<p><strong>ನವದೆಹಲಿ (ಪಿಟಿಐ): </strong>ಆರೋಗ್ಯ ರಕ್ಷಣೆ ಸೇವೆಗಳ ಮೇಲೆ ಶೇ 5ರಷ್ಟು ಸೇವಾ ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಆಲೋಚನೆಯು ಜನಸಾಮಾನ್ಯರಿಗೆ ಯಾವುದೇ ಬಗೆಯಲ್ಲಿಯೂ ತೊಂದರೆ ಉಂಟು ಮಾಡಲಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.<br /> <br /> ‘25ಕ್ಕಿಂತ ಹೆಚ್ಚಿನ ಹಾಸಿಗೆಗಳನ್ನು ಒಳಗೊಂಡ ಕೇಂದ್ರೀಕೃತ ಏರ್ಕಂಡೀಷನ್ (ಸೆಂಟ್ರಲಿ ಎಸಿ) ಸೌಲಭ್ಯ ಹೊಂದಿರುವ ಖಾಸಗಿ ಆಸ್ಪತ್ರೆಗಳನ್ನು ಮಾತ್ರ ಈ ಸೇವಾ ತೆರಿಗೆ ವ್ಯಾಪ್ತಿಗೆ ತರಲಾಗುತ್ತಿದೆ. ಆರೋಗ್ಯ ಸೇವೆಯನ್ನು ತೆರಿಗೆ ಜಾಲಕ್ಕೆ ತರುವುದು ನಮ್ಮ ಉದ್ದೇಶವಾಗಿದೆ. ಇದರಿಂದ ಶ್ರೀಸಾಮಾನ್ಯರಿಗೆ ಯಾವುದೇ ಅನಾನುಕೂಲ ಆಗಲಾರದು’ಎಂದು ಕೇಂದ್ರೀಯ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ ಅಧ್ಯಕ್ಷ ಎಸ್. ಡಿ. ಮಜುಂದಾರ್ ಅಭಿಪ್ರಾಯಪಟ್ಟಿದ್ದಾರೆ. <br /> <br /> ಬಜೆಟ್ಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.ಕಾಯಿಲೆಪೀಡಿತರನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಅತ್ಯಾಧುನಿಕ ಸೌಲಭ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿನ ಎಲ್ಲ ಬಗೆಯ ಸೇವೆಗಳ ಮೇಲೆ ಶೇ 5ರಷ್ಟು ಸೇವಾ ತೆರಿಗೆ ವಿಧಿಸಲು 2011-12ನೇ ಸಾಲಿನ ಮುಂಗಡ ಪತ್ರದಲ್ಲಿ ಉದ್ದೇಶಿಸಲಾಗಿದೆ. ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳು (ಮುನಸಿಪಾಲ್ಟಿ) ನಿರ್ವಹಿಸುವ ಆಸ್ಪತ್ರೆಗಳನ್ನು ಈ ತೆರಿಗೆ ವ್ಯಾಪ್ತಿಗೆ ತರಲಾಗಿಲ್ಲ.<br /> <br /> <strong>ಕೈಬಿಡಲು ಒತ್ತಾಯ:</strong> ಇದೊಂದು ‘ದುರ್ಗತಿಯ ತೆರಿಗೆ’ ಎಂದು ಟೀಕಿಸಿರುವ ಖಾಸಗಿ ಆಸ್ಪತ್ರೆಗಳು, ಉದ್ದೇಶಿತ ಪ್ರಸ್ತಾವ ಕೈಬಿಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.ತನ್ನ ನಾಗರಿಕರ ಸಂಕಟವನ್ನೇ ವರಮಾನ ಮೂಲವನ್ನಾಗಿ ಮಾಡಿಕೊಂಡಿರುವ ಸರ್ಕಾರದ ನಿರ್ಧಾರವು, ಈ ಹಿಂದೆ ಬ್ರಿಟಿಷರು ಮುಗ್ಧ ನಾಗರಿಕರ ಮೇಲೆ ‘ಉಪ್ಪಿನ ತೆರಿಗೆ’ ಹೇರಿದ್ದನ್ನು ನೆನಪಿಸುತ್ತದೆ. ಇದೊಂದು 21ನೇ ಶತಮಾನದ ಉಪ್ಪಿನ ತೆರಿಗೆ ಮತ್ತು ಅನಾರೋಗ್ಯಕರ ತೆರಿಗೆಯೂ ಆಗಿದೆ ಎಂದು ಖಾಸಗಿ ಆಸ್ಪತ್ರೆಗಳು ಟೀಕಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಆರೋಗ್ಯ ರಕ್ಷಣೆ ಸೇವೆಗಳ ಮೇಲೆ ಶೇ 5ರಷ್ಟು ಸೇವಾ ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಆಲೋಚನೆಯು ಜನಸಾಮಾನ್ಯರಿಗೆ ಯಾವುದೇ ಬಗೆಯಲ್ಲಿಯೂ ತೊಂದರೆ ಉಂಟು ಮಾಡಲಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.