<p><span style="font-size: 26px;">ದಾವಣಗೆರೆ: ಆಂತರಿಕ ಭದ್ರತೆಗೆ ಭಯೋತ್ಪಾದನೆ ಪ್ರಮುಖ ಸವಾಲಾಗಿದೆ ಎಂದು ನಿರ್ಗಮಿತ ಪೂರ್ವವಲಯ ಐಜಿಪಿ ಸಂಜಯ್ ಸಹಾಯ್ ಪ್ರತಿಪಾದಿಸಿದರು.</span><br /> <br /> ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.<br /> <br /> ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಬೇರೆಬೇರೆಯಾಗಿ ನೋಡಲಾಗುತ್ತದೆ. ಆದರೆ, ವಾಸ್ತವದಲ್ಲಿ ಎರಡೂ ಪರಸ್ಪರ ಪೂರಕ ಎಂದರು.<br /> <br /> ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಾವು ಯಶ ಕಂಡಿದ್ದೇವೆ. ಆದರೆ, ಇಲಾಖೆಯ ದಿನ ನಿತ್ಯದ ಕೆಲಸಗಳಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ. ಜನರ ದೂರಿಗೆ ಸರಿಯಾಗಿ ನ್ಯಾಯಕೊಟ್ಟ ತೃಪ್ತಿ ಸಿಕ್ಕಿಲ್ಲ ಎಂದು ವಿಷಾದಿಸಿದರು.<br /> <br /> ನೂತನ ಐಜಿಪಿ ಡಾ.ಪರಶಿವಮೂರ್ತಿ ಮಾತನಾಡಿ, ಜ್ಞಾನ ಮನುಷ್ಯನನ್ನು ಇತರೆ ಪ್ರಾಣಿಗಳಿಗಿಂತ ಉನ್ನತವಾಗಿಸಿದೆ. ಜತೆಗೆ, ವ್ಯಕ್ತಿ-ವ್ಯಕ್ತಿಗಳ ನಡುವೆಯೂ ಭಾರಿ ಬದಲಾವಣೆಯ ಅಂತರವನ್ನು ಸೃಷ್ಟಿಸಿದೆ. ನಿಜವಾದ ಓದು, ಜ್ಞಾನ ಕೆಲವರನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.<br /> <br /> ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಸಂಜಯ್ ಸಹಾಯ್ ಬಹುಮುಖ ಪ್ರತಿಭೆಯ ಅಧಿಕಾರಿ. ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಇತರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.<br /> <br /> ಬಳ್ಳಾರಿ ಎಸ್ಪಿ ಡಾ.ಚಂದ್ರಗುಪ್ತ, ಶಿವಮೊಗ್ಗ ಎಸ್ಪಿ ಕೌಶಲೇಂದ್ರ, ದಾವಣಗೆರೆ ಎಸ್ಪಿ ಲಾಭೂರಾಂ, ಬಾಪೂಜಿ ಬಿ-ಸ್ಕೂಲ್ ಪ್ರಾಂಶುಪಾಲ ಅನಿಲ್ಕುಮಾರ್ ಗರ್ಗ್, ವೃಷಭೇಂದ್ರಪ್ಪ, ಡಾ.ರಂಗಸ್ವಾಮಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;">ದಾವಣಗೆರೆ: ಆಂತರಿಕ ಭದ್ರತೆಗೆ ಭಯೋತ್ಪಾದನೆ ಪ್ರಮುಖ ಸವಾಲಾಗಿದೆ ಎಂದು ನಿರ್ಗಮಿತ ಪೂರ್ವವಲಯ ಐಜಿಪಿ ಸಂಜಯ್ ಸಹಾಯ್ ಪ್ರತಿಪಾದಿಸಿದರು.</span><br /> <br /> ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.<br /> <br /> ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಬೇರೆಬೇರೆಯಾಗಿ ನೋಡಲಾಗುತ್ತದೆ. ಆದರೆ, ವಾಸ್ತವದಲ್ಲಿ ಎರಡೂ ಪರಸ್ಪರ ಪೂರಕ ಎಂದರು.<br /> <br /> ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಾವು ಯಶ ಕಂಡಿದ್ದೇವೆ. ಆದರೆ, ಇಲಾಖೆಯ ದಿನ ನಿತ್ಯದ ಕೆಲಸಗಳಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ. ಜನರ ದೂರಿಗೆ ಸರಿಯಾಗಿ ನ್ಯಾಯಕೊಟ್ಟ ತೃಪ್ತಿ ಸಿಕ್ಕಿಲ್ಲ ಎಂದು ವಿಷಾದಿಸಿದರು.<br /> <br /> ನೂತನ ಐಜಿಪಿ ಡಾ.ಪರಶಿವಮೂರ್ತಿ ಮಾತನಾಡಿ, ಜ್ಞಾನ ಮನುಷ್ಯನನ್ನು ಇತರೆ ಪ್ರಾಣಿಗಳಿಗಿಂತ ಉನ್ನತವಾಗಿಸಿದೆ. ಜತೆಗೆ, ವ್ಯಕ್ತಿ-ವ್ಯಕ್ತಿಗಳ ನಡುವೆಯೂ ಭಾರಿ ಬದಲಾವಣೆಯ ಅಂತರವನ್ನು ಸೃಷ್ಟಿಸಿದೆ. ನಿಜವಾದ ಓದು, ಜ್ಞಾನ ಕೆಲವರನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.<br /> <br /> ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಸಂಜಯ್ ಸಹಾಯ್ ಬಹುಮುಖ ಪ್ರತಿಭೆಯ ಅಧಿಕಾರಿ. ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಇತರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.<br /> <br /> ಬಳ್ಳಾರಿ ಎಸ್ಪಿ ಡಾ.ಚಂದ್ರಗುಪ್ತ, ಶಿವಮೊಗ್ಗ ಎಸ್ಪಿ ಕೌಶಲೇಂದ್ರ, ದಾವಣಗೆರೆ ಎಸ್ಪಿ ಲಾಭೂರಾಂ, ಬಾಪೂಜಿ ಬಿ-ಸ್ಕೂಲ್ ಪ್ರಾಂಶುಪಾಲ ಅನಿಲ್ಕುಮಾರ್ ಗರ್ಗ್, ವೃಷಭೇಂದ್ರಪ್ಪ, ಡಾ.ರಂಗಸ್ವಾಮಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>