<p>ಭಟ್ಕಳ: ಉದ್ಯೋಗ ಸೃಷ್ಟಿಗೆ ಮತ್ತು ಲಭ್ಯತೆಗೆ ಸದ್ಯದ ಪರಿಸ್ಥಿತಿಯಲ್ಲಿ ಭಾರತ ದೇಶಕ್ಕಿಂತ ಸಂಪದ್ಬರಿತ ದೇಶ ಮತ್ತೊಂದಿಲ್ಲ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ಮೊಹ್ಸಿನ್ ಹೇಳಿದರು.<br /> <br /> ಇಲ್ಲಿನ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಕಂಪ್ಯೂಟರ್ ಅಪ್ಲಿಕೇಶನ್ ಸಂಸ್ಥೆಯಲ್ಲಿ ಈಚೆಗೆ ನಡೆದ 16ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.<br /> <br /> ಯಶಸ್ಸು ಎನ್ನುವುದು ಶ್ರದ್ದೆ ಮತ್ತು ಪ್ರಾಮಾಣಕತೆ ಮೇಲೆ ನಿಂತಿದೆ ಎಂದು ಹೇಳಿದ ಅವರು ಯಾವುದೇ ಉದ್ಯೋಗವಿರಲಿ, ಅದನ್ನು ಮಾಡುವಲ್ಲಿ ಪ್ರೀತಿ, ಶ್ರದ್ಧೆ ಇರಲಿ ಎಂದರು.<br /> <br /> ಬೆಳಗಾವಿ ಜಿಲ್ಲಾ ನ್ಯಾಯಾಧೀಶ ರವಿ ಎಂ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನಿನ ತಿಳುವಳಿಕೆ ಅತೀ ಅಗತ್ಯ. ಶಿಕ್ಷಣ ಸಂಸ್ಥೆಗಳು ಆಗಾಗ ಕಾನೂನು ತಿಳಿವಳಿಕೆ ಬಗ್ಗೆ ಕಾರ್ಯಾಗಾರ ಏರ್ಪಡಿಸುವಂತಾಗಬೇಕು ಎಂದರು. <br /> <br /> ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಶೌಕತ್ ಅಜೀಮ್ ಮಾತನಾಡಿ, ಶಿಕ್ಷಣವು ಪ್ರತಿಯೋರ್ವರ ಬದುಕಿನಲ್ಲಿ ಶಿಸ್ತು, ಸಂಯಮವನ್ನು ಮೂಡಿಸುತ್ತದೆ, ಜಗತ್ತು ವಿಶಾಲವಾಗಿದ್ದು ವಿದ್ಯಾರ್ಥಿಗಳು ತಮಗೆ ಬೇಕಾದಂತೆ ಉತ್ತಮ ಭವಿಷ್ಯ ರೂಪಿಸಲು ವಿಪುಲ ಅವಕಾಶಗಳಿವೆ ಎಂದರು.<br /> <br /> ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಕಾಶೀಂಜಿ ಅನ್ಸಾರ್ ಅಧ್ಯಕ್ಷತೆ ವಹಿಸಿದ್ದರು. ಇಸ್ಮಾಯಿಲ್ ಸಿದ್ದಿಕ್ಡಾ.ಸೈಯದ್ ಸಲೀಮ್ ಮುಂತಾದವರು ಉಪಸ್ಥಿತರಿದ್ದರು. <br /> <br /> ಪ್ರಾಚಾರ್ಯ ಜಾಫ್ರುಲ್ಲಾ ಕೊಕಟ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಮೊಹಸೀನ್ ಕೆ ಸ್ವಾಗತಿಸಿದರು. ಪ್ರೊ.ಅಫ್ತಾಬ್ ಕಮ್ರಿ ವಂದಿಸಿದರು. ಪಿ.ಡಿ.