<p>ಬಳ್ಳಾರಿ: ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಆ ಬೃಹತ್ ಬಂಗಲೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ನೀರವಮೌನ. ಖಾಸಗಿ ಭದ್ರತಾ ಸಿಬ್ಬಂದಿಯಿಂದ ಕಂಗೊಳಿಸುತ್ತಿದ್ದ ಗೇಟ್ಗಳೆದುರು ಬರೀ ಪೊಲೀಸರ ಓಡಾಟ.<br /> ಬಹುತೇಕ ಜನ ಹಾಸಿಗೆಯಿಂದ ಮೇಲೇಳುವ ಮೊದಲೇ ಸಿಬಿಐ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಆ ಮನೆಯ ಯಜಮಾನ, ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ವಶಕ್ಕೆ ತೆಗೆದುಕೊಂಡು ತೆರಳುತ್ತಿದ್ದಾಗ, ಆಗಷ್ಟೇ ಆ ಮನೆ ಎದುರು ದಿನಪತ್ರಿಕೆ ಹಂಚುವ ಹುಡುಗ ತನ್ನ ಸೈಕಲ್ನ ಸ್ಟ್ಯಾಂಡ್ ಹಾಕುತ್ತಿದ್ದ.<br /> <br /> ಸಂಬಂಧಿಗಳು, ಪರಿಚಯಸ್ಥರು, ಕೆಲಸದಾಳುಗಳು ಹೀಗೆ ಯಾರೊಬ್ಬರಿಗೂ ಮನೆಯೊಳಗೆ ಪ್ರವೇಶ ನಿರಾಕರಿಸಿ, ಬಾಗಿಲಲ್ಲೇ ತಡೆಯುತ್ತಿದ್ದ ಪೊಲೀಸರು, ~ಒಳಗೆ ಏನು ನಡೆದಿದೆ~ ಎಂಬ ಕಲ್ಪನೆಯೂ ಇಲ್ಲದೆ ತಮ್ಮ ಕೆಲಸ ತಾವು ಮಾಡುತ್ತಿದ್ದರೆ, ಕೆಲವೇ ನಿಮಿಷಗಳ ಅವಧಿಯಲ್ಲಿ ಔಪಚಾರಿಕತೆ ಪೂರ್ಣಗೊಳಿಸಿದ ಸಿಬಿಐ ತಂಡ, ಜನಾರ್ದನರೆಡ್ಡಿ ಅವರನ್ನು ತಮ್ಮಂದಿಗೆ ಕರೆದುಕೊಂಡು ಹೋಯಿತು.<br /> <br /> ಅತ್ತ ಮುನ್ನೂರು ಗಜಗಳ ಅಂತರದಲ್ಲಿದ್ದ ಇನ್ನೊಂದು ಬೃಹತ್ ಬಂಗಲೆಯಲ್ಲಿ ವಾಸವಿದ್ದ ಸಂಬಂಧಿ ಶ್ರೀನಿವಾಸರೆಡ್ಡಿ ಅವರ ಮನೆಗೆ ಜನಾರ್ದನರೆಡ್ಡಿ ಅವರೊಂದಿಗೆ ತೆರಳಿದ ಸಿಬಿಐ ತಂಡ, 10ರಿಂದ 12 ನಿಮಿಷಗಳ ಕಾಲ ಒಳಗಿದ್ದು, ಹೈದರಾಬಾದ್ ಕಡೆ ಮುಖ ಮಾಡಿತು.<br /> <br /> ~ಮನೆಯ ಮಾಲೀಕ ಶ್ರೀನಿವಾಸರೆಡ್ಡಿ ಬಂಧನಕ್ಕೆ ಒಳಗಾದ~ ಎಂಬ ಸುಳಿವೂ ದೊರೆಯದ ಕೆಲಸದ ಹುಡುಗನೊಬ್ಬ ಸೋಮವಾರದ ಪೂಜೆಗೆ ತೆಂಗಿನಕಾಯಿ ಸುಲಿಯುತ್ತಿದ್ದರೆ, ಭದ್ರತಾ ಸಿಬ್ಬಂದಿ ಅದೇ ಪೂಜೆಗೆಂದೇ ಅಂಗಳದಲ್ಲಿದ್ದ ಹೂಗಳನ್ನು ಕಿತ್ತು ಆತನ ಕೈಗಿಡುತ್ತಿದ್ದರು.