<p>ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಬಲ್ಲಮಾವಟಿ ಗ್ರಾಮದಲ್ಲಿ ಏಪ್ರಿಲ್ 27 ಮತ್ತು 28 ರಂದು ವಿಶಿಷ್ಟ ಉತ್ಸವವೊಂದು ನಡೆಯುತ್ತದೆ. ಭದ್ರಕಾಳಿ ಅಮ್ಮನ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿ ಇಟ್ಟು ತೂಗುವ ವಿಶಿಷ್ಟ ಆಚರಣೆ ಇದು. ಉಯ್ಯಾಲೆ ಹಬ್ಬ ಎಂದೇ ಹೆಸರುವಾಸಿ.<br /> <br /> ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಜರುಗುವ ಈ ಹಬ್ಬ ಗ್ರಾಮೀಣ ಸಂಸ್ಕೃತಿಯ ಪ್ರತೀಕ. ಸಾಮಾನ್ಯವಾಗಿ ಬೇರೆ ದೇವಸ್ಥಾನಗಳಲ್ಲಿ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಪೂಜೆ ಪುನಸ್ಕಾರ, ನೃತ್ಯ, ಸಂಗೀತ ಇರುತ್ತದೆ. <br /> <br /> ಆದರೆ ಬಲ್ಲಮಾವಟಿಯಲ್ಲಿ ಮಾತ್ರ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ ದೊಡ್ಡ ಕಬ್ಬಿಣದ ರಾಟೆಯಲ್ಲಿ ದೇವರನ್ನು ತೂಗುತ್ತಾರೆ. ಹೀಗಾಗಿ ಬಲ್ಲಮಾವಟಿ, ಪೇರೂರು ಹಾಗೂ ಪುಲಿಕೋಟು ಗ್ರಾಮಗಳ ವ್ಯಾಪ್ತಿಗೆ ಸೇರಿದ ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ಮಂದಿರಕ್ಕೆ ರಾಟೆ ದೇವಾಲಯ ಎಂಬ ಇನ್ನೊಂದು ಹೆಸರೂ ಇದೆ.<br /> <br /> ಇದೇ ಸಂದರ್ಭದಲ್ಲಿ ಬೇಡು ಹಬ್ಬ, ಪೀಲಿಯಾಟ್ ಮುಂತಾದ ಸಾಂಪ್ರದಾಯಿಕ ಆಚರಣೆಗಳೂ ಇರುತ್ತವೆ. ಬಳಿಕ ಹಲವು ಕೋಲಗಳು ನೆರೆದ ಜನಸ್ತೋಮವನ್ನು ಆಕರ್ಷಿಸುತ್ತವೆ. ಇದರಲ್ಲಿ ಭದ್ರಕಾಳಿ, ಕ್ಷೇತ್ರಪಾಲ ಹಾಗೂ ಅಯ್ಯಪ್ಪ ಶಾಸ್ತಾವು ಕೋಲ ಪ್ರಮುಖವಾದವುಗಳು. <br /> <br /> ಇದಲ್ಲದೆ `ಆಂಗೋಲ ಪೋಂಗೋಲ~ ಎಂಬ ಆಚರಣೆಯಲ್ಲಿ ಯುವಕರು ಯುವತಿಯರಂತೆ, ಯುವತಿಯರು ಯುವಕರಂತೆ ವೇಷ ಧರಿಸಿ ಹರಕೆ ಒಪ್ಪಿಸುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಬಲ್ಲಮಾವಟಿ ಗ್ರಾಮದಲ್ಲಿ ಏಪ್ರಿಲ್ 27 ಮತ್ತು 28 ರಂದು ವಿಶಿಷ್ಟ ಉತ್ಸವವೊಂದು ನಡೆಯುತ್ತದೆ. ಭದ್ರಕಾಳಿ ಅಮ್ಮನ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿ ಇಟ್ಟು ತೂಗುವ ವಿಶಿಷ್ಟ ಆಚರಣೆ ಇದು. ಉಯ್ಯಾಲೆ ಹಬ್ಬ ಎಂದೇ ಹೆಸರುವಾಸಿ.<br /> <br /> ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಜರುಗುವ ಈ ಹಬ್ಬ ಗ್ರಾಮೀಣ ಸಂಸ್ಕೃತಿಯ ಪ್ರತೀಕ. ಸಾಮಾನ್ಯವಾಗಿ ಬೇರೆ ದೇವಸ್ಥಾನಗಳಲ್ಲಿ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಪೂಜೆ ಪುನಸ್ಕಾರ, ನೃತ್ಯ, ಸಂಗೀತ ಇರುತ್ತದೆ. <br /> <br /> ಆದರೆ ಬಲ್ಲಮಾವಟಿಯಲ್ಲಿ ಮಾತ್ರ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ ದೊಡ್ಡ ಕಬ್ಬಿಣದ ರಾಟೆಯಲ್ಲಿ ದೇವರನ್ನು ತೂಗುತ್ತಾರೆ. ಹೀಗಾಗಿ ಬಲ್ಲಮಾವಟಿ, ಪೇರೂರು ಹಾಗೂ ಪುಲಿಕೋಟು ಗ್ರಾಮಗಳ ವ್ಯಾಪ್ತಿಗೆ ಸೇರಿದ ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ಮಂದಿರಕ್ಕೆ ರಾಟೆ ದೇವಾಲಯ ಎಂಬ ಇನ್ನೊಂದು ಹೆಸರೂ ಇದೆ.<br /> <br /> ಇದೇ ಸಂದರ್ಭದಲ್ಲಿ ಬೇಡು ಹಬ್ಬ, ಪೀಲಿಯಾಟ್ ಮುಂತಾದ ಸಾಂಪ್ರದಾಯಿಕ ಆಚರಣೆಗಳೂ ಇರುತ್ತವೆ. ಬಳಿಕ ಹಲವು ಕೋಲಗಳು ನೆರೆದ ಜನಸ್ತೋಮವನ್ನು ಆಕರ್ಷಿಸುತ್ತವೆ. ಇದರಲ್ಲಿ ಭದ್ರಕಾಳಿ, ಕ್ಷೇತ್ರಪಾಲ ಹಾಗೂ ಅಯ್ಯಪ್ಪ ಶಾಸ್ತಾವು ಕೋಲ ಪ್ರಮುಖವಾದವುಗಳು. <br /> <br /> ಇದಲ್ಲದೆ `ಆಂಗೋಲ ಪೋಂಗೋಲ~ ಎಂಬ ಆಚರಣೆಯಲ್ಲಿ ಯುವಕರು ಯುವತಿಯರಂತೆ, ಯುವತಿಯರು ಯುವಕರಂತೆ ವೇಷ ಧರಿಸಿ ಹರಕೆ ಒಪ್ಪಿಸುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>