<p><strong><span style="font-size: medium">ಡೆಹ್ರಾಡೂನ್ (ಐಎಎನ್ಎಸ್): </span></strong><span style="font-size: medium">ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಬಾಬಾ ರಾಮದೇವ್ ಅವರು ಹರಿದ್ವಾರದ ಪತಂಜಲಿ ಯೋಗ ಆಶ್ರಮದಲ್ಲಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಧಾರ್ಮಿಕ ಹಾಗೂ ಅಧ್ಯಾತ್ಮಿಕ ಮುಖಂಡರ ಮನವಿಯ ಮೇರೆಗೆ ಇಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ </span><span style="font-size: medium">ಭಾನುವಾರ ಹಣ್ಣಿನರಸ ಸೇವಿಸುವುದರ ಮೂಲಕ ಮುಕ್ತಾಯಗೊಳಿಸಿದರು. </span></p>.<p><span style="font-size: medium">~ಪ್ರಸ್ತುತ ರಾಮದೇವ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇದೀಗ ಅವರು ಸತ್ಯಾಗ್ರಹವನ್ನು ಕೈಬಿಟ್ಟಿರುತ್ತಾರೆ. ಆದರೆ, ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಅವರು ಹಮ್ಮಿಕೊಂಡಿದ್ದ ಚಳುವಳಿಯು ಮುಂದುವರೆಯಲಿದೆ~ ಎನ್ನುತ್ತಾರೆ ಅವರ ಆಪ್ತ ಆಚಾರ್ಯ ಬಾಲಕೃಷ್ಣ. </span></p>.<p><span style="font-size: medium">~ಧಾರ್ಮಿಕ ಹಾಗೂ ಅಧ್ಯಾತ್ಮಿಕ ಮುಖಂಡರ ಮನವಿಯ ಮೇರೆಗೆ ಇಂದು ನಾನು ಉಪವಾಸ ಸತ್ಯಾಗ್ರಹ ನಿಲ್ಲಿಸಿರುತ್ತೇನೆ. ಆದರೆ, ಈ ರೀತಿಯ ಸತ್ಯಾಗ್ರಹವನ್ನು ನನ್ನ ಕೊನೆಯ ಉಸಿರಿರುವವರೆಗೆ ಮುಂದುವರೆಸುತ್ತೇನೆ. ಆಪ್ತರಾದ ಬಾಲಕೃಷ್ಣ ಅವರು ಕೂಡ ಸತ್ಯಗ್ರಹದಲ್ಲಿ ಭಾಗವಹಿಸಲಿದ್ದಾರೆ~ ಎನ್ನುತ್ತಾರೆ ರಾಮದೇವ್. </span></p>.<p><span style="font-size: medium">ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ರಾಮದೇವ್ ಅವರ ಉಪವಾಸ ಸತ್ಯಾಗ್ರಹ ನಿಲ್ಲಿಸುವಲ್ಲಿ ಶ್ರಮಿಸಿದ್ದಾರೆ ಎನ್ನಲಾಗಿದೆ. ಬಾಬಾ ಅವರು ಹಣ್ಣಿನರಸವನ್ನು ಸೇವಿಸುವುದರೊಂದಿಗೆ ಉಪವಾಸ ಕೊನೆಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. </span></p>.<p><span style="font-size: medium">ಕಳೆದ ಒಂಬತ್ತು ದಿನಗಳಿಂದ ಬಾಬಾ ರಾಮದೇವ್ ಅವರು ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ</span> <span style="font-size: medium"> ಪತಂಜಲಿ ಆಶ್ರಮದಲ್ಲಿ ಉಪವಾಸವನ್ನು ಕೈಗೊಂಡಿದ್ದರು. ಇತ್ತೀಚಿಗೆ ಅವರ ಆರೋಗ್ಯವು ಕ್ಷೀಣಿಸಿದ್ದರಿಂದಾಗಿ ಅವರನ್ನು ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong><span style="font-size: medium">ಡೆಹ್ರಾಡೂನ್ (ಐಎಎನ್ಎಸ್): </span></strong><span style="font-size: medium">ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಬಾಬಾ ರಾಮದೇವ್ ಅವರು ಹರಿದ್ವಾರದ ಪತಂಜಲಿ ಯೋಗ ಆಶ್ರಮದಲ್ಲಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಧಾರ್ಮಿಕ ಹಾಗೂ ಅಧ್ಯಾತ್ಮಿಕ ಮುಖಂಡರ ಮನವಿಯ ಮೇರೆಗೆ ಇಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ </span><span style="font-size: medium">ಭಾನುವಾರ ಹಣ್ಣಿನರಸ ಸೇವಿಸುವುದರ ಮೂಲಕ ಮುಕ್ತಾಯಗೊಳಿಸಿದರು. </span></p>.<p><span style="font-size: medium">~ಪ್ರಸ್ತುತ ರಾಮದೇವ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇದೀಗ ಅವರು ಸತ್ಯಾಗ್ರಹವನ್ನು ಕೈಬಿಟ್ಟಿರುತ್ತಾರೆ. ಆದರೆ, ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಅವರು ಹಮ್ಮಿಕೊಂಡಿದ್ದ ಚಳುವಳಿಯು ಮುಂದುವರೆಯಲಿದೆ~ ಎನ್ನುತ್ತಾರೆ ಅವರ ಆಪ್ತ ಆಚಾರ್ಯ ಬಾಲಕೃಷ್ಣ. </span></p>.<p><span style="font-size: medium">~ಧಾರ್ಮಿಕ ಹಾಗೂ ಅಧ್ಯಾತ್ಮಿಕ ಮುಖಂಡರ ಮನವಿಯ ಮೇರೆಗೆ ಇಂದು ನಾನು ಉಪವಾಸ ಸತ್ಯಾಗ್ರಹ ನಿಲ್ಲಿಸಿರುತ್ತೇನೆ. ಆದರೆ, ಈ ರೀತಿಯ ಸತ್ಯಾಗ್ರಹವನ್ನು ನನ್ನ ಕೊನೆಯ ಉಸಿರಿರುವವರೆಗೆ ಮುಂದುವರೆಸುತ್ತೇನೆ. ಆಪ್ತರಾದ ಬಾಲಕೃಷ್ಣ ಅವರು ಕೂಡ ಸತ್ಯಗ್ರಹದಲ್ಲಿ ಭಾಗವಹಿಸಲಿದ್ದಾರೆ~ ಎನ್ನುತ್ತಾರೆ ರಾಮದೇವ್. </span></p>.<p><span style="font-size: medium">ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ರಾಮದೇವ್ ಅವರ ಉಪವಾಸ ಸತ್ಯಾಗ್ರಹ ನಿಲ್ಲಿಸುವಲ್ಲಿ ಶ್ರಮಿಸಿದ್ದಾರೆ ಎನ್ನಲಾಗಿದೆ. ಬಾಬಾ ಅವರು ಹಣ್ಣಿನರಸವನ್ನು ಸೇವಿಸುವುದರೊಂದಿಗೆ ಉಪವಾಸ ಕೊನೆಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. </span></p>.<p><span style="font-size: medium">ಕಳೆದ ಒಂಬತ್ತು ದಿನಗಳಿಂದ ಬಾಬಾ ರಾಮದೇವ್ ಅವರು ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ</span> <span style="font-size: medium"> ಪತಂಜಲಿ ಆಶ್ರಮದಲ್ಲಿ ಉಪವಾಸವನ್ನು ಕೈಗೊಂಡಿದ್ದರು. ಇತ್ತೀಚಿಗೆ ಅವರ ಆರೋಗ್ಯವು ಕ್ಷೀಣಿಸಿದ್ದರಿಂದಾಗಿ ಅವರನ್ನು