<p>ತಮಿಳುನಾಡಿನ ಕಂದನ್ಕೊಳಂ ಅಣು ವಿದ್ಯುತ್ ಘಟಕದ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಅಲ್ಲಿನ ಸ್ಥಳೀಯರು ನಡೆಸುತ್ತಿದ್ದ ಧರಣಿಯನ್ನು ಹಿಂತೆಗೆದುಕೊಂಡಿದ್ದಾರೆ. <br /> <br /> ಈ ಘಟಕದಿಂದ ಸಮುದ್ರ ಮೀನುಗಾರಿಕೆ ತೊಂದರೆಯಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ಸ್ಥಳೀಯರ ಹಿತಾಸಕ್ತಿ ಕಾಪಾಡಲು ಅಣು ವಿದ್ಯುತ್ ಘಟಕ ನಿರ್ಮಾಣ ನಿಲ್ಲಿಸಬೇಕು ಎಂಬ ಬೇಡಿಕೆಯನ್ನು ಯಾರೂ ಒಪ್ಪುವುದಿಲ್ಲ.</p>.<p>ಸದ್ಯದ್ಲ್ಲಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರತಿಭಟನೆ ನಡೆಯಿತ್ತೆಂಬುದನ್ನು ತಳ್ಳಿಹಾಕಲಾಗದು. ಈ ಅಣು ವಿದ್ಯುತ್ ಘಟಕದ ಮೊದಲ ಹಂತದ ಕಾಮಗಾರಿಗಳು ಮುಕ್ತಾಯದಲ್ಲಿವೆ. <br /> <br /> ಹದಿಮೂರು ಸಾವಿರ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಈ ಯೋಜನೆ 1988ರ ನವೆಂಬರ್ನಲ್ಲಿ ಅಂದಿನ ಪ್ರಧಾನಿ ರಾಜೀವ್ಗಾಂಧಿ ಮತ್ತು ರಷ್ಯಾ ಅಧ್ಯಕ್ಷ ಗೊರ್ಬಚೆವ್ ಅವರ ನಡುವೆ ಆದ ಅಂತರರಾಷ್ಟ್ರೀಯ ಒಪ್ಪಂದದ ಫಲ.<br /> <br /> ಆನಂತರ ರಷ್ಯಾದಲ್ಲಿ ಆದ ರಾಜಕೀಯ ಬೆಳವಣಿಗೆಗಳಿಂದಾಗಿ ಘಟಕದ ಕಾರ್ಯ ವಿಳಂಬವಾಯಿತು. 2001ರಲ್ಲಿ ಕಾಮಗಾರಿ ಆರಂಭವಾಯಿತು. ಹತ್ತು ವರ್ಷಗಳ ನಂತರ ಈ ಅಣು ಘಟಕ ಸುರಕ್ಷಿತವಲ್ಲ ಎಂಬ ಕೂಗೆದ್ದಿದೆ. |<br /> <br /> ಅದಕ್ಕೆ ನಾರ್ವೆ ಮೂಲದ ಸರ್ಕಾರೇತರ ಸಂಸ್ಥೆಯೊಂದು ಈ ಘಟಕದ ತಾಂತ್ರಿಕ ಗುಣಮಟ್ಟ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿರುವುದೇ ಕಾರಣ ಎನ್ನಲಾಗಿದೆ. ಈ ಘಟಕದ ಬಗ್ಗೆ ಸ್ಥಳೀಯರು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. <br /> <br /> ಜನರ ಆತಂಕಗಳನ್ನು ನಿವಾರಣೆ ಮಾಡುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಜಯಲಲಿತಾ ಇತ್ತೀಚೆಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಪತ್ರಕ್ಕೆ ಪ್ರಧಾನಿ ಸ್ಪಂದಿಸಿದ್ದಾರೆ. <br /> <br /> ಸುರಕ್ಷತಾ ಕ್ರಮಗಳ ಬಗ್ಗೆ ಸ್ಥಳೀಯರಲ್ಲಿ ಇರುವ ಅನುಮಾನಗಳನ್ನು ನಿವಾರಣೆ ಮಾಡುವುದಾಗಿ ಅವರು ಹೇಳಿದ್ದಾರೆ. ಸ್ಥಳೀಯರು ಈ ಬೆಳವಣಿಗೆಯನ್ನು ಗಮನಿಸಬೇಕು.<br /> <br /> ರಷ್ಯಾದ ಚೆರ್ನೋಬಿಲ್ ಮತ್ತು ಜಪಾನಿನ ಪುಕುಶಿಮಾ ದುರ್ಘಟನೆಗಳ ನಂತರ ಜಗತ್ತಿನಾದ್ಯಂತ ಅಣು ವಿದ್ಯುತ್ ಘಟಕಗಳು ಸುರಕ್ಷಿತವಲ್ಲ ಎಂಬ ಭಾವನೆ ಬೇರೂರಿದೆ. ಅದು ಸಹಜ. <br /> <br /> ಈ ಕಾರಣಕ್ಕಾಗಿ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದ ನಂತರ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸುವುದು ತರವಲ್ಲ. ಈ ಅಣು ಘಟಕ ಸುರಕ್ಷಿತವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಲೋಪಗಳಿದ್ದರೆ ಅದನ್ನು ಸರಿಪಡಿಸಬೇಕು.