<p><strong>ಗುಲ್ಬರ್ಗ:</strong> ಬೀದರ್- ಹುಮನಾಬಾದ್ ಮಧ್ಯೆ `ಪುಷ್- ಪುಲ್' ಹೊಸ ರೈಲು ಸಂಚಾರಕ್ಕೆ ಮಹಾತ್ಮ ಗಾಂಧಿ ಜಯಂತಿ (ಅಕ್ಟೋಬರ್ 2) ದಿನ ಚಾಲನೆ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಗುರುವಾರ ಇಲ್ಲಿ ಪ್ರಕಟಿಸಿದರು.<br /> <br /> ರೈಲ್ವೆ ಖಾತೆ ವಹಿಸಿಕೊಂಡ ನಂತರ ಮೊದಲಬಾರಿ ನಗರಕ್ಕೆ ಆಗಮಿಸಿದ್ದ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.<br /> <br /> ಬೀದರ್- ಗುಲ್ಬರ್ಗ ರೈಲು ಯೋಜನೆ ಪ್ರಗತಿಯಲ್ಲಿದೆ. ಬೀದರ್-ಹುಮಾನಾಬಾದ್ ನಡುವಿನ 50 ಕಿ.ಮೀ ಹಳಿ ನಿರ್ಮಾಣ ಮುಗಿದು ಪ್ರಾಯೋಗಿಕ ರೈಲು ಸಂಚಾರವೂ ನಡೆದಿದೆ. ಆ ಭಾಗದ ಜನರಿಗೆ ಅನುಕೂಲವಾಗಲು ಹೊಸ ರೈಲು ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದರು.<br /> <br /> ಗುಲ್ಬರ್ಗ- ಹುಮನಾಬಾದ್ ನಡುವೆ ಮರಗುತ್ತಿ ಗುಡ್ಡದಲ್ಲಿ ಸುರಂಗ ಕೊರೆಯಲು ರೂ 60 ಕೋಟಿ, ಬೆಣ್ಣೆತೊರಾ ನದಿ ಮೇಲೆ ಸೇತುವೆ ನಿರ್ಮಿಸಲು ರೂ 20 ಕೋಟಿ ಮಂಜೂರು ಮಾಡಲಾಗಿದೆ. ಮೂರು ವರ್ಷಗಳಲ್ಲಿ ಬೀದರ್-ಗುಲ್ಬರ್ಗ ರೈಲು ಯೋಜನೆ ಪೂರ್ಣಗೊಳಿಸುವಂತೆ ಗಡುವುನೀಡಲಾಗಿದೆ ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಲ್ಬರ್ಗ:</strong> ಬೀದರ್- ಹುಮನಾಬಾದ್ ಮಧ್ಯೆ `ಪುಷ್- ಪುಲ್' ಹೊಸ ರೈಲು ಸಂಚಾರಕ್ಕೆ ಮಹಾತ್ಮ ಗಾಂಧಿ ಜಯಂತಿ (ಅಕ್ಟೋಬರ್ 2) ದಿನ ಚಾಲನೆ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಗುರುವಾರ ಇಲ್ಲಿ ಪ್ರಕಟಿಸಿದರು.<br /> <br /> ರೈಲ್ವೆ ಖಾತೆ ವಹಿಸಿಕೊಂಡ ನಂತರ ಮೊದಲಬಾರಿ ನಗರಕ್ಕೆ ಆಗಮಿಸಿದ್ದ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.<br /> <br /> ಬೀದರ್- ಗುಲ್ಬರ್ಗ ರೈಲು ಯೋಜನೆ ಪ್ರಗತಿಯಲ್ಲಿದೆ. ಬೀದರ್-ಹುಮಾನಾಬಾದ್ ನಡುವಿನ 50 ಕಿ.ಮೀ ಹಳಿ ನಿರ್ಮಾಣ ಮುಗಿದು ಪ್ರಾಯೋಗಿಕ ರೈಲು ಸಂಚಾರವೂ ನಡೆದಿದೆ. ಆ ಭಾಗದ ಜನರಿಗೆ ಅನುಕೂಲವಾಗಲು ಹೊಸ ರೈಲು ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದರು.<br /> <br /> ಗುಲ್ಬರ್ಗ- ಹುಮನಾಬಾದ್ ನಡುವೆ ಮರಗುತ್ತಿ ಗುಡ್ಡದಲ್ಲಿ ಸುರಂಗ ಕೊರೆಯಲು ರೂ 60 ಕೋಟಿ, ಬೆಣ್ಣೆತೊರಾ ನದಿ ಮೇಲೆ ಸೇತುವೆ ನಿರ್ಮಿಸಲು ರೂ 20 ಕೋಟಿ ಮಂಜೂರು ಮಾಡಲಾಗಿದೆ. ಮೂರು ವರ್ಷಗಳಲ್ಲಿ ಬೀದರ್-ಗುಲ್ಬರ್ಗ ರೈಲು ಯೋಜನೆ ಪೂರ್ಣಗೊಳಿಸುವಂತೆ ಗಡುವುನೀಡಲಾಗಿದೆ ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>