<br /> <br /> ಈಗಾಗಲೇ ಐದಾರು ಬಾರಿ ಬಳ್ಳಾರಿಗೆ ಭೇಟಿ ನೀಡಿ ತೆರಳಿರುವ ಸಿಬಿಐ ತಂಡ, ಇಲ್ಲಿಗೆ ಬಂದಾಗಲೆಲ್ಲ ಜನಾರ್ದನರೆಡ್ಡಿ ಅವರ ಮನೆಗೆ ಸಮೀಪವೇ ಇರುವ ಪೊಲೀಸ್ ಜಿಮಖಾನದಲ್ಲೇ ವಿರಮಿಸುತ್ತಿತ್ತಾರದರೂ, ಸೋಮವಾರ ಮಾತ್ರ ಸುಳಿವು ದೊರೆತು ಬಿಡಬಹುದು ಎಂಬ ಕಾರಣದಿಂದ ದೂರದಲ್ಲಿದ್ದ ಖಾಸಗಿ ವಸತಿಗೃಹದಲ್ಲಿ ತಂಗಿತ್ತು.<br /> <br /> ಬೆಳಿಗ್ಗೆ 3 ಗಂಟೆ ಸುಮಾರಿಗೆ ಆಂಧ್ರದಿಂದ ಆಗಮಿಸಿ, ಕೊಠಡಿ ಪಡೆದು, ಇನ್ನುಳಿದ ರಾತ್ರಿಯ ಮೂರು ಗಂಟೆಗಳನ್ನು ಕಳೆದ ಸಿಬಿಐ ಅಧಿಕಾರಿಗಳು, ಆರು ಗಂಟೆ 2 ನಿಮಿಷಕ್ಕೆ ಅನಾಮಿಕನಂತೆ ರೆಡ್ಡಿ ಮನೆಯ ಕದವನ್ನು ಬಡಿದರು.<br /> <br /> ಅಲ್ಲಿಂದ 6.58ಕ್ಕೆ ಸರಿಯಾಗಿ ಮನೆಯೊಡೆಯನ ಸಮೇತ ಶ್ರೀನಿವಾಸರೆಡ್ಡಿ ಮನೆಯತ್ತ ಮಿಂಚಿನಂತೆ ತೆರಳಿ, 7 ಗಂಟೆ 20 ನಿಮಿಷಕ್ಕೆ ಅಲ್ಲಿಂದಲೂ ಹೊರನಡೆದು, ಆಂಧ್ರದ ಗಡಿಯತ್ತ ಮುಖಮಾಡಿದರು.<br /> <br /> ರೆಡ್ಡಿ ಬಂಧನದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ನಗರದಾದ್ಯಂತ ಆ ಕುರಿತೇ ಮಾತು. <br /> ಅನೇಕರು ಸಿರುಗುಪ್ಪ ಮುಖ್ಯರಸ್ತೆಯಲ್ಲಿರುವ ಅವರ ಮನೆಯೆದುರು ತಮ್ಮ ವಾಹನ ನಿಲ್ಲಿಸಿ, ಮತ್ತೆ ಮುನ್ನಡೆಯುತ್ತಿದ್ದುದು ಕಂಡುಬಂದರೆ, ಕೆಲವು ಬೆಂಬಲಿಗರು, ಕೆಲಸಗಾರರು, ಬಿಜೆಪಿ ಕಾರ್ಯಕರ್ತರು ಮನೆಯೊಳಗೆ ಹೋಗುವ ಸಾಹಸಕ್ಕೆ ಕೈಹಾಕದೆ ಹೊರಗೇ ನಿಂತು ಚರ್ಚಿಸುತ್ತ ನಿಂತಿದ್ದರು.