<p><strong>ಉಡುಪಿ: </strong>`ನಮಗೆ ದೊಡ್ಡ ಸಚಿವರ, ನಾಯಕರ ಪ್ರಚಾರ ಬೇಕಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆ ಪ್ರಚಾರ ನಿಮಿತ್ತ ಉಡುಪಿಗೆ ಆಗಮಿಸಿದ ಅವರು ಪಕ್ಷದ ಕಚೇರಿ ಬಳಿ ಗುರುವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> `ಈಗ ಪ್ರಚಾರಕ್ಕೆ ಬಂದಿರುವವರು, ಉಡುಪಿ-ಚಿಕ್ಕಮಗಳೂರು ಸರಿಯಾಗಿ ಗೊತ್ತಿರುವ ಕಾರ್ಯಕರ್ತರೇ ಚುನಾವಣೆ ಗೆಲ್ಲಿಸಿಕೊಡಲು ಸಾಕು~ ಎಂದು ಯಡಿಯೂರಪ್ಪ ಬಾರದೇ ಇರುವ ಬಗ್ಗೆ ಪ್ರತಿಕ್ರಿಯಿಸಿದರು.<br /> <br /> `ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಕೇಂದ್ರ ಸಚಿವರು, ಕಾಂಗ್ರೆಸ್ಸಿಗರು ಬಂದಿದ್ದಾರೆ ನಿಜ. ಆದರೆ ಚಿಕ್ಕಮಗಳೂರು-ಉಡುಪಿ ಅಂದರೆ ಏನೆಂದೇ ಗೊತ್ತಿಲ್ಲದವರು ಬಂದು ಮಾಡುವುದಾದರೂ ಏನು? ನಮ್ಮ ಕಾರ್ಯಕರ್ತರಿಗೆ ಈ ಕ್ಷೇತ್ರದ ಎಲ್ಲ ವಿಚಾರ ಗೊತ್ತಿದೆ~ ಎಂದು ಕಾಂಗ್ರೆಸ್ ಪ್ರಚಾರ ವೈಖರಿಗೆ ತಿರುಗೇಟು ನೀಡಿದರು.<br /> <br /> `ಯಡಿಯೂರಪ್ಪ ಅವರು ಈವರೆಗೂ ಪ್ರಚಾರಕ್ಕೆ ಬಂದಿಲ್ಲ. ಚುನಾವಣೆ ಮೇಲೆ ಏನಾದರೂ ಪರಿಣಾಮವಾಗುವುದೇ?~ ಎಂಬ ಪ್ರಶ್ನೆಗೆ, `ಇನ್ನೂ ಎರಡು ದಿನ ಸಮಯವಿದೆ. ಕಾದು ನೋಡಿ~ ಎಂದು ಚುಟುಕಾಗಿ ಅವರು ಪ್ರತಿಕ್ರಿಯಿಸಿದರು.<br /> <br /> `ಕಳೆದ ಚುನಾವಣೆಯಲ್ಲಿ ನಾನು 27 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈ ಬಾರಿಯ ಸುನೀಲ್ ಕುಮಾರ್ ಅದಕ್ಕಿಂತ 4 ಪಟ್ಟು ಹೆಚ್ಚು ಅಂತರದಿಂದ ಗೆಲ್ಲುತ್ತಾರೆ~ ಎಂದು ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು. <br /> <br /> ಇನ್ನೊಂದೆಡೆ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು, `ಯಡಿಯೂರಪ್ಪ ಬಾರದೇ ಇದ್ದರೂ ನಾವು ಅಪೇಕ್ಷೆಪಟ್ಟ ಸಚಿವರು, ಶಾಸಕರು ಪ್ರಚಾರ ನಡೆಸಿದ್ದಾರೆ. ಪ್ರಚಾರಕ್ಕೆ ಬರಲು ಆಗುವುದಿಲ್ಲವೆಂದು ಮೊದಲೇ ಯಡಿಯೂರಪ್ಪ ತಿಳಿಸಿದ್ದರು~ ಎಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>`ನಮಗೆ ದೊಡ್ಡ ಸಚಿವರ, ನಾಯಕರ ಪ್ರಚಾರ ಬೇಕಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆ ಪ್ರಚಾರ ನಿಮಿತ್ತ ಉಡುಪಿಗೆ ಆಗಮಿಸಿದ ಅವರು ಪಕ್ಷದ ಕಚೇರಿ ಬಳಿ ಗುರುವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> `ಈಗ ಪ್ರಚಾರಕ್ಕೆ ಬಂದಿರುವವರು, ಉಡುಪಿ-ಚಿಕ್ಕಮಗಳೂರು ಸರಿಯಾಗಿ ಗೊತ್ತಿರುವ ಕಾರ್ಯಕರ್ತರೇ ಚುನಾವಣೆ ಗೆಲ್ಲಿಸಿಕೊಡಲು ಸಾಕು~ ಎಂದು ಯಡಿಯೂರಪ್ಪ ಬಾರದೇ ಇರುವ ಬಗ್ಗೆ ಪ್ರತಿಕ್ರಿಯಿಸಿದರು.<br /> <br /> `ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಕೇಂದ್ರ ಸಚಿವರು, ಕಾಂಗ್ರೆಸ್ಸಿಗರು ಬಂದಿದ್ದಾರೆ ನಿಜ. ಆದರೆ ಚಿಕ್ಕಮಗಳೂರು-ಉಡುಪಿ ಅಂದರೆ ಏನೆಂದೇ ಗೊತ್ತಿಲ್ಲದವರು ಬಂದು ಮಾಡುವುದಾದರೂ ಏನು? ನಮ್ಮ ಕಾರ್ಯಕರ್ತರಿಗೆ ಈ ಕ್ಷೇತ್ರದ ಎಲ್ಲ ವಿಚಾರ ಗೊತ್ತಿದೆ~ ಎಂದು ಕಾಂಗ್ರೆಸ್ ಪ್ರಚಾರ ವೈಖರಿಗೆ ತಿರುಗೇಟು ನೀಡಿದರು.<br /> <br /> `ಯಡಿಯೂರಪ್ಪ ಅವರು ಈವರೆಗೂ ಪ್ರಚಾರಕ್ಕೆ ಬಂದಿಲ್ಲ. ಚುನಾವಣೆ ಮೇಲೆ ಏನಾದರೂ ಪರಿಣಾಮವಾಗುವುದೇ?~ ಎಂಬ ಪ್ರಶ್ನೆಗೆ, `ಇನ್ನೂ ಎರಡು ದಿನ ಸಮಯವಿದೆ. ಕಾದು ನೋಡಿ~ ಎಂದು ಚುಟುಕಾಗಿ ಅವರು ಪ್ರತಿಕ್ರಿಯಿಸಿದರು.<br /> <br /> `ಕಳೆದ ಚುನಾವಣೆಯಲ್ಲಿ ನಾನು 27 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈ ಬಾರಿಯ ಸುನೀಲ್ ಕುಮಾರ್ ಅದಕ್ಕಿಂತ 4 ಪಟ್ಟು ಹೆಚ್ಚು ಅಂತರದಿಂದ ಗೆಲ್ಲುತ್ತಾರೆ~ ಎಂದು ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು. <br /> <br /> ಇನ್ನೊಂದೆಡೆ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು, `ಯಡಿಯೂರಪ್ಪ ಬಾರದೇ ಇದ್ದರೂ ನಾವು ಅಪೇಕ್ಷೆಪಟ್ಟ ಸಚಿವರು, ಶಾಸಕರು ಪ್ರಚಾರ ನಡೆಸಿದ್ದಾರೆ. ಪ್ರಚಾರಕ್ಕೆ ಬರಲು ಆಗುವುದಿಲ್ಲವೆಂದು ಮೊದಲೇ ಯಡಿಯೂರಪ್ಪ ತಿಳಿಸಿದ್ದರು~ ಎಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>