<p><strong>ಬೀದರ್</strong>: ರಸ್ತೆಯಲ್ಲಿದ್ದ ಹಳ್ಳ, ತಗ್ಗುಗಳನ್ನು ಮುಚ್ಚಿದ ಸಮಾಧಾನ ವಾಹನ ಚಾಲಕರಲ್ಲಿ ನೆಲೆಗೊಳ್ಳುವ ಮುನ್ನವೇ ಮತ್ತೆ ಯಥಾಸ್ಥಿತಿಗೆ ಮರಳಿರುವ ರಸ್ತೆಯ ಸದ್ಯದ ಸ್ಥಿತಿಯು ವಾಹನ ಚಾಲಕರ ಪಾಲಿಗೆ ಆತಂಕ ಮೂಡಿಸಿದೆ. ಹಗಲಲ್ಲೂ ಕಸರತ್ತು ಮಾಡಿಸುತ್ತಿದೆ.<br /> <br /> ನಗರದ ಹೃದಯ ಭಾಗದಲ್ಲಿಯೇ ಇರುವ, ಹೆಚ್ಚಿನ ವಾಹನ ದಟ್ಟಣೆ ಇರುವ ಪ್ರಮುಖ ಸಂಪರ್ಕ ರಸ್ತೆಯಾದ ಇದು ದುರಸ್ತಿಯಾಗಿ ಎರಡೂವರೆ ತಿಂಗಳು ಕಳೆದಿಲ್ಲ. ಆಗಲೇ ರಸ್ತೆ ಕಾಮಗಾರಿಯ ಗುಣಮಟ್ಟ ಅಕ್ಷರಶಃ ಬೀದಿಗೆ ಬಿದ್ದಿದೆ!<br /> ಇದು ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡಿರುವ ಮಡಿವಾಳ ವೃತ್ತದಿಂದ ಜನವಾಡ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ. ಫೆಬ್ರುವರಿ ಆರಂಭದಲ್ಲಿ ಕೋಟೆ ಅಂಗಳದಲ್ಲಿ ನಡೆದ ಬೀದರ್ ಉತ್ಸವ ಸಂದರ್ಭದಲ್ಲಿ ದುರಸ್ತಿ ಆಗಿತ್ತು.ಡಾಂಬರೀಕರಣಗೊಂಡು ನಳನಳಿಸುತ್ತಿತ್ತು.<br /> <br /> ಉತ್ಸವದ ಸಂಭ್ರಮ ಮತ್ತು ಚುನಾವಣೆಯ ಬಿರುಸು ಮುಗಿಯುತ್ತಿದ್ದಂತೆಯೇ ರಸ್ತೆ ಮತ್ತೆ ಯಥಾಸ್ಥಿತಿಗೆ ತಲುಪಿದೆ. ಸುಮಾರು 1–2 ಕಿ.ಮೀ. ಅಂತರದ ಈ ರಸ್ತೆಯ ಎರಡು ಆಯಕಟ್ಟಿನ ಸ್ಥಳಗಳಲ್ಲಿ ಆತಂಕ ಮೂಡಿಸುವಷ್ಟು ದೊಡ್ಡ ಪ್ರಮಾಣದ ಹಳ್ಳ– ದಿಣ್ಣೆಗಳು ಬಿದ್ದಿವೆ.<br /> <br /> ಒಂದು ರಸ್ತೆಯ ನಡುವೆ ತಿರುವಿನಲ್ಲಿ ಇದ್ದರೆ, ಇನ್ನೊಂದು ಮಡಿವಾಳ ವೃತ್ತಕ್ಕೆ ಹೊಂದಿಕೊಂಡಿರುವಂತೆಯೇ ಆರಂಭದಲ್ಲಿಯೇ ಇದೆ. ತಿರುವಿನ ಬಳಿ ಈ ಹಳ್ಳ ದಿಗ್ಗುಗಳು ಅರ್ಧ ರಸ್ತೆಯನ್ನೇ ಆಕ್ರಮಿಸಿಕೊಂಡಿದ್ದು, ಸುಮಾರು 8–10 ಅಡಿಗಳಷ್ಟು ಅಗಲವಾಗಿದೆ.