<p><strong>ಮುಂಬೈ (ಪಿಟಿಐ): </strong>ಘಾಟ್ಕೋಪರ್ ಸ್ಫೋಟ ಕೃತ್ಯದ ಆರೋಪಿ ಸಯೀದ್ ಖ್ವಾಜಾ ಯೂನುಸ್ ಸಾವಿನ ಸಂಬಂಧ ಎನ್ಕೌಂಟರ್ ಪರಿಣತ ಸಚಿನ್ ವಜೆ ಮತ್ತು ಇತರ ಮೂವರು ಪೊಲೀಸರ ವಿರುದ್ಧ ಸಿಐಡಿ ಸಲ್ಲಿಸಿದ್ದ ಆರೋಪಪಟ್ಟಿಯನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಇದರೊಂದಿಗೆ ಎಂಟು ವರ್ಷಗಳ ಹಿಂದಿನ ಈ ಪ್ರಕರಣದ ಬಗೆಗಿನ ವಿಚಾರಣೆ ಮುಂದಿನ ತಿಂಗಳು ಚಾಲನೆ ಪಡೆಯಲಿದೆ.<br /> <br /> ರಾಜೇಂದ್ರ ತಿವಾರಿ, ರಾಜಾರಾಂ ನಿಕಂ ಮತ್ತು ಸುನಿಲ್ ದೇಸಾಯಿ ಆರೋಪಿಗಳಾಗಿರುವ ಇತರ ಮೂವರು ಪೊಲೀಸರು ಎಂದು ವಿಶೇಷ ಸಿಐಡಿ ಪ್ರಾಸಿಕ್ಯೂಟರ್ ಆರ್.ಬಿ.ಮೊಕಾಶಿ ತಿಳಿಸಿದ್ದಾರೆ. ಈ ನಾಲ್ವರ ವಿರುದ್ಧ ಕೊಲೆ, ಅಪರಾಧ ಸಂಚು ಹಾಗೂ ಇನ್ನಿತರ ಆರೋಪಗಳನ್ನು ಹೊರಿಸಲಾಗಿದೆ. 2002ರ ಡಿಸೆಂಬರ್ನಲ್ಲಿ ನಡೆದ ಘಾಟ್ಕೋಪರ್ ಸ್ಫೋಟ ಸಂಬಂಧ ದುಬೈನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಯೂನುಸ್ನನ್ನು ಡಿ.2ರಂದು ಮರಾಠವಾಡದ ಪಾರ್ಭನಿ ಪೊಲೀಸರು ಬಂಧಿಸಿದ್ದರು.<br /> <br /> ಆನಂತರ 2003ರ ಜನವರಿಯಲ್ಲಿ ವಿಚಾರಣೆಗೆಂದು ಔರಂಗಾಬಾದ್ಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ವಾಹನ ಅಪಘಾತಕ್ಕೀಡಾದ ಸಂದರ್ಭದಲ್ಲಿ ಯೂನುಸ್ ಪರಾರಿಯಾದ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಆದರೆ ಈ ಸ್ಫೋಟದ ಸಹ ಆರೋಪಿ ಅಬ್ದುಲ್ ಮತೀನ್, ವಿಚಾರಣಾಧೀನನಾಗಿದ್ದ ಅವಧಿಯಲ್ಲಿ ಯೂನುಸ್ ಸಾವಿಗೀಡಾದ ಎಂದು ಹೇಳಿದ್ದನು.ಆನಂತರ, ಯೂನುಸ್ ಪೋಷಕರು ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಗ ಹೈಕೋರ್ಟ್ 2003ರ ಮಾರ್ಚ್ನಲ್ಲಿ ಈ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಲು ಆದೇಶಿಸಿತ್ತು.<br /> <br /> ಯೂನುಸ್ ಪರಾರಿಯಾದ ಎಂಬ ವಜೆ ಹಾಗೂ ಇತರ ಪೊಲೀಸರ ವಾದದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ಸಿಐಡಿ, ಕಸ್ಟಡಿ ಸಾವಿನ ಪ್ರಕರಣದಡಿ ನಾಲ್ವರು ಪೊಲೀಸರ ವಿರುದ್ಧ ಆರೋಪಪಟ್ಟಿ ದಾಖಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಘಾಟ್ಕೋಪರ್ ಸ್ಫೋಟ ಕೃತ್ಯದ ಆರೋಪಿ ಸಯೀದ್ ಖ್ವಾಜಾ ಯೂನುಸ್ ಸಾವಿನ ಸಂಬಂಧ ಎನ್ಕೌಂಟರ್ ಪರಿಣತ ಸಚಿನ್ ವಜೆ ಮತ್ತು ಇತರ ಮೂವರು ಪೊಲೀಸರ ವಿರುದ್ಧ ಸಿಐಡಿ ಸಲ್ಲಿಸಿದ್ದ ಆರೋಪಪಟ್ಟಿಯನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಇದರೊಂದಿಗೆ ಎಂಟು ವರ್ಷಗಳ ಹಿಂದಿನ ಈ ಪ್ರಕರಣದ ಬಗೆಗಿನ ವಿಚಾರಣೆ ಮುಂದಿನ ತಿಂಗಳು ಚಾಲನೆ ಪಡೆಯಲಿದೆ.<br /> <br /> ರಾಜೇಂದ್ರ ತಿವಾರಿ, ರಾಜಾರಾಂ ನಿಕಂ ಮತ್ತು ಸುನಿಲ್ ದೇಸಾಯಿ ಆರೋಪಿಗಳಾಗಿರುವ ಇತರ ಮೂವರು ಪೊಲೀಸರು ಎಂದು ವಿಶೇಷ ಸಿಐಡಿ ಪ್ರಾಸಿಕ್ಯೂಟರ್ ಆರ್.ಬಿ.ಮೊಕಾಶಿ ತಿಳಿಸಿದ್ದಾರೆ. ಈ ನಾಲ್ವರ ವಿರುದ್ಧ ಕೊಲೆ, ಅಪರಾಧ ಸಂಚು ಹಾಗೂ ಇನ್ನಿತರ ಆರೋಪಗಳನ್ನು ಹೊರಿಸಲಾಗಿದೆ. 2002ರ ಡಿಸೆಂಬರ್ನಲ್ಲಿ ನಡೆದ ಘಾಟ್ಕೋಪರ್ ಸ್ಫೋಟ ಸಂಬಂಧ ದುಬೈನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಯೂನುಸ್ನನ್ನು ಡಿ.2ರಂದು ಮರಾಠವಾಡದ ಪಾರ್ಭನಿ ಪೊಲೀಸರು ಬಂಧಿಸಿದ್ದರು.<br /> <br /> ಆನಂತರ 2003ರ ಜನವರಿಯಲ್ಲಿ ವಿಚಾರಣೆಗೆಂದು ಔರಂಗಾಬಾದ್ಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ವಾಹನ ಅಪಘಾತಕ್ಕೀಡಾದ ಸಂದರ್ಭದಲ್ಲಿ ಯೂನುಸ್ ಪರಾರಿಯಾದ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಆದರೆ ಈ ಸ್ಫೋಟದ ಸಹ ಆರೋಪಿ ಅಬ್ದುಲ್ ಮತೀನ್, ವಿಚಾರಣಾಧೀನನಾಗಿದ್ದ ಅವಧಿಯಲ್ಲಿ ಯೂನುಸ್ ಸಾವಿಗೀಡಾದ ಎಂದು ಹೇಳಿದ್ದನು.ಆನಂತರ, ಯೂನುಸ್ ಪೋಷಕರು ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಗ ಹೈಕೋರ್ಟ್ 2003ರ ಮಾರ್ಚ್ನಲ್ಲಿ ಈ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಲು ಆದೇಶಿಸಿತ್ತು.<br /> <br /> ಯೂನುಸ್ ಪರಾರಿಯಾದ ಎಂಬ ವಜೆ ಹಾಗೂ ಇತರ ಪೊಲೀಸರ ವಾದದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ಸಿಐಡಿ, ಕಸ್ಟಡಿ ಸಾವಿನ ಪ್ರಕರಣದಡಿ ನಾಲ್ವರು ಪೊಲೀಸರ ವಿರುದ್ಧ ಆರೋಪಪಟ್ಟಿ ದಾಖಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>