ಮೋಹನ ಮೇಸ್ತ ಬಹುಮಾನ ವಿತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಟ್ಕಳ: ಉದ್ಯೋಗ ಸೃಷ್ಟಿಗೆ ಮತ್ತು ಲಭ್ಯತೆಗೆ ಸದ್ಯದ ಪರಿಸ್ಥಿತಿಯಲ್ಲಿ ಭಾರತ ದೇಶಕ್ಕಿಂತ ಸಂಪದ್ಬರಿತ ದೇಶ ಮತ್ತೊಂದಿಲ್ಲ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ಮೊಹ್ಸಿನ್ ಹೇಳಿದರು.<br /> <br /> ಇಲ್ಲಿನ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಕಂಪ್ಯೂಟರ್ ಅಪ್ಲಿಕೇಶನ್ ಸಂಸ್ಥೆಯಲ್ಲಿ ಈಚೆಗೆ ನಡೆದ 16ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.<br /> <br /> ಯಶಸ್ಸು ಎನ್ನುವುದು ಶ್ರದ್ದೆ ಮತ್ತು ಪ್ರಾಮಾಣಕತೆ ಮೇಲೆ ನಿಂತಿದೆ ಎಂದು ಹೇಳಿದ ಅವರು ಯಾವುದೇ ಉದ್ಯೋಗವಿರಲಿ, ಅದನ್ನು ಮಾಡುವಲ್ಲಿ ಪ್ರೀತಿ, ಶ್ರದ್ಧೆ ಇರಲಿ ಎಂದರು.<br /> <br /> ಬೆಳಗಾವಿ ಜಿಲ್ಲಾ ನ್ಯಾಯಾಧೀಶ ರವಿ ಎಂ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನಿನ ತಿಳುವಳಿಕೆ ಅತೀ ಅಗತ್ಯ. ಶಿಕ್ಷಣ ಸಂಸ್ಥೆಗಳು ಆಗಾಗ ಕಾನೂನು ತಿಳಿವಳಿಕೆ ಬಗ್ಗೆ ಕಾರ್ಯಾಗಾರ ಏರ್ಪಡಿಸುವಂತಾಗಬೇಕು ಎಂದರು. <br /> <br /> ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಶೌಕತ್ ಅಜೀಮ್ ಮಾತನಾಡಿ, ಶಿಕ್ಷಣವು ಪ್ರತಿಯೋರ್ವರ ಬದುಕಿನಲ್ಲಿ ಶಿಸ್ತು, ಸಂಯಮವನ್ನು ಮೂಡಿಸುತ್ತದೆ, ಜಗತ್ತು ವಿಶಾಲವಾಗಿದ್ದು ವಿದ್ಯಾರ್ಥಿಗಳು ತಮಗೆ ಬೇಕಾದಂತೆ ಉತ್ತಮ ಭವಿಷ್ಯ ರೂಪಿಸಲು ವಿಪುಲ ಅವಕಾಶಗಳಿವೆ ಎಂದರು.<br /> <br /> ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಕಾಶೀಂಜಿ ಅನ್ಸಾರ್ ಅಧ್ಯಕ್ಷತೆ ವಹಿಸಿದ್ದರು. ಇಸ್ಮಾಯಿಲ್ ಸಿದ್ದಿಕ್ಡಾ.ಸೈಯದ್ ಸಲೀಮ್ ಮುಂತಾದವರು ಉಪಸ್ಥಿತರಿದ್ದರು. <br /> <br /> ಪ್ರಾಚಾರ್ಯ ಜಾಫ್ರುಲ್ಲಾ ಕೊಕಟ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಮೊಹಸೀನ್ ಕೆ ಸ್ವಾಗತಿಸಿದರು. ಪ್ರೊ.ಅಫ್ತಾಬ್ ಕಮ್ರಿ ವಂದಿಸಿದರು. ಪಿ.ಡಿ.ಮೋಹನ ಮೇಸ್ತ ಬಹುಮಾನ ವಿತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>