<p><strong>ಸವದತ್ತಿ</strong>: ಇಲ್ಲಿನ ಸ್ಥಳೀಯ ಯಂಗ್ ಜನರೇಷನ್ ಶಿಕ್ಷಣ ಸಂಸ್ಥೆ ಮತ್ತು ಎನ್ಕರೇಜ್ ಸಂಸ್ಥೆಯವರು ಜಂಟಿಯಾಗಿ ಭಾನುವಾರ, ಕೆಎಎಸ್, ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಿತ್ತು.<br /> <br /> ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ರಾಜ್ಯಧಾನಿ ಬೆಂಗಳೂರು, ಮೈಸೂರು, ದಾವಣಗೇರಿ, ಬೀದರ-ಗುಲ್ಬರ್ಗ ಮುಂತಾದ ಕಡೆಗಳಿಂದ ಸುಮಾರು ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರು.<br /> <br /> ಬಂದ ಎಲ್ಲ ಪರೀಕ್ಷಾರ್ಥಿಗಳ ಮನರಂಜನೆಗಾಗಿ ಒಂದು ಸುಂದರ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೃತ್ಯ ಕಾರ್ಯಕ್ರಮ; ಅನುಭವಿಗಳಿಂದ, ಬುದ್ಧಿಜೀವಿಗಳಿಂದ ಉತ್ತಮ ಗುಣ ಮಟ್ಟದ ಉಪನ್ಯಾಸ ಏರ್ಪಡಿಸಲಾಗಿತ್ತು.<br /> <br /> ಕಾರ್ಯಕ್ರಮದ ನಂತರ ಭಾರಿ ಭೋಜನ ಏರ್ಪಡಿಸಲಾಗಿತ್ತು. ಇಲ್ಲಿ ಗೋಧಿ ಹುಗ್ಗಿ, ಶೇಂಗಾ ಹೋಳಿಗೆ, ಜೋಳದ ರೊಟ್ಟಿ, ಚಪಾತಿ, ವಿವಿಧ ಬಗೆಯ ಚಟ್ನಿಗಳು, ಅನ್ನ-ಮೊಸರು ಊಟದ ವ್ಯವಸ್ಥೆ ಮಾಡಲಾಗಿತ್ತು. <br /> <br /> ಇಲ್ಲಿಯೂ ವಿದ್ಯಾರ್ಥಿಗಳು, ಶಿಕ್ಷಕರು, ವ್ಯವಸ್ಥಾಪಕರು ಹೀಗೆ ಸುಮಾರು ಸಾವಿರ ಜನರು ಆಹಾರ ಭೋಜನ ಸ್ವಿಕರಿಸಿದರು.<br /> <br /> ಆ ಮೇಲೆ ಮಧ್ಯಾಹ್ನ 3 ರಿಂದ 5ವರೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ನಡೆದು, ಎರಡು ವಿಭಾಗದಲ್ಲಿ 25 ಬ್ಲಾಕ್ನಲ್ಲಿ 500 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 40ಕ್ಕೂ ಹೆಚ್ಚು ಶಿಕ್ಷಕರು, ವ್ಯವಸ್ಥಾಪಕರು, ಜಾಗೃತ ದಳದವರು ಉಸ್ತುವಾರಿ ವಹಿಸಿದ್ದರು. <br /> <br /> ಆನಂದ ಚೋಪ್ರಾ ಅವರ ಮಾರ್ಗದರ್ಶನದಲ್ಲಿ ಉಭಯ ಸಂಸ್ಥೆಗಳ ಸದಸ್ಯರು ಶ್ರಮಿಸಿದರು.ಈ ಪರೀಕ್ಷೆಯಲ್ಲಿ ಶೇ 100 ಅಂಕ ಪಡೆದವರಿಗೆ 25 ಸಾವಿರ ರೂಪಾಯಿ ಕೂಡುವುದಾಗಿ ಹೇಳಿದ ಆನಂದ ಚೋಪ್ರಾ ಅವರು, ಎಷ್ಟೇ ವಿದ್ಯಾರ್ಥಿಗಳು ಈ ಅಂಕ ಪಡೆದಿದ್ದರೂ ಈ ಬಹುಮಾನ ನೀಡಲಾಗುತ್ತದೆ ಎಂದರು. <br /> <br /> ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಪ್ರಕಟಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ</strong>: ಇಲ್ಲಿನ ಸ್ಥಳೀಯ ಯಂಗ್ ಜನರೇಷನ್ ಶಿಕ್ಷಣ ಸಂಸ್ಥೆ ಮತ್ತು ಎನ್ಕರೇಜ್ ಸಂಸ್ಥೆಯವರು ಜಂಟಿಯಾಗಿ ಭಾನುವಾರ, ಕೆಎಎಸ್, ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಿತ್ತು.