<p>ಹಿರಿಯರಾದ ಕೋ. ಚೆನ್ನಬಸಪ್ಪನವರು ವಿಶ್ವಕನ್ನಡ ಸಮ್ಮೇಳನವನ್ನು ನಾರಾಯಣಮೂರ್ತಿಯವರು ಉದ್ಘಾಟಿಸುವುದನ್ನು ಸಮರ್ಥಿಸುತ್ತ ‘ಬರಗೂರು ಮತ್ತು ಗುಂಪಿನವರು’ ವಿರೋಧಿಸುತ್ತಿದ್ದಾರೆಂದು ಉಲ್ಲೇಖಿಸಿದ್ದಾರೆ. ಇಲ್ಲಿ ನನ್ನ ಗುಂಪು ಎನ್ನುವುದು ಯಾವುದೂ ಇಲ್ಲ. <br /> <br /> ಇನ್ನು ನಾರಾಯಣಮೂರ್ತಿಯವರಿಂದ ಉದ್ಘಾಟನೆ ಆಗುವುದು ಸರಿಯಲ್ಲ ಎಂಬ ವಾದವನ್ನು ಕೋ. ಚೆನ್ನಬಸಪ್ಪನವರು ಮತ್ತು ಪದ್ಮರಾಜ ದಂಡಾವತಿಯವರು ಸರಳೀಕರಿಸಿದ್ದಾರೆ (ನಾಲ್ಕನೇ ಆಯಾಮ ಮಾ.3). ಈ ವಿಶ್ವಕನ್ನಡ ಸಮ್ಮೇಳನವು ಕರ್ನಾಟಕ ಏಕೀಕರಣದ ಸುವರ್ಣ ಸಂದರ್ಭವನ್ನು ಸಂಭ್ರಮಿಸುವುದಕ್ಕಾಗಿ ನಡೆಯುತ್ತಿದೆ. ಅದೂ ಬೆಳಗಾವಿಯಲ್ಲಿ ನಡೆಯುತ್ತಿದೆ. <br /> <br /> ಕರ್ನಾಟಕದ ಅಖಂಡತೆಗೆ ವಿರುದ್ಧ ನಿಲುವು ತಳೆದು; ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಬೇಕು ಎಂದವರು, ಯಾವತ್ತು ಕನ್ನಡ-ಕನ್ನಡತನದ ಪರವಾಗಿಲ್ಲದವರು, ರಾಷ್ಟ್ರವನ್ನು ವ್ಯಾಪಿಸಿಕೊಳ್ಳುತ್ತಿರುವ ಆರ್ಥಿಕ ಮೂಲಭೂತವಾದವನ್ನು ಪ್ರತಿನಿಧಿಸುವವರು, ಸಂವಿಧಾನಾತ್ಮಕ ಸಾಮಾಜಿಕ ನಿಲುವುಗಳನ್ನು ಒಪ್ಪದವರು, ರಾಷ್ಟ್ರಗೀತೆಯ ಬಗ್ಗೆ ಹಗುರವಾಗಿ ನಡೆದುಕೊಂಡವರು ಹೀಗೆ ಅನೇಕ ಕಾರಣಗಳ ಕೇಂದ್ರವಾದವರು ಉದ್ಘಾಟನೆ ಮಾಡುವುದು ಸರಿಯಾದ ‘ಆದರ್ಶದ ಮಾದರಿ’ ಆಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.<br /> <br /> ನಾರಾಯಣಮೂರ್ತಿಯವರ ಬಗ್ಗೆ ಇಲ್ಲಿ ವೈಯಕ್ತಿಕ ವಿರೋಧವೂ ಇಲ್ಲ; ಅವರ ಉದ್ಯಮ ಕ್ಷೇತ್ರದ ಸಾಧನೆಯನ್ನು ಅಲ್ಲಗಳೆಯುತ್ತಲೂ ಇಲ್ಲ; ಅವರಿಗೆ ಅಗೌರವ ತೋರಿಸುವ ಪ್ರಶ್ನೆಯೂ ಇಲ್ಲ. ಹೀಗಾಗಿ ಇದು ವೈಯಕ್ತಿಕ ನೆಲೆಯ ವಾದ-ವಿವಾದ ಅಲ್ಲ. ನನ್ನದು ಪ್ರಜಾಸತ್ತಾತ್ಮಕ ತಾತ್ವಿಕ ಪ್ರತಿರೋಧ; ಕೂದಲೆಳೆ ಸೀಳುವ ವಕೀಲಿ ವಾದವಲ್ಲ.