<p><strong>ಹುಬ್ಬಳ್ಳಿ: </strong>`ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆಯುವ ಕೆಟ್ಟ ಪರಂಪರೆ ಆರಂಭವಾಗಿದ್ದು, ಅಂತಹ ಯತ್ನಗಳಿಗೆ ತಡೆಯೊಡ್ಡಿ ಸಾಮರಸ್ಯದ ಹಿಂದೂ ಸಮಾಜವನ್ನು ನಿರ್ಮಾಣ ಮಾಡುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಗುರಿಯಾಗಿದೆ~ ಎಂದು ಆರ್ಎಸ್ಎಸ್ ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ ಹೇಳಿದರು.<br /> <br /> ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗಿರುವ `ವಿಜಯನಗರ~ದಲ್ಲಿ ಶುಕ್ರವಾರ `ಹಿಂದು ಶಕ್ತಿ ಸಂಗಮ~ ಮಹಾಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. `ನಿರಂತರವಾಗಿ ನಡೆಯುತ್ತಾ ಬಂದ ಅನ್ಯರ ಆಕ್ರಮಣ ಹಾಗೂ ಆಂತರಿಕ ಸಮಸ್ಯೆಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹೊಂದಿದ್ದರಿಂದಲೇ ಹಿಂದೂ ಸಮಾಜ ಇಂದಿಗೂ ಸಶಕ್ತವಾಗಿ ಉಳಿದಿದೆ~ ಎಂದು ಅವರು ತಿಳಿಸಿದರು.<br /> <br /> `ನಾವು ಮಾಡುತ್ತಿರುವುದು ಶಕ್ತಿಯ ಪ್ರದರ್ಶನವಲ್ಲ; ಬದಲಾಗಿ ಶಕ್ತಿಯ ದರ್ಶನ. ಯಾವುದೇ ಬಲ ಧನಾತ್ಮಕ ಭಾವದಿಂದ ಲೇಪ ಆಗಿರಬೇಕು. ಅದರ ದುರುಪಯೋಗ ಖಂಡಿತ ಸಲ್ಲದು~ ಎಂದ ಅವರು, `ರಾಜಕೀಯ ಆಕಾಂಕ್ಷೆಯಿಂದ ಹಿಂದೂಗಳನ್ನು ವಕ್ರದೃಷ್ಟಿಯಿಂದ ನೋಡಿದರೆ ನಾವು ಸಹಿಸುವುದಿಲ್ಲ~ ಎಂಬ ಎಚ್ಚರಿಕೆಯನ್ನೂ ನೀಡಿದರು. <br /> <br /> `ಚರಿತ್ರೆಯ ಉದ್ದಕ್ಕೂ ದೇವ-ಅಸುರ, ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮ, ಸಜ್ಜನ-ದುರ್ಜನ ಸಂಗತಿಗಳ ಮಧ್ಯ ಸಂಘರ್ಷ ನಡೆಯುತ್ತಲೇ ಬಂದಿದೆ. ಯಾವಾಗಲೂ ದೈವಿಶಕ್ತಿ, ಸತ್ಯ, ಧರ್ಮ, ನ್ಯಾಯಗಳೇ ಜಯ ಸಾಧಿಸಿವೆ. ಅಂತಹ ದಾರಿ ನಮ್ಮದು~ ಎಂದು ಹೆಮ್ಮೆಯಿಂದ ಹೇಳಿಕೊಂಡರು. <br /> <br /> `ಸಾಧು-ಸಂತರು, ರಾಜರು, ಸಮಾಜ ಸುಧಾರಕರು ಸ್ವಸ್ಥ ಸಮಾಜವನ್ನು ನಿರ್ಮಾಣದ ಕೈಂಕರ್ಯ ಮಾಡುತ್ತಲೇ ಬಂದಿದ್ದಾರೆ. ಹೀಗಿದ್ದೂ ಕೆಟ್ಟ ಪರಂಪರೆ ನುಸುಳುತ್ತಲೇ ಇದೆ. ಸಮಾಜ ದುರ್ಬಲಗೊಳಿಸುವ ಯತ್ನಗಳು ನಡೆದಿವೆ. ಅಂತಹ ಸವಾಲುಗಳ ವಿರುದ್ಧ ಹಿಂದೂಗಳು ಸಂಘಟಿತರಾಗಿ ಹೋರಾಡಬೇಕಿದೆ~ ಎಂದರು.