<br /> <br /> <strong>ವೈದ್ಯರು ಬಂದರು:</strong> ಸಿಬಿಐ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ, ಜನಾರ್ದನರೆಡ್ಡಿ ಅವರನ್ನು ಆರೋಗ್ಯದ ಸಮಸ್ಯೆಯ ಹಿನ್ನೆಲೆಯಲ್ಲಿ ಬಂಧನದಿಂದ ತಪ್ಪಿಸಿದರಾಯಿತು ಎಂಬ ಉದ್ದೇಶದಿಂದ ವಕೀಲರೊಂದಿಗೆ ಧಾವಿಸಿದ ವೈದ್ಯ, ಬಿಜೆಪಿ ಮುಖಂಡ ಡಾ.ಮಹಿಪಾಲ್, ರೆಡ್ಡಿ ಅವರ ನಿವಾಸ ತಲುಪುವಷ್ಟರಲ್ಲಿ ಅವರನ್ನು ಕರೆದೊಯ್ಯಲಾಗಿದೆ ಎಂಬ ವಿಷಯ ತಿಳಿದು ಮನೆಯತ್ತ ಮರಳಿದರು.<br /> <br /> ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಜನಾರ್ದನರೆಡ್ಡಿ ನಿವಾಸ ಸೋಮವಾರ ಸಂಜೆಯವರೆಗೂ ಕುತೂಹಲದ ಕೇಂದ್ರಬಿಂದುವಾಗಿದ್ದುದು ವಿಶೇಷವಾಗಿತ್ತು.<br /> <br /> ಸಂಜೆಯವರೆಗೂ ಅಲ್ಲಿ ಪೊಲೀಸರ ಓಡಾಟ, ಸಿಬಿಐ ಸಿಬ್ಬಂದಿ ನಡೆಸಿದ ವಿಚಾರಣೆ, ಪರಿಶೀಲನೆಯಿಂದಾಗಿ ಯಾರಿಗೂ ಸುಲಭಕ್ಕೆ ಒಳಹೋಗಿ ಬರಲು ಅವಕಾಶ ದೊರೆಯಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಆ ಬೃಹತ್ ಬಂಗಲೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ನೀರವಮೌನ. ಖಾಸಗಿ ಭದ್ರತಾ ಸಿಬ್ಬಂದಿಯಿಂದ ಕಂಗೊಳಿಸುತ್ತಿದ್ದ ಗೇಟ್ಗಳೆದುರು ಬರೀ ಪೊಲೀಸರ ಓಡಾಟ.<br /> ಬಹುತೇಕ ಜನ ಹಾಸಿಗೆಯಿಂದ ಮೇಲೇಳುವ ಮೊದಲೇ ಸಿಬಿಐ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಆ ಮನೆಯ ಯಜಮಾನ, ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ವಶಕ್ಕೆ ತೆಗೆದುಕೊಂಡು ತೆರಳುತ್ತಿದ್ದಾಗ, ಆಗಷ್ಟೇ ಆ ಮನೆ ಎದುರು ದಿನಪತ್ರಿಕೆ ಹಂಚುವ ಹುಡುಗ ತನ್ನ ಸೈಕಲ್ನ ಸ್ಟ್ಯಾಂಡ್ ಹಾಕುತ್ತಿದ್ದ.