<p>ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ಸಾಮಾಜಿಕ ಸಮಸ್ಯೆಗಳ ವಸ್ತುವಿಷಯವನ್ನು ಕೇಂದ್ರವಾಗಿಟ್ಟುಕೊಂಡು, ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ನಾಟಕೋತ್ಸವ ಆಯೋಜಿಸುತ್ತಿದೆ. ಈ ವರ್ಷ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಜೊತೆಯಲ್ಲಿ ಶುಕ್ರವಾರ (ಜ.20- 22) ದಿಂದ ಭಾನುವಾರದವರೆಗೆ ಬೀದಿ ನಾಟಕೋತ್ಸವ ಹಮ್ಮಿಕೊಂಡಿದೆ.</p>.<p>ಈ ವರ್ಷ ಕನ್ನಡ ನವೋದಯ ಕಾಲಘಟ್ಟಕ್ಕೆ ಈಗ ಶತಮಾನ ಸಂಭ್ರಮ. ಈ ಸಂದರ್ಭದಲ್ಲಿ ಆವಿಷ್ಕಾರ 16ನೇ ಬೀದಿನಾಟಕೋತ್ಸವ ಏರ್ಪಡಿಸಿದೆ. ಬೀದಿ ನಾಟಕಗಳು, ರಂಗನಾಟಕಗಳು, ಕಲಾಶಿಬಿರಗಳು ಹಾಗೂ ಕವಿಗೋಷ್ಠಿ, ಸಂಗೀತ ಶಿಬಿರ, ಜಾಥಾ, ಸಿನಿಮಾ ಪ್ರದರ್ಶನ ಸೇರಿದಂತೆ ಅನೇಕ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.</p>.<p>ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ನಾನಾ ಜಿಲ್ಲೆಗಳ ತಂಡಗಳು ನಾಟಕಗಳನ್ನು ಪ್ರದರ್ಶಿಸಲಿವೆ. ಜೊತೆಗೆ ಜಾನಪದ ನೃತ್ಯ, ರಂಗಗೀತೆಗಳ ಗಾಯನ ಕಾರ್ಯಕ್ರಮ ಉದ್ಯಾನ ನಗರಿ ಮಂದಿಗೆ ಮುದ ನೀಡಲಿವೆ.</p>.<p>ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆ, ಕೋಮುವಾದ, ಸಾಮ್ರಾಜ್ಯವಾದ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣದ ವ್ಯಾಪಾರೀಕರಣ ಹೀಗೆ ಹಲವಾರು ವಿಷಯಗಳನ್ನು ಆಧರಿಸಿದ ನಾಟಕಗಳಿಗೆ ಪ್ರಧಾನ್ಯತೆ ನೀಡಲಾಗುತ್ತದೆ.<br /> ಈ ನಾಟಕೋತ್ಸವದಲ್ಲಿ ಎಂಟು ನಾಟಕಗಳು ಪ್ರದರ್ಶನಗೊಳ್ಳಲಿವೆ.</p>.<p>ಶುಕ್ರವಾರ ಸಂಜೆ 6ಕ್ಕೆ ಸ್ವಾಮಿ ಗಾಮನಹಳ್ಳಿ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ಚಿತ್ರ ತಂಡದಿಂದ ನಾಟಕ. ನಂತರ ಅಂಕುರ ತಂಡದಿಂದ `ವಿಮುಕ್ತಿ ಪಯಣ~ (ನಿರ್ದೇಶನ: ಲಕ್ಷ್ಮೀ ನಾಡಗೌಡ) ನಾಟಕ ಪ್ರದರ್ಶನ.</p>.