<br /> <br /> ಧರಣಿ ನಿರತರ ಜತೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪ್ರಧಾನಿ ಕಚೇರಿಯ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ಅವರಿಗೆ ವಹಿಸಲಾಗಿದೆ. ಅಣು ವಿದ್ಯುತ್ ಸ್ಥಾವರದ ತಂತ್ರಜ್ಞಾನದ ಬಗ್ಗೆ ಕೇಳಿ ಬರುತ್ತಿರುವ ಸಂದೇಹಗಳನ್ನು ನಿವಾರಣೆ ಮಾಡುವುದು ಅಣು ವಿಜ್ಞಾನಿಗಳ ಕೆಲಸ.<br /> <br /> ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ದೇಶದಲ್ಲಿ ವಿದ್ಯುತ್ ಕೊರತೆ ಇದೆ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯೂ ವಿದ್ಯುತ್ತಿನ ಲಭ್ಯತೆಯನ್ನೇ ಅವಲಂಬಿಸಿದೆ. ಹೀಗಾಗಿ ಅಣು ವಿದ್ಯುತ್ ಘಟಕಗಳು ಅನಿವಾರ್ಯ. <br /> <br /> ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ತಮಿಳುನಾಡು ರಾಜ್ಯ ಈ ಅಣು ಘಟಕದ ಫಲಾನುಭವಿಯಾಗಿರುವುದರಿಂದ ಮುಖ್ಯಮಂತ್ರಿ ಜಯಲಲತಾ ಸ್ಥಳೀಯರ ಭಯ, ಆತಂಕಗಳ ನಿವಾರಣೆಗೆ ಕೇಂದ್ರದ ಜೊತೆ ಕೈಜೋಡಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಮಿಳುನಾಡಿನ ಕಂದನ್ಕೊಳಂ ಅಣು ವಿದ್ಯುತ್ ಘಟಕದ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಅಲ್ಲಿನ ಸ್ಥಳೀಯರು ನಡೆಸುತ್ತಿದ್ದ ಧರಣಿಯನ್ನು ಹಿಂತೆಗೆದುಕೊಂಡಿದ್ದಾರೆ. <br /> <br /> ಈ ಘಟಕದಿಂದ ಸಮುದ್ರ ಮೀನುಗಾರಿಕೆ ತೊಂದರೆಯಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ಸ್ಥಳೀಯರ ಹಿತಾಸಕ್ತಿ ಕಾಪಾಡಲು ಅಣು ವಿದ್ಯುತ್ ಘಟಕ ನಿರ್ಮಾಣ ನಿಲ್ಲಿಸಬೇಕು ಎಂಬ ಬೇಡಿಕೆಯನ್ನು ಯಾರೂ ಒಪ್ಪುವುದಿಲ್ಲ.</p>.<p>ಸದ್ಯದ್ಲ್ಲಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರತಿಭಟನೆ ನಡೆಯಿತ್ತೆಂಬುದನ್ನು ತಳ್ಳಿಹಾಕಲಾಗದು. ಈ ಅಣು ವಿದ್ಯುತ್ ಘಟಕದ ಮೊದಲ ಹಂತದ ಕಾಮಗಾರಿಗಳು ಮುಕ್ತಾಯದಲ್ಲಿವೆ. <br /> <br /> ಹದಿಮೂರು ಸಾವಿರ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಈ ಯೋಜನೆ 1988ರ ನವೆಂಬರ್ನಲ್ಲಿ ಅಂದಿನ ಪ್ರಧಾನಿ ರಾಜೀವ್ಗಾಂಧಿ ಮತ್ತು ರಷ್ಯಾ ಅಧ್ಯಕ್ಷ ಗೊರ್ಬಚೆವ್ ಅವರ ನಡುವೆ ಆದ ಅಂತರರಾಷ್ಟ್ರೀಯ ಒಪ್ಪಂದದ ಫಲ.<br /> <br /> ಆನಂತರ ರಷ್ಯಾದಲ್ಲಿ ಆದ ರಾಜಕೀಯ ಬೆಳವಣಿಗೆಗಳಿಂದಾಗಿ ಘಟಕದ ಕಾರ್ಯ ವಿಳಂಬವಾಯಿತು. 