<p>`ಬಹುಶಃ ಅದು 1983ರಲ್ಲಿ ಅನ್ನಿಸುತ್ತೆ. ಅಂದು ರಾತ್ರಿ 12 ಗಂಟೆ ಕಳೆದಿತ್ತು...<br /> ಹಗಲಿಡೀ ಅಭ್ಯಾಸ ಮಾಡಿ ದಣಿದಿದ್ದ ನಾವು ಗಾಢ ನಿದ್ರೆಯಲ್ಲಿದ್ದವು. ಆಗ ಭದ್ರತಾ ಸಿಬ್ಬಂದಿಯೊಬ್ಬ ಓಡುತ್ತಾ ಬಂದು, `ಸರ್ ಆ ಚೋಟು ಈಗಲೂ ಅಭ್ಯಾಸ ಮಾಡುತ್ತಿದ್ದಾನೆ~ ಎಂದ. `ನೀನು ಹೋಗಿ ಫೀಲ್ಡಿಂಗ್ ಮಾಡು~ ಎಂದು ನಾನು ಆ ಭದ್ರತಾ ಸಿಬ್ಬಂದಿಗೆ ಹೇಳಿ ಕಳುಹಿಸಿದ್ದೆ! ಆ ಮಧ್ಯೆ ರಾತ್ರಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಹುಡುಗ ಸಚಿನ್~.<br /> <br /> ಈ ವಿಷಯವನ್ನು ನೆನಪಿಸಿದ್ದು ಕೋಚಿಂಗ್ನಲ್ಲಿ 40 ವರ್ಷಗಳ ಅನುಭವ ಹೊಂದಿರುವ ವಾಸು ಪರಾಂಜಪೆ. <br /> <br /> `20 ವರ್ಷಗಳ ಹಿಂದಿನ ಮಾತು. ಸೆಹ್ವಾಗ್ ಅವರ ತಂದೆ ನನ್ನ ಬಳಿ ಬಂದು 11 ರೂಪಾಯಿ ಹಾಗೂ ಸಿಹಿ ತುಂಬಿದ್ದ ಒಂದು ಪೆಟ್ಟಿಗೆ ನೀಡಿ ಸೆಹ್ವಾಗ್ ಅವರನ್ನು ನನ್ನ ಜವಾಬ್ದಾರಿಗೆ ಒಪ್ಪಿಸಿದರು. ಆದರೆ ನಾನು ಸೆಹ್ವಾಗ್ಗೆ ಯಾವತ್ತೂ ಈ ರೀತಿ ಆಡಬೇಕು ಎಂದು ಹೇಳಿಕೊಡಲಿಲ್ಲ. ಬದಲಾಗಿ ಆತ ಆಡುತ್ತಿದ್ದ ರೀತಿಯನ್ನು ಬೆಂಬಲಿಸುತ್ತಾ ಹೋದೆ. ಸಿಕ್ಸರ್ ಎತ್ತಿದರೆ ಮತ್ತೊಂದು ಸಿಕ್ಸರ್ ಎತ್ತುವಂತೆ ಪ್ರೋತ್ಸಾಯಿಸುತ್ತಿದ್ದೆ~. <br /> <br /> ಸೆಹ್ವಾಗ್ಗೆ ಕ್ರಿಕೆಟ್ ಹೇಳಿಕೊಟ್ಟ ಕೋಚ್ ಎ.ಎನ್.ಶರ್ಮ ಅವರ ಫ್ಲಾಷ್ಬ್ಯಾಕ್ ಇದು. <br /> 1958-59ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು, ಚಂದು ಬೋರ್ಡೆ ಅವರು ಪ್ರವಾಸದ ಒಂದು ಪಂದ್ಯದಲ್ಲಿ ಆಡುವಾಗ ಕೊಂಚ ವೈನ್ ಸೇವಿಸಿದ್ದರಂತೆ. ಆ ಪಂದ್ಯದಲ್ಲಿ ಬ್ಯಾಟ್ಸ್ಮನ್ ಬಾರಿಸಿದ ಚೆಂಡು ಒಂದು ದಿಕ್ಕಿಗೆ ಹೋದರೆ ಬೋರ್ಡೆ ಮತ್ತೊಂದು ದಿಕ್ಕಿನತ್ತ ಓಡಿದ್ದರಂತೆ! <br /> <br /> ಆ ಘಟನೆ ನೆನಪಿಸಿಕೊಂಡು ಸಭಾಂಗಣದಲ್ಲಿ ನಗುವಿನ ಅಲೆ ಎಬ್ಬಿಸಿದ್ದು ಸ್ವತಃ ಬೋರ್ಡೆ. ಇಂತಹ ಹಲವು ಪ್ರಸಂಗಗಳು ಅಲೆ ಅಲೆಯಾಗಿ ತೇಲಿ ಬಂದಿದ್ದು ಪುಣೆ ಯೂಥ್ ಸರ್ವೀಸ್ (ಪಿವೈಎಸ್) ಹಿಂದೂ ಜಿಮ್ಖಾನಾದ ಅಂಗಳದಲ್ಲಿ. <br /> ಐತಿಹಾಸಿಕ ನಗರಿ ಪುಣೆಯಲ್ಲಿ ನಡೆದ ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟದ 35ನೇ ಸಮ್ಮೇಳನದಲ್ಲಿ ನೆನಪುಗಳ ಮೆರವಣಿಗೆ ಇದು.<br /> <br /> ದೇಶದ ವಿವಿಧ ಭಾಗಗಳಿಂದ ಸುಮಾರು 150 ಕ್ರೀಡಾ ಪತ್ರಕರ್ತರು ಆಗಮಿಸಿದ್ದರು. ಅದರಲ್ಲಿ ವಿವಿಧ ಪತ್ರಿಕೆಗಳ ಸಂಪಾದಕರು, ಹಿರಿಯ ಪತ್ರಕರ್ತರು ಇದ್ದರು. ಬೆಂಗಳೂರು ಕ್ರೀಡಾ ಬರಹಗಾರರ ಸಂಘದಿಂದ ಏಳು ಮಂದಿ ತೆರಳಿದ್ದೆವು. ಈ ರೀತಿಯ ಸಮ್ಮಿಲನ ಭಾರತದ ಪತ್ರಿಕೋದ್ಯಮದಲ್ಲಿ ಕ್ರೀಡಾ ಪತ್ರಕರ್ತರನ್ನು ಹೊರತುಪಡಿಸಿ ಬೇರೆ ಯಾವುದೇ ವಿಭಾಗದಲ್ಲಿ ನಡೆದಿರಲಿಕ್ಕಿಲ್ಲ. ಹಾಗಾಗಿಯೇ ಜೂನ್ ಒಂದರಿಂದ ಐದರವರೆಗೆ ನಡೆದ 35ನೇ ಸಮ್ಮೇಳನ ವಿಶೇಷವಾದದ್ದು.<br /> <br /> ಕ್ರೀಡೆಗೆ ಸಂಬಂಧಿಸಿದ ವಿಚಾರ ಸಂಕಿರಣಗಳು ಜರುಗಿದವು. ದೇಶದ ಪ್ರಮುಖ ಕ್ರೀಡಾಪಟುಗಳು, ಕೋಚ್ಗಳು, ಅನುಭವಿ ಆಡಳಿತದಾರರೊಂದಿಗೆ ಚರ್ಚೆ, ಸಮಾಲೋಚನೆಗಳು ನಡೆದವು. <br /> <br /> ಸದಾ ಕ್ರೀಡಾ ವರದಿಯಲ್ಲಿ ಮುಳುಗಿರುವ ಪತ್ರಕರ್ತರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಮಜಾ ನೀಡಿದರು. ಕ್ರಿಕೆಟ್, ಟಿಟಿ, ಫುಟ್ಬಾಲ್, ಗಾಲ್ಫ್, ಬ್ಯಾಸ್ಕೆಟ್ಬಾಲ್ನಲ್ಲಿ ತಮ್ಮ ಚಾಕಚಕ್ಯತೆ ತೋರಿದರು. ಗೆದ್ದವರಿಗೆ ಬಹುಮಾನಗಳೂ ಇದ್ದವು. <br /> <br /> ಫಾರ್ಮುಲಾ ಒನ್ ರೇಸ್ ವರದಿ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ, ಭಾರತದಲ್ಲಿನ ಕೋಚಿಂಗ್ ಸ್ಥಿತಿ, 2012ರ ಒಲಿಂಪಿಕ್ಸ್ಗೆ ಯಾವ ರೀತಿ ಸಿದ್ಧತೆ ನಡೆದಿದೆ? ಗ್ರೇಟರ್ ನೊಯಿಡಾದಲ್ಲಿ ಸಿದ್ಧವಾಗಿರುವ ಎಫ್-ಒನ್ ಟ್ರ್ಯಾಕ್ ಹೇಗಿದೆ? ಭಾರತದಲ್ಲಿರುವ ಕ್ರೀಡಾ ಸೌಲಭ್ಯಗಳು ಹಾಗೂ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ, ಸಮಾಲೋಚನೆಗಳು ನಡೆದವು.</p>.<p><br /> 2012ರ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮೊದಲ ಶೂಟರ್ ಗಗನ್ ನಾರಂಗ್ ಕೆಲ ಕಹಿ ನೆನಪುಗಳನ್ನು ಬಿಚ್ಚಿಟ್ಟರು. `2008ರ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಯಶಸ್ಸು ಲಭಿಸಿರಬಹುದು. ಆದರೆ ಭಾರತ ಕ್ರೀಡಾ ರಂಗದಲ್ಲಿ ಹೆಚ್ಚೇನೂ ಬದಲಾವಣೆ ಆಗಿಲ್ಲ. ಶೂಟಿಂಗ್ ಸಂಬಂಧಿಸಿದ ಸಾಮಗ್ರಿ ತರಲು ನಾನು ಜರ್ಮನಿಗೆ ತೆರಳಬೇಕಿತ್ತು. ಆದರೆ ವೀಸಾವೇ ಸಿಗಲಿಲ್ಲ. ಸರ್ಕಾರದ ನೆರವು ಕೋರಿದೆ. ಆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ~ ಎಂದು ಭಾರತದ ಕ್ರೀಡಾ ಪರಿಸ್ಥಿತಿಯನ್ನು ತೆರೆದಿಟ್ಟರು. <br /> <br /> ರೋಯಿಂಗ್ ಚಾಂಪಿಯನ್ ಭಜರಂಗ ಲಾಲ್ ಠಕ್ಕರ್, ಫಾರ್ಮುಲಾ-2 ರೇಸ್ನ ಯುವ ಪ್ರತಿಭೆ ಅರ್ಮಾನ್ ಇಬ್ರಾಹಿಂ, ಪಶ್ಚಿಮ ಬಂಗಾಳ ರಣಜಿ ಕೋಚ್ ಡಬ್ಲ್ಯು.ವಿ.ರಾಮನ್, ಬಿಸಿಸಿಐ ಮುಖ್ಯ ಆಡಳಿತ ಅಧಿಕಾರಿ ಪ್ರೊ.ರತ್ನಾಕರ್ ಶೆಟ್ಟಿ, ಮಾಜಿ ಬ್ಯಾಡ್ಮಿಂಟನ್ ಆಟಗಾರ ನಂದು ನಾಟೇಕರ್ ಸೇರಿದಂತೆ ಪ್ರಮುಖರು ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು.<br /> <br /> ಹಾಗಾಗಿಯೇ ಆ ಐದು ದಿನಗಳ ನೆನಪುಗಳೇ ಒಂಥರಾ ವಿಶೇಷ... </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಬಹುಶಃ ಅದು 1983ರಲ್ಲಿ ಅನ್ನಿಸುತ್ತೆ. ಅಂದು ರಾತ್ರಿ 12 ಗಂಟೆ ಕಳೆದಿತ್ತು...