<p>ಶನಿವಾರ ಸಂಜೆ 6ಕ್ಕೆ ನಾರಾಯಣರಾವ್ ಮಾನೆ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ನಂತರ ಯುವಜನ ಸಾಂಸ್ಕೃತಿಕ ವೇದಿಕೆಯಿಂದ `ಭರತ ಖಂಡ ದರ್ಶನ~ (ರಚನೆ: ವಿಜಯ ಕುಮಾರ್, ನಿರ್ದೇಶನ: ನಾಗರಜ್) ನಾಟಕ ಪ್ರದರ್ಶನ. ಮಕ್ಕಳ ಮಂಟಪ ತಂಡದಿಂದ `ಕೈಲಾಸಮ್ಮೂ ಪೋಲಿಕಿಟ್ಟಿನೂ~ (ನಿರ್ದೇಶನ: ಭಾನುಪ್ರಕಾಶ್ ಕಡಗತ್ತೂರ್), ಚಿತ್ರದುರ್ಗದ ಯುವಜನ ಸಾಂಸ್ಕೃತಿಕ ವೇದಿಕೆ ತಂಡದಿಂದ `ಮಣ್ಣಾದ ಮಣ್ಣಿನ ಮಕ್ಕಳು~ (ನಿರ್ದೇಶನ: ನಾಗರಾಜ) ನಾಟಕಗಳ ಪ್ರದರ್ಶನ.</p>.<p>ಭಾನುವಾರ ಡಾ.ಮುದ್ದು ಮೋಹನ್ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ಆವಿಷ್ಕಾರ ತಂಡದಿಂದ `ಕೋರ್ಟಿನಲ್ಲಿ ಗೆದ್ದ ಕುದುರೆ~ (ನಿರ್ದೇಶನ: ಡಾ.ಸುನೀತ್ ಕುಮಾರ್ ಶೆಟ್ಟಿ) ನಾಟಕ ಪ್ರದರ್ಶನ.</p>.<p>ಕರ್ನಾಟಕ ಕಲಾದರ್ಶಿನಿ ತಂಡದಿಂದ `ಮತ್ತೆ ಮತ್ತೆ ಶಾಕುಂತಲಾ~ ಯಕ್ಷಗಾನ ಪ್ರದರ್ಶನ. (ರಚನೆ:ಡಾ.ಬಿ.ಆರ್. ಮಂಜುನಾಥ, ನಿರ್ದೇಶನ: ಶ್ರೀನಿವಾಸ ಸಾಸ್ತಾನ).<br /> ಉದ್ಘಾಟನೆ: ಜಿ.ವೆಂಕಟಸುಬ್ಬಯ್ಯ. ಆಶಯ ಭಾಷಣ: ಡಾ.ಸುನೀತ್ ಕುಮಾರ್ ಶೆಟ್ಟಿ.</p>.<p>ಅಧ್ಯಕ್ಷತೆ: ಡಾ.ಜಿ.ಎಸ್.ಕುಮಾರ್.</p>.<p>ಸ್ಥಳ: ಮಲ್ಲೇಶ್ವರಂ ಆಟದ ಮೈದಾನ. ಸಂಜೆ 5.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ಸಾಮಾಜಿಕ ಸಮಸ್ಯೆಗಳ ವಸ್ತುವಿಷಯವನ್ನು ಕೇಂದ್ರವಾಗಿಟ್ಟುಕೊಂಡು, ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ನಾಟಕೋತ್ಸವ ಆಯೋಜಿಸುತ್ತಿದೆ. ಈ ವರ್ಷ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಜೊತೆಯಲ್ಲಿ ಶುಕ್ರವಾರ (ಜ.20- 22) ದಿಂದ ಭಾನುವಾರದವರೆಗೆ ಬೀದಿ ನಾಟಕೋತ್ಸವ ಹಮ್ಮಿಕೊಂಡಿದೆ.</p>.<p>ಈ ವರ್ಷ ಕನ್ನಡ ನವೋದಯ ಕಾಲಘಟ್ಟಕ್ಕೆ ಈಗ ಶತಮಾನ ಸಂಭ್ರಮ. ಈ ಸಂದರ್ಭದಲ್ಲಿ ಆವಿಷ್ಕಾರ 16ನೇ ಬೀದಿನಾಟಕೋತ್ಸವ ಏರ್ಪಡಿಸಿದೆ. ಬೀದಿ ನಾಟಕಗಳು, ರಂಗನಾಟಕಗಳು, ಕಲಾಶಿಬಿರಗಳು ಹಾಗೂ ಕವಿಗೋಷ್ಠಿ, ಸಂಗೀತ ಶಿಬಿರ, ಜಾಥಾ, ಸಿನಿಮಾ ಪ್ರದರ್ಶನ ಸೇರಿದಂತೆ ಅನೇಕ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.</p>.<p>ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ನಾನಾ ಜಿಲ್ಲೆಗಳ ತಂಡಗಳು ನಾಟಕಗಳನ್ನು ಪ್ರದರ್ಶಿಸಲಿವೆ. ಜೊತೆಗೆ ಜಾನಪದ ನೃತ್ಯ, ರಂಗಗೀತೆಗಳ ಗಾಯನ ಕಾರ್ಯಕ್ರಮ ಉದ್ಯಾನ ನಗರಿ ಮಂದಿಗೆ ಮುದ ನೀಡಲಿವೆ.