<br /> <br /> ಅದು ಏಕಮುಖ ರಸ್ತೆಯಾಗಿರುವ ಕಾರಣ, ಅನಿವಾರ್ಯವಾಗಿ ಈ ಅವ್ಯವಸ್ಥೆಯನ್ನೇ ದಾಟಿಯೇ ಹೋಗಬೇಕು. ವೇಗ ನಿಯಂತ್ರಕ ಸೂಚನೆಗಳಾಗಲಿ, ವ್ಯವಸ್ಥೆಯಾಗಲಿ ಇಲ್ಲದಿರುವ ಕಾರಣ ಜನವಾಡ ರಸ್ತೆಯಿಂದ ಬರುವ ಚಾಲಕರು ತಕ್ಷಣಕ್ಕೆ ವಾಹನ ನಿಯಂತ್ರಿಸಲು ಆಗದೇ ಬೀಳುವ ಸ್ಥಿತಿ ಇದೆ.<br /> <br /> ಇನ್ನು ಮಡಿವಾಳ ವೃತ್ತದ ಬಳಿಯೂ ಇಂಥದೇ ಸ್ಥಿತಿ. ಹಳ್ಳ–ದಿಣ್ಣೆಗಳ ಪರಿಣಾಮ ವಾಹನಗಳ ವೇಗ ಕಡಿಮೆಯಾಗಿದ್ದು, ಭಾರಿ ವಾಹನ ಪ್ರವೇಶಿಸುವ ಹಂತದಲ್ಲಿ ವೃತ್ತದಲ್ಲಿಯೇ ವಾಹನ ದಟ್ಟಣೆ ಉಂಟಾಗುತ್ತದೆ.<br /> <br /> ಬೀದರ್ ಉತ್ಸವದ ಸಂದರ್ಭದಲ್ಲಿ ಎರಡು ಬುಲ್ಡೋಜರ್ಗಳು ಓಡಾಡಿದುದನ್ನು ಕಂಡಿದ್ದ ಸಾರ್ವಜನಿಕರು ಉತ್ತಮ ರಸ್ತೆಯಾಯಿತು ಎಂದುಕೊಂಡಿದ್ದರು. ಆದರೆ ಆ ಭರವಸೆ ಅಲ್ಪಾವಧಿಯಲ್ಲಿಯೇ ಹಳ್ಳ ಹಿಡಿದಿದೆ.<br /> <br /> ಈ ಕುರಿತು ನಗರಸಭೆ ಆಯುಕ್ತ ಜಗದೀಶ್ ನಾಯಕ್ ಅವರನ್ನು ಸಂಪರ್ಕಿಸಿದಾಗ, ‘ಆ ರಸ್ತೆಯ ದುಃಸ್ಥಿತಿ ಗಮನಕ್ಕೆ ಬಂದಿದೆ. ಈಚೆಗೆ ನಡೆದ ಜಿಲ್ಲಾ ರಸ್ತೆ ಸಂಚಾರ ಪ್ರಾಧಿಕಾರದ ಸಭೆಯಲ್ಲಿಯೂ ಪ್ರಸ್ತಾಪವಾಗಿದೆ. ಆದರೆ ಅದು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ’ ಎಂದರು.<br /> <br /> ನಮ್ಮ ವ್ಯಾಪ್ತಿಗೆ ಬರದ ಕಾರಣ ಆ ರಸ್ತೆಯ ಕಾಮಗಾರಿ ಪ್ರಸ್ತಾಪ ನಗರಸಭೆಯ ಮುಂದಿಲ್ಲ. ಲೋಕೋಪಯೋಗಿ ಇಲಾಖೆ ಮುಂದಿರುವ ಬಗೆಗೆ ತಮಗೆ ಮಾಹಿತಿ ಇಲ್ಲ. ರಸ್ತೆಯಲ್ಲಿಎರಡು ಕಡೆ ಮಣ್ಣು ಸಡಿಲವಾಗಿರುವುದು ಈ ಸ್ಥಿತಿಗೆ ಕಾರಣವಿರಬಹುದು. ಇದೇ ಕಾರಣಕ್ಕೆ ಅಲ್ಪಾವಧಿಯಲ್ಲೇ ಆ ಸ್ಥಿತಿಗೆ ಬಂದಿದೆ ಎನ್ನುತ್ತಾರೆ.<br /> <br /> ಕಾಮಗಾರಿ ನಡೆದ ಎರಡು ತಿಂಗಳಲ್ಲಿಯೇ ರಸ್ತೆ ಈ ಸ್ಥಿತಿಗೆ ಬಂದಿರುವ ಕಾರಣ ಕನಿಷ್ಠ ಲೋಪ ಕುರಿತು ಕ್ರಮ ಜರುಗಿಸುವ ಹೊಣೆಗಾರಿಕೆಯನ್ನಾದರೂ ಸಂಬಂಧಿತ ಅಧಿಕಾರಿಗಳು ತೋರಬೇಕು. ತೋರುತ್ತಾರಾ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ರಸ್ತೆಯಲ್ಲಿದ್ದ ಹಳ್ಳ, ತಗ್ಗುಗಳನ್ನು ಮುಚ್ಚಿದ ಸಮಾಧಾನ ವಾಹನ ಚಾಲಕರಲ್ಲಿ ನೆಲೆಗೊಳ್ಳುವ ಮುನ್ನವೇ ಮತ್ತೆ ಯಥಾಸ್ಥಿತಿಗೆ ಮರಳಿರುವ ರಸ್ತೆಯ ಸದ್ಯದ ಸ್ಥಿತಿಯು ವಾಹನ ಚಾಲಕರ ಪಾಲಿಗೆ ಆತಂಕ ಮೂಡಿಸಿದೆ. ಹಗಲಲ್ಲೂ ಕಸರತ್ತು ಮಾಡಿಸುತ್ತಿದೆ.<br /> <br /> ನಗರದ ಹೃದಯ ಭಾಗದಲ್ಲಿಯೇ ಇರುವ, ಹೆಚ್ಚಿನ ವಾಹನ ದಟ್ಟಣೆ ಇರುವ ಪ್ರಮುಖ ಸಂಪರ್ಕ ರಸ್ತೆಯಾದ ಇದು ದುರಸ್ತಿಯಾಗಿ ಎರಡೂವರೆ ತಿಂಗಳು ಕಳೆದಿಲ್ಲ. ಆಗಲೇ ರಸ್ತೆ ಕಾಮಗಾರಿಯ ಗುಣಮಟ್ಟ ಅಕ್ಷರಶಃ ಬೀದಿಗೆ ಬಿದ್ದಿದೆ!<br /> ಇದು ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡಿರುವ ಮಡಿವಾಳ ವೃತ್ತದಿಂದ ಜನವಾಡ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ. ಫೆಬ್ರುವರಿ ಆರಂಭದಲ್ಲಿ ಕೋಟೆ ಅಂಗಳದಲ್ಲಿ ನಡೆದ ಬೀದರ್ ಉತ್ಸವ ಸಂದರ್ಭದಲ್ಲಿ ದುರಸ್ತಿ ಆಗಿತ್ತು.ಡಾಂಬರೀಕರಣಗೊಂಡು ನಳನಳಿಸುತ್ತಿತ್ತು.<br /> <br /> ಉತ್ಸವದ ಸಂಭ್ರಮ ಮತ್ತು ಚುನಾವಣೆಯ ಬಿರುಸು ಮುಗಿಯುತ್ತಿದ್ದಂತೆಯೇ ರಸ್ತೆ ಮತ್ತೆ ಯಥಾಸ್ಥಿತಿಗೆ ತಲುಪಿದೆ. ಸುಮಾರು 1–2 ಕಿ.ಮೀ. ಅಂತರದ ಈ ರಸ್ತೆಯ ಎರಡು ಆಯಕಟ್ಟಿನ ಸ್ಥಳಗಳಲ್ಲಿ ಆತಂಕ ಮೂಡಿಸುವಷ್ಟು ದೊಡ್ಡ ಪ್ರಮಾಣದ ಹಳ್ಳ– ದಿಣ್ಣೆಗಳು ಬಿದ್ದಿವೆ.<br /> <br /> ಒಂದು ರಸ್ತೆಯ ನಡುವೆ ತಿರುವಿನಲ್ಲಿ ಇದ್ದರೆ, ಇನ್ನೊಂದು ಮಡಿವಾಳ ವೃತ್ತಕ್ಕೆ ಹೊಂದಿಕೊಂಡಿರುವಂತೆಯೇ ಆರಂಭದಲ್ಲಿಯೇ ಇದೆ. ತಿರುವಿನ ಬಳಿ ಈ ಹಳ್ಳ ದಿಗ್ಗುಗಳು ಅರ್ಧ ರಸ್ತೆಯನ್ನೇ ಆಕ್ರಮಿಸಿಕೊಂಡಿದ್ದು, ಸುಮಾರು 8–10 ಅಡಿಗಳಷ್ಟು ಅಗಲವಾಗಿದೆ.