<br /> ಹಗಲಿಡೀ ಅಭ್ಯಾಸ ಮಾಡಿ ದಣಿದಿದ್ದ ನಾವು ಗಾಢ ನಿದ್ರೆಯಲ್ಲಿದ್ದವು. ಆಗ ಭದ್ರತಾ ಸಿಬ್ಬಂದಿಯೊಬ್ಬ ಓಡುತ್ತಾ ಬಂದು, `ಸರ್ ಆ ಚೋಟು ಈಗಲೂ ಅಭ್ಯಾಸ ಮಾಡುತ್ತಿದ್ದಾನೆ~ ಎಂದ. `ನೀನು ಹೋಗಿ ಫೀಲ್ಡಿಂಗ್ ಮಾಡು~ ಎಂದು ನಾನು ಆ ಭದ್ರತಾ ಸಿಬ್ಬಂದಿಗೆ ಹೇಳಿ ಕಳುಹಿಸಿದ್ದೆ! ಆ ಮಧ್ಯೆ ರಾತ್ರಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಹುಡುಗ ಸಚಿನ್~.<br /> <br /> ಈ ವಿಷಯವನ್ನು ನೆನಪಿಸಿದ್ದು ಕೋಚಿಂಗ್ನಲ್ಲಿ 40 ವರ್ಷಗಳ ಅನುಭವ ಹೊಂದಿರುವ ವಾಸು ಪರಾಂಜಪೆ. <br /> <br /> `20 ವರ್ಷಗಳ ಹಿಂದಿನ ಮಾತು. ಸೆಹ್ವಾಗ್ ಅವರ ತಂದೆ ನನ್ನ ಬಳಿ ಬಂದು 11 ರೂಪಾಯಿ ಹಾಗೂ ಸಿಹಿ ತುಂಬಿದ್ದ ಒಂದು ಪೆಟ್ಟಿಗೆ ನೀಡಿ ಸೆಹ್ವಾಗ್ ಅವರನ್ನು ನನ್ನ ಜವಾಬ್ದಾರಿಗೆ ಒಪ್ಪಿಸಿದರು. ಆದರೆ ನಾನು ಸೆಹ್ವಾಗ್ಗೆ ಯಾವತ್ತೂ ಈ ರೀತಿ ಆಡಬೇಕು ಎಂದು ಹೇಳಿಕೊಡಲಿಲ್ಲ. ಬದಲಾಗಿ ಆತ ಆಡುತ್ತಿದ್ದ ರೀತಿಯನ್ನು ಬೆಂಬಲಿಸುತ್ತಾ ಹೋದೆ. ಸಿಕ್ಸರ್ ಎತ್ತಿದರೆ ಮತ್ತೊಂದು ಸಿಕ್ಸರ್ ಎತ್ತುವಂತೆ ಪ್ರೋತ್ಸಾಯಿಸುತ್ತಿದ್ದೆ~. <br /> <br /> ಸೆಹ್ವಾಗ್ಗೆ ಕ್ರಿಕೆಟ್ ಹೇಳಿಕೊಟ್ಟ ಕೋಚ್ ಎ.ಎನ್.ಶರ್ಮ ಅವರ ಫ್ಲಾಷ್ಬ್ಯಾಕ್ ಇದು. <br /> 1958-59ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು, ಚಂದು ಬೋರ್ಡೆ ಅವರು ಪ್ರವಾಸದ ಒಂದು ಪಂದ್ಯದಲ್ಲಿ ಆಡುವಾಗ ಕೊಂಚ ವೈನ್ ಸೇವಿಸಿದ್ದರಂತೆ. ಆ ಪಂದ್ಯದಲ್ಲಿ ಬ್ಯಾಟ್ಸ್ಮನ್ ಬಾರಿಸಿದ ಚೆಂಡು ಒಂದು ದಿಕ್ಕಿಗೆ ಹೋದರೆ ಬೋರ್ಡೆ ಮತ್ತೊಂದು ದಿಕ್ಕಿನತ್ತ ಓಡಿದ್ದರಂತೆ! <br /> <br /> ಆ ಘಟನೆ ನೆನಪಿಸಿಕೊಂಡು ಸಭಾಂಗಣದಲ್ಲಿ ನಗುವಿನ ಅಲೆ ಎಬ್ಬಿಸಿದ್ದು ಸ್ವತಃ ಬೋರ್ಡೆ. ಇಂತಹ ಹಲವು ಪ್ರಸಂಗಗಳು ಅಲೆ ಅಲೆಯಾಗಿ ತೇಲಿ ಬಂದಿದ್ದು ಪುಣೆ ಯೂಥ್ ಸರ್ವೀಸ್ (ಪಿವೈಎಸ್) ಹಿಂದೂ ಜಿಮ್ಖಾನಾದ ಅಂಗಳದಲ್ಲಿ. <br /> ಐತಿಹಾಸಿಕ ನಗರಿ ಪುಣೆಯಲ್ಲಿ ನಡೆದ ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟದ 35ನೇ ಸಮ್ಮೇಳನದಲ್ಲಿ ನೆನಪುಗಳ ಮೆರವಣಿಗೆ ಇದು.<br /> <br /> ದೇಶದ ವಿವಿಧ ಭಾಗಗಳಿಂದ ಸುಮಾರು 150 ಕ್ರೀಡಾ ಪತ್ರಕರ್ತರು ಆಗಮಿಸಿದ್ದರು. ಅದರಲ್ಲಿ ವಿವಿಧ ಪತ್ರಿಕೆಗಳ ಸಂಪಾದಕರು, ಹಿರಿಯ ಪತ್ರಕರ್ತರು ಇದ್ದರು. ಬೆಂಗಳೂರು ಕ್ರೀಡಾ ಬರಹಗಾರರ ಸಂಘದಿಂದ ಏಳು ಮಂದಿ ತೆರಳಿದ್ದೆವು. ಈ ರೀತಿಯ ಸಮ್ಮಿಲನ ಭಾರತದ ಪತ್ರಿಕೋದ್ಯಮದಲ್ಲಿ ಕ್ರೀಡಾ ಪತ್ರಕರ್ತರನ್ನು ಹೊರತುಪಡಿಸಿ ಬೇರೆ ಯಾವುದೇ ವಿಭಾಗದಲ್ಲಿ ನಡೆದಿರಲಿಕ್ಕಿಲ್ಲ. ಹಾಗಾಗಿಯೇ ಜೂನ್ ಒಂದರಿಂದ ಐದರವರೆಗೆ ನಡೆದ 35ನೇ ಸಮ್ಮೇಳನ ವಿಶೇಷವಾದದ್ದು.<br /> <br /> ಕ್ರೀಡೆಗೆ ಸಂಬಂಧಿಸಿದ ವಿಚಾರ ಸಂಕಿರಣಗಳು ಜರುಗಿದವು. ದೇಶದ ಪ್ರಮುಖ ಕ್ರೀಡಾಪಟುಗಳು, ಕೋಚ್ಗಳು, ಅನುಭವಿ ಆಡಳಿತದಾರರೊಂದಿಗೆ ಚರ್ಚೆ, ಸಮಾಲೋಚನೆಗಳು ನಡೆದವು. <br /> <br /> ಸದಾ ಕ್ರೀಡಾ ವರದಿಯಲ್ಲಿ ಮುಳುಗಿರುವ ಪತ್ರಕರ್ತರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಮಜಾ ನೀಡಿದರು. ಕ್ರಿಕೆಟ್, ಟಿಟಿ, ಫುಟ್ಬಾಲ್, ಗಾಲ್ಫ್, ಬ್ಯಾಸ್ಕೆಟ್ಬಾಲ್ನಲ್ಲಿ ತಮ್ಮ ಚಾಕಚಕ್ಯತೆ ತೋರಿದರು. ಗೆದ್ದವರಿಗೆ ಬಹುಮಾನಗಳೂ ಇದ್ದವು. <br /> <br /> ಫಾರ್ಮುಲಾ ಒನ್ ರೇಸ್ ವರದಿ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ, ಭಾರತದಲ್ಲಿನ ಕೋಚಿಂಗ್ ಸ್ಥಿತಿ, 2012ರ ಒಲಿಂಪಿಕ್ಸ್ಗೆ ಯಾವ ರೀತಿ ಸಿದ್ಧತೆ ನಡೆದಿದೆ? ಗ್ರೇಟರ್ ನೊಯಿಡಾದಲ್ಲಿ ಸಿದ್ಧವಾಗಿರುವ ಎಫ್-ಒನ್ ಟ್ರ್ಯಾಕ್ ಹೇಗಿದೆ? ಭಾರತದಲ್ಲಿರುವ ಕ್ರೀಡಾ ಸೌಲಭ್ಯಗಳು ಹಾಗೂ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ, ಸಮಾಲೋಚನೆಗಳು ನಡೆದವು.</p>.<p><br /> 2012ರ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮೊದಲ ಶೂಟರ್ ಗಗನ್ ನಾರಂಗ್ ಕೆಲ ಕಹಿ ನೆನಪುಗಳನ್ನು ಬಿಚ್ಚಿಟ್ಟರು. `2008ರ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಯಶಸ್ಸು ಲಭಿಸಿರಬಹುದು. ಆದರೆ ಭಾರತ ಕ್ರೀಡಾ ರಂಗದಲ್ಲಿ ಹೆಚ್ಚೇನೂ ಬದಲಾವಣೆ ಆಗಿಲ್ಲ. ಶೂಟಿಂಗ್ ಸಂಬಂಧಿಸಿದ ಸಾಮಗ್ರಿ ತರಲು ನಾನು ಜರ್ಮನಿಗೆ ತೆರಳಬೇಕಿತ್ತು. ಆದರೆ ವೀಸಾವೇ ಸಿಗಲಿಲ್ಲ. ಸರ್ಕಾರದ ನೆರವು ಕೋರಿದೆ. ಆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ~ ಎಂದು ಭಾರತದ ಕ್ರೀಡಾ ಪರಿಸ್ಥಿತಿಯನ್ನು ತೆರೆದಿಟ್ಟರು. <br /> <br /> ರೋಯಿಂಗ್ ಚಾಂಪಿಯನ್ ಭಜರಂಗ ಲಾಲ್ ಠಕ್ಕರ್, ಫಾರ್ಮುಲಾ-2 ರೇಸ್ನ ಯುವ ಪ್ರತಿಭೆ ಅರ್ಮಾನ್ ಇಬ್ರಾಹಿಂ, ಪಶ್ಚಿಮ ಬಂಗಾಳ ರಣಜಿ ಕೋಚ್ ಡಬ್ಲ್ಯು.ವಿ.ರಾಮನ್, ಬಿಸಿಸಿಐ ಮುಖ್ಯ ಆಡಳಿತ ಅಧಿಕಾರಿ ಪ್ರೊ.ರತ್ನಾಕರ್ ಶೆಟ್ಟಿ, ಮಾಜಿ ಬ್ಯಾಡ್ಮಿಂಟನ್ ಆಟಗಾರ ನಂದು ನಾಟೇಕರ್ ಸೇರಿದಂತೆ ಪ್ರಮುಖರು ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು.<br /> <br /> ಹಾಗಾಗಿಯೇ ಆ ಐದು ದಿನಗಳ ನೆನಪುಗಳೇ ಒಂಥರಾ ವಿಶೇಷ... </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>