<p>ಎಂದಿನಂತೆ ರೇಷ್ಮೆ ಸೀರೆಯುಟ್ಟು, ಕೈತುಂಬ ಬಳೆ ತೊಟ್ಟು, ಕಾಸಗಲ ಕುಂಕುಮ ಇಟ್ಟುಕೊಂಡು ಬಂದಿದ್ದರು ಗಾಯಕಿ ಉಷಾ ಉತ್ತುಪ್. ಆದರೆ ಅವರ ಮುಡಿ ತುಂಬಾ ಇರುತ್ತಿದ್ದ ಮಲ್ಲಿಗೆ ನಾಪತ್ತೆಯಾಗಿತ್ತು. <br /> <br /> ಅದನ್ನು ಬಹಳ ಆಸ್ಥೆಯಿಂದ ಪ್ರಶ್ನಿಸಿದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರಿಗೆ ಉಷಾ, ಇಂದು ಅಭಿಮಾನಿಯೊಬ್ಬರು ಇಷ್ಟಪಟ್ಟು ಕೇಳಿದ್ದಕ್ಕೆ ಮಲ್ಲಿಗೆ ಹೂ ಕೊಟ್ಟುಬಿಟ್ಟೆ ಎಂದು ಹೇಳಿ ದೊಡ್ಡ ನಗೆ ನಕ್ಕರು.<br /> <br /> ಅದು `ಪರಿ~ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಅಂದು ಕಾರ್ಯಕ್ರಮಕ್ಕೆ ಕಳೆ ನೀಡಿದ ಉಷಾ ಉತ್ತುಪ್ ಬಾಯ್ತುಂಬಾ ಮಾತನಾಡಿದರು. ಜೊತೆಗೆ ಹಾಡಿದರು. ಎಲ್ಲರನ್ನೂ ಕುಣಿಸಿದರು.<br /> <br /> ಸಂಗೀತ ಪ್ರೇಮಿಗಳಿಗಾಗಿ ನಲವತ್ತೆರಡು ವರ್ಷಗಳಿಂದ ನಿರಂತವಾಗಿ ಹಾಡುತ್ತಿರುವುದಾಗಿ ಹೇಳಿದ ಉಷಾ ಉತ್ತುಪ್ ವೇದಿಕೆ ಏರಿದಾಕ್ಷಣ ಹಾಡಿದ ಹಾಡು `ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...~. ನಂತರ `ದಮ್ ಮಾರೊ ದಮ್..~. ಸುಧೀರ್ ಅತ್ತಾವರ್, ಸಂಗೀತ ನಿರ್ದೇಶಕ ವೀರ್ ಸಮರ್ಥ, ಹರ್ಷಿಕಾ ಪೂಣಚ್ಚ, ನಾಗಕಿರಣ್ ಉಷಾ ಹಾಡುಗಳಿಗೆ ಹೆಜ್ಜೆ ಹಾಕಿದರು.<br /> <br /> ಸುಧೀರ್ ಅತ್ತಾವರ್ ತಮ್ಮ ವಿದೇಶಿ ಗೆಳೆಯರ ಬೆಂಬಲದಿಂದ ರೂಪಿಸಿರುವ ಸಿನಿಮಾ `ಪರಿ~. ಚಿತ್ರೀಕರಣ ಮುಗಿಸಿರುವ ಅವರು ಅಂದು ಹಿರಿಯರನ್ನು ಸನ್ಮಾನಿಸುವ ಹುಮ್ಮಸ್ಸಿನಲ್ಲಿದ್ದರು.<br /> <br /> ಹಿರಿಯ ನಿರ್ದೇಶಕ ಗೀತಪ್ರಿಯ ಮತ್ತು ಸಂಗೀತ ನಿರ್ದೇಶಕ ರಾಜನ್ ಅವರನ್ನು ಸನ್ಮಾನಿಸಿದ ಸುಧೀರ್ ಅತ್ತಾವರ್ ತಂಡ ಅವರ ಹಾರೈಕೆ ಪಡೆಯಿತು.