<br /> <br /> ‘25ಕ್ಕಿಂತ ಹೆಚ್ಚಿನ ಹಾಸಿಗೆಗಳನ್ನು ಒಳಗೊಂಡ ಕೇಂದ್ರೀಕೃತ ಏರ್ಕಂಡೀಷನ್ (ಸೆಂಟ್ರಲಿ ಎಸಿ) ಸೌಲಭ್ಯ ಹೊಂದಿರುವ ಖಾಸಗಿ ಆಸ್ಪತ್ರೆಗಳನ್ನು ಮಾತ್ರ ಈ ಸೇವಾ ತೆರಿಗೆ ವ್ಯಾಪ್ತಿಗೆ ತರಲಾಗುತ್ತಿದೆ. ಆರೋಗ್ಯ ಸೇವೆಯನ್ನು ತೆರಿಗೆ ಜಾಲಕ್ಕೆ ತರುವುದು ನಮ್ಮ ಉದ್ದೇಶವಾಗಿದೆ. ಇದರಿಂದ ಶ್ರೀಸಾಮಾನ್ಯರಿಗೆ ಯಾವುದೇ ಅನಾನುಕೂಲ ಆಗಲಾರದು’ಎಂದು ಕೇಂದ್ರೀಯ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ ಅಧ್ಯಕ್ಷ ಎಸ್. ಡಿ. ಮಜುಂದಾರ್ ಅಭಿಪ್ರಾಯಪಟ್ಟಿದ್ದಾರೆ. <br /> <br /> ಬಜೆಟ್ಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.ಕಾಯಿಲೆಪೀಡಿತರನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಅತ್ಯಾಧುನಿಕ ಸೌಲಭ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿನ ಎಲ್ಲ ಬಗೆಯ ಸೇವೆಗಳ ಮೇಲೆ ಶೇ 5ರಷ್ಟು ಸೇವಾ ತೆರಿಗೆ ವಿಧಿಸಲು 2011-12ನೇ ಸಾಲಿನ ಮುಂಗಡ ಪತ್ರದಲ್ಲಿ ಉದ್ದೇಶಿಸಲಾಗಿದೆ. ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳು (ಮುನಸಿಪಾಲ್ಟಿ) ನಿರ್ವಹಿಸುವ ಆಸ್ಪತ್ರೆಗಳನ್ನು ಈ ತೆರಿಗೆ ವ್ಯಾಪ್ತಿಗೆ ತರಲಾಗಿಲ್ಲ.<br /> <br /> <strong>ಕೈಬಿಡಲು ಒತ್ತಾಯ:</strong> ಇದೊಂದು ‘ದುರ್ಗತಿಯ ತೆರಿಗೆ’ ಎಂದು ಟೀಕಿಸಿರುವ ಖಾಸಗಿ ಆಸ್ಪತ್ರೆಗಳು, ಉದ್ದೇಶಿತ ಪ್ರಸ್ತಾವ ಕೈಬಿಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.ತನ್ನ ನಾಗರಿಕರ ಸಂಕಟವನ್ನೇ ವರಮಾನ ಮೂಲವನ್ನಾಗಿ ಮಾಡಿಕೊಂಡಿರುವ ಸರ್ಕಾರದ ನಿರ್ಧಾರವು, ಈ ಹಿಂದೆ ಬ್ರಿಟಿಷರು ಮುಗ್ಧ ನಾಗರಿಕರ ಮೇಲೆ ‘ಉಪ್ಪಿನ ತೆರಿಗೆ’ ಹೇರಿದ್ದನ್ನು ನೆನಪಿಸುತ್ತದೆ. ಇದೊಂದು 21ನೇ ಶತಮಾನದ ಉಪ್ಪಿನ ತೆರಿಗೆ ಮತ್ತು ಅನಾರೋಗ್ಯಕರ ತೆರಿಗೆಯೂ ಆಗಿದೆ ಎಂದು ಖಾಸಗಿ ಆಸ್ಪತ್ರೆಗಳು ಟೀಕಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>