<p><strong>ವಿಶ್ವಸಂಸ್ಥೆ (ಪಿಟಿಐ):</strong> ಉಗ್ರರ ಬೆದರಿಕೆಗೆ ತಾನು ಬಗ್ಗುವುದಿಲ್ಲ ಎಂದು ಪಾಕಿಸ್ತಾನ ಮಾನವ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಯೂಸೂಫ್ಝೈ ವಿಶ್ವಸಂಸ್ಥೆಗೆ ಸ್ಪಷ್ಟಪಡಿಸಿದಳು.<br /> <br /> ತಾಲಿಬಾನ್ ಉಗ್ರರ ದಾಳಿಗೆ ಒಳಗಾದ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಲಾಲ, `ಗುಂಡುಗಳಿಂದ ನಮ್ಮನ್ನು ಸುಮ್ಮನಾಗಿಸಬಹುದು ಎಂದು ಅವರು ತಿಳಿದಿದ್ದಾರೆ. ಆದರೆ ಅವರು ಇದರಲ್ಲಿ ವಿಫಲರಾದರು' ಎಂದರು. ಶುಕ್ರವಾರಕ್ಕೆ 16ನೇ ವರ್ಷಕ್ಕೆ ಕಾಲಿಟ್ಟ ಮಲಾಲ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದು ವಿಶೇಷ ಎನಿಸಿತು.<br /> <br /> ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಈ ಮೂಲಕ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಮನವಿಮಾಡಿಕೊಂಡ ಮಲಾಲ, ಇದಕ್ಕಾಗಿ ಅಧಿಕ ಶ್ರಮವಹಿಸಬೇಕು ಎಂದರು. ನಾವು ನಮ್ಮ ಪುಸ್ತಕ ಹಾಗೂ ಪೆನ್ನುಗಳನ್ನು ಕೈಗೈಗೆತ್ತಿಕೊಳ್ಳಬೇಕು. ಇವುಗಳು ನಮ್ಮ ಶಕ್ತಿಯುತ ಆಯುಧಗಳಾಗಿವೆ ಎಂದಳು.<br /> <br /> `ಒಂದು ಮಗು, ಒಬ್ಬ ಶಿಕ್ಷಕ ಒಂದು ಪೆನ್ನು ಹಾಗೂ ಒಂದು ಪುಸ್ತಕ ಇಡೀ ವಿಶ್ವದಲ್ಲೆ ಬದಲಾವಣೆ ತರಬಲ್ಲದು' ಎಂದು ಪ್ರತಿಪಾದಿಸಿದ ಮಲಾಲ ಈ ಮೂಲಕ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು. ಶಿಕ್ಷಣದಿಂದ ಮಾತ್ರ ಉಗ್ರರಿಗೆ ಪಾಠ ಕಲಿಸಬಹುದಾಗಿದೆ.<br /> <br /> ನನ್ನ ಗುರಿ ಹಾಗೂ ಮಹತ್ವಾಕಾಂಕ್ಷೆಯನ್ನು ಬದಲಾಯಿಸುವುದಾಗಿ ಉಗ್ರರು ತಿಳಿದಿದ್ದರು. ಆದರೆ ನನ್ನ ಜೀವನದಲ್ಲಿ ಏನೂ ಬದಲಾವಣೆ ಆಗಲಿಲ್ಲ ಎಂದಳು.<br /> ಮಲಾಲ ಜನ್ಮದಿನದ ಅಂಗವಾಗಿ ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆ ಜುಲೈ 12 ಅನ್ನು `ಮಲಾಲ ದಿನ'ವನ್ನಾಗಿ ಘೋಷಿಸಿತು.<br /> <br /> ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಸಂಕಲ್ಪವನ್ನು ಈ ದಿನದ ಅಂಗವಾಗಿ ಮಾಡಲಾಯಿತು. ಬಾಲಕಿಯರ ಶಿಕ್ಷಣಕ್ಕೆ ಮಲಾಲ ಪ್ರೋತ್ಸಾಹಿಸುವುದನ್ನು ವಿರೋಧಿಸಿ ತಾವು ಆಕೆಯ ಮೇಲೆ ದಾಳಿ ಮಾಡಿದ್ದಾಗಿ ತಾಲಿಬಾನಿಗಳು ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ (ಪಿಟಿಐ):</strong> ಉಗ್ರರ ಬೆದರಿಕೆಗೆ ತಾನು ಬಗ್ಗುವುದಿಲ್ಲ ಎಂದು ಪಾಕಿಸ್ತಾನ ಮಾನವ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಯೂಸೂಫ್ಝೈ ವಿಶ್ವಸಂಸ್ಥೆಗೆ ಸ್ಪಷ್ಟಪಡಿಸಿದಳು.<br /> <br /> ತಾಲಿಬಾನ್ ಉಗ್ರರ ದಾಳಿಗೆ ಒಳಗಾದ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಲಾಲ, `ಗುಂಡುಗಳಿಂದ ನಮ್ಮನ್ನು ಸುಮ್ಮನಾಗಿಸಬಹುದು ಎಂದು ಅವರು ತಿಳಿದಿದ್ದಾರೆ. ಆದರೆ ಅವರು ಇದರಲ್ಲಿ ವಿಫಲರಾದರು' ಎಂದರು. ಶುಕ್ರವಾರಕ್ಕೆ 16ನೇ ವರ್ಷಕ್ಕೆ ಕಾಲಿಟ್ಟ ಮಲಾಲ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದು ವಿಶೇಷ ಎನಿಸಿತು.<br /> <br /> ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಈ ಮೂಲಕ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಮನವಿಮಾಡಿಕೊಂಡ ಮಲಾಲ, ಇದಕ್ಕಾಗಿ ಅಧಿಕ ಶ್ರಮವಹಿಸಬೇಕು ಎಂದರು. ನಾವು ನಮ್ಮ ಪುಸ್ತಕ ಹಾಗೂ ಪೆನ್ನುಗಳನ್ನು ಕೈಗೈಗೆತ್ತಿಕೊಳ್ಳಬೇಕು. ಇವುಗಳು ನಮ್ಮ ಶಕ್ತಿಯುತ ಆಯುಧಗಳಾಗಿವೆ ಎಂದಳು.<br /> <br /> `ಒಂದು ಮಗು, ಒಬ್ಬ ಶಿಕ್ಷಕ ಒಂದು ಪೆನ್ನು ಹಾಗೂ ಒಂದು ಪುಸ್ತಕ ಇಡೀ ವಿಶ್ವದಲ್ಲೆ ಬದಲಾವಣೆ ತರಬಲ್ಲದು' ಎಂದು ಪ್ರತಿಪಾದಿಸಿದ ಮಲಾಲ ಈ ಮೂಲಕ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು. ಶಿಕ್ಷಣದಿಂದ ಮಾತ್ರ ಉಗ್ರರಿಗೆ ಪಾಠ ಕಲಿಸಬಹುದಾಗಿದೆ.<br /> <br /> ನನ್ನ ಗುರಿ ಹಾಗೂ ಮಹತ್ವಾಕಾಂಕ್ಷೆಯನ್ನು ಬದಲಾಯಿಸುವುದಾಗಿ ಉಗ್ರರು ತಿಳಿದಿದ್ದರು. ಆದರೆ ನನ್ನ ಜೀವನದಲ್ಲಿ ಏನೂ ಬದಲಾವಣೆ ಆಗಲಿಲ್ಲ ಎಂದಳು.<br /> ಮಲಾಲ ಜನ್ಮದಿನದ ಅಂಗವಾಗಿ ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆ ಜುಲೈ 12 ಅನ್ನು `ಮಲಾಲ ದಿನ'ವನ್ನಾಗಿ ಘೋಷಿಸಿತು.<br /> <br /> ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಸಂಕಲ್ಪವನ್ನು ಈ ದಿನದ ಅಂಗವಾಗಿ ಮಾಡಲಾಯಿತು. ಬಾಲಕಿಯರ ಶಿಕ್ಷಣಕ್ಕೆ ಮಲಾಲ ಪ್ರೋತ್ಸಾಹಿಸುವುದನ್ನು ವಿರೋಧಿಸಿ ತಾವು ಆಕೆಯ ಮೇಲೆ ದಾಳಿ ಮಾಡಿದ್ದಾಗಿ ತಾಲಿಬಾನಿಗಳು ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>