2001ರಲ್ಲಿ ಕಾಮಗಾರಿ ಆರಂಭವಾಯಿತು. ಹತ್ತು ವರ್ಷಗಳ ನಂತರ ಈ ಅಣು ಘಟಕ ಸುರಕ್ಷಿತವಲ್ಲ ಎಂಬ ಕೂಗೆದ್ದಿದೆ. |<br /> <br /> ಅದಕ್ಕೆ ನಾರ್ವೆ ಮೂಲದ ಸರ್ಕಾರೇತರ ಸಂಸ್ಥೆಯೊಂದು ಈ ಘಟಕದ ತಾಂತ್ರಿಕ ಗುಣಮಟ್ಟ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿರುವುದೇ ಕಾರಣ ಎನ್ನಲಾಗಿದೆ. ಈ ಘಟಕದ ಬಗ್ಗೆ ಸ್ಥಳೀಯರು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. <br /> <br /> ಜನರ ಆತಂಕಗಳನ್ನು ನಿವಾರಣೆ ಮಾಡುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಜಯಲಲಿತಾ ಇತ್ತೀಚೆಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಪತ್ರಕ್ಕೆ ಪ್ರಧಾನಿ ಸ್ಪಂದಿಸಿದ್ದಾರೆ. <br /> <br /> ಸುರಕ್ಷತಾ ಕ್ರಮಗಳ ಬಗ್ಗೆ ಸ್ಥಳೀಯರಲ್ಲಿ ಇರುವ ಅನುಮಾನಗಳನ್ನು ನಿವಾರಣೆ ಮಾಡುವುದಾಗಿ ಅವರು ಹೇಳಿದ್ದಾರೆ. ಸ್ಥಳೀಯರು ಈ ಬೆಳವಣಿಗೆಯನ್ನು ಗಮನಿಸಬೇಕು.<br /> <br /> ರಷ್ಯಾದ ಚೆರ್ನೋಬಿಲ್ ಮತ್ತು ಜಪಾನಿನ ಪುಕುಶಿಮಾ ದುರ್ಘಟನೆಗಳ ನಂತರ ಜಗತ್ತಿನಾದ್ಯಂತ ಅಣು ವಿದ್ಯುತ್ ಘಟಕಗಳು ಸುರಕ್ಷಿತವಲ್ಲ ಎಂಬ ಭಾವನೆ ಬೇರೂರಿದೆ. ಅದು ಸಹಜ. <br /> <br /> ಈ ಕಾರಣಕ್ಕಾಗಿ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದ ನಂತರ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸುವುದು ತರವಲ್ಲ. ಈ ಅಣು ಘಟಕ ಸುರಕ್ಷಿತವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಲೋಪಗಳಿದ್ದರೆ ಅದನ್ನು ಸರಿಪಡಿಸಬೇಕು.<br /> <br /> ಧರಣಿ ನಿರತರ ಜತೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪ್ರಧಾನಿ ಕಚೇರಿಯ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ಅವರಿಗೆ ವಹಿಸಲಾಗಿದೆ. ಅಣು ವಿದ್ಯುತ್ ಸ್ಥಾವರದ ತಂತ್ರಜ್ಞಾನದ ಬಗ್ಗೆ ಕೇಳಿ ಬರುತ್ತಿರುವ ಸಂದೇಹಗಳನ್ನು ನಿವಾರಣೆ ಮಾಡುವುದು ಅಣು ವಿಜ್ಞಾನಿಗಳ ಕೆಲಸ.<br /> <br /> ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ದೇಶದಲ್ಲಿ ವಿದ್ಯುತ್ ಕೊರತೆ ಇದೆ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯೂ ವಿದ್ಯುತ್ತಿನ ಲಭ್ಯತೆಯನ್ನೇ ಅವಲಂಬಿಸಿದೆ. ಹೀಗಾಗಿ ಅಣು ವಿದ್ಯುತ್ ಘಟಕಗಳು ಅನಿವಾರ್ಯ. <br /> <br /> ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ತಮಿಳುನಾಡು ರಾಜ್ಯ ಈ ಅಣು ಘಟಕದ ಫಲಾನುಭವಿಯಾಗಿರುವುದರಿಂದ ಮುಖ್ಯಮಂತ್ರಿ ಜಯಲಲತಾ ಸ್ಥಳೀಯರ ಭಯ, ಆತಂಕಗಳ ನಿವಾರಣೆಗೆ ಕೇಂದ್ರದ ಜೊತೆ ಕೈಜೋಡಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>