<p><strong>ನವದೆಹಲಿ (ಪಿಟಿಐ):</strong> ಲೋಕಸಭೆಯಲ್ಲಿ ಶುಕ್ರವಾರ ಮಂಡನೆಯಾಗಲಿರುವ ಸಾಮಾನ್ಯ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕನಿಷ್ಠ ಎರಡು ಲಕ್ಷ ರೂಪಾಯಿಗೆ ಹೆಚ್ಚಿಸುವ ನಿರೀಕ್ಷೆ ಇದೆ.</p>.<p>ಹೀಗಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಂಡಿಸಲಿರುವ ಈ ಬಜೆಟ್ನಿಂದ ಸ್ವಲ್ಪ ಮಟ್ಟಿಗೆ ತಮ್ಮ ಹೊರೆ ಕಡಿಮೆಯಾಗಬಹುದೆಂಬುದು ತೆರಿಗೆದಾರರ ನಿರೀಕ್ಷೆಯಾಗಿದೆ.</p>.<p>ಸಂಸತ್ತಿನ ಸ್ಥಾಯಿ ಸಮಿತಿಯು ಆದಾಯ ತೆರಿಗೆ ವಿನಾಯಿತಿಯನ್ನು ಮೂರು ಲಕ್ಷ ರೂಪಾಯಿಗೆ ಹೆಚ್ಚಿಸುವಂತೆ ಸಲಹೆ ಮಾಡಿದ್ದರೂ, ಹಣ ಸಂಪನ್ಮೂಲದ ಕೊರತೆ ನಿಯಂತ್ರಿಸುವ ಉದ್ದೇಶ ಹೊಂದಿರುವ ಪ್ರಣವ್ ಮುಖರ್ಜಿ ಅದಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಅಂತಿಮವಾಗಿ ಅವರು ಈ ಮಿತಿಯನ್ನು 2 ಲಕ್ಷ ರೂಪಾಯಿಗೆ ಸೀಮಿತಗೊಳಿಸಬಹುದು ಎನ್ನಲಾಗಿದೆ.</p>.<p>ಶೇ 10ರಷ್ಟು ತೆರಿಗೆ, ಶೇ 20ರಷ್ಟು ತೆರಿಗೆ ಹಾಗೂ ಶೇ 30ರಷ್ಟು ತೆರಿಗೆ ಪಾವತಿಗೆ ನಿಗದಿ ಮಾಡಿರುವ ಮಿತಿಯಲ್ಲೂ ಸಚಿವರು ಅಲ್ಪಮಟ್ಟಿನ ಸಡಿಲಿಕೆ ತೋರುವ ಸಾಧ್ಯತೆ ಇದೆ. ನೇರ ತೆರಿಗೆ ಸಂಹಿತೆ ಮಸೂದೆಯಲ್ಲೂ ಈ ಕುರಿತು ಪ್ರಸ್ತಾಪಿಸಲಾಗಿತ್ತು.</p>.<p>ಒಂದೆಡೆ ಹಣದುಬ್ಬರದ ಒತ್ತಡ, ಮತ್ತೊಂದೆಡೆ ಹೆಚ್ಚುತ್ತಿರುವ ಆರ್ಥಿಕ ಕೊರತೆ, ಇವುಗಳ ಜತೆಗೆ ತೈಲ ಬೆಲೆ ಏರಿಕೆ ಹೊಡೆತ ನೀಡುತ್ತಿರುವ ಸಂದರ್ಭದಲ್ಲೇ ಈ ಬಜೆಟ್ನೊಂದಿಗೆ 12ನೇ ಪಂಚವಾರ್ಷಿಕ ಯೋಜನೆಗೆ (2012-17) ಕೂಡ ಚಾಲನೆ ದೊರೆಯಲಿದೆ.</p>.<p>ಆದಾಯ ತೆರಿಗೆ ಮಸೂದೆ-1961ಕ್ಕೆ ಬದಲಾಗಿ ನೇರ ತೆರಿಗೆ ಸಂಹಿತೆ ಮಸೂದೆಯು 2013-14ರಿಂದ ಜಾರಿಯಾಗಲಿದ್ದು, ಈ ಕುರಿತು ಬಜೆಟ್ ಭಾಷಣದಲ್ಲಿ ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ ಎಂದೂ ಮೂಲಗಳು ತಿಳಿಸಿವೆ.</p>.