<p><strong>ಲಖನೌ (ಪಿಟಿಐ):</strong> ಧಾರಾಕಾರ ಮಳೆಯಿಂದಾಗಿ ಉತ್ತರ ಪ್ರದೇಶದಲ್ಲಿ ಇದುವರೆಗೆ 28 ಜನರು ಮೃತಪಟ್ಟಿದ್ದಾರೆ. ರಾಜ್ಯದ 600 ಗ್ರಾಮಗಳು ನೆರೆಪೀಡಿತವಾಗಿದ್ದು, ಐದು ಲಕ್ಷಕ್ಕೂ ಅಧಿಕ ಜನರು ಭಾರಿ ಮಳೆಯಿಂದ ಬಾಧಿತರಾಗಿದ್ದಾರೆ.<br /> <br /> ರಕ್ಷಣಾ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.<br /> <br /> <strong>ಹಣ ಬಿಡುಗಡೆ: </strong>ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶುಕ್ರವಾರ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.<br /> <br /> ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಮುಜಾಫರ್ನಗರ, ಸಹನಾಪುರ ಜಿಲ್ಲೆ ಸೇರಿದಂತೆ 13 ಜಿಲ್ಲೆಗಳ ಸ್ಥಿತಿಗತಿಗಳ ಪರಿಶೀಲನೆ ನಡೆಸಿದ ಅಖಿಲೇಶ್ ಯಾದವ್ ಅವರು ಪರಿಹಾರಕಾರ್ಯಕ್ಕಾಗಿ ್ಙ 50 ಲಕ್ಷ ಬಿಡುಗಡೆ ಮಾಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಮಧ್ಯೆ, ಶಾರದಾ ಮತ್ತು ಗಂಗಾ ನದಿಗಳು ಅಪಾಯದ ಮಟ್ಟಕ್ಕೆ ಸಮೀಪದಲ್ಲೇ ಹರಿಯುತ್ತಿವೆ.<br /> <br /> <strong>ಉತ್ತರ ಪ್ರದೇಶ-ಹರಿಯಾಣ ಸಂಪರ್ಕ ಕಡಿತ: </strong>ಶಾಮ್ಲಿ ಜಿಲ್ಲೆಯ ಕೈರಾಣದಲ್ಲಿ ಯಮುನಾ ನದಿಯು ಸೇತುವೆಯ ಮೇಲೆ ಹರಿಯುತ್ತಿರುವುದರಿಂದ ಸತತ ನಾಲ್ಕನೇ ದಿನವೂ ಉತ್ತರ ಪ್ರದೇಶ ಮತ್ತು ಹರಿಯಾಣದ ನಡುವಿನ ಸಂಪರ್ಕ ಕಡಿತಗೊಂಡಿತ್ತು. ಮಳೆ ಹಿನ್ನೆಲೆಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಪರಿಣಾಮವಾಗಿ ನಾಲ್ಕು ದಿನಗಳ ಹಿಂದೆ ಈ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.<br /> <br /> <strong>ಡಿಎನ್ಎ ಮಾದರಿ ಸಂಗ್ರಹಕ್ಕೆ ಸೂಚನೆ:</strong> ನದಿಗಳಲ್ಲಿ ಪತ್ತೆಯಾಗುವ ಅಪರಿಚಿತ ಶವಗಳ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿಡುವಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಎಲ್ಲಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಶುಕ್ರವಾರ ಸೂಚಿಸಿದೆ.<br /> <br /> `ಮೃತರ ಗುರುತನ್ನು ಪತ್ತೆ ಹಚ್ಚುವುದಕ್ಕಾಗಿ ಎಲ್ಲಾ ಶವಗಳ ಡಿಎನ್ಎ ಮಾದರಿಗಳನ್ನು ಸಂಗ್ರಹಿಸುವಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ' ಎಂದು ಎಸ್ಟಿಎಫ್ ಐಜಿ ಆಶೀಷ್ ಗುಪ್ತಾ ತಿಳಿಸಿದ್ದಾರೆ.<br /> <br /> <strong>ವಿಶೇಷ ರೈಲು:</strong> ಉತ್ತರಾಖಂಡ ಪ್ರವಾಹ ಪೀಡಿತರ ಪ್ರಯಾಣಕ್ಕಾಗಿ ಉತ್ತರವಲಯದ ರೈಲ್ವೆಯು ಹರಿದ್ವಾರದಿಂದ ದೆಹಲಿ, ಚಂಡೀಗಡ ಮತ್ತು ಲಖನೌಗೆ ಮೂರು ವಿಶೇಷ ರೈಲುಗಳನ್ನು ಆರಂಭಿಸಿದೆ.<br /> <br /> <strong>ಆಂಧ್ರದಿಂದಲೂ ರೈಲು:</strong> ಉತ್ತರಾಖಂಡದಲ್ಲಿ ಸಿಲುಕಿರುವ ಆಂಧ್ರಪ್ರದೇಶದ ಜನರನ್ನು ಕರೆತರುವುದಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.<br /> ಶುಕ್ರವಾರ ರಾತ್ರಿ ಸಿಕಂದರಾಬಾದ್ನಿಂದ ದೆಹಲಿಗೆ ತೆರಳಲಿರುವ ವಿಶೇಷ ರೈಲು, ಉತ್ತರಾಖಂಡದಿಂದ ದೆಹಲಿಗೆ ಬಂದಿರುವ ರಾಜ್ಯದ ಜನರನ್ನು ಭಾನುವಾರ ಸಿಕಂದರಾಬಾದ್ಗೆ ಕರೆತರುವ ನಿರ್ಧಾರ ಕೈಗೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ (ಪಿಟಿಐ):</strong> ಧಾರಾಕಾರ ಮಳೆಯಿಂದಾಗಿ ಉತ್ತರ ಪ್ರದೇಶದಲ್ಲಿ ಇದುವರೆಗೆ 28 ಜನರು ಮೃತಪಟ್ಟಿದ್ದಾರೆ. ರಾಜ್ಯದ 600 ಗ್ರಾಮಗಳು ನೆರೆಪೀಡಿತವಾಗಿದ್ದು, ಐದು ಲಕ್ಷಕ್ಕೂ ಅಧಿಕ ಜನರು ಭಾರಿ ಮಳೆಯಿಂದ ಬಾಧಿತರಾಗಿದ್ದಾರೆ.<br /> <br /> ರಕ್ಷಣಾ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.<br /> <br /> <strong>ಹಣ ಬಿಡುಗಡೆ: </strong>ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶುಕ್ರವಾರ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.<br /> <br /> ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಮುಜಾಫರ್ನಗರ, ಸಹನಾಪುರ ಜಿಲ್ಲೆ ಸೇರಿದಂತೆ 13 ಜಿಲ್ಲೆಗಳ ಸ್ಥಿತಿಗತಿಗಳ ಪರಿಶೀಲನೆ ನಡೆಸಿದ ಅಖಿಲೇಶ್ ಯಾದವ್ ಅವರು ಪರಿಹಾರಕಾರ್ಯಕ್ಕಾಗಿ ್ಙ 50 ಲಕ್ಷ ಬಿಡುಗಡೆ ಮಾಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಮಧ್ಯೆ, ಶಾರದಾ ಮತ್ತು ಗಂಗಾ ನದಿಗಳು ಅಪಾಯದ ಮಟ್ಟಕ್ಕೆ ಸಮೀಪದಲ್ಲೇ ಹರಿಯುತ್ತಿವೆ.<br /> <br /> <strong>ಉತ್ತರ ಪ್ರದೇಶ-ಹರಿಯಾಣ ಸಂಪರ್ಕ ಕಡಿತ: </strong>ಶಾಮ್ಲಿ ಜಿಲ್ಲೆಯ ಕೈರಾಣದಲ್ಲಿ ಯಮುನಾ ನದಿಯು ಸೇತುವೆಯ ಮೇಲೆ ಹರಿಯುತ್ತಿರುವುದರಿಂದ ಸತತ ನಾಲ್ಕನೇ ದಿನವೂ ಉತ್ತರ ಪ್ರದೇಶ ಮತ್ತು ಹರಿಯಾಣದ ನಡುವಿನ ಸಂಪರ್ಕ ಕಡಿತಗೊಂಡಿತ್ತು. ಮಳೆ ಹಿನ್ನೆಲೆಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಪರಿಣಾಮವಾಗಿ ನಾಲ್ಕು ದಿನಗಳ ಹಿಂದೆ ಈ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.<br /> <br /> <strong>ಡಿಎನ್ಎ ಮಾದರಿ ಸಂಗ್ರಹಕ್ಕೆ ಸೂಚನೆ:</strong> ನದಿಗಳಲ್ಲಿ ಪತ್ತೆಯಾಗುವ ಅಪರಿಚಿತ ಶವಗಳ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿಡುವಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಎಲ್ಲಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಶುಕ್ರವಾರ ಸೂಚಿಸಿದೆ.<br /> <br /> `ಮೃತರ ಗುರುತನ್ನು ಪತ್ತೆ ಹಚ್ಚುವುದಕ್ಕಾಗಿ ಎಲ್ಲಾ ಶವಗಳ ಡಿಎನ್ಎ ಮಾದರಿಗಳನ್ನು ಸಂಗ್ರಹಿಸುವಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ' ಎಂದು ಎಸ್ಟಿಎಫ್ ಐಜಿ ಆಶೀಷ್ ಗುಪ್ತಾ ತಿಳಿಸಿದ್ದಾರೆ.<br /> <br /> <strong>ವಿಶೇಷ ರೈಲು:</strong> ಉತ್ತರಾಖಂಡ ಪ್ರವಾಹ ಪೀಡಿತರ ಪ್ರಯಾಣಕ್ಕಾಗಿ ಉತ್ತರವಲಯದ ರೈಲ್ವೆಯು ಹರಿದ್ವಾರದಿಂದ ದೆಹಲಿ, ಚಂಡೀಗಡ ಮತ್ತು ಲಖನೌಗೆ ಮೂರು ವಿಶೇಷ ರೈಲುಗಳನ್ನು ಆರಂಭಿಸಿದೆ.<br /> <br /> <strong>ಆಂಧ್ರದಿಂದಲೂ ರೈಲು:</strong> ಉತ್ತರಾಖಂಡದಲ್ಲಿ ಸಿಲುಕಿರುವ ಆಂಧ್ರಪ್ರದೇಶದ ಜನರನ್ನು ಕರೆತರುವುದಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.<br /> ಶುಕ್ರವಾರ ರಾತ್ರಿ ಸಿಕಂದರಾಬಾದ್ನಿಂದ ದೆಹಲಿಗೆ ತೆರಳಲಿರುವ ವಿಶೇಷ ರೈಲು, ಉತ್ತರಾಖಂಡದಿಂದ ದೆಹಲಿಗೆ ಬಂದಿರುವ ರಾಜ್ಯದ ಜನರನ್ನು ಭಾನುವಾರ ಸಿಕಂದರಾಬಾದ್ಗೆ ಕರೆತರುವ ನಿರ್ಧಾರ ಕೈಗೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>