<p>ಇತ್ತೀಚಿಗೆ ಕನ್ನಡ ಪ್ರಾಧಿಕಾರ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, ಎಚ್.ಎ.ಎಲ್. `ಸಿ~ ದರ್ಜೆ ಮತ್ತು `ಡಿ~ ದರ್ಜೆ ನೌಕರಿಗೆ ಕನ್ನಡಿಗರನ್ನೇ ಹೆಚ್ಚಾಗಿ ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಬೇಕೆಂದು ತೀರ್ಮಾನ ಕೈಗೊಂಡಿರುವುದು ಸಂತಸ. ಇದರಿಂದ ಕನ್ನಡಿಗರು ಕೇಂದ್ರ ಸರ್ಕಾರದ ಆಡಳಿತದಲ್ಲಿ ಉದ್ಯೋಗಾವಕಾಶ ಪಡೆದಂತಾಗಿರುತ್ತದೆ.<br /> <br /> ಆದರೆ ಕನ್ನಡಿಗರು `ಸಿ~ ಮತ್ತು `ಡಿ~ ದರ್ಜೆ ನೌಕರಿಗೆ ಮಾತ್ರ ಸೀಮಿತವೇ? ಖಾಸಗಿ ಕಂಪೆನಿಗಳಲ್ಲಿ ಮತ್ತು ಇತರೆ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿ ವರ್ಗಕ್ಕೆ ನೇಮಕಾತಿ ಹೊಂದಲು ಕನ್ನಡಿಗರಿಗೆ ಅರ್ಹತೆ ಇಲ್ಲವೆ? `ಮುಖ್ಯಮಂತ್ರಿ~ ಚಂದ್ರು ಅವರು ಇತರೆ ಇಲಾಖೆಗಳಿಗೂ ಪತ್ರ ಬರೆದು ಕನ್ನಡಿಗರ ಪರವಾಗಿ ಧ್ವನಿ ಎತ್ತಬೇಕು. <br /> <br /> ಆದರೆ, ಭಾರತೀಯ ರೈಲ್ವೆ, ರಾಷ್ಟ್ರೀಕೃತ ಬ್ಯಾಂಕ್ಗಳಾದ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಭಾರತೀಯ ಸ್ಟೇಟ್ ಬ್ಯಾಂಕ್-ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ನಮ್ಮ ನೆಲದಲ್ಲಿರುವ ಪ್ರಮುಖ ಕೈಗಾರಿಕೆಗಳಾದ ಬಿ.ಇ.ಎಲ್, ಎಚ್.ಎ.ಎಲ್, ಬಿ.ಇ.ಎಂ.ಎಲ್, ಎಚ್.ಎಂ.ಟಿ, ಬಿ.ಎಚ್.ಇ.ಎಲ್, ಎನ್.ಎ.ಎಲ್, ಇಸ್ರೋಗಳಲ್ಲಿಯೂ ಉನ್ನತ ಅಧಿಕಾರಿಗಳ ಮತ್ತು ಪರೀಕ್ಷಾ ದೆಸೆಯಲ್ಲಿರುವ ಅಧಿಕಾರಿಗಳ ಹುದ್ದೆಗಳಲ್ಲಿಯೂ ಸಹ ಕನ್ನಡಿಗರನ್ನು ಏಕೆ ಪರಿಗಣಿಸಬಾರದು?<br /> <br /> ಈ ಬಗ್ಗೆ ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ಪ್ರಾಧಿಕಾರ ತಮ್ಮ ಹೋರಾಟ ಹಾಗೂ ಬೇಡಿಕೆಗಳನ್ನು ಮುಂದಿಟ್ಟು ಕನ್ನಡಿಗರಿಗೆ ಎಲ್ಲ ಕಡೆಗಳಲ್ಲಿಯೂ ಉದ್ಯೋಗಕ್ಕೆ ನೇಮಕಾತಿ ಹೊಂದಲು ಅರ್ಹತೆಯನ್ನು ದೊರಕಿಸಿಕೊಡುವ ಪ್ರಯತ್ನ ಮಾಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚಿಗೆ ಕನ್ನಡ ಪ್ರಾಧಿಕಾರ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, ಎಚ್.