<p>ಭದ್ರಾವತಿ: ಭಾರತೀಯ ಉಕ್ಕು ಪ್ರಾಧಿಕಾರದ (ಸೈಲ್) ಅಂಗಸಂಸ್ಥೆಗಳ ಉಕ್ಕು ಕಾರ್ಮಿಕರ ಒಕ್ಕೂಟ ಕಾರ್ಮಿಕರ ಹಿತ ಕಾಯ್ದುಕೊಳ್ಳುವ ಜತೆಗೆ ಗುತ್ತಿಗೆ ಕಾರ್ಮಿಕರ ರಕ್ಷಣೆಗೂ ಸಹ ಮುಂದಾಗಿದೆ ಎಂದು ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ ಹೇಳಿದರು.<br /> <br /> ಇಲ್ಲಿನ ಕಾರ್ಖಾನೆ ಮುಂಭಾಗದಲ್ಲಿ ಶುಕ್ರವಾರ ಜರುಗಿದ ಕಾರ್ಮಿಕರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> 2007ರಿಂದ ಸೈಲ್ ಕಾರ್ಮಿಕರ ವೇತನ ಒಪ್ಪಂದ ಕುರಿತಂತೆ ನಡೆಯುತ್ತಿದ್ದ ಮಾತುಕತೆ ಹೋರಾಟ, ಮುಷ್ಕರ ಹಾಗೂ ಪ್ರತಿಭಟನೆಗಳ ನಂತರ ಇತ್ಯರ್ಥವಾದ ಹಿನ್ನೆಲೆಯಲ್ಲಿ ಉಕ್ಕು ಕಾರ್ಮಿಕರ ಒಕ್ಕೂಟಕ್ಕೆ ಜಯ ಸಿಕ್ಕಿದೆ. ಹೀಗಾಗಿ ಅವರನ್ನು ಅಭಿನಂದಿಸುವುದು ಸಂಘದ ಕರ್ತವ್ಯ.<br /> <br /> ಈ ಹೋರಾಟ ಫಲವಾಗಿ ಗುತ್ತಿಗೆ ಕಾರ್ಮಿಕರಿಗೂ ಸಹ ಹೆಚ್ಚುವರಿ ್ಙ 1,000ನಗದು ದೊರೆಯಿತು. ಇದಕ್ಕೆ ಸಂಪೂರ್ಣವಾಗಿ ಸಿಐಟಿಯು ನೇತೃತ್ವ ಒಕ್ಕೂಟ ಕಾರಣ ಹಾಗಾಗಿ ಇದರ ಮುಖಂಡರು ನಮ್ಮ ಅಭಿನಂದನೆಗೆ ಅರ್ಹರು ಎಂದರು.<br /> <br /> ರಾಜ್ಯ ಸರ್ಕಾರ ಮೂರನೇ ಬಾರಿಗೆ ಕೇಂದ್ರ ಗಣಿ ಮಂತ್ರಾಲಯಕ್ಕೆ ಸಂಡೂರು ತಾಲ್ಲೂಕು ಬಾವಿಹಳ್ಳಿ ಪ್ರದೇಶದ 140ಹೆಕ್ಟೇರ್ ಭೂಮಿ ಶಿಫಾರಸು ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬಾಕಿ ಇದೆ ಎಂದರು.<br /> <br /> ಇದೇ ಸಂದರ್ಭದಲ್ಲಿ ಕಾರ್ಮಿಕರಿಂದ ಸಂಗ್ರಹಿಸಿದ ್ಙ 2.75ಲಕ್ಷ ಮೊತ್ತದ ಚೆಕ್ಕನ್ನು ಪದಾಧಿಕಾರಿಗಳು ಸಿಐಟಿಯು ಮುಖಂಡರಿಗೆ ಸಮರ್ಪಿಸಿದರು. ಗುತ್ತಿಗೆ ಕಾರ್ಮಿಕರಿಂದ ಸಂಗ್ರಹವಾಗಿದ್ದ ್ಙ 25 ಸಾವಿರವನ್ನು ಎಲ್. ರಂಗೇಗೌಡ ನೀಡಿದರು. <br /> <br /> <strong>ಜಾಗೃತಿ ಜಾಥಾ </strong> <br /> ಶಿವಮೊಗ್ಗ: ಎನ್.ಸಿ.ಸಿ. ಸೋಮವಾರ ಪರಿಸರ ಜಾಗೃತಿ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.<br /> <br /> ಕರ್ನಾಟಕ ಸಂಘದಿಂದ ಸಹ್ಯಾದ್ರಿ ಕಾಲೇಜಿನವರೆಗೆ ಪರಿಸರ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ನಗರದ ಶಾಲಾ -ಕಾಲೇಜಿನಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಎ.ಎನ್.ಓ. ಅಧಿಕಾರಿಗಳು, ಯೋಧರು ಜಾಥಾದಲ್ಲಿ ಪಾಲ್ಗೊಂಡಿದ್ದರು. ನಂತರ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸೇರಿ 300ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು.<br /> <br /> ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಕೆ.ಎನ್.