<p><strong>ನವದೆಹಲಿ (ಪಿಟಿಐ/ಐಎಎನ್ಎಸ್):</strong> ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಮತ್ತು ಇತರ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ತೇಜಿಂದರ್ ಸಿಂಗ್, ಮಂಗಳವಾರ ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಿದರು.<br /> <br /> ಮೆಟ್ರೊಪಾಲಿಟನ್ ನ್ಯಾಯಾಧೀಶ ಸುದೇಶ್ ಕುಮಾರ್ ಅವರ ಮುಂದೆ ಹೇಳಿಕೆ ನೀಡಿದ ತೇಜಿಂದರ್, ತಮ್ಮ ವಿರುದ್ಧ ಸೇನಾ ಮುಖ್ಯಸ್ಥರು ಮಾಡಿರುವ ಆರೋಪ ನಿರಾಧಾರವಾಗಿದೆ ಎಂದರು.<br /> <br /> `ಜನರಲ್ ವಿ.ಕೆ. ಸಿಂಗ್, ರಕ್ಷಣಾ ಸಚಿವಾಲಯ ಇರುವ ಸೌತ್ ಬ್ಲಾಕ್ನಲ್ಲಿ ಮೊಬೈಲ್ ಮಾತುಕತೆ ಕದ್ದಾಲಿಸಲು ಅನಧಿಕೃತವಾಗಿ ಆದೇಶ ನೀಡಿದ್ದರು ಎಂಬರ್ಥದ ವರದಿಗಳು ಮಾರ್ಚ್ 3 ಮತ್ತು 5ರ ಮಧ್ಯದಲ್ಲಿ ಮಾಧ್ಯಮಗಳಲ್ಲಿ ಹರಿದಾಡಿದ್ದವು. <br /> <br /> ಈ ವರದಿಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸೇನಾ ಕೇಂದ್ರ ಕಚೇರಿ ಮಾರ್ಚ್ 5ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿತು. ಇದರಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿದ್ದು, ವಿರುದ್ಧವಾಗಿ ನಾಲ್ಕು ಆರೋಪಗಳನ್ನು ಮಾಡಲಾಗಿತ್ತು~ ಎಂದು ತೇಜಿಂದರ್ ಕೋರ್ಟ್ಗೆ ತಿಳಿಸಿದರು.<br /> <br /> `ಮಾರ್ಚ್ 5ರ ಸಂಜೆ ಕೆಲ ಮಾಧ್ಯಮ ಪ್ರತಿನಿಧಿಗಳು ನನ್ನನ್ನು ಸಂಪರ್ಕಿಸಿದಾಗಲೇ ಸೇನೆ ಬಿಡುಗಡೆ ಮಾಡಿದ ಪ್ರಕಟಣೆ ನನ್ನ ಗಮನಕ್ಕೆ ಬಂತು. <br /> <br /> ಸೇನಾ ಕೇಂದ್ರ ಕಚೇರಿ ನನ್ನ ಮೇಲೆ ಮಾಡಿದ ಹಠಾತ್ ಆರೋಪದಿಂದ ನಾನು ದಿಗ್ಭ್ರಾಂತನಾದೆ~ ಎಂದು ತೇಜಿಂದರ್ ಸಿಂಗ್ ಕೋರ್ಟ್ಗೆ ತಿಳಿಸಿದರು. ತೇಜಿಂದರ್ ಸಿಂಗ್ ಹೊರತಾಗಿ ಇತರ ಮೂವರು ಸಾಕ್ಷ್ಯಗಳ ಹೇಳಿಕೆಯನ್ನೂ ಕೋರ್ಟ್ ದಾಖಲಿಸಿಕೊಂಡಿತು.