<p>ಲಂಡನ್ (ಪಿಟಿಐ): `ಒಲಿಂಪಿಕ್ಸ್ನಲ್ಲಿ ನಾನು ಗೆದ್ದ ಪದಕ ಬ್ಯಾಡ್ಮಿಂಟನ್ ಕ್ರೀಡೆಯತ್ತ ಚಿತ್ತ ಹರಿಸಲು ಭಾರತದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಆಗಲಿದೆ~ ಎಂದು ಸೈನಾ ನೆಹ್ವಾಲ್ ನುಡಿದಿದ್ದಾರೆ.<br /> <br /> `ಈ ಪದಕದಿಂದ ಖಂಡಿತ ದೇಶದಲ್ಲಿ ಕೆಲ ಬದಲಾವಣೆ ಆಗಲಿದೆ. ಪ್ರಮುಖವಾಗಿ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಬದಲಾವಣೆ ಆಗಲಿದೆ. ಹೆಚ್ಚಿನ ಹುಡುಗಿಯರು ಈ ಆಟದತ್ತ ಒಲವು ತೋರಲಿದ್ದಾರೆ. ಚೀನಾ, ಕೊರಿಯಾದಂತೆ ಭಾರತವೂ ಮುಂದೆ ಬರಲಿದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. <br /> <br /> `ಒಲಿಂಪಿಕ್ಸ್ ಪದಕಕ್ಕಾಗಿ ನಾನು ಆರೇಳು ವರ್ಷಗಳಿಂದ ಕಠಿಣ ಪ್ರಯತ್ನ ಹಾಕಿ ಅಭ್ಯಾಸ ನಡೆಸಿದ್ದೆ. ಪದಕ ಗೆದ್ದಿದೇನೆ ಎಂಬ ವಿಷಯವನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ~ ಎಂದರು.<br /> <br /> ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಸೈನಾ, `ಚೀನಾದ ಕ್ಸಿನ್ ಗಾಯಗೊಂಡ ವಿಷಯ ನನಗೆ ತಕ್ಷಣ ಗೊತ್ತಾಗಲಿಲ್ಲ. ಅವರು ಬೇಕಂತಲೇ ಸಮಯ ಕಳೆಯುತ್ತಿರಬೇಕು ಎಂದು ನಾನು ಯೋಚಿಸಿದೆ. <br /> <br /> ಆದರೆ ಆಮೇಲೆ ನಿಜ ಸಂಗತಿ ಗೊತ್ತಾಯಿತು. ಆದರೆ ಈ ಹಿಂದೆ ಯಾವತ್ತೂ ನಾನು ಈ ರೀತಿಯಲ್ಲಿ ಪಂದ್ಯ ಗೆದ್ದಿರಲಿಲ್ಲ~ ಎಂದು ನುಡಿದರು. <br /> <br /> `ನಾನು ಕೆಲ ದಿನ ವಿಶ್ರಾಂತಿ ಪಡೆಯುತ್ತೇನೆ. ದಪ್ಪವಾದರೂ ಪರವಾಗಿಲ್ಲ ಚಾಕಲೇಟ್ ತಿನ್ನುತ್ತೇನೆ. ಸಿನಿಮಾ ವೀಕ್ಷಿಸುತ್ತೇನೆ. ಚಾಕಲೇಟ್ ತಿನ್ನಲು ತಂದೆ ಬಿಡುತ್ತಿರಲಿಲ್ಲ. ಆದರೆ ನಾನು ಪದಕ ಗೆದ್ದಿರುವ ಕಾರಣ ಅವರ ಅನುಮತಿ ನೀಡಬಹುದು~ ಎಂದೂ ನೆಹ್ವಾಲ್ ತಿಳಿಸಿದರು.