<br /> <br /> ನಂತರ ಮಾತನಾಡಿದ ಹಿರಿಯ ನಿರ್ದೇಶಕ ಭಗವಾನ್ ಚಿತ್ರದ ಹಾಡುಗಳು ಚಿತ್ರದ ಗುಣಮಟ್ಟವನ್ನು ಪ್ರತಿಬಿಂಬಿಸುವಂತಿವೆ. ಇಂಥ ಇಂಪಾದ ಹಾಡುಗಳ ಅಗತ್ಯ ಇಂದಿನ ಚಿತ್ರರಂಗಕ್ಕೆ ಇದೆ ಎಂದು ಹೇಳಿ ಖುಷಿಪಟ್ಟರು. <br /> <br /> ಚಿತ್ರದ ನಾಯಕಿ ನಿವೇದಿತಾ ದಾವಣಗೆರೆಯಲ್ಲಿ ತಾವೆಲ್ಲಾ ಚಿತ್ರೀಕರಣದಲ್ಲಿ ತೊಡಗಿದ್ದ ಮನೆಯಲ್ಲಿ ಮಗುವೊಂದು ಜನಿಸಿತು. ಅದಕ್ಕೆ `ಪರಿ~ ಎಂದು ಹೆಸರಿಡಲಾಯಿತು ಎಂದು ನೆನಪಿಸಿಕೊಂಡರು.<br /> <br /> ನಾಯಕ ರಾಕೇಶ್ಗೆ ಹಿರಿಯರೊಂದಿಗೆ ಕೆಲಸ ಮಾಡಿದ್ದು ಸಂತಸ ತಂದಿದೆ. ಖಳನಾಯಕ ನಾಗಕಿರಣ್ ತಮ್ಮ ಪಾತ್ರಕ್ಕೆ ರಂಗಭೂಮಿ ನಿರ್ದೇಶಕ ಸುರೇಶ್ ಅನಗಳ್ಳಿ ಅವರಿಂದ ತರಬೇತಿ ಪಡೆದಿದ್ದಾಗಿ ಹೇಳಿಕೊಂಡರು.<br /> <br /> ಕೊನೆಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೀಡಿ ಬಿಡುಗಡೆ ಮಾಡಿ ಶುಭ ಕೋರಿದರು.ನಿರ್ಮಾಪಕರಾದ ದಿವಿಜಾ. ಕೆ, ಮೋಗನ್ ಬಾಬು, ನಿತ್ಯಾನಂದ, ಎಂ.ಎಸ್. ಗೌಡ, ರಾಮಕೃಷ್ಣ ಭಟ್ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಂದಿನಂತೆ ರೇಷ್ಮೆ ಸೀರೆಯುಟ್ಟು, ಕೈತುಂಬ ಬಳೆ ತೊಟ್ಟು, ಕಾಸಗಲ ಕುಂಕುಮ ಇಟ್ಟುಕೊಂಡು ಬಂದಿದ್ದರು ಗಾಯಕಿ ಉಷಾ ಉತ್ತುಪ್. ಆದರೆ ಅವರ ಮುಡಿ ತುಂಬಾ ಇರುತ್ತಿದ್ದ ಮಲ್ಲಿಗೆ ನಾಪತ್ತೆಯಾಗಿತ್ತು. <br /> <br /> ಅದನ್ನು ಬಹಳ ಆಸ್ಥೆಯಿಂದ ಪ್ರಶ್ನಿಸಿದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರಿಗೆ ಉಷಾ, ಇಂದು ಅಭಿಮಾನಿಯೊಬ್ಬರು ಇಷ್ಟಪಟ್ಟು ಕೇಳಿದ್ದಕ್ಕೆ ಮಲ್ಲಿಗೆ ಹೂ ಕೊಟ್ಟುಬಿಟ್ಟೆ ಎಂದು ಹೇಳಿ ದೊಡ್ಡ ನಗೆ ನಕ್ಕರು.<br /> <br /> ಅದು `ಪರಿ~ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಅಂದು ಕಾರ್ಯಕ್ರಮಕ್ಕೆ ಕಳೆ ನೀಡಿದ ಉಷಾ ಉತ್ತುಪ್ ಬಾಯ್ತುಂಬಾ ಮಾತನಾಡಿದರು. ಜೊತೆಗೆ ಹಾಡಿದರು. ಎಲ್ಲರನ್ನೂ ಕುಣಿಸಿದರು.