<p>ಈ ಬಜೆಟ್ ಕೂಡ ಜನಪ್ರಿಯತೆಯ ಜಾಡಿನಲ್ಲೇ ಸಾಗುವ ಲಕ್ಷಣಗಳಿದ್ದರೂ ತೆರಿಗೆ ವಂಚನೆ ತಡೆಯಲು ಹಾಗೂ ಕಪ್ಪುಹಣ ಸೃಷ್ಟಿಗೆ ಕಡಿವಾಣ ಹಾಕಲು ಕಠಿಣ ಕ್ರಮಗಳು ಪ್ರಕಟವಾಗುವ ಮಾತುಗಳು ಕೇಳಿಬಂದಿವೆ.</p>.<p>ಬಹು ಬ್ರಾಂಡ್ ಚಿಲ್ಲರೆ ಮಾರಾಟ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಸಂಬಂಧಿಸಿದಂತೆ ಇನ್ನಷ್ಟು ಸುಧಾರಣೆಗಳನ್ನು ತರಬೇಕೆಂದು ಸರ್ಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ಈ ಮುನ್ನ ತವಕಿಸಿತ್ತು. ಆದರೆ ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಹಿನ್ನಡೆಯಾಗಿರುವುದರಿಂದ ಕಾಂಗ್ರೆಸ್ ಈ ವಿಷಯಗಳಲ್ಲಿ ನಿಧಾನದ ಹೆಜ್ಜೆ ಇಡಲು ನಿರ್ಧರಿಸಿದೆ ಎಂಬುದು ತಜ್ಞರ ವಿಶ್ಲೇಷಣೆ.</p>.<p>ಸಂಪನ್ಮೂಲ ಕ್ರೋಡೀಕರಿಸಲು ಐಷಾರಾಮಿ ವಸ್ತುಗಳ ಮೇಲೆ ಸರ್ಕಾರ ಕಣ್ಣು ಹಾಕಿರುವುದರಿಂದ ಕಾರುಗಳ ಖರೀದಿ ಮೇಲಿನ ತೆರಿಗೆ ಹೆಚ್ಚಾಗಬಹುದು. ಹೀಗಾಗಿ ಕಾರು ಕೊಳ್ಳುವ ಆಸೆಯುಳ್ಳವರಿಗೆ ಈ ಬಜೆಟ್ ತಣ್ಣೀರೆರಚಬಹುದು.</p>.<p>ಕಳೆದ ಎರಡು ವರ್ಷಗಳಲ್ಲಿ ಶೇ 8.4ರಷ್ಟಿದ್ದ ಆರ್ಥಿಕ ಬೆಳವಣಿಗೆ ಪ್ರಸಕ್ತ ವರ್ಷ ಶೇ 6.9ರಷ್ಟಕ್ಕೆ ಇಳಿಯುವ ಅಂದಾಜಿದೆ. ಈ ಬೆಳವಣಿಗೆ ಮತ್ತಷ್ಟು ಕುಸಿಯದಂತೆ ಕ್ರಮ ಕೈಗೊಳ್ಳುವುದು ಸಚಿವ ಪ್ರಣವ್ಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿಬಹುದು.</p>.<p>ಸರ್ಕಾರವು ಪ್ರಸ್ತುತ ವರ್ಷ ಆರ್ಥಿಕ ಕೊರತೆಯನ್ನು ಶೇ 4.6ರಷ್ಟು ಇಳಿಸುವ ಗುರಿ ಹಾಕಿಕೊಂಡಿತ್ತು. ಆದರೆ ಸಬ್ಸಿಡಿ ಮೊತ್ತದಲ್ಲಿ ಆಗಿರುವ ಹೆಚ್ಚಳ ಹಾಗೂ ಷೇರು ವಿಕ್ರಯದಿಂದ ಕಡಿಮೆ ಮೊತ್ತ ಸಂಗ್ರಹವಾದ ಹಿನ್ನೆಲೆಯಲ್ಲಿ ಈ ಗುರಿ ಸಾಧನೆಯಾಗುವ ಸಾಧ್ಯತೆ ಕ್ಷೀಣವಾಗಿದೆ.</p>.<p>ಸರ್ಕಾರ ಪ್ರಸಕ್ತ ಸಾಲಿನಲ್ಲಿ ಷೇರುಗಳ ವಿಕ್ರಯದಿಂದ 40,000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ ಈವರೆಗೆ ಕೇವಲ 14,000 ಕೋಟಿ ರೂಪಾಯಿ ಸಂಗ್ರಹವಾಗಿರುವುದು ಸರ್ಕಾರದ ಚಿಂತೆಯನ್ನು ಹೆಚ್ಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಲೋಕಸಭೆಯಲ್ಲಿ ಶುಕ್ರವಾರ ಮಂಡನೆಯಾಗಲಿರುವ ಸಾಮಾನ್ಯ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕನಿಷ್ಠ ಎರಡು ಲಕ್ಷ ರೂಪಾಯಿಗೆ ಹೆಚ್ಚಿಸುವ ನಿರೀಕ್ಷೆ ಇದೆ.</p>.<p>ಹೀಗಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಂಡಿಸಲಿರುವ ಈ ಬಜೆಟ್ನಿಂದ ಸ್ವಲ್ಪ ಮಟ್ಟಿಗೆ ತಮ್ಮ ಹೊರೆ ಕಡಿಮೆಯಾಗಬಹುದೆಂಬುದು ತೆರಿಗೆದಾರರ ನಿರೀಕ್ಷೆಯಾಗಿದೆ.</p>.<p>ಸಂಸತ್ತಿನ ಸ್ಥಾಯಿ ಸಮಿತಿಯು ಆದಾಯ ತೆರಿಗೆ ವಿನಾಯಿತಿಯನ್ನು ಮೂರು ಲಕ್ಷ ರೂಪಾಯಿಗೆ ಹೆಚ್ಚಿಸುವಂತೆ ಸಲಹೆ ಮಾಡಿದ್ದರೂ, ಹಣ ಸಂಪನ್ಮೂಲದ ಕೊರತೆ ನಿಯಂತ್ರಿಸುವ ಉದ್ದೇಶ ಹೊಂದಿರುವ ಪ್ರಣವ್ ಮುಖರ್ಜಿ ಅದಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಅಂತಿಮವಾಗಿ ಅವರು ಈ ಮಿತಿಯನ್ನು 2 ಲಕ್ಷ ರೂಪಾಯಿಗೆ ಸೀಮಿತಗೊಳಿಸಬಹುದು ಎನ್ನಲಾಗಿದೆ.</p>.<p>ಶೇ 10ರಷ್ಟು ತೆರಿಗೆ, ಶೇ 20ರಷ್ಟು ತೆರಿಗೆ ಹಾಗೂ ಶೇ 30ರಷ್ಟು ತೆರಿಗೆ ಪಾವತಿಗೆ ನಿಗದಿ ಮಾಡಿರುವ ಮಿತಿಯಲ್ಲೂ ಸಚಿವರು ಅಲ್ಪಮಟ್ಟಿನ ಸಡಿಲಿಕೆ ತೋರುವ ಸಾಧ್ಯತೆ ಇದೆ. ನೇರ ತೆರಿಗೆ ಸಂಹಿತೆ ಮಸೂದೆಯಲ್ಲೂ ಈ ಕುರಿತು ಪ್ರಸ್ತಾಪಿಸಲಾಗಿತ್ತು.</p>.<p>ಒಂದೆಡೆ ಹಣದುಬ್ಬರದ ಒತ್ತಡ, ಮತ್ತೊಂದೆಡೆ ಹೆಚ್ಚುತ್ತಿರುವ ಆರ್ಥಿಕ ಕೊರತೆ, ಇವುಗಳ ಜತೆಗೆ ತೈಲ ಬೆಲೆ ಏರಿಕೆ ಹೊಡೆತ ನೀಡುತ್ತಿರುವ ಸಂದರ್ಭದಲ್ಲೇ ಈ ಬಜೆಟ್ನೊಂದಿಗೆ 12ನೇ ಪಂಚವಾರ್ಷಿಕ ಯೋಜನೆಗೆ (2012-17) ಕೂಡ ಚಾಲನೆ ದೊರೆಯಲಿದೆ.</p>.<p>ಆದಾಯ ತೆರಿಗೆ ಮಸೂದೆ-1961ಕ್ಕೆ ಬದಲಾಗಿ ನೇರ ತೆರಿಗೆ ಸಂಹಿತೆ ಮಸೂದೆಯು 2013-14ರಿಂದ ಜಾರಿಯಾಗಲಿದ್ದು, ಈ ಕುರಿತು ಬಜೆಟ್ ಭಾಷಣದಲ್ಲಿ ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ ಎಂದೂ ಮೂಲಗಳು ತಿಳಿಸಿವೆ.</p>.<p>ಈ ಬಜೆಟ್ ಕೂಡ ಜನಪ್ರಿಯತೆಯ ಜಾಡಿನಲ್ಲೇ ಸಾಗುವ ಲಕ್ಷಣಗಳಿದ್ದರೂ ತೆರಿಗೆ ವಂಚನೆ ತಡೆಯಲು ಹಾಗೂ ಕಪ್ಪುಹಣ ಸೃಷ್ಟಿಗೆ ಕಡಿವಾಣ ಹಾಕಲು ಕಠಿಣ ಕ್ರಮಗಳು ಪ್ರಕಟವಾಗುವ ಮಾತುಗಳು ಕೇಳಿಬಂದಿವೆ.