<p>ಬೀದರ್: ಮಾಡಿಸಿದ ಕೆಲವೇ ತಿಂಗಳಲ್ಲಿ ಚಿನ್ನದ ಮಂಗಳಸೂತ್ರ ಕಡಿದು ಹೋದ ಪ್ರಕರಣವೊಂದಕ್ಕೆ ಸಂಬಂಧಿಸಿ ಜಿಲ್ಲಾ ಗ್ರಾಹಕರ ವೇದಿಕೆ ಚಿನ್ನದ ವ್ಯಾಪಾರಿಯೊಬ್ಬರಿಗೆ ದಂಡ ವಿಧಿಸಿ ತೀರ್ಪು ನೀಡಿದೆ.<br /> <br /> ನಗರದ ಉಸ್ಮಾನ್ಗಂಜ್ನ ಚಿನ್ನದ ವ್ಯಾಪಾರಿ ಶಿವರಾಜ ಬಿರಾದಾರ್ ದಂಡಕ್ಕೆ ಒಳಗಾದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ನಿವಾಸಿ ರೇಣುಕಾ ಸಂತೋಷ ಶ್ರೀಮಾಳೆ ವೇದಿಕೆಯ ಮೊರೆ ಹೋಗಿ ನ್ಯಾಯ ಪಡೆದವರು.<br /> <br /> ಮಾನಸಿಕ ವ್ಯಥೆ, ನಷ್ಟ ಹಾಗೂ ಖರ್ಚು- ವೆಚ್ಚಕ್ಕಾಗಿ ರೇಣುಕಾ ಅವರಿಗೆ ರೂ. 2 ಸಾವಿರ ಪರಿಹಾರ ಒದಗಿಸಲು ವೇದಿಕೆ ಆದೇಶಿಸಿದೆ. ಅಲ್ಲದೆ, ಯಾವುದೇ ಖರ್ಚಿಲ್ಲದೇ 15 ದಿನಗಳ ಒಳಗೆ ಮಂಗಳಸೂತ್ರವನ್ನು ದುರಸ್ತಿ ಮಾಡಿಸಿಕೊಡುವಂತೆ ವ್ಯಾಪಾರಿಗೆ ಸೂಚಿಸಿದೆ.<br /> <br /> 2008 ರ ಸೆಪ್ಟೆಂಬರ್ನಲ್ಲಿ ರೂ. 49,905 ಪಾವತಿಸಿ ತಾನು ಬಿರಾದಾರ್ ಅವರ ಅಂಗಡಿಯಲ್ಲಿ ಮಂಗಳಸೂತ್ರ ಮಾಡಿಸಿದ್ದೆ. ಅದನ್ನು ಉಪಯೋಗಿಸಲು ಆರಂಭಿಸಿದ 8-10 ತಿಂಗಳಲ್ಲಿಯೇ ಮಂಗಳಸೂತ್ರ ಕಡಿದು ಹೋಯಿತು. ನಂತರ ದಾರ ಕಟ್ಟಿ ಅದನ್ನು ಬಳಸಲಾಯಿತು ಎಂದು ರೇಣುಕಾ ವೇದಿಕೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದರು.<br /> ವಿಚಾರಣೆ ಹಂತದಲ್ಲಿ `ಸರಿಯಾದ ರೀತಿಯಲ್ಲಿ ಉಪಯೋಗಿದ ಕಾರಣ ಹೀಗಾಗಿದೆ. ಇದಕ್ಕೆ ತಾನು ಕಾರಣನಲ್ಲ, ದುರಸ್ತಿ ಮಾಡಿಕೊಡುವ ಜವಾಬ್ದಾರಿಯೂ ತನ್ನದಲ್ಲ ಎಂದು ವ್ಯಾಪಾರಿ ವಾದಿಸಿದರು. <br /> <br /> ವಿಚಾರಣೆ ನಡೆಸಿದ ವೇದಿಕೆಯು ರೇಣುಕಾ ಅವರಿಗೆ ಪರಿಹಾರ ಕೊಡುವ ಜೊತೆಗೆ ಹಾಳಾಗಿರುವ ಮಂಗಳಸೂತ್ರವನ್ನು ರಿಪೇರಿ ಮಾಡಿಕೊಡುವಂತೆ ಮೇ 25 ರಂದು ತೀರ್ಪಿತ್ತಿದೆ. <br /> <br /> ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯೆ ಭಾರತಿ ಪಾಟೀಲ್ ಆದೇಶ ಪ್ರಕಟಿಸಿದ್ದಾರೆ. ದೂರುದಾರರ ಪರ ವಕೀಲ ಕೇಶವರಾವ್ ಶ್ರೀಮಾಳೆ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಮಾಡಿಸಿದ ಕೆಲವೇ ತಿಂಗಳಲ್ಲಿ ಚಿನ್ನದ ಮಂಗಳಸೂತ್ರ ಕಡಿದು ಹೋದ ಪ್ರಕರಣವೊಂದಕ್ಕೆ ಸಂಬಂಧಿಸಿ ಜಿಲ್ಲಾ ಗ್ರಾಹಕರ ವೇದಿಕೆ ಚಿನ್ನದ ವ್ಯಾಪಾರಿಯೊಬ್ಬರಿಗೆ ದಂಡ ವಿಧಿಸಿ ತೀರ್ಪು ನೀಡಿದೆ.<br /> <br /> ನಗರದ ಉಸ್ಮಾನ್ಗಂಜ್ನ ಚಿನ್ನದ ವ್ಯಾಪಾರಿ ಶಿವರಾಜ ಬಿರಾದಾರ್ ದಂಡಕ್ಕೆ ಒಳಗಾದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ನಿವಾಸಿ ರೇಣುಕಾ ಸಂತೋಷ ಶ್ರೀಮಾಳೆ ವೇದಿಕೆಯ ಮೊರೆ ಹೋಗಿ ನ್ಯಾಯ ಪಡೆದವರು.<br /> <br /> ಮಾನಸಿಕ ವ್ಯಥೆ, ನಷ್ಟ ಹಾಗೂ ಖರ್ಚು- ವೆಚ್ಚಕ್ಕಾಗಿ ರೇಣುಕಾ ಅವರಿಗೆ ರೂ. 2 ಸಾವಿರ ಪರಿಹಾರ ಒದಗಿಸಲು ವೇದಿಕೆ ಆದೇಶಿಸಿದೆ. ಅಲ್ಲದೆ, ಯಾವುದೇ ಖರ್ಚಿಲ್ಲದೇ 15 ದಿನಗಳ ಒಳಗೆ ಮಂಗಳಸೂತ್ರವನ್ನು ದುರಸ್ತಿ ಮಾಡಿಸಿಕೊಡುವಂತೆ ವ್ಯಾಪಾರಿಗೆ ಸೂಚಿಸಿದೆ.<br /> <br /> 2008 ರ ಸೆಪ್ಟೆಂಬರ್ನಲ್ಲಿ ರೂ. 49,905 ಪಾವತಿಸಿ ತಾನು ಬಿರಾದಾರ್ ಅವರ ಅಂಗಡಿಯಲ್ಲಿ ಮಂಗಳಸೂತ್ರ ಮಾಡಿಸಿದ್ದೆ. ಅದನ್ನು ಉಪಯೋಗಿಸಲು ಆರಂಭಿಸಿದ 8-10 ತಿಂಗಳಲ್ಲಿಯೇ ಮಂಗಳಸೂತ್ರ ಕಡಿದು ಹೋಯಿತು. ನಂತರ ದಾರ ಕಟ್ಟಿ ಅದನ್ನು ಬಳಸಲಾಯಿತು ಎಂದು ರೇಣುಕಾ ವೇದಿಕೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದರು.<br /> ವಿಚಾರಣೆ ಹಂತದಲ್ಲಿ `ಸರಿಯಾದ ರೀತಿಯಲ್ಲಿ ಉಪಯೋಗಿದ ಕಾರಣ ಹೀಗಾಗಿದೆ. ಇದಕ್ಕೆ ತಾನು ಕಾರಣನಲ್ಲ, ದುರಸ್ತಿ ಮಾಡಿಕೊಡುವ ಜವಾಬ್ದಾರಿಯೂ ತನ್ನದಲ್ಲ ಎಂದು ವ್ಯಾಪಾರಿ ವಾದಿಸಿದರು. <br /> <br /> ವಿಚಾರಣೆ ನಡೆಸಿದ ವೇದಿಕೆಯು ರೇಣುಕಾ ಅವರಿಗೆ ಪರಿಹಾರ ಕೊಡುವ ಜೊತೆಗೆ ಹಾಳಾಗಿರುವ ಮಂಗಳಸೂತ್ರವನ್ನು ರಿಪೇರಿ ಮಾಡಿಕೊಡುವಂತೆ ಮೇ 25 ರಂದು ತೀರ್ಪಿತ್ತಿದೆ. <br /> <br /> ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯೆ ಭಾರತಿ ಪಾಟೀಲ್ ಆದೇಶ ಪ್ರಕಟಿಸಿದ್ದಾರೆ. ದೂರುದಾರರ ಪರ ವಕೀಲ ಕೇಶವರಾವ್ ಶ್ರೀಮಾಳೆ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>