<p>ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮದಲ್ಲಿ ಮೊದಲ ಬಾರಿಗೆ ‘ಗ್ರಾಮ ಸ್ಪಂದನ’ ಸರ್ಕಾರಿ ಕಾರ್ಯಕ್ರಮವನ್ನು ಡಿ.೯ ರಂದು ಆಯೋಜಿಸಲಾಗಿತ್ತು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರುವ ಕಾತರದಿಂದ ಇದ್ದರು.<br /> <br /> ವಿಶೇಷವಾಗಿ ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ, ವಿಕಲಾಂಗ ಪಿಂಚಣಿ ದೊರೆಯದ ಬಗ್ಗೆ ಹಲವು ಅಸಹಾಯಕರು ಹಾಗೂ ಹಾಸನ-ಬಿ.ಸಿ. ರಸ್ತೆ ಚತುಷ್ಪಥದಿಂದ ಮನೆ ಹಾಗೂ ಜೀವನಕ್ಕೆ ಆಧಾರವಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಕಳೆದುಕೊಂಡು ಸಂತ್ರಸ್ತರಾಗುವವರು ಸಚಿವರಿಗೆ ಮನವಿ ಸಲ್ಲಿಸಲು ಕಾಯುತ್ತಿದ್ದರು.<br /> <br /> ಮೊದಲೇ ಸಮಯ ಮೀರಿ ಬಂದ ಸಚಿವರು ತಮ್ಮ ಹಿಂಬಾಲಕರೊಂದಿಗೆ ಒಂದಿಷ್ಟು ಹೊತ್ತು ಕುಶಲೋಪರಿ ನಡೆಸಿ ೧೫ ನಿಮಿಷದಷ್ಟು ಕಾಲ ತಮ್ಮ ಸಾಧನೆಯ ಬಗ್ಗೆ ಪುಂಖಾನು-ಪುಂಖವಾಗಿ ಭಾಷಣ ಬಿತ್ತರಿಸಿದರು. ಅನಂತರ ‘ನನಗೆ ಮಡಿಕೇರಿಗೆ ಹೋಗಲು ಇರುವುದರಿಂದ ಬೇಗನೇ ಮನವಿ ಸಲ್ಲಿಸಿ’ ಎಂದರು.<br /> <br /> ಇದರಿಂದ ಒಮ್ಮೆಲೇ ಇದ್ದ ಬಿದ್ದವರೆಲ್ಲಾ ಸಚಿವರಿಗೆ ಮನವಿ ಸಲ್ಲಿಸಲು ಪ್ರಯತ್ನಿಸಿದ್ದರಿಂದ ನೂಕುನುಗ್ಗಲು ಸಂಭವಿಸಿತು. ಆಗ ವೃದ್ಧರು ಹಾಗೂ ವಿಕಲಾಂಗರ ಸ್ಥಿತಿ ಶೋಚನೀಯವಾಗಿತ್ತು. ಕೇವಲ ಅರ್ಧ ಗಂಟೆಯೊಳಗೆ ‘ಗ್ರಾಮಸ್ಪಂದನ’ ಎಂಬ ಹರಕೆ ತೀರಿಸಿ ಸಚಿವರು ಅಲ್ಲಿಂದ ಕಾಲ್ಕಿತ್ತರು. <br /> <br /> ರಾಜ್ಯದ ಮುಖ್ಯಮಂತ್ರಿ ರಾಜಧಾನಿಯಲ್ಲಿ ಜನಸಂಪರ್ಕ ಸಭೆ ನಡೆಸಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದರೆ, ನೆರೆಯ ರಾಜ್ಯದ ಮುಖ್ಯಮಂತ್ರಿ ಕಾಸರಗೋಡಿನಲ್ಲಿ ಎರಡು ವಾರಗಳ ಹಿಂದೆ ಒಂದು ದಿನ ಪೂರ್ತಿ ಜನರೊಂದಿಗೆ ಬೆರೆತು ಸಮಸ್ಯೆ ಆಲಿಸಿ ಪರಿಹಾರಕ್ಕೆ ಪ್ರಯತ್ನಿಸಿದರು.<br /> <br /> ಆದರೆ ಇಲ್ಲಿ ತಮಗೆ ನೇರ ಮತ ನೀಡಿದ ಕ್ಷೇತ್ರದ ಮತದಾರರೊಂದಿಗೆ ಒಂದೆರಡು ಗಂಟೆ ಕಾಲ ಬೆರೆತು ಸಮಸ್ಯೆ ಆಲಿಸಲು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಧ್ಯವಾಗದೇ ಇರುವುದು ದುರದೃಷ್ಟಕರ. ಅವರ ಈ ರೀತಿಯ ಕಾರ್ಯವೈಖರಿಯನ್ನು ನೋಡಿದ ಯುವ ಜನತೆ ಖಂಡಿತ ಆಮ್ ಆದ್ಮಿಯಂತಹ ಪಕ್ಷಕ್ಕೆ ಹರಸುತ್ತಾರೆ. ಇಂತಹ ವ್ಯಕ್ತಿಗಳನ್ನು ಮತ್ತೊಮ್ಮೆ ಚುನಾಯಿಸುವ ದುಸ್ಸಾಹಸಕ್ಕೆ ಹೋಗುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮದಲ್ಲಿ ಮೊದಲ ಬಾರಿಗೆ ‘ಗ್ರಾಮ ಸ್ಪಂದನ’ ಸರ್ಕಾರಿ ಕಾರ್ಯಕ್ರಮವನ್ನು ಡಿ.