ್ ಮಾಡುತ್ತಿದ್ದೇನೆ ಎಂದು ಹೇಳಿದರು.<br /> <br /> ಒಳ್ಳೆಯ ಚಿತ್ರತಂಡದ ಜೊತೆ ವಿಭಿನ್ನ ಮತ್ತು ಒಳ್ಳೆಯ ಪಾತ್ರ ಮಾಡುತ್ತಿರುವ ಖುಷಿಯನ್ನು ರಾಧಿಕಾ ಪಂಡಿತ್ ಹಂಚಿಕೊಂಡರು. `ಸಂತು ಭರವಸೆಯ ನಿರ್ದೇಶಕ~ ಎನ್ನುವುದು ಅವರ ಪ್ರಶಂಸೆ. ಸಂಪ್ರದಾಯಸ್ಥ ಕುಟುಂಬದ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿರುವ ರಾಧಿಕಾಗೆ ಇದು ಸಾಕಷ್ಟು ಮುದ ನೀಡಿದ ಪಾತ್ರವಂತೆ.<br /> <br /> ನವೆಂಬರ್ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಅಲೆಮಾರಿಯ ಅಲೆದಾಟದ ಕಥೆ ನೋಡಲು ಜನವರಿಯವರೆಗೆ ಕಾಯಬೇಕಷ್ಟೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>