ಇಂಗಳಗೊಂದಿ: ₹ 55 ಲಕ್ಷ ಮೌಲ್ಯದ ಮರಳು ವಶ

ಮಲೇಬೆನ್ನೂರು: ಸಮೀಪದ ಇಂಗ ಳಗೊಂದಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 6,103 ಘ ಮೀ ಮರಳನ್ನು ಕಂದಾಯ, ಪೊಲೀಸ್, ಲೋಕೋಪಯೋಗಿ ಬಂದರು ಹಾಗೂ ಜಲಸಾರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳ ಕಣ್ತಪ್ಪಿಸಿ ತುಂಗಭದ್ರಾ ನದಿ ದಂಡೆಯ ಸರ್ಕಾರಿ ಜಾಗದಲ್ಲಿ ಮರಳುಗಳ್ಳರು ಹೊರಗೆ ಕಳ್ಳಸಾಗಣೆ ಮಾಡಲು ದಾಸ್ತಾನು ಮಾಡಿದ್ದರು ಎನ್ನಲಾಗಿದೆ. ಅಧಿಕಾರಿಗಳ ತಂಡ ಖಚಿತ ಮಾಹಿತಿಯೊಡನೆ ದಾಳಿ ನಡೆಸಿದಾಗ ಈ ಅಕ್ರಮ ಮರಳು ದಾಸ್ತಾನು ಕುರಿತು ತಿಳಿದು ಬಂದಿದೆ.
ವಶಪಡಿಸಿಕೊಂಡ ಮರಳಿನ ಮಾರುಕಟ್ಟೆ ಮೌಲ್ಯ ಸುಮಾರು ₹ 55ಲಕ್ಷ ಎಂದು ಲೋಕೋಪಯೋಗಿ ಬಂದರು ಹಾಗೂ ಜಲಸಾರಿಗೆ ಇಲಾಖೆ ಎಇಇ ಕೆ. ನೀಲಗಿರಿಯಪ್ಪ ತಿಳಿಸಿದರು. ದಾಳಿಯಲ್ಲಿ ತಹಶೀಲ್ದಾರ್ ನಜ್ಮಾ, ಡಿವೈಎಸ್ಪಿ ನೇಮಗೌಡ, ಸಿಪಿಐ ಜಯಣ್ಣ ನ್ಯಾಮಗೌಡ, ಪಿಎಸ್ಐ ದೇವರಾಜ್, ಕಂದಾಯ, ಪೊಲೀಸ್ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಇಲ್ಲಿನ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.