ಆರು ಜನ ಸುಲಿಗೆಕೋರರ ಬಂಧನ

ಆನೇಕಲ್: ತಾಲ್ಲೂಕಿನ ಜಿಗಣಿ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಕೈಗಾರಿಕಾ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಆರು ಜನ ದುಷ್ಕರ್ಮಿಗಳನ್ನು ಜಿಗಣಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆರೋಪಿಗಳನ್ನು ಬೆಂಗಳೂರಿನ ಹೊಂಗಸಂದ್ರದ ಬಾಲಾಜಿ ಬಡಾವಣೆಯ ಎಂ. ಪ್ರತಾಪ್ (20), ರಾಜೇಂದ್ರ ಪ್ರಸಾದ್ (18), ರಂಜಿತ್ ಕುಮಾರ್ ಅಲಿಯಾಸ್ ಬಂಬು (19), ಅಜಯ್ಕುಮಾರ್ (19), ವಿರಾಟ್ನಗರದ ಶಂಕರ್ (19) ಮತ್ತು ಮಾಸ್ತೇನಹಳ್ಳಿ ದಿನ್ನೆಯ ಡ್ರೈವರ್ ಶ್ರೀಕಾಂತ್ (19) ಎಂದು ಗುರುತಿಸಲಾಗಿದೆ.
‘ಆರೋಪಿಗಳಾದ ಜೋಸೆಫ್, ವೆಂಕಟೇಶ್ ಮತ್ತು ಚಂದ್ರಶೇಖರ್ ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರವೇ ಪತ್ತೆಹಚ್ಚಲಾಗುವುದು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರಮೇಶ್ ಬಾನೋಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.