<br /> <br /> ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ರಾಜ್ಯಧಾನಿ ಬೆಂಗಳೂರು, ಮೈಸೂರು, ದಾವಣಗೇರಿ, ಬೀದರ-ಗುಲ್ಬರ್ಗ ಮುಂತಾದ ಕಡೆಗಳಿಂದ ಸುಮಾರು ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರು.<br /> <br /> ಬಂದ ಎಲ್ಲ ಪರೀಕ್ಷಾರ್ಥಿಗಳ ಮನರಂಜನೆಗಾಗಿ ಒಂದು ಸುಂದರ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೃತ್ಯ ಕಾರ್ಯಕ್ರಮ; ಅನುಭವಿಗಳಿಂದ, ಬುದ್ಧಿಜೀವಿಗಳಿಂದ ಉತ್ತಮ ಗುಣ ಮಟ್ಟದ ಉಪನ್ಯಾಸ ಏರ್ಪಡಿಸಲಾಗಿತ್ತು.<br /> <br /> ಕಾರ್ಯಕ್ರಮದ ನಂತರ ಭಾರಿ ಭೋಜನ ಏರ್ಪಡಿಸಲಾಗಿತ್ತು. ಇಲ್ಲಿ ಗೋಧಿ ಹುಗ್ಗಿ, ಶೇಂಗಾ ಹೋಳಿಗೆ, ಜೋಳದ ರೊಟ್ಟಿ, ಚಪಾತಿ, ವಿವಿಧ ಬಗೆಯ ಚಟ್ನಿಗಳು, ಅನ್ನ-ಮೊಸರು ಊಟದ ವ್ಯವಸ್ಥೆ ಮಾಡಲಾಗಿತ್ತು. <br /> <br /> ಇಲ್ಲಿಯೂ ವಿದ್ಯಾರ್ಥಿಗಳು, ಶಿಕ್ಷಕರು, ವ್ಯವಸ್ಥಾಪಕರು ಹೀಗೆ ಸುಮಾರು ಸಾವಿರ ಜನರು ಆಹಾರ ಭೋಜನ ಸ್ವಿಕರಿಸಿದರು.<br /> <br /> ಆ ಮೇಲೆ ಮಧ್ಯಾಹ್ನ 3 ರಿಂದ 5ವರೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ನಡೆದು, ಎರಡು ವಿಭಾಗದಲ್ಲಿ 25 ಬ್ಲಾಕ್ನಲ್ಲಿ 500 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 40ಕ್ಕೂ ಹೆಚ್ಚು ಶಿಕ್ಷಕರು, ವ್ಯವಸ್ಥಾಪಕರು, ಜಾಗೃತ ದಳದವರು ಉಸ್ತುವಾರಿ ವಹಿಸಿದ್ದರು. <br /> <br /> ಆನಂದ ಚೋಪ್ರಾ ಅವರ ಮಾರ್ಗದರ್ಶನದಲ್ಲಿ ಉಭಯ ಸಂಸ್ಥೆಗಳ ಸದಸ್ಯರು ಶ್ರಮಿಸಿದರು.ಈ ಪರೀಕ್ಷೆಯಲ್ಲಿ ಶೇ 100 ಅಂಕ ಪಡೆದವರಿಗೆ 25 ಸಾವಿರ ರೂಪಾಯಿ ಕೂಡುವುದಾಗಿ ಹೇಳಿದ ಆನಂದ ಚೋಪ್ರಾ ಅವರು, ಎಷ್ಟೇ ವಿದ್ಯಾರ್ಥಿಗಳು ಈ ಅಂಕ ಪಡೆದಿದ್ದರೂ ಈ ಬಹುಮಾನ ನೀಡಲಾಗುತ್ತದೆ ಎಂದರು. <br /> <br /> ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಪ್ರಕಟಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>