<br /> <br /> `ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ರಾಜಸ್ತಾನದ ಮರಭೂಮಿಯಿಂದ ಮಣಿಪುರದ ಪರ್ವತ ಶ್ರೇಣಿವರೆಗೆ ಸಂಘ ವ್ಯಾಪಕವಾಗಿ ಬೆಳೆದಿದ್ದು, ಸ್ವಯಂಸೇವಕರು ಸಂಘದ ಸಿದ್ಧಾಂತವನ್ನೇ ಆಧಾರವಾಗಿ ಇಟ್ಟುಕೊಂಡು ಹಿಂದೂ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ~ ಎಂದು ತಿಳಿಸಿದರು. `ಶ್ರೇಷ್ಠ ಚಿಂತನೆ, ಉತ್ತಮ ಸಂಸ್ಕಾರಗಳ ಮೂಲಕ ಸಶಕ್ತ ಸಮಾಜವನ್ನು ಕಟ್ಟಬೇಕು~ ಎಂದು ಸ್ವಯಂಸೇವಕರಿಗೆ ಕಿವಿಮಾತು ಹೇಳಿದರು.<br /> <br /> ಆರ್ಎಸ್ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಂಘದ ಪ್ರಮುಖರಾದ ಡಾ.ಸತೀಶ್ ಜಿಗಜಿನ್ನಿ, ನ್ಯಾ.ಪರ್ವತರಾವ್, ಖಗೇಶನ್ ಪಟ್ಟಣಶೆಟ್ಟಿ, ಮೈ.ಚ.ಜಯದೇವ, ಎನ್.ಕೃಷ್ಣಪ್ಪ, ಎಸ್.ರಾಮಣ್ಣ, ಮಂಗೇಶ ಭೇಂಡೆ, ಡಿ.ಎಂ.ರವೀಂದ್ರ, ವಿ.ನಾಗರಾಜ್, ಡಾ.ಪ್ರಭಾಕರ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ತಿಪ್ಪೆಸ್ವಾಮಿ, ಅರವಿಂದ ದೇಶಪಾಂಡೆ ಹಾಜರಿದ್ದರು.<br /> <br /> ಶಾಸಕರಾದ ಅರುಣ್ ಶಾಪೂರ, ವಿ.ಎಸ್. ಪಾಟೀಲ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದು, ಸಚಿವರಾದ ಮುರುಗೇಶ ನಿರಾಣಿ, ರೇವು ನಾಯಕ ಬೆಳಮಗಿ ಸೇರಿದಂತೆ ಹಲವು ಜನ ಬಿಜೆಪಿ ಮುಖಂಡರು ಶಿಬಿರಕ್ಕೆ ಭೇಟಿ ನೀಡಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>`ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆಯುವ ಕೆಟ್ಟ ಪರಂಪರೆ ಆರಂಭವಾಗಿದ್ದು, ಅಂತಹ ಯತ್ನಗಳಿಗೆ ತಡೆಯೊಡ್ಡಿ ಸಾಮರಸ್ಯದ ಹಿಂದೂ ಸಮಾಜವನ್ನು ನಿರ್ಮಾಣ ಮಾಡುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಗುರಿಯಾಗಿದೆ~ ಎಂದು ಆರ್ಎಸ್ಎಸ್ ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ ಹೇಳಿದರು.<br /> <br /> ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗಿರುವ `ವಿಜಯನಗರ~ದಲ್ಲಿ ಶುಕ್ರವಾರ `ಹಿಂದು ಶಕ್ತಿ ಸಂಗಮ~ ಮಹಾಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. `ನಿರಂತರವಾಗಿ ನಡೆಯುತ್ತಾ ಬಂದ ಅನ್ಯರ ಆಕ್ರಮಣ ಹಾಗೂ ಆಂತರಿಕ ಸಮಸ್ಯೆಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹೊಂದಿದ್ದರಿಂದಲೇ ಹಿಂದೂ ಸಮಾಜ ಇಂದಿಗೂ ಸಶಕ್ತವಾಗಿ ಉಳಿದಿದೆ~ ಎಂದು ಅವರು ತಿಳಿಸಿದರು.