ಎನ್. ಮೂರ್ತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭದ್ರಾವತಿ: ಭಾರತೀಯ ಉಕ್ಕು ಪ್ರಾಧಿಕಾರದ (ಸೈಲ್) ಅಂಗಸಂಸ್ಥೆಗಳ ಉಕ್ಕು ಕಾರ್ಮಿಕರ ಒಕ್ಕೂಟ ಕಾರ್ಮಿಕರ ಹಿತ ಕಾಯ್ದುಕೊಳ್ಳುವ ಜತೆಗೆ ಗುತ್ತಿಗೆ ಕಾರ್ಮಿಕರ ರಕ್ಷಣೆಗೂ ಸಹ ಮುಂದಾಗಿದೆ ಎಂದು ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ ಹೇಳಿದರು.<br /> <br /> ಇಲ್ಲಿನ ಕಾರ್ಖಾನೆ ಮುಂಭಾಗದಲ್ಲಿ ಶುಕ್ರವಾರ ಜರುಗಿದ ಕಾರ್ಮಿಕರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> 2007ರಿಂದ ಸೈಲ್ ಕಾರ್ಮಿಕರ ವೇತನ ಒಪ್ಪಂದ ಕುರಿತಂತೆ ನಡೆಯುತ್ತಿದ್ದ ಮಾತುಕತೆ ಹೋರಾಟ, ಮುಷ್ಕರ ಹಾಗೂ ಪ್ರತಿಭಟನೆಗಳ ನಂತರ ಇತ್ಯರ್ಥವಾದ ಹಿನ್ನೆಲೆಯಲ್ಲಿ ಉಕ್ಕು ಕಾರ್ಮಿಕರ ಒಕ್ಕೂಟಕ್ಕೆ ಜಯ ಸಿಕ್ಕಿದೆ. ಹೀಗಾಗಿ ಅವರನ್ನು ಅಭಿನಂದಿಸುವುದು ಸಂಘದ ಕರ್ತವ್ಯ.<br /> <br /> ಈ ಹೋರಾಟ ಫಲವಾಗಿ ಗುತ್ತಿಗೆ ಕಾರ್ಮಿಕರಿಗೂ ಸಹ ಹೆಚ್ಚುವರಿ ್ಙ 1,000ನಗದು ದೊರೆಯಿತು. ಇದಕ್ಕೆ ಸಂಪೂರ್ಣವಾಗಿ ಸಿಐಟಿಯು ನೇತೃತ್ವ ಒಕ್ಕೂಟ ಕಾರಣ ಹಾಗಾಗಿ ಇದರ ಮುಖಂಡರು ನಮ್ಮ ಅಭಿನಂದನೆಗೆ ಅರ್ಹರು ಎಂದರು.<br /> <br /> ರಾಜ್ಯ ಸರ್ಕಾರ ಮೂರನೇ ಬಾರಿಗೆ ಕೇಂದ್ರ ಗಣಿ ಮಂತ್ರಾಲಯಕ್ಕೆ ಸಂಡೂರು ತಾಲ್ಲೂಕು ಬಾವಿಹಳ್ಳಿ ಪ್ರದೇಶದ 140ಹೆಕ್ಟೇರ್ ಭೂಮಿ ಶಿಫಾರಸು ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬಾಕಿ ಇದೆ ಎಂದರು.<br /> <br /> ಇದೇ ಸಂದರ್ಭದಲ್ಲಿ ಕಾರ್ಮಿಕರಿಂದ ಸಂಗ್ರಹಿಸಿದ ್ಙ 2.75ಲಕ್ಷ ಮೊತ್ತದ ಚೆಕ್ಕನ್ನು ಪದಾಧಿಕಾರಿಗಳು ಸಿಐಟಿಯು ಮುಖಂಡರಿಗೆ ಸಮರ್ಪಿಸಿದರು. ಗುತ್ತಿಗೆ ಕಾರ್ಮಿಕರಿಂದ ಸಂಗ್ರಹವಾಗಿದ್ದ ್ಙ 25 ಸಾವಿರವನ್ನು ಎಲ್. ರಂಗೇಗೌಡ ನೀಡಿದರು. <br /> <br /> <strong>ಜಾಗೃತಿ ಜಾಥಾ </strong> <br /> ಶಿವಮೊಗ್ಗ: ಎನ್.ಸಿ.ಸಿ. ಸೋಮವಾರ ಪರಿಸರ ಜಾಗೃತಿ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.<br /> <br /> ಕರ್ನಾಟಕ ಸಂಘದಿಂದ ಸಹ್ಯಾದ್ರಿ ಕಾಲೇಜಿನವರೆಗೆ ಪರಿಸರ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ನಗರದ ಶಾಲಾ -ಕಾಲೇಜಿನಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಎ.ಎನ್.ಓ. ಅಧಿಕಾರಿಗಳು, ಯೋಧರು ಜಾಥಾದಲ್ಲಿ ಪಾಲ್ಗೊಂಡಿದ್ದರು. ನಂತರ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸೇರಿ 300ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು.<br /> <br /> ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಕೆ.ಎನ್.ಎನ್. ಮೂರ್ತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>