<br /> <br /> ನಿಜ; ಒಮ್ಮೆ ಆಹ್ವಾನಿಸಿ ಆನಂತರ ಬರಬೇಡಿ ಎಂದು ಸರ್ಕಾರವಾಗಲಿ, ಆಹ್ವಾನಿಸಿದವರಾಗಲಿ ಹೇಳುವುದು ಸಜ್ಜನಿಕೆಯಾಗುವುದಿಲ್ಲ ಎಂಬ ಅಂಶವನ್ನು ನಾನೂ ಒಪ್ಪುತ್ತೇನೆ. ಆದರೆ ಅವರ ಆಯ್ಕೆಯ ವಿವೇಕವನ್ನು ಒಪ್ಪುವುದಿಲ್ಲ. ಅಲ್ಲದೆ, ವಿಶ್ವಕನ್ನಡ ಸಮ್ಮೇಳನವು ಒಬ್ಬ ವ್ಯಕ್ತಿಯದಲ್ಲ; ಒಂದು ಸರ್ಕಾರದ್ದಲ್ಲ; ಸಮಸ್ತ ಕನ್ನಡಿಗರದು. ಬೆಳಗಾವಿಯಂತಹ ಸೂಕ್ಷ್ಮ ಸ್ಥಳದಲ್ಲಿ ನಡೆಯುವ ಈ ಸಮ್ಮೇಳನ ಯಶಸ್ವಿಯಾಗಬೇಕೆಂಬುದೇ ನನ್ನಂಥವರ ಅಪೇಕ್ಷೆಯಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರಿಯರಾದ ಕೋ. ಚೆನ್ನಬಸಪ್ಪನವರು ವಿಶ್ವಕನ್ನಡ ಸಮ್ಮೇಳನವನ್ನು ನಾರಾಯಣಮೂರ್ತಿಯವರು ಉದ್ಘಾಟಿಸುವುದನ್ನು ಸಮರ್ಥಿಸುತ್ತ ‘ಬರಗೂರು ಮತ್ತು ಗುಂಪಿನವರು’ ವಿರೋಧಿಸುತ್ತಿದ್ದಾರೆಂದು ಉಲ್ಲೇಖಿಸಿದ್ದಾರೆ. ಇಲ್ಲಿ ನನ್ನ ಗುಂಪು ಎನ್ನುವುದು ಯಾವುದೂ ಇಲ್ಲ. <br /> <br /> ಇನ್ನು ನಾರಾಯಣಮೂರ್ತಿಯವರಿಂದ ಉದ್ಘಾಟನೆ ಆಗುವುದು ಸರಿಯಲ್ಲ ಎಂಬ ವಾದವನ್ನು ಕೋ. ಚೆನ್ನಬಸಪ್ಪನವರು ಮತ್ತು ಪದ್ಮರಾಜ ದಂಡಾವತಿಯವರು ಸರಳೀಕರಿಸಿದ್ದಾರೆ (ನಾಲ್ಕನೇ ಆಯಾಮ ಮಾ.3). ಈ ವಿಶ್ವಕನ್ನಡ ಸಮ್ಮೇಳನವು ಕರ್ನಾಟಕ ಏಕೀಕರಣದ ಸುವರ್ಣ ಸಂದರ್ಭವನ್ನು ಸಂಭ್ರಮಿಸುವುದಕ್ಕಾಗಿ ನಡೆಯುತ್ತಿದೆ. ಅದೂ ಬೆಳಗಾವಿಯಲ್ಲಿ ನಡೆಯುತ್ತಿದೆ. <br /> <br /> ಕರ್ನಾಟಕದ ಅಖಂಡತೆಗೆ ವಿರುದ್ಧ ನಿಲುವು ತಳೆದು; ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಬೇಕು ಎಂದವರು, ಯಾವತ್ತು ಕನ್ನಡ-ಕನ್ನಡತನದ ಪರವಾಗಿಲ್ಲದವರು, ರಾಷ್ಟ್ರವನ್ನು ವ್ಯಾಪಿಸಿಕೊಳ್ಳುತ್ತಿರುವ ಆರ್ಥಿಕ ಮೂಲಭೂತವಾದವನ್ನು ಪ್ರತಿನಿಧಿಸುವವರು, ಸಂವಿಧಾನಾತ್ಮಕ ಸಾಮಾಜಿಕ ನಿಲುವುಗಳನ್ನು ಒಪ್ಪದವರು, ರಾಷ್ಟ್ರಗೀತೆಯ ಬಗ್ಗೆ ಹಗುರವಾಗಿ ನಡೆದುಕೊಂಡವರು ಹೀಗೆ ಅನೇಕ ಕಾರಣಗಳ ಕೇಂದ್ರವಾದವರು ಉದ್ಘಾಟನೆ ಮಾಡುವುದು ಸರಿಯಾದ ‘ಆದರ್ಶದ ಮಾದರಿ’ ಆಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.<br /> <br /> ನಾರಾಯಣಮೂರ್ತಿಯವರ ಬಗ್ಗೆ ಇಲ್ಲಿ ವೈಯಕ್ತಿಕ ವಿರೋಧವೂ ಇಲ್ಲ; ಅವರ ಉದ್ಯಮ ಕ್ಷೇತ್ರದ ಸಾಧನೆಯನ್ನು ಅಲ್ಲಗಳೆಯುತ್ತಲೂ ಇಲ್ಲ; ಅವರಿಗೆ ಅಗೌರವ ತೋರಿಸುವ ಪ್ರಶ್ನೆಯೂ ಇಲ್ಲ. ಹೀಗಾಗಿ ಇದು ವೈಯಕ್ತಿಕ ನೆಲೆಯ ವಾದ-ವಿವಾದ ಅಲ್ಲ. ನನ್ನದು ಪ್ರಜಾಸತ್ತಾತ್ಮಕ ತಾತ್ವಿಕ ಪ್ರತಿರೋಧ; ಕೂದಲೆಳೆ ಸೀಳುವ ವಕೀಲಿ ವಾದವಲ್ಲ.<br /> <br /> ನಿಜ; ಒಮ್ಮೆ ಆಹ್ವಾನಿಸಿ ಆನಂತರ ಬರಬೇಡಿ ಎಂದು ಸರ್ಕಾರವಾಗಲಿ, ಆಹ್ವಾನಿಸಿದವರಾಗಲಿ ಹೇಳುವುದು ಸಜ್ಜನಿಕೆಯಾಗುವುದಿಲ್ಲ ಎಂಬ ಅಂಶವನ್ನು ನಾನೂ ಒಪ್ಪುತ್ತೇನೆ. ಆದರೆ ಅವರ ಆಯ್ಕೆಯ ವಿವೇಕವನ್ನು ಒಪ್ಪುವುದಿಲ್ಲ. ಅಲ್ಲದೆ, ವಿಶ್ವಕನ್ನಡ ಸಮ್ಮೇಳನವು ಒಬ್ಬ ವ್ಯಕ್ತಿಯದಲ್ಲ; ಒಂದು ಸರ್ಕಾರದ್ದಲ್ಲ; ಸಮಸ್ತ ಕನ್ನಡಿಗರದು. ಬೆಳಗಾವಿಯಂತಹ ಸೂಕ್ಷ್ಮ ಸ್ಥಳದಲ್ಲಿ ನಡೆಯುವ ಈ ಸಮ್ಮೇಳನ ಯಶಸ್ವಿಯಾಗಬೇಕೆಂಬುದೇ ನನ್ನಂಥವರ ಅಪೇಕ್ಷೆಯಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>