</p>.<p>ಬಹು ಬ್ರಾಂಡ್ ಚಿಲ್ಲರೆ ಮಾರಾಟ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಸಂಬಂಧಿಸಿದಂತೆ ಇನ್ನಷ್ಟು ಸುಧಾರಣೆಗಳನ್ನು ತರಬೇಕೆಂದು ಸರ್ಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ಈ ಮುನ್ನ ತವಕಿಸಿತ್ತು. ಆದರೆ ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಹಿನ್ನಡೆಯಾಗಿರುವುದರಿಂದ ಕಾಂಗ್ರೆಸ್ ಈ ವಿಷಯಗಳಲ್ಲಿ ನಿಧಾನದ ಹೆಜ್ಜೆ ಇಡಲು ನಿರ್ಧರಿಸಿದೆ ಎಂಬುದು ತಜ್ಞರ ವಿಶ್ಲೇಷಣೆ.</p>.<p>ಸಂಪನ್ಮೂಲ ಕ್ರೋಡೀಕರಿಸಲು ಐಷಾರಾಮಿ ವಸ್ತುಗಳ ಮೇಲೆ ಸರ್ಕಾರ ಕಣ್ಣು ಹಾಕಿರುವುದರಿಂದ ಕಾರುಗಳ ಖರೀದಿ ಮೇಲಿನ ತೆರಿಗೆ ಹೆಚ್ಚಾಗಬಹುದು. ಹೀಗಾಗಿ ಕಾರು ಕೊಳ್ಳುವ ಆಸೆಯುಳ್ಳವರಿಗೆ ಈ ಬಜೆಟ್ ತಣ್ಣೀರೆರಚಬಹುದು.</p>.<p>ಕಳೆದ ಎರಡು ವರ್ಷಗಳಲ್ಲಿ ಶೇ 8.4ರಷ್ಟಿದ್ದ ಆರ್ಥಿಕ ಬೆಳವಣಿಗೆ ಪ್ರಸಕ್ತ ವರ್ಷ ಶೇ 6.9ರಷ್ಟಕ್ಕೆ ಇಳಿಯುವ ಅಂದಾಜಿದೆ. ಈ ಬೆಳವಣಿಗೆ ಮತ್ತಷ್ಟು ಕುಸಿಯದಂತೆ ಕ್ರಮ ಕೈಗೊಳ್ಳುವುದು ಸಚಿವ ಪ್ರಣವ್ಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿಬಹುದು.</p>.<p>ಸರ್ಕಾರವು ಪ್ರಸ್ತುತ ವರ್ಷ ಆರ್ಥಿಕ ಕೊರತೆಯನ್ನು ಶೇ 4.6ರಷ್ಟು ಇಳಿಸುವ ಗುರಿ ಹಾಕಿಕೊಂಡಿತ್ತು. ಆದರೆ ಸಬ್ಸಿಡಿ ಮೊತ್ತದಲ್ಲಿ ಆಗಿರುವ ಹೆಚ್ಚಳ ಹಾಗೂ ಷೇರು ವಿಕ್ರಯದಿಂದ ಕಡಿಮೆ ಮೊತ್ತ ಸಂಗ್ರಹವಾದ ಹಿನ್ನೆಲೆಯಲ್ಲಿ ಈ ಗುರಿ ಸಾಧನೆಯಾಗುವ ಸಾಧ್ಯತೆ ಕ್ಷೀಣವಾಗಿದೆ.</p>.<p>ಸರ್ಕಾರ ಪ್ರಸಕ್ತ ಸಾಲಿನಲ್ಲಿ ಷೇರುಗಳ ವಿಕ್ರಯದಿಂದ 40,000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ ಈವರೆಗೆ ಕೇವಲ 14,000 ಕೋಟಿ ರೂಪಾಯಿ ಸಂಗ್ರಹವಾಗಿರುವುದು ಸರ್ಕಾರದ ಚಿಂತೆಯನ್ನು ಹೆಚ್ಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>