<br /> <br /> <strong>ಈ ಪದಕಕ್ಕೆ ಸೈನಾ ಅರ್ಹಳು: ಹರ್ವೀರ್</strong><br /> ಹೈದರಾಬಾದ್ (ಪಿಟಿಐ/ಐಎಎನ್ಎಸ್): ನಾಲ್ಕು ವರ್ಷಗಳ ಹಿಂದೆ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪದಕದ ಕನಸು ಭಗ್ನಗೊಂಡಾಗ ಸೈನಾ ನೆಹ್ವಾಲ್ ಕೋರ್ಟ್ನಲ್ಲೇ ಕಣ್ಣೀರಿಟ್ಟಿದ್ದರು. ಏಕೆಂದರೆ ಕ್ವಾರ್ಟರ್ ಫೈನಲ್ನ ಆ ಪಂದ್ಯದಲ್ಲಿ 11-3ರಲ್ಲಿ ಇಂಡೊನೇಷ್ಯಾದ ಮರಿಯಾ ಕ್ರಿಸ್ಟಿನ್ ಯೂಲಿಯಾನಿ ಎದುರು ಮುಂದಿದ್ದರೂ ಸೈನಾ ಆಘಾತ ಅನುಭವಿಸಿದ್ದರು.<br /> <br /> ಆ ನೋವಿಗೆ ಪರಿಹಾರ ಸಿಕ್ಕಿದ್ದು ಲಂಡನ್ನ ವೆಂಬ್ಲೆ ಅರೆನಾ ಕೋರ್ಟ್ನಲ್ಲಿ. ಒಲಿಂಪಿಕ್ಸ್ ಕಂಚಿನ ಪದಕದ ಸಾಧನೆ ಸೈನಾ ಸೇರಿದಂತೆ ಇಡೀ ಭಾರತದ ಕ್ರೀಡಾ ಪ್ರೇಮಿಗಳ ಖುಷಿಗೆ ಕಾರಣವಾಗಿದೆ. ಅದರಲ್ಲೂ ನೆಹ್ವಾಲ್ ಅವರ ಪೋಷಕರ ಸಂತೋಷ ಪದಗಳಿಗೆ ನಿಲುಕುವಂತಹದ್ದಲ್ಲ. <br /> <br /> `ಸೈನಾಳ ಇಷ್ಟು ವರ್ಷಗಳ ಕಠಿಣ ಪ್ರಯತ್ನಕ್ಕೆ ದೇವರು ನೀಡಿದ ವರ ಈ ಪದಕ. ಅದೃಷ್ಟದ ಮೂಲಕ ಈ ಪದಕ ಅವಳಿಗೆ ಬಂದಿರಬಹುದು. ಆದರೆ ಈ ಪದಕಕ್ಕೆ ಅವಳು ಅರ್ಹಳು~ಎಂದು ಭಾವುಕರಾಗಿದ್ದ ತಂದೆ ಡಾ.ಹರ್ವೀರ್ ಸಿಂಗ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಂಡನ್ (ಪಿಟಿಐ): `ಒಲಿಂಪಿಕ್ಸ್ನಲ್ಲಿ ನಾನು ಗೆದ್ದ ಪದಕ ಬ್ಯಾಡ್ಮಿಂಟನ್ ಕ್ರೀಡೆಯತ್ತ ಚಿತ್ತ ಹರಿಸಲು ಭಾರತದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಆಗಲಿದೆ~ ಎಂದು ಸೈನಾ ನೆಹ್ವಾಲ್ ನುಡಿದಿದ್ದಾರೆ.<br /> <br /> `ಈ ಪದಕದಿಂದ ಖಂಡಿತ ದೇಶದಲ್ಲಿ ಕೆಲ ಬದಲಾವಣೆ ಆಗಲಿದೆ. ಪ್ರಮುಖವಾಗಿ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಬದಲಾವಣೆ ಆಗಲಿದೆ. ಹೆಚ್ಚಿನ ಹುಡುಗಿಯರು ಈ ಆಟದತ್ತ ಒಲವು ತೋರಲಿದ್ದಾರೆ. ಚೀನಾ, ಕೊರಿಯಾದಂತೆ ಭಾರತವೂ ಮುಂದೆ ಬರಲಿದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. <br /> <br /> `ಒಲಿಂಪಿಕ್ಸ್ ಪದಕಕ್ಕಾಗಿ ನಾನು ಆರೇಳು ವರ್ಷಗಳಿಂದ ಕಠಿಣ ಪ್ರಯತ್ನ ಹಾಕಿ ಅಭ್ಯಾಸ ನಡೆಸಿದ್ದೆ. ಪದಕ ಗೆದ್ದಿದೇನೆ ಎಂಬ ವಿಷಯವನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ~ ಎಂದರು.