<br /> <br /> ಅದು ಏಕಮುಖ ರಸ್ತೆಯಾಗಿರುವ ಕಾರಣ, ಅನಿವಾರ್ಯವಾಗಿ ಈ ಅವ್ಯವಸ್ಥೆಯನ್ನೇ ದಾಟಿಯೇ ಹೋಗಬೇಕು. ವೇಗ ನಿಯಂತ್ರಕ ಸೂಚನೆಗಳಾಗಲಿ, ವ್ಯವಸ್ಥೆಯಾಗಲಿ ಇಲ್ಲದಿರುವ ಕಾರಣ ಜನವಾಡ ರಸ್ತೆಯಿಂದ ಬರುವ ಚಾಲಕರು ತಕ್ಷಣಕ್ಕೆ ವಾಹನ ನಿಯಂತ್ರಿಸಲು ಆಗದೇ ಬೀಳುವ ಸ್ಥಿತಿ ಇದೆ.<br /> <br /> ಇನ್ನು ಮಡಿವಾಳ ವೃತ್ತದ ಬಳಿಯೂ ಇಂಥದೇ ಸ್ಥಿತಿ. ಹಳ್ಳ–ದಿಣ್ಣೆಗಳ ಪರಿಣಾಮ ವಾಹನಗಳ ವೇಗ ಕಡಿಮೆಯಾಗಿದ್ದು, ಭಾರಿ ವಾಹನ ಪ್ರವೇಶಿಸುವ ಹಂತದಲ್ಲಿ ವೃತ್ತದಲ್ಲಿಯೇ ವಾಹನ ದಟ್ಟಣೆ ಉಂಟಾಗುತ್ತದೆ.<br /> <br /> ಬೀದರ್ ಉತ್ಸವದ ಸಂದರ್ಭದಲ್ಲಿ ಎರಡು ಬುಲ್ಡೋಜರ್ಗಳು ಓಡಾಡಿದುದನ್ನು ಕಂಡಿದ್ದ ಸಾರ್ವಜನಿಕರು ಉತ್ತಮ ರಸ್ತೆಯಾಯಿತು ಎಂದುಕೊಂಡಿದ್ದರು. ಆದರೆ ಆ ಭರವಸೆ ಅಲ್ಪಾವಧಿಯಲ್ಲಿಯೇ ಹಳ್ಳ ಹಿಡಿದಿದೆ.<br /> <br /> ಈ ಕುರಿತು ನಗರಸಭೆ ಆಯುಕ್ತ ಜಗದೀಶ್ ನಾಯಕ್ ಅವರನ್ನು ಸಂಪರ್ಕಿಸಿದಾಗ, ‘ಆ ರಸ್ತೆಯ ದುಃಸ್ಥಿತಿ ಗಮನಕ್ಕೆ ಬಂದಿದೆ. ಈಚೆಗೆ ನಡೆದ ಜಿಲ್ಲಾ ರಸ್ತೆ ಸಂಚಾರ ಪ್ರಾಧಿಕಾರದ ಸಭೆಯಲ್ಲಿಯೂ ಪ್ರಸ್ತಾಪವಾಗಿದೆ. ಆದರೆ ಅದು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ’ ಎಂದರು.<br /> <br /> ನಮ್ಮ ವ್ಯಾಪ್ತಿಗೆ ಬರದ ಕಾರಣ ಆ ರಸ್ತೆಯ ಕಾಮಗಾರಿ ಪ್ರಸ್ತಾಪ ನಗರಸಭೆಯ ಮುಂದಿಲ್ಲ. ಲೋಕೋಪಯೋಗಿ ಇಲಾಖೆ ಮುಂದಿರುವ ಬಗೆಗೆ ತಮಗೆ ಮಾಹಿತಿ ಇಲ್ಲ. ರಸ್ತೆಯಲ್ಲಿಎರಡು ಕಡೆ ಮಣ್ಣು ಸಡಿಲವಾಗಿರುವುದು ಈ ಸ್ಥಿತಿಗೆ ಕಾರಣವಿರಬಹುದು. ಇದೇ ಕಾರಣಕ್ಕೆ ಅಲ್ಪಾವಧಿಯಲ್ಲೇ ಆ ಸ್ಥಿತಿಗೆ ಬಂದಿದೆ ಎನ್ನುತ್ತಾರೆ.<br /> <br /> ಕಾಮಗಾರಿ ನಡೆದ ಎರಡು ತಿಂಗಳಲ್ಲಿಯೇ ರಸ್ತೆ ಈ ಸ್ಥಿತಿಗೆ ಬಂದಿರುವ ಕಾರಣ ಕನಿಷ್ಠ ಲೋಪ ಕುರಿತು ಕ್ರಮ ಜರುಗಿಸುವ ಹೊಣೆಗಾರಿಕೆಯನ್ನಾದರೂ ಸಂಬಂಧಿತ ಅಧಿಕಾರಿಗಳು ತೋರಬೇಕು. ತೋರುತ್ತಾರಾ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>