<p><strong>ಬೆಂಗಳೂರು: </strong>ನಗರದ ಯುವಿಸಿಇ ಕಾಲೇಜಿನ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗ, ದಿ ಸೊಸೈಟಿ ಫಾರ್ ಇನ್ಫಾರ್ಮೆಶನ್ ಪ್ರೊಸೆಸಿಂಗ್ ಆಶ್ರಯದಲ್ಲಿ 6ನೇ ಮಾಹಿತಿ ಸಂಸ್ಕರಣಾ (ಇನ್ಫಾರ್ಮೆಶನ್ ಪ್ರೊಸೆಸಿಂಗ್) ಅಂತರರಾಷ್ಟ್ರೀಯ ಸಮ್ಮೇಳನ (ಐಸಿಐಪಿ-2012) ನಗರದ ಹೋಟೆಲ್ ಕ್ಯಾಪಿಟಲ್ನಲ್ಲಿ ಶುಕ್ರವಾರ ಪ್ರಾರಂಭವಾಗಲಿದೆ. ಭಾನುವಾರದವರೆಗೆ (ಆ. 12) ನಡೆಯಲಿದೆ.<br /> <br /> ಇದೇ 11ರಂದು ಬೆಳಿಗ್ಗೆ 9 ಗಂಟೆಗೆ ಸಮ್ಮೇಳನವನ್ನು ಚೆನ್ನೈಯ ಇಂಡಿಯನ್ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿಯ ಮಾಜಿ ಅಧ್ಯಕ್ಷ ಪ್ರೊ.ಆರ್. ನಟರಾಜನ್ ಔಪಚಾರಿಕವಾಗಿ ಉದ್ಘಾಟಿಸುವರು. <br /> ಬೆಂಗಳೂರು ವಿವಿ ಕುಲಪತಿ ಡಾ.ಎನ್. ಪ್ರಭುದೇವ್ ಅಧ್ಯಕ್ಷತೆ ವಹಿಸುವರು ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎನ್. ಆರ್. ಶೆಟ್ಟಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. <br /> <br /> `ಮಾಹಿತಿ ಸಂಸ್ಕರಣ ಹಾಗೂ ನೆಟ್ವರ್ಕಿಂಗ್ ಭದ್ರತೆಯ ಉದಯೋನ್ಮುಖ ಹಾಗೂ ಪ್ರಮುಖ ವಿಭಾಗಗಳ ತಾಂತ್ರಿಕ ವಿನಿಮಯವನ್ನು ಹೆಚ್ಚಿಸುವುದು. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು, ಶಿಕ್ಷಕರು ಹಾಗೂ ಎಂಜಿಯರ್ಗಳನ್ನು ಒಂದುಗೂಡಿಸುವುದು. <br /> <br /> ಪದವಿಪೂರ್ವ ಹಾಗೂ ಸ್ನಾತಕೋತ್ತರ ಪದವೀಧರರನ್ನು ಅಧ್ಯಯನದ ಕಡೆಗೆ ಮುಖ ಮಾಡಲು ಉತ್ತೇಜಿಸುವುದು ಸಮ್ಮೇಳನದ ಉದ್ದೇಶ~ ಎಂದು ಅವರು ವಿವರಿಸಿದರು.ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ. ಎನ್. ರುದ್ರಯ್ಯ, ಪುಣೆ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಲ್. ಎಂ. ಪಟ್ನಾಯಕ್, ಯುವಿಸಿಇ ಪ್ರಾಂಶುಪಾಲ ಡಾ. ವೇಣುಗೋಪಾಲ್ ಕೆ. ಆರ್. ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದ ಯುವಿಸಿಇ ಕಾಲೇಜಿನ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗ, ದಿ ಸೊಸೈಟಿ ಫಾರ್ ಇನ್ಫಾರ್ಮೆಶನ್ ಪ್ರೊಸೆಸಿಂಗ್ ಆಶ್ರಯದಲ್ಲಿ 6ನೇ ಮಾಹಿತಿ ಸಂಸ್ಕರಣಾ (ಇನ್ಫಾರ್ಮೆಶನ್ ಪ್ರೊಸೆಸಿಂಗ್) ಅಂತರರಾಷ್ಟ್ರೀಯ ಸಮ್ಮೇಳನ (ಐಸಿಐಪಿ-2012) ನಗರದ ಹೋಟೆಲ್ ಕ್ಯಾಪಿಟಲ್ನಲ್ಲಿ ಶುಕ್ರವಾರ ಪ್ರಾರಂಭವಾಗಲಿದೆ. ಭಾನುವಾರದವರೆಗೆ (ಆ. 12) ನಡೆಯಲಿದೆ.<br /> <br /> ಇದೇ 11ರಂದು ಬೆಳಿಗ್ಗೆ 9 ಗಂಟೆಗೆ ಸಮ್ಮೇಳನವನ್ನು ಚೆನ್ನೈಯ ಇಂಡಿಯನ್ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿಯ ಮಾಜಿ ಅಧ್ಯಕ್ಷ ಪ್ರೊ.ಆರ್. ನಟರಾಜನ್ ಔಪಚಾರಿಕವಾಗಿ ಉದ್ಘಾಟಿಸುವರು. <br /> ಬೆಂಗಳೂರು ವಿವಿ ಕುಲಪತಿ ಡಾ.ಎನ್. ಪ್ರಭುದೇವ್ ಅಧ್ಯಕ್ಷತೆ ವಹಿಸುವರು ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎನ್. ಆರ್. ಶೆಟ್ಟಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. <br /> <br /> `ಮಾಹಿತಿ ಸಂಸ್ಕರಣ ಹಾಗೂ ನೆಟ್ವರ್ಕಿಂಗ್ ಭದ್ರತೆಯ ಉದಯೋನ್ಮುಖ ಹಾಗೂ ಪ್ರಮುಖ ವಿಭಾಗಗಳ ತಾಂತ್ರಿಕ ವಿನಿಮಯವನ್ನು ಹೆಚ್ಚಿಸುವುದು. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು, ಶಿಕ್ಷಕರು ಹಾಗೂ ಎಂಜಿಯರ್ಗಳನ್ನು ಒಂದುಗೂಡಿಸುವುದು. <br /> <br /> ಪದವಿಪೂರ್ವ ಹಾಗೂ ಸ್ನಾತಕೋತ್ತರ ಪದವೀಧರರನ್ನು ಅಧ್ಯಯನದ ಕಡೆಗೆ ಮುಖ ಮಾಡಲು ಉತ್ತೇಜಿಸುವುದು ಸಮ್ಮೇಳನದ ಉದ್ದೇಶ~ ಎಂದು ಅವರು ವಿವರಿಸಿದರು.ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ. ಎನ್. ರುದ್ರಯ್ಯ, ಪುಣೆ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಲ್. ಎಂ. ಪಟ್ನಾಯಕ್, ಯುವಿಸಿಇ ಪ್ರಾಂಶುಪಾಲ ಡಾ. ವೇಣುಗೋಪಾಲ್ ಕೆ. ಆರ್. ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>