<br /> <br /> ಸಿಂಗ್ ಸಲ್ಲಿಸಿರುವ ದೂರಿನಲ್ಲಿ ಹೆಸರಿಸಲಾದ ವ್ಯಕ್ತಿಗಳಿಗೆ ಸಮನ್ಸ್ ಜಾರಿಗೊಳಿಸಲು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ನಿಗದಿಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ/ಐಎಎನ್ಎಸ್):</strong> ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಮತ್ತು ಇತರ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ತೇಜಿಂದರ್ ಸಿಂಗ್, ಮಂಗಳವಾರ ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಿದರು.<br /> <br /> ಮೆಟ್ರೊಪಾಲಿಟನ್ ನ್ಯಾಯಾಧೀಶ ಸುದೇಶ್ ಕುಮಾರ್ ಅವರ ಮುಂದೆ ಹೇಳಿಕೆ ನೀಡಿದ ತೇಜಿಂದರ್, ತಮ್ಮ ವಿರುದ್ಧ ಸೇನಾ ಮುಖ್ಯಸ್ಥರು ಮಾಡಿರುವ ಆರೋಪ ನಿರಾಧಾರವಾಗಿದೆ ಎಂದರು.<br /> <br /> `ಜನರಲ್ ವಿ.ಕೆ. ಸಿಂಗ್, ರಕ್ಷಣಾ ಸಚಿವಾಲಯ ಇರುವ ಸೌತ್ ಬ್ಲಾಕ್ನಲ್ಲಿ ಮೊಬೈಲ್ ಮಾತುಕತೆ ಕದ್ದಾಲಿಸಲು ಅನಧಿಕೃತವಾಗಿ ಆದೇಶ ನೀಡಿದ್ದರು ಎಂಬರ್ಥದ ವರದಿಗಳು ಮಾರ್ಚ್ 3 ಮತ್ತು 5ರ ಮಧ್ಯದಲ್ಲಿ ಮಾಧ್ಯಮಗಳಲ್ಲಿ ಹರಿದಾಡಿದ್ದವು. <br /> <br /> ಈ ವರದಿಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸೇನಾ ಕೇಂದ್ರ ಕಚೇರಿ ಮಾರ್ಚ್ 5ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿತು. ಇದರಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿದ್ದು, ವಿರುದ್ಧವಾಗಿ ನಾಲ್ಕು ಆರೋಪಗಳನ್ನು ಮಾಡಲಾಗಿತ್ತು~ ಎಂದು ತೇಜಿಂದರ್ ಕೋರ್ಟ್ಗೆ ತಿಳಿಸಿದರು.<br /> <br /> `ಮಾರ್ಚ್ 5ರ ಸಂಜೆ ಕೆಲ ಮಾಧ್ಯಮ ಪ್ರತಿನಿಧಿಗಳು ನನ್ನನ್ನು ಸಂಪರ್ಕಿಸಿದಾಗಲೇ ಸೇನೆ ಬಿಡುಗಡೆ ಮಾಡಿದ ಪ್ರಕಟಣೆ ನನ್ನ ಗಮನಕ್ಕೆ ಬಂತು. <br /> <br /> ಸೇನಾ ಕೇಂದ್ರ ಕಚೇರಿ ನನ್ನ ಮೇಲೆ ಮಾಡಿದ ಹಠಾತ್ ಆರೋಪದಿಂದ ನಾನು ದಿಗ್ಭ್ರಾಂತನಾದೆ~ ಎಂದು ತೇಜಿಂದರ್ ಸಿಂಗ್ ಕೋರ್ಟ್ಗೆ ತಿಳಿಸಿದರು. ತೇಜಿಂದರ್ ಸಿಂಗ್ ಹೊರತಾಗಿ ಇತರ ಮೂವರು ಸಾಕ್ಷ್ಯಗಳ ಹೇಳಿಕೆಯನ್ನೂ ಕೋರ್ಟ್ ದಾಖಲಿಸಿಕೊಂಡಿತು.<br /> <br /> ಸಿಂಗ್ ಸಲ್ಲಿಸಿರುವ ದೂರಿನಲ್ಲಿ ಹೆಸರಿಸಲಾದ ವ್ಯಕ್ತಿಗಳಿಗೆ ಸಮನ್ಸ್ ಜಾರಿಗೊಳಿಸಲು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ನಿಗದಿಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>