೯ ರಂದು ಆಯೋಜಿಸಲಾಗಿತ್ತು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರುವ ಕಾತರದಿಂದ ಇದ್ದರು.<br /> <br /> ವಿಶೇಷವಾಗಿ ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ, ವಿಕಲಾಂಗ ಪಿಂಚಣಿ ದೊರೆಯದ ಬಗ್ಗೆ ಹಲವು ಅಸಹಾಯಕರು ಹಾಗೂ ಹಾಸನ-ಬಿ.ಸಿ. ರಸ್ತೆ ಚತುಷ್ಪಥದಿಂದ ಮನೆ ಹಾಗೂ ಜೀವನಕ್ಕೆ ಆಧಾರವಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಕಳೆದುಕೊಂಡು ಸಂತ್ರಸ್ತರಾಗುವವರು ಸಚಿವರಿಗೆ ಮನವಿ ಸಲ್ಲಿಸಲು ಕಾಯುತ್ತಿದ್ದರು.<br /> <br /> ಮೊದಲೇ ಸಮಯ ಮೀರಿ ಬಂದ ಸಚಿವರು ತಮ್ಮ ಹಿಂಬಾಲಕರೊಂದಿಗೆ ಒಂದಿಷ್ಟು ಹೊತ್ತು ಕುಶಲೋಪರಿ ನಡೆಸಿ ೧೫ ನಿಮಿಷದಷ್ಟು ಕಾಲ ತಮ್ಮ ಸಾಧನೆಯ ಬಗ್ಗೆ ಪುಂಖಾನು-ಪುಂಖವಾಗಿ ಭಾಷಣ ಬಿತ್ತರಿಸಿದರು. ಅನಂತರ ‘ನನಗೆ ಮಡಿಕೇರಿಗೆ ಹೋಗಲು ಇರುವುದರಿಂದ ಬೇಗನೇ ಮನವಿ ಸಲ್ಲಿಸಿ’ ಎಂದರು.<br /> <br /> ಇದರಿಂದ ಒಮ್ಮೆಲೇ ಇದ್ದ ಬಿದ್ದವರೆಲ್ಲಾ ಸಚಿವರಿಗೆ ಮನವಿ ಸಲ್ಲಿಸಲು ಪ್ರಯತ್ನಿಸಿದ್ದರಿಂದ ನೂಕುನುಗ್ಗಲು ಸಂಭವಿಸಿತು. ಆಗ ವೃದ್ಧರು ಹಾಗೂ ವಿಕಲಾಂಗರ ಸ್ಥಿತಿ ಶೋಚನೀಯವಾಗಿತ್ತು. ಕೇವಲ ಅರ್ಧ ಗಂಟೆಯೊಳಗೆ ‘ಗ್ರಾಮಸ್ಪಂದನ’ ಎಂಬ ಹರಕೆ ತೀರಿಸಿ ಸಚಿವರು ಅಲ್ಲಿಂದ ಕಾಲ್ಕಿತ್ತರು. <br /> <br /> ರಾಜ್ಯದ ಮುಖ್ಯಮಂತ್ರಿ ರಾಜಧಾನಿಯಲ್ಲಿ ಜನಸಂಪರ್ಕ ಸಭೆ ನಡೆಸಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದರೆ, ನೆರೆಯ ರಾಜ್ಯದ ಮುಖ್ಯಮಂತ್ರಿ ಕಾಸರಗೋಡಿನಲ್ಲಿ ಎರಡು ವಾರಗಳ ಹಿಂದೆ ಒಂದು ದಿನ ಪೂರ್ತಿ ಜನರೊಂದಿಗೆ ಬೆರೆತು ಸಮಸ್ಯೆ ಆಲಿಸಿ ಪರಿಹಾರಕ್ಕೆ ಪ್ರಯತ್ನಿಸಿದರು.<br /> <br /> ಆದರೆ ಇಲ್ಲಿ ತಮಗೆ ನೇರ ಮತ ನೀಡಿದ ಕ್ಷೇತ್ರದ ಮತದಾರರೊಂದಿಗೆ ಒಂದೆರಡು ಗಂಟೆ ಕಾಲ ಬೆರೆತು ಸಮಸ್ಯೆ ಆಲಿಸಲು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಧ್ಯವಾಗದೇ ಇರುವುದು ದುರದೃಷ್ಟಕರ. ಅವರ ಈ ರೀತಿಯ ಕಾರ್ಯವೈಖರಿಯನ್ನು ನೋಡಿದ ಯುವ ಜನತೆ ಖಂಡಿತ ಆಮ್ ಆದ್ಮಿಯಂತಹ ಪಕ್ಷಕ್ಕೆ ಹರಸುತ್ತಾರೆ. ಇಂತಹ ವ್ಯಕ್ತಿಗಳನ್ನು ಮತ್ತೊಮ್ಮೆ ಚುನಾಯಿಸುವ ದುಸ್ಸಾಹಸಕ್ಕೆ ಹೋಗುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>