<br /> <br /> `ನಾವು ಮಾಡುತ್ತಿರುವುದು ಶಕ್ತಿಯ ಪ್ರದರ್ಶನವಲ್ಲ; ಬದಲಾಗಿ ಶಕ್ತಿಯ ದರ್ಶನ. ಯಾವುದೇ ಬಲ ಧನಾತ್ಮಕ ಭಾವದಿಂದ ಲೇಪ ಆಗಿರಬೇಕು. ಅದರ ದುರುಪಯೋಗ ಖಂಡಿತ ಸಲ್ಲದು~ ಎಂದ ಅವರು, `ರಾಜಕೀಯ ಆಕಾಂಕ್ಷೆಯಿಂದ ಹಿಂದೂಗಳನ್ನು ವಕ್ರದೃಷ್ಟಿಯಿಂದ ನೋಡಿದರೆ ನಾವು ಸಹಿಸುವುದಿಲ್ಲ~ ಎಂಬ ಎಚ್ಚರಿಕೆಯನ್ನೂ ನೀಡಿದರು. <br /> <br /> `ಚರಿತ್ರೆಯ ಉದ್ದಕ್ಕೂ ದೇವ-ಅಸುರ, ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮ, ಸಜ್ಜನ-ದುರ್ಜನ ಸಂಗತಿಗಳ ಮಧ್ಯ ಸಂಘರ್ಷ ನಡೆಯುತ್ತಲೇ ಬಂದಿದೆ. ಯಾವಾಗಲೂ ದೈವಿಶಕ್ತಿ, ಸತ್ಯ, ಧರ್ಮ, ನ್ಯಾಯಗಳೇ ಜಯ ಸಾಧಿಸಿವೆ. ಅಂತಹ ದಾರಿ ನಮ್ಮದು~ ಎಂದು ಹೆಮ್ಮೆಯಿಂದ ಹೇಳಿಕೊಂಡರು. <br /> <br /> `ಸಾಧು-ಸಂತರು, ರಾಜರು, ಸಮಾಜ ಸುಧಾರಕರು ಸ್ವಸ್ಥ ಸಮಾಜವನ್ನು ನಿರ್ಮಾಣದ ಕೈಂಕರ್ಯ ಮಾಡುತ್ತಲೇ ಬಂದಿದ್ದಾರೆ. ಹೀಗಿದ್ದೂ ಕೆಟ್ಟ ಪರಂಪರೆ ನುಸುಳುತ್ತಲೇ ಇದೆ. ಸಮಾಜ ದುರ್ಬಲಗೊಳಿಸುವ ಯತ್ನಗಳು ನಡೆದಿವೆ. ಅಂತಹ ಸವಾಲುಗಳ ವಿರುದ್ಧ ಹಿಂದೂಗಳು ಸಂಘಟಿತರಾಗಿ ಹೋರಾಡಬೇಕಿದೆ~ ಎಂದರು.<br /> <br /> `ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ರಾಜಸ್ತಾನದ ಮರಭೂಮಿಯಿಂದ ಮಣಿಪುರದ ಪರ್ವತ ಶ್ರೇಣಿವರೆಗೆ ಸಂಘ ವ್ಯಾಪಕವಾಗಿ ಬೆಳೆದಿದ್ದು, ಸ್ವಯಂಸೇವಕರು ಸಂಘದ ಸಿದ್ಧಾಂತವನ್ನೇ ಆಧಾರವಾಗಿ ಇಟ್ಟುಕೊಂಡು ಹಿಂದೂ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ~ ಎಂದು ತಿಳಿಸಿದರು. `ಶ್ರೇಷ್ಠ ಚಿಂತನೆ, ಉತ್ತಮ ಸಂಸ್ಕಾರಗಳ ಮೂಲಕ ಸಶಕ್ತ ಸಮಾಜವನ್ನು ಕಟ್ಟಬೇಕು~ ಎಂದು ಸ್ವಯಂಸೇವಕರಿಗೆ ಕಿವಿಮಾತು ಹೇಳಿದರು.<br /> <br /> ಆರ್ಎಸ್ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಂಘದ ಪ್ರಮುಖರಾದ ಡಾ.ಸತೀಶ್ ಜಿಗಜಿನ್ನಿ, ನ್ಯಾ.ಪರ್ವತರಾವ್, ಖಗೇಶನ್ ಪಟ್ಟಣಶೆಟ್ಟಿ, ಮೈ.ಚ.ಜಯದೇವ, ಎನ್.ಕೃಷ್ಣಪ್ಪ, ಎಸ್.ರಾಮಣ್ಣ, ಮಂಗೇಶ ಭೇಂಡೆ, ಡಿ.ಎಂ.ರವೀಂದ್ರ, ವಿ.ನಾಗರಾಜ್, ಡಾ.ಪ್ರಭಾಕರ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ತಿಪ್ಪೆಸ್ವಾಮಿ, ಅರವಿಂದ ದೇಶಪಾಂಡೆ ಹಾಜರಿದ್ದರು.<br /> <br /> ಶಾಸಕರಾದ ಅರುಣ್ ಶಾಪೂರ, ವಿ.ಎಸ್. ಪಾಟೀಲ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದು, ಸಚಿವರಾದ ಮುರುಗೇಶ ನಿರಾಣಿ, ರೇವು ನಾಯಕ ಬೆಳಮಗಿ ಸೇರಿದಂತೆ ಹಲವು ಜನ ಬಿಜೆಪಿ ಮುಖಂಡರು ಶಿಬಿರಕ್ಕೆ ಭೇಟಿ ನೀಡಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>