<p dir="ltr"><strong><span style="font-size: medium">ಪಟ್ನಾ (ಪಿಟಿಐ):</span></strong><span style="font-size: medium"> ಜನರು ಮದ್ಯ ಕುಡಿದು ಹಾಳಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬಿಹಾರ ಸರ್ಕಾರ ಮದ್ಯದ ಅಂಗಡಿ ತೆರೆಯಲು ಹೊಸ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿದೆ.</span></p>.<p dir="ltr"><span style="font-size: medium">ಎಂಡಿಎ ಸರ್ಕಾರ ರಾಜ್ಯದ ಬೊಕ್ಕಸ ಹೆಚ್ಚಿಸಲು ಹೆಚ್ಚು ಹೆಚ್ಚು ಮದ್ಯದಂಗಡಿ ಪರವಾನಗಿ ನೀಡುತ್ತಿದೆ ಎಂಬ ಕೂಗು ಕೇಳುಬರುತ್ತಿರುವಾಗಲೇ ಬಿಹಾರ ಸರ್ಕಾರ ಇಂಥದ್ದೊಂದು ಕಠಿಣ ಕ್ರಮ ಕೈಗೆತ್ತಿಕೊಂಡಿದೆ. </span></p>.<p dir="ltr"><span style="font-size: medium">ದೇಶದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಬಿಹಾರದಲ್ಲಿ ಮದ್ಯ ಸೇವನೆ ಮಾಡುವವರ ಹಾಗೂ ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಇದೆ. ಪ್ರತಿ ಒಂದು ಲಕ್ಷಕ್ಕೆ ಬೇರೆ ರಾಜ್ಯಗಳಲ್ಲಿ ಇರುವ ಮದ್ಯದಂಗಡಿಗಿಂಥ ಕಡಿಮೆ ಅಂಗಡಿಗಳು ಬಿಹಾರದಲ್ಲಿವೆ ಎಂದು ಅಲ್ಲಿನ ಅಬಕಾರಿ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಹೇಳಿದ್ದಾರೆ.</span></p>.<p dir="ltr"><span style="font-size: medium">~ಕೇವಲ ಪರವಾನಗಿ ಕಡಿಮೆ ಮಾಡುವುದು ಮಾತ್ರವಲ್ಲದೆ ಕುಡಿತದಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಸರ್ಕಾರ ಜನಜಾಗೃತಿ ಕಾರ್ಯಕ್ರಮ ನಡೆಸಲಿದೆ~ ಎಂದು ಅಬಕಾರಿ ಇಲಾಖೆ ಕಾರ್ಯದರ್ಶಿ ಅಮಿರ್ ಸುಭಾನಿ ತಿಳಿಸಿದರು. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p dir="ltr"><strong><span style="font-size: medium">ಪಟ್ನಾ (ಪಿಟಿಐ):</span></strong><span style="font-size: medium"> ಜನರು ಮದ್ಯ ಕುಡಿದು ಹಾಳಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬಿಹಾರ ಸರ್ಕಾರ ಮದ್ಯದ ಅಂಗಡಿ ತೆರೆಯಲು ಹೊಸ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿದೆ.</span></p>.<p dir="ltr"><span style="font-size: medium">ಎಂಡಿಎ ಸರ್ಕಾರ ರಾಜ್ಯದ ಬೊಕ್ಕಸ ಹೆಚ್ಚಿಸಲು ಹೆಚ್ಚು ಹೆಚ್ಚು ಮದ್ಯದಂಗಡಿ ಪರವಾನಗಿ ನೀಡುತ್ತಿದೆ ಎಂಬ ಕೂಗು ಕೇಳುಬರುತ್ತಿರುವಾಗಲೇ ಬಿಹಾರ ಸರ್ಕಾರ ಇಂಥದ್ದೊಂದು ಕಠಿಣ ಕ್ರಮ ಕೈಗೆತ್ತಿಕೊಂಡಿದೆ. </span></p>.<p dir="ltr"><span style="font-size: medium">ದೇಶದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಬಿಹಾರದಲ್ಲಿ ಮದ್ಯ ಸೇವನೆ ಮಾಡುವವರ ಹಾಗೂ ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಇದೆ. ಪ್ರತಿ ಒಂದು ಲಕ್ಷಕ್ಕೆ ಬೇರೆ ರಾಜ್ಯಗಳಲ್ಲಿ ಇರುವ ಮದ್ಯದಂಗಡಿಗಿಂಥ ಕಡಿಮೆ ಅಂಗಡಿಗಳು ಬಿಹಾರದಲ್ಲಿವೆ ಎಂದು ಅಲ್ಲಿನ ಅಬಕಾರಿ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಹೇಳಿದ್ದಾರೆ.</span></p>.<p dir="ltr"><span style="font-size: medium">~ಕೇವಲ ಪರವಾನಗಿ ಕಡಿಮೆ ಮಾಡುವುದು ಮಾತ್ರವಲ್ಲದೆ ಕುಡಿತದಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಸರ್ಕಾರ ಜನಜಾಗೃತಿ ಕಾರ್ಯಕ್ರಮ ನಡೆಸಲಿದೆ~ ಎಂದು ಅಬಕಾರಿ ಇಲಾಖೆ ಕಾರ್ಯದರ್ಶಿ ಅಮಿರ್ ಸುಭಾನಿ ತಿಳಿಸಿದರು. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>