<p>ನವದೆಹಲಿ (ಪಿಟಿಐ): ಇಸ್ರೇಲ್ ರಾಜತಾಂತ್ರಿಕರೊಬ್ಬರ ಮೇಲೆ ಕಳೆದ ತಿಂಗಳು ಇಲ್ಲಿ ಉಗ್ರಗಾಮಿ ದಾಳಿ ನಡೆಸಿದ ಶಂಕಿತರಲ್ಲಿ ಮೂವರು ಇರಾನಿಯನ್ನರನ್ನು ತನಿಖಾಧಿಕಾರಿಗಳು ಗುರುತಿಸಿರುವುದರಿಂದ, ಎಲ್ಲ ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ಸಹಕರಿಸುವಂತೆ ಇರಾನ್ ನೆರವನ್ನು ಭಾರತ ಕೋರಿದೆ. <br /> <br /> ಆದರೆ ಈ ತನಿಖೆಯ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರಕ್ಕೆ ಬರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ದಾಳಿ ಕುರಿತ ತನಿಖೆ ಪ್ರಗತಿಯಲ್ಲಿದೆ ಎಂದಷ್ಟೇ ವಿದೇಶಾಂಗ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.<br /> <br /> <strong>`ಪುರಾವೆ ಇತ್ತು~:</strong> ಇಸ್ರೇಲ್ ರಾಯಭಾರ ಕಚೇರಿ ಸಿಬ್ಬಂದಿಯನ್ನು ಗುರಿಯಾಗಿಟ್ಟುಕೊಂಡು ಇಲ್ಲಿ ನಡೆಸಲಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪತ್ರಕರ್ತನ ಪಾತ್ರ ಇರುವ ಕುರಿತು ಪುರಾವೆ ಸಿಕ್ಕಿದ ಕಾರಣದಿಂದಲೇ ಆತನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. <br /> <br /> ಬಂಧಿತ ಪತ್ರಕರ್ತನಿಗೆ ಇರಾನ್ ಪ್ರಜೆಯೊಂದಿಗೆ ಸಂಪರ್ಕ ಇತ್ತು. ಆ ವ್ಯಕ್ತಿಯು ಬ್ಯಾಂಕಾಕ್ನಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಮುಖ್ಯ ದಾಳಿಕೋರನ ಜೊತೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. <br /> <br /> ದೆಹಲಿ ದಾಳಿಗೆ ಸಂಚು ರೂಪಿಸಿದವರಲ್ಲಿ ಬಂಧಿತ ಸೈಯದ್ ಮೊಹಮ್ಮದ್ ಅಹ್ಮದ್ ಕಾಜ್ಮಿ ಕೂಡ ಒಬ್ಬ. ಈತ ಹಣ ಮತ್ತು ಸಿದ್ಧಾಂತಗಳ ಕಾರಣಕ್ಕೆ ಈ ಕೃತ್ಯ ಎಸೆಗಿರಬಹುದು ಎಂದು ಮೂಲಗಳು ಹೇಳಿವೆ. <br /> <br /> ಇರಾನ್ ಪತ್ರಿಕೆಗೆ ಬಾತ್ಮೀದಾರನಾಗಿದ್ದ ದೆಹಲಿ ದಕ್ಷಿಣ ಭಾಗದ ನಿವಾಸಿಯಾದ ಹವ್ಯಾಸಿ ಪತ್ರಕರ್ತ ಸೈಯದ್ ಮೊಹಮ್ಮದ್ ಅಹ್ಮದ್ ಕಾಜ್ಮಿಯನ್ನು ಮಾರ್ಚ್ 6ರಂದು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಇಸ್ರೇಲ್ ರಾಜತಾಂತ್ರಿಕರೊಬ್ಬರ ಮೇಲೆ ಕಳೆದ ತಿಂಗಳು ಇಲ್ಲಿ ಉಗ್ರಗಾಮಿ ದಾಳಿ ನಡೆಸಿದ ಶಂಕಿತರಲ್ಲಿ ಮೂವರು ಇರಾನಿಯನ್ನರನ್ನು ತನಿಖಾಧಿಕಾರಿಗಳು ಗುರುತಿಸಿರುವುದರಿಂದ, ಎಲ್ಲ ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ಸಹಕರಿಸುವಂತೆ ಇರಾನ್ ನೆರವನ್ನು ಭಾರತ ಕೋರಿದೆ. <br /> <br /> ಆದರೆ ಈ ತನಿಖೆಯ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರಕ್ಕೆ ಬರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ದಾಳಿ ಕುರಿತ ತನಿಖೆ ಪ್ರಗತಿಯಲ್ಲಿದೆ ಎಂದಷ್ಟೇ ವಿದೇಶಾಂಗ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.<br /> <br /> <strong>`ಪುರಾವೆ ಇತ್ತು~:</strong> ಇಸ್ರೇಲ್ ರಾಯಭಾರ ಕಚೇರಿ ಸಿಬ್ಬಂದಿಯನ್ನು ಗುರಿಯಾಗಿಟ್ಟುಕೊಂಡು ಇಲ್ಲಿ ನಡೆಸಲಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪತ್ರಕರ್ತನ ಪಾತ್ರ ಇರುವ ಕುರಿತು ಪುರಾವೆ ಸಿಕ್ಕಿದ ಕಾರಣದಿಂದಲೇ ಆತನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. <br /> <br /> ಬಂಧಿತ ಪತ್ರಕರ್ತನಿಗೆ ಇರಾನ್ ಪ್ರಜೆಯೊಂದಿಗೆ ಸಂಪರ್ಕ ಇತ್ತು. ಆ ವ್ಯಕ್ತಿಯು ಬ್ಯಾಂಕಾಕ್ನಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಮುಖ್ಯ ದಾಳಿಕೋರನ ಜೊತೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. <br /> <br /> ದೆಹಲಿ ದಾಳಿಗೆ ಸಂಚು ರೂಪಿಸಿದವರಲ್ಲಿ ಬಂಧಿತ ಸೈಯದ್ ಮೊಹಮ್ಮದ್ ಅಹ್ಮದ್ ಕಾಜ್ಮಿ ಕೂಡ ಒಬ್ಬ. ಈತ ಹಣ ಮತ್ತು ಸಿದ್ಧಾಂತಗಳ ಕಾರಣಕ್ಕೆ ಈ ಕೃತ್ಯ ಎಸೆಗಿರಬಹುದು ಎಂದು ಮೂಲಗಳು ಹೇಳಿವೆ. <br /> <br /> ಇರಾನ್ ಪತ್ರಿಕೆಗೆ ಬಾತ್ಮೀದಾರನಾಗಿದ್ದ ದೆಹಲಿ ದಕ್ಷಿಣ ಭಾಗದ ನಿವಾಸಿಯಾದ ಹವ್ಯಾಸಿ ಪತ್ರಕರ್ತ ಸೈಯದ್ ಮೊಹಮ್ಮದ್ ಅಹ್ಮದ್ ಕಾಜ್ಮಿಯನ್ನು ಮಾರ್ಚ್ 6ರಂದು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>