<br /> <br /> ಸಂಬಂಧಿಗಳು, ಪರಿಚಯಸ್ಥರು, ಕೆಲಸದಾಳುಗಳು ಹೀಗೆ ಯಾರೊಬ್ಬರಿಗೂ ಮನೆಯೊಳಗೆ ಪ್ರವೇಶ ನಿರಾಕರಿಸಿ, ಬಾಗಿಲಲ್ಲೇ ತಡೆಯುತ್ತಿದ್ದ ಪೊಲೀಸರು, ~ಒಳಗೆ ಏನು ನಡೆದಿದೆ~ ಎಂಬ ಕಲ್ಪನೆಯೂ ಇಲ್ಲದೆ ತಮ್ಮ ಕೆಲಸ ತಾವು ಮಾಡುತ್ತಿದ್ದರೆ, ಕೆಲವೇ ನಿಮಿಷಗಳ ಅವಧಿಯಲ್ಲಿ ಔಪಚಾರಿಕತೆ ಪೂರ್ಣಗೊಳಿಸಿದ ಸಿಬಿಐ ತಂಡ, ಜನಾರ್ದನರೆಡ್ಡಿ ಅವರನ್ನು ತಮ್ಮಂದಿಗೆ ಕರೆದುಕೊಂಡು ಹೋಯಿತು.<br /> <br /> ಅತ್ತ ಮುನ್ನೂರು ಗಜಗಳ ಅಂತರದಲ್ಲಿದ್ದ ಇನ್ನೊಂದು ಬೃಹತ್ ಬಂಗಲೆಯಲ್ಲಿ ವಾಸವಿದ್ದ ಸಂಬಂಧಿ ಶ್ರೀನಿವಾಸರೆಡ್ಡಿ ಅವರ ಮನೆಗೆ ಜನಾರ್ದನರೆಡ್ಡಿ ಅವರೊಂದಿಗೆ ತೆರಳಿದ ಸಿಬಿಐ ತಂಡ, 10ರಿಂದ 12 ನಿಮಿಷಗಳ ಕಾಲ ಒಳಗಿದ್ದು, ಹೈದರಾಬಾದ್ ಕಡೆ ಮುಖ ಮಾಡಿತು.<br /> <br /> ~ಮನೆಯ ಮಾಲೀಕ ಶ್ರೀನಿವಾಸರೆಡ್ಡಿ ಬಂಧನಕ್ಕೆ ಒಳಗಾದ~ ಎಂಬ ಸುಳಿವೂ ದೊರೆಯದ ಕೆಲಸದ ಹುಡುಗನೊಬ್ಬ ಸೋಮವಾರದ ಪೂಜೆಗೆ ತೆಂಗಿನಕಾಯಿ ಸುಲಿಯುತ್ತಿದ್ದರೆ, ಭದ್ರತಾ ಸಿಬ್ಬಂದಿ ಅದೇ ಪೂಜೆಗೆಂದೇ ಅಂಗಳದಲ್ಲಿದ್ದ ಹೂಗಳನ್ನು ಕಿತ್ತು ಆತನ ಕೈಗಿಡುತ್ತಿದ್ದರು.<br /> <br /> ಈಗಾಗಲೇ ಐದಾರು ಬಾರಿ ಬಳ್ಳಾರಿಗೆ ಭೇಟಿ ನೀಡಿ ತೆರಳಿರುವ ಸಿಬಿಐ ತಂಡ, ಇಲ್ಲಿಗೆ ಬಂದಾಗಲೆಲ್ಲ ಜನಾರ್ದನರೆಡ್ಡಿ ಅವರ ಮನೆಗೆ ಸಮೀಪವೇ ಇರುವ ಪೊಲೀಸ್ ಜಿಮಖಾನದಲ್ಲೇ ವಿರಮಿಸುತ್ತಿತ್ತಾರದರೂ, ಸೋಮವಾರ ಮಾತ್ರ ಸುಳಿವು ದೊರೆತು ಬಿಡಬಹುದು ಎಂಬ ಕಾರಣದಿಂದ ದೂರದಲ್ಲಿದ್ದ ಖಾಸಗಿ ವಸತಿಗೃಹದಲ್ಲಿ ತಂಗಿತ್ತು.<br /> <br /> ಬೆಳಿಗ್ಗೆ 3 ಗಂಟೆ ಸುಮಾರಿಗೆ ಆಂಧ್ರದಿಂದ ಆಗಮಿಸಿ, ಕೊಠಡಿ ಪಡೆದು, ಇನ್ನುಳಿದ ರಾತ್ರಿಯ ಮೂರು ಗಂಟೆಗಳನ್ನು ಕಳೆದ ಸಿಬಿಐ ಅಧಿಕಾರಿಗಳು, ಆರು ಗಂಟೆ 2 ನಿಮಿಷಕ್ಕೆ ಅನಾಮಿಕನಂತೆ ರೆಡ್ಡಿ ಮನೆಯ ಕದವನ್ನು ಬಡಿದರು.