<br /> <br /> ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಸೈನಾ, `ಚೀನಾದ ಕ್ಸಿನ್ ಗಾಯಗೊಂಡ ವಿಷಯ ನನಗೆ ತಕ್ಷಣ ಗೊತ್ತಾಗಲಿಲ್ಲ. ಅವರು ಬೇಕಂತಲೇ ಸಮಯ ಕಳೆಯುತ್ತಿರಬೇಕು ಎಂದು ನಾನು ಯೋಚಿಸಿದೆ. <br /> <br /> ಆದರೆ ಆಮೇಲೆ ನಿಜ ಸಂಗತಿ ಗೊತ್ತಾಯಿತು. ಆದರೆ ಈ ಹಿಂದೆ ಯಾವತ್ತೂ ನಾನು ಈ ರೀತಿಯಲ್ಲಿ ಪಂದ್ಯ ಗೆದ್ದಿರಲಿಲ್ಲ~ ಎಂದು ನುಡಿದರು. <br /> <br /> `ನಾನು ಕೆಲ ದಿನ ವಿಶ್ರಾಂತಿ ಪಡೆಯುತ್ತೇನೆ. ದಪ್ಪವಾದರೂ ಪರವಾಗಿಲ್ಲ ಚಾಕಲೇಟ್ ತಿನ್ನುತ್ತೇನೆ. ಸಿನಿಮಾ ವೀಕ್ಷಿಸುತ್ತೇನೆ. ಚಾಕಲೇಟ್ ತಿನ್ನಲು ತಂದೆ ಬಿಡುತ್ತಿರಲಿಲ್ಲ. ಆದರೆ ನಾನು ಪದಕ ಗೆದ್ದಿರುವ ಕಾರಣ ಅವರ ಅನುಮತಿ ನೀಡಬಹುದು~ ಎಂದೂ ನೆಹ್ವಾಲ್ ತಿಳಿಸಿದರು.<br /> <br /> <strong>ಈ ಪದಕಕ್ಕೆ ಸೈನಾ ಅರ್ಹಳು: ಹರ್ವೀರ್</strong><br /> ಹೈದರಾಬಾದ್ (ಪಿಟಿಐ/ಐಎಎನ್ಎಸ್): ನಾಲ್ಕು ವರ್ಷಗಳ ಹಿಂದೆ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪದಕದ ಕನಸು ಭಗ್ನಗೊಂಡಾಗ ಸೈನಾ ನೆಹ್ವಾಲ್ ಕೋರ್ಟ್ನಲ್ಲೇ ಕಣ್ಣೀರಿಟ್ಟಿದ್ದರು. ಏಕೆಂದರೆ ಕ್ವಾರ್ಟರ್ ಫೈನಲ್ನ ಆ ಪಂದ್ಯದಲ್ಲಿ 11-3ರಲ್ಲಿ ಇಂಡೊನೇಷ್ಯಾದ ಮರಿಯಾ ಕ್ರಿಸ್ಟಿನ್ ಯೂಲಿಯಾನಿ ಎದುರು ಮುಂದಿದ್ದರೂ ಸೈನಾ ಆಘಾತ ಅನುಭವಿಸಿದ್ದರು.<br /> <br /> ಆ ನೋವಿಗೆ ಪರಿಹಾರ ಸಿಕ್ಕಿದ್ದು ಲಂಡನ್ನ ವೆಂಬ್ಲೆ ಅರೆನಾ ಕೋರ್ಟ್ನಲ್ಲಿ. ಒಲಿಂಪಿಕ್ಸ್ ಕಂಚಿನ ಪದಕದ ಸಾಧನೆ ಸೈನಾ ಸೇರಿದಂತೆ ಇಡೀ ಭಾರತದ ಕ್ರೀಡಾ ಪ್ರೇಮಿಗಳ ಖುಷಿಗೆ ಕಾರಣವಾಗಿದೆ. ಅದರಲ್ಲೂ ನೆಹ್ವಾಲ್ ಅವರ ಪೋಷಕರ ಸಂತೋಷ ಪದಗಳಿಗೆ ನಿಲುಕುವಂತಹದ್ದಲ್ಲ. <br /> <br /> `ಸೈನಾಳ ಇಷ್ಟು ವರ್ಷಗಳ ಕಠಿಣ ಪ್ರಯತ್ನಕ್ಕೆ ದೇವರು ನೀಡಿದ ವರ ಈ ಪದಕ. ಅದೃಷ್ಟದ ಮೂಲಕ ಈ ಪದಕ ಅವಳಿಗೆ ಬಂದಿರಬಹುದು. ಆದರೆ ಈ ಪದಕಕ್ಕೆ ಅವಳು ಅರ್ಹಳು~ಎಂದು ಭಾವುಕರಾಗಿದ್ದ ತಂದೆ ಡಾ.ಹರ್ವೀರ್ ಸಿಂಗ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>