<br /> <br /> ಸಂಗೀತ ಪ್ರೇಮಿಗಳಿಗಾಗಿ ನಲವತ್ತೆರಡು ವರ್ಷಗಳಿಂದ ನಿರಂತವಾಗಿ ಹಾಡುತ್ತಿರುವುದಾಗಿ ಹೇಳಿದ ಉಷಾ ಉತ್ತುಪ್ ವೇದಿಕೆ ಏರಿದಾಕ್ಷಣ ಹಾಡಿದ ಹಾಡು `ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...~. ನಂತರ `ದಮ್ ಮಾರೊ ದಮ್..~. ಸುಧೀರ್ ಅತ್ತಾವರ್, ಸಂಗೀತ ನಿರ್ದೇಶಕ ವೀರ್ ಸಮರ್ಥ, ಹರ್ಷಿಕಾ ಪೂಣಚ್ಚ, ನಾಗಕಿರಣ್ ಉಷಾ ಹಾಡುಗಳಿಗೆ ಹೆಜ್ಜೆ ಹಾಕಿದರು.<br /> <br /> ಸುಧೀರ್ ಅತ್ತಾವರ್ ತಮ್ಮ ವಿದೇಶಿ ಗೆಳೆಯರ ಬೆಂಬಲದಿಂದ ರೂಪಿಸಿರುವ ಸಿನಿಮಾ `ಪರಿ~. ಚಿತ್ರೀಕರಣ ಮುಗಿಸಿರುವ ಅವರು ಅಂದು ಹಿರಿಯರನ್ನು ಸನ್ಮಾನಿಸುವ ಹುಮ್ಮಸ್ಸಿನಲ್ಲಿದ್ದರು.<br /> <br /> ಹಿರಿಯ ನಿರ್ದೇಶಕ ಗೀತಪ್ರಿಯ ಮತ್ತು ಸಂಗೀತ ನಿರ್ದೇಶಕ ರಾಜನ್ ಅವರನ್ನು ಸನ್ಮಾನಿಸಿದ ಸುಧೀರ್ ಅತ್ತಾವರ್ ತಂಡ ಅವರ ಹಾರೈಕೆ ಪಡೆಯಿತು.<br /> <br /> ನಂತರ ಮಾತನಾಡಿದ ಹಿರಿಯ ನಿರ್ದೇಶಕ ಭಗವಾನ್ ಚಿತ್ರದ ಹಾಡುಗಳು ಚಿತ್ರದ ಗುಣಮಟ್ಟವನ್ನು ಪ್ರತಿಬಿಂಬಿಸುವಂತಿವೆ. ಇಂಥ ಇಂಪಾದ ಹಾಡುಗಳ ಅಗತ್ಯ ಇಂದಿನ ಚಿತ್ರರಂಗಕ್ಕೆ ಇದೆ ಎಂದು ಹೇಳಿ ಖುಷಿಪಟ್ಟರು. <br /> <br /> ಚಿತ್ರದ ನಾಯಕಿ ನಿವೇದಿತಾ ದಾವಣಗೆರೆಯಲ್ಲಿ ತಾವೆಲ್ಲಾ ಚಿತ್ರೀಕರಣದಲ್ಲಿ ತೊಡಗಿದ್ದ ಮನೆಯಲ್ಲಿ ಮಗುವೊಂದು ಜನಿಸಿತು. ಅದಕ್ಕೆ `ಪರಿ~ ಎಂದು ಹೆಸರಿಡಲಾಯಿತು ಎಂದು ನೆನಪಿಸಿಕೊಂಡರು.<br /> <br /> ನಾಯಕ ರಾಕೇಶ್ಗೆ ಹಿರಿಯರೊಂದಿಗೆ ಕೆಲಸ ಮಾಡಿದ್ದು ಸಂತಸ ತಂದಿದೆ. ಖಳನಾಯಕ ನಾಗಕಿರಣ್ ತಮ್ಮ ಪಾತ್ರಕ್ಕೆ ರಂಗಭೂಮಿ ನಿರ್ದೇಶಕ ಸುರೇಶ್ ಅನಗಳ್ಳಿ ಅವರಿಂದ ತರಬೇತಿ ಪಡೆದಿದ್ದಾಗಿ ಹೇಳಿಕೊಂಡರು.<br /> <br /> ಕೊನೆಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೀಡಿ ಬಿಡುಗಡೆ ಮಾಡಿ ಶುಭ ಕೋರಿದರು.ನಿರ್ಮಾಪಕರಾದ ದಿವಿಜಾ. ಕೆ, ಮೋಗನ್ ಬಾಬು, ನಿತ್ಯಾನಂದ, ಎಂ.ಎಸ್. ಗೌಡ, ರಾಮಕೃಷ್ಣ ಭಟ್ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>