<br /> <br /> ಅಲ್ಲಿಂದ 6.58ಕ್ಕೆ ಸರಿಯಾಗಿ ಮನೆಯೊಡೆಯನ ಸಮೇತ ಶ್ರೀನಿವಾಸರೆಡ್ಡಿ ಮನೆಯತ್ತ ಮಿಂಚಿನಂತೆ ತೆರಳಿ, 7 ಗಂಟೆ 20 ನಿಮಿಷಕ್ಕೆ ಅಲ್ಲಿಂದಲೂ ಹೊರನಡೆದು, ಆಂಧ್ರದ ಗಡಿಯತ್ತ ಮುಖಮಾಡಿದರು.<br /> <br /> ರೆಡ್ಡಿ ಬಂಧನದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ನಗರದಾದ್ಯಂತ ಆ ಕುರಿತೇ ಮಾತು. <br /> ಅನೇಕರು ಸಿರುಗುಪ್ಪ ಮುಖ್ಯರಸ್ತೆಯಲ್ಲಿರುವ ಅವರ ಮನೆಯೆದುರು ತಮ್ಮ ವಾಹನ ನಿಲ್ಲಿಸಿ, ಮತ್ತೆ ಮುನ್ನಡೆಯುತ್ತಿದ್ದುದು ಕಂಡುಬಂದರೆ, ಕೆಲವು ಬೆಂಬಲಿಗರು, ಕೆಲಸಗಾರರು, ಬಿಜೆಪಿ ಕಾರ್ಯಕರ್ತರು ಮನೆಯೊಳಗೆ ಹೋಗುವ ಸಾಹಸಕ್ಕೆ ಕೈಹಾಕದೆ ಹೊರಗೇ ನಿಂತು ಚರ್ಚಿಸುತ್ತ ನಿಂತಿದ್ದರು.<br /> <br /> <strong>ವೈದ್ಯರು ಬಂದರು:</strong> ಸಿಬಿಐ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ, ಜನಾರ್ದನರೆಡ್ಡಿ ಅವರನ್ನು ಆರೋಗ್ಯದ ಸಮಸ್ಯೆಯ ಹಿನ್ನೆಲೆಯಲ್ಲಿ ಬಂಧನದಿಂದ ತಪ್ಪಿಸಿದರಾಯಿತು ಎಂಬ ಉದ್ದೇಶದಿಂದ ವಕೀಲರೊಂದಿಗೆ ಧಾವಿಸಿದ ವೈದ್ಯ, ಬಿಜೆಪಿ ಮುಖಂಡ ಡಾ.ಮಹಿಪಾಲ್, ರೆಡ್ಡಿ ಅವರ ನಿವಾಸ ತಲುಪುವಷ್ಟರಲ್ಲಿ ಅವರನ್ನು ಕರೆದೊಯ್ಯಲಾಗಿದೆ ಎಂಬ ವಿಷಯ ತಿಳಿದು ಮನೆಯತ್ತ ಮರಳಿದರು.<br /> <br /> ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಜನಾರ್ದನರೆಡ್ಡಿ ನಿವಾಸ ಸೋಮವಾರ ಸಂಜೆಯವರೆಗೂ ಕುತೂಹಲದ ಕೇಂದ್ರಬಿಂದುವಾಗಿದ್ದುದು ವಿಶೇಷವಾಗಿತ್ತು.<br /> <br /> ಸಂಜೆಯವರೆಗೂ ಅಲ್ಲಿ ಪೊಲೀಸರ ಓಡಾಟ, ಸಿಬಿಐ ಸಿಬ್ಬಂದಿ ನಡೆಸಿದ ವಿಚಾರಣೆ, ಪರಿಶೀಲನೆಯಿಂದಾಗಿ ಯಾರಿಗೂ ಸುಲಭಕ್ಕೆ ಒಳಹೋಗಿ ಬರಲು ಅವಕಾಶ ದೊರೆಯಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>