</p>.<p>ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆ, ಕೋಮುವಾದ, ಸಾಮ್ರಾಜ್ಯವಾದ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣದ ವ್ಯಾಪಾರೀಕರಣ ಹೀಗೆ ಹಲವಾರು ವಿಷಯಗಳನ್ನು ಆಧರಿಸಿದ ನಾಟಕಗಳಿಗೆ ಪ್ರಧಾನ್ಯತೆ ನೀಡಲಾಗುತ್ತದೆ.<br /> ಈ ನಾಟಕೋತ್ಸವದಲ್ಲಿ ಎಂಟು ನಾಟಕಗಳು ಪ್ರದರ್ಶನಗೊಳ್ಳಲಿವೆ.</p>.<p>ಶುಕ್ರವಾರ ಸಂಜೆ 6ಕ್ಕೆ ಸ್ವಾಮಿ ಗಾಮನಹಳ್ಳಿ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ಚಿತ್ರ ತಂಡದಿಂದ ನಾಟಕ. ನಂತರ ಅಂಕುರ ತಂಡದಿಂದ `ವಿಮುಕ್ತಿ ಪಯಣ~ (ನಿರ್ದೇಶನ: ಲಕ್ಷ್ಮೀ ನಾಡಗೌಡ) ನಾಟಕ ಪ್ರದರ್ಶನ.</p>.<p>ಶನಿವಾರ ಸಂಜೆ 6ಕ್ಕೆ ನಾರಾಯಣರಾವ್ ಮಾನೆ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ನಂತರ ಯುವಜನ ಸಾಂಸ್ಕೃತಿಕ ವೇದಿಕೆಯಿಂದ `ಭರತ ಖಂಡ ದರ್ಶನ~ (ರಚನೆ: ವಿಜಯ ಕುಮಾರ್, ನಿರ್ದೇಶನ: ನಾಗರಜ್) ನಾಟಕ ಪ್ರದರ್ಶನ. ಮಕ್ಕಳ ಮಂಟಪ ತಂಡದಿಂದ `ಕೈಲಾಸಮ್ಮೂ ಪೋಲಿಕಿಟ್ಟಿನೂ~ (ನಿರ್ದೇಶನ: ಭಾನುಪ್ರಕಾಶ್ ಕಡಗತ್ತೂರ್), ಚಿತ್ರದುರ್ಗದ ಯುವಜನ ಸಾಂಸ್ಕೃತಿಕ ವೇದಿಕೆ ತಂಡದಿಂದ `ಮಣ್ಣಾದ ಮಣ್ಣಿನ ಮಕ್ಕಳು~ (ನಿರ್ದೇಶನ: ನಾಗರಾಜ) ನಾಟಕಗಳ ಪ್ರದರ್ಶನ.</p>.<p>ಭಾನುವಾರ ಡಾ.ಮುದ್ದು ಮೋಹನ್ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ಆವಿಷ್ಕಾರ ತಂಡದಿಂದ `ಕೋರ್ಟಿನಲ್ಲಿ ಗೆದ್ದ ಕುದುರೆ~ (ನಿರ್ದೇಶನ: ಡಾ.ಸುನೀತ್ ಕುಮಾರ್ ಶೆಟ್ಟಿ) ನಾಟಕ ಪ್ರದರ್ಶನ.</p>.<p>ಕರ್ನಾಟಕ ಕಲಾದರ್ಶಿನಿ ತಂಡದಿಂದ `ಮತ್ತೆ ಮತ್ತೆ ಶಾಕುಂತಲಾ~ ಯಕ್ಷಗಾನ ಪ್ರದರ್ಶನ. (ರಚನೆ:ಡಾ.ಬಿ.ಆರ್. ಮಂಜುನಾಥ, ನಿರ್ದೇಶನ: ಶ್ರೀನಿವಾಸ ಸಾಸ್ತಾನ).<br /> ಉದ್ಘಾಟನೆ: ಜಿ.ವೆಂಕಟಸುಬ್ಬಯ್ಯ. ಆಶಯ ಭಾಷಣ: ಡಾ.ಸುನೀತ್ ಕುಮಾರ್ ಶೆಟ್ಟಿ.</p>.<p>ಅಧ್ಯಕ್ಷತೆ: ಡಾ.ಜಿ.ಎಸ್.ಕುಮಾರ್.</p>.<p>ಸ್ಥಳ: ಮಲ್ಲೇಶ್ವರಂ ಆಟದ ಮೈದಾನ. ಸಂಜೆ 5.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>