ಎ.ಎಲ್. `ಸಿ~ ದರ್ಜೆ ಮತ್ತು `ಡಿ~ ದರ್ಜೆ ನೌಕರಿಗೆ ಕನ್ನಡಿಗರನ್ನೇ ಹೆಚ್ಚಾಗಿ ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಬೇಕೆಂದು ತೀರ್ಮಾನ ಕೈಗೊಂಡಿರುವುದು ಸಂತಸ. ಇದರಿಂದ ಕನ್ನಡಿಗರು ಕೇಂದ್ರ ಸರ್ಕಾರದ ಆಡಳಿತದಲ್ಲಿ ಉದ್ಯೋಗಾವಕಾಶ ಪಡೆದಂತಾಗಿರುತ್ತದೆ.<br /> <br /> ಆದರೆ ಕನ್ನಡಿಗರು `ಸಿ~ ಮತ್ತು `ಡಿ~ ದರ್ಜೆ ನೌಕರಿಗೆ ಮಾತ್ರ ಸೀಮಿತವೇ? ಖಾಸಗಿ ಕಂಪೆನಿಗಳಲ್ಲಿ ಮತ್ತು ಇತರೆ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿ ವರ್ಗಕ್ಕೆ ನೇಮಕಾತಿ ಹೊಂದಲು ಕನ್ನಡಿಗರಿಗೆ ಅರ್ಹತೆ ಇಲ್ಲವೆ? `ಮುಖ್ಯಮಂತ್ರಿ~ ಚಂದ್ರು ಅವರು ಇತರೆ ಇಲಾಖೆಗಳಿಗೂ ಪತ್ರ ಬರೆದು ಕನ್ನಡಿಗರ ಪರವಾಗಿ ಧ್ವನಿ ಎತ್ತಬೇಕು. <br /> <br /> ಆದರೆ, ಭಾರತೀಯ ರೈಲ್ವೆ, ರಾಷ್ಟ್ರೀಕೃತ ಬ್ಯಾಂಕ್ಗಳಾದ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಭಾರತೀಯ ಸ್ಟೇಟ್ ಬ್ಯಾಂಕ್-ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ನಮ್ಮ ನೆಲದಲ್ಲಿರುವ ಪ್ರಮುಖ ಕೈಗಾರಿಕೆಗಳಾದ ಬಿ.ಇ.ಎಲ್, ಎಚ್.ಎ.ಎಲ್, ಬಿ.ಇ.ಎಂ.ಎಲ್, ಎಚ್.ಎಂ.ಟಿ, ಬಿ.ಎಚ್.ಇ.ಎಲ್, ಎನ್.ಎ.ಎಲ್, ಇಸ್ರೋಗಳಲ್ಲಿಯೂ ಉನ್ನತ ಅಧಿಕಾರಿಗಳ ಮತ್ತು ಪರೀಕ್ಷಾ ದೆಸೆಯಲ್ಲಿರುವ ಅಧಿಕಾರಿಗಳ ಹುದ್ದೆಗಳಲ್ಲಿಯೂ ಸಹ ಕನ್ನಡಿಗರನ್ನು ಏಕೆ ಪರಿಗಣಿಸಬಾರದು?<br /> <br /> ಈ ಬಗ್ಗೆ ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ಪ್ರಾಧಿಕಾರ ತಮ್ಮ ಹೋರಾಟ ಹಾಗೂ ಬೇಡಿಕೆಗಳನ್ನು ಮುಂದಿಟ್ಟು ಕನ್ನಡಿಗರಿಗೆ ಎಲ್ಲ ಕಡೆಗಳಲ್ಲಿಯೂ ಉದ್ಯೋಗಕ್ಕೆ ನೇಮಕಾತಿ ಹೊಂದಲು ಅರ್ಹತೆಯನ್ನು ದೊರಕಿಸಿಕೊಡುವ ಪ್ರಯತ್ನ ಮಾಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>