<p><span style="font-size: 26px;"><strong>ತುಮಕೂರು:</strong> ನಗರದ ಅಂತರಸನಹಳ್ಳಿ ಬಡಾವಣೆಯಲ್ಲಿ ನೂತನ ಉದ್ಯಾನ ನಿರ್ಮಿಸಲಾಗುತ್ತಿದೆ. ಉದ್ಯಾನದ ಜಾಗದಲ್ಲೇ ಕೆಲವರು ರಸ್ತೆ ನಿರ್ಮಿಸಿ, ಅತಿಕ್ರಮಣಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.</span><br /> <br /> ಲೇಔಟ್ ವ್ಯಾಪ್ತಿಯಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮೇಲ್ಭಾಗದ ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಕೆಲವರು ಉದ್ಯಾನದ ಒಂದು ಬದಿಯನ್ನೇ ರಸ್ತೆ ಮಾಡಿಕೊಂಡಿದ್ದಾರೆ.<br /> <br /> ಈ ಮನೆಗಳಿಗೆ ತೆರಳಲು ಬೇರೆ ರಸ್ತೆ ಇದ್ದರೂ ಅದನ್ನು ಬಳಸದೆ ಹೊಸ ರಸ್ತೆ ಮಾಡಿಕೊಂಡಿದ್ದಾರೆ. ಈ ರಸ್ತೆ ಬಳಕೆಯಾದರೆ ಅಪಾರ ಸಂಖ್ಯೆಯ ವಾಹನಗಳು ಉದ್ಯಾನದೊಳಗೆ ಸಂಚರಿಸುತ್ತವೆ. ಇದರಿಂದ ನೈಜ ಆಶಯಕ್ಕೆ ಭಂಗ ಬರುತ್ತದೆ. ಉದ್ಯಾನ ನಿರ್ಮಾಣವಾಗದಿದ್ದರೆ ಈ ಭಾಗದ ನಾಗರಿಕರಿಗೆ ತೊಂದರೆಯಾಗಲಿದೆ.<br /> <br /> ನಿರ್ಮಾಣದ ಹೊಣೆ ಹೊತ್ತ ಟುಡ ರಸ್ತೆ ತೆರವುಗೊಳಿಸಬೇಕು ಎಂದು ಡಿ.ಕೆ.ನಾರಾಯಣ, ಲೋಕೇಶ್, ಸ್ವಾಮಿ, ನಾಗರಾಜ್, ಶಿವಣ್ಣ, ರಂಗಪ್ಪ, ರಾಜಣ್ಣ ಒತ್ತಾಯಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ತುಮಕೂರು:</strong> ನಗರದ ಅಂತರಸನಹಳ್ಳಿ ಬಡಾವಣೆಯಲ್ಲಿ ನೂತನ ಉದ್ಯಾನ ನಿರ್ಮಿಸಲಾಗುತ್ತಿದೆ. ಉದ್ಯಾನದ ಜಾಗದಲ್ಲೇ ಕೆಲವರು ರಸ್ತೆ ನಿರ್ಮಿಸಿ, ಅತಿಕ್ರಮಣಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.</span><br /> <br /> ಲೇಔಟ್ ವ್ಯಾಪ್ತಿಯಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮೇಲ್ಭಾಗದ ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಕೆಲವರು ಉದ್ಯಾನದ ಒಂದು ಬದಿಯನ್ನೇ ರಸ್ತೆ ಮಾಡಿಕೊಂಡಿದ್ದಾರೆ.<br /> <br /> ಈ ಮನೆಗಳಿಗೆ ತೆರಳಲು ಬೇರೆ ರಸ್ತೆ ಇದ್ದರೂ ಅದನ್ನು ಬಳಸದೆ ಹೊಸ ರಸ್ತೆ ಮಾಡಿಕೊಂಡಿದ್ದಾರೆ. ಈ ರಸ್ತೆ ಬಳಕೆಯಾದರೆ ಅಪಾರ ಸಂಖ್ಯೆಯ ವಾಹನಗಳು ಉದ್ಯಾನದೊಳಗೆ ಸಂಚರಿಸುತ್ತವೆ. ಇದರಿಂದ ನೈಜ ಆಶಯಕ್ಕೆ ಭಂಗ ಬರುತ್ತದೆ. ಉದ್ಯಾನ ನಿರ್ಮಾಣವಾಗದಿದ್ದರೆ ಈ ಭಾಗದ ನಾಗರಿಕರಿಗೆ ತೊಂದರೆಯಾಗಲಿದೆ.<br /> <br /> ನಿರ್ಮಾಣದ ಹೊಣೆ ಹೊತ್ತ ಟುಡ ರಸ್ತೆ ತೆರವುಗೊಳಿಸಬೇಕು ಎಂದು ಡಿ.ಕೆ.ನಾರಾಯಣ, ಲೋಕೇಶ್, ಸ್ವಾಮಿ, ನಾಗರಾಜ್, ಶಿವಣ್ಣ, ರಂಗಪ್ಪ, ರಾಜಣ್ಣ ಒತ್ತಾಯಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>