<p>ಇಪೋ, ಮಲೇಷ್ಯಾ (ಪಿಟಿಐ): ಸುಲ್ತಾನ್ ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಅಸಭ್ಯ ವರ್ತನೆ ತೋರಿದ್ದಕ್ಕೆ ಭಾರತ ತಂಡದ ಆಟಗಾರ ಎಸ್.ವಿ.ಸುನಿಲ್ಗೆ ಎಚ್ಚರಿಕೆ ನೀಡಲಾಗಿದೆ. ದಂಡ ಅಥವಾ ನಿಷೇಧ ಶಿಕ್ಷೆಗೆ ಒಳಗಾಗುವುದರಿಂದ ಅವರು ಪಾರಾಗಿದ್ದಾರೆ. <br /> <br /> ಗುರುವಾರ ನಡೆದ ಪಾಕ್ ವಿರುದ್ಧದ ಪಂದ್ಯದ ಬಳಿಕ ಸುನಿಲ್ ಪ್ರೇಕ್ಷಕರತ್ತ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದರು. ಅವರು ಅನುಚಿತವಾಗಿ ವರ್ತಿಸಿದ್ದು ಟಿವಿ ರಿಪ್ಲೇಯಿಂದ ಗೊತ್ತಾಗಿದೆ. ಪಾಕ್ ವಿರುದ್ಧದ ಈ ಪಂದ್ಯದಲ್ಲಿ ಸುನಿಲ್ 69ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.<br /> <br /> ಭಾರತ ತಂಡದ ಆಟಗಾರರಿದ್ದ ಹೋಟೆಲ್ನಲ್ಲಿ ವಿಚಾರಣೆ ನಡೆಸಿದ ಟೂರ್ನಿಯ ನಿರ್ದೇಶಕ ಹಾಂಕಾಂಗ್ನ ಸುರೀಂದರ್ ಧಿಲ್ಲಾನ್ ಎಚ್ಚರಿಕೆ ನೀಡುವ ತೀರ್ಮಾನ ಕೈಗೊಂಡರು. ಸುನಿಲ್ ಹಾಗೂ ಭಾರತ ತಂಡದ ಮ್ಯಾನೇಜರ್ ಮನೋಜ್ ಭೋರೆ ವಿಚಾರಣೆಯಲ್ಲಿ ಹಾಜರಿದ್ದರು. `ಸುನಿಲ್ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಅವರಿಗೆ ಅಧಿಕೃತವಾಗಿ ಎಚ್ಚರಿಕೆ ನೀಡಲಾಗಿದೆ~ ಎಂದು ಧಿಲ್ಲಾನ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಪೋ, ಮಲೇಷ್ಯಾ (ಪಿಟಿಐ): ಸುಲ್ತಾನ್ ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಅಸಭ್ಯ ವರ್ತನೆ ತೋರಿದ್ದಕ್ಕೆ ಭಾರತ ತಂಡದ ಆಟಗಾರ ಎಸ್.ವಿ.ಸುನಿಲ್ಗೆ ಎಚ್ಚರಿಕೆ ನೀಡಲಾಗಿದೆ. ದಂಡ ಅಥವಾ ನಿಷೇಧ ಶಿಕ್ಷೆಗೆ ಒಳಗಾಗುವುದರಿಂದ ಅವರು ಪಾರಾಗಿದ್ದಾರೆ. <br /> <br /> ಗುರುವಾರ ನಡೆದ ಪಾಕ್ ವಿರುದ್ಧದ ಪಂದ್ಯದ ಬಳಿಕ ಸುನಿಲ್ ಪ್ರೇಕ್ಷಕರತ್ತ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದರು. ಅವರು ಅನುಚಿತವಾಗಿ ವರ್ತಿಸಿದ್ದು ಟಿವಿ ರಿಪ್ಲೇಯಿಂದ ಗೊತ್ತಾಗಿದೆ. ಪಾಕ್ ವಿರುದ್ಧದ ಈ ಪಂದ್ಯದಲ್ಲಿ ಸುನಿಲ್ 69ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.<br /> <br /> ಭಾರತ ತಂಡದ ಆಟಗಾರರಿದ್ದ ಹೋಟೆಲ್ನಲ್ಲಿ ವಿಚಾರಣೆ ನಡೆಸಿದ ಟೂರ್ನಿಯ ನಿರ್ದೇಶಕ ಹಾಂಕಾಂಗ್ನ ಸುರೀಂದರ್ ಧಿಲ್ಲಾನ್ ಎಚ್ಚರಿಕೆ ನೀಡುವ ತೀರ್ಮಾನ ಕೈಗೊಂಡರು. ಸುನಿಲ್ ಹಾಗೂ ಭಾರತ ತಂಡದ ಮ್ಯಾನೇಜರ್ ಮನೋಜ್ ಭೋರೆ ವಿಚಾರಣೆಯಲ್ಲಿ ಹಾಜರಿದ್ದರು. `ಸುನಿಲ್ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಅವರಿಗೆ ಅಧಿಕೃತವಾಗಿ ಎಚ್ಚರಿಕೆ ನೀಡಲಾಗಿದೆ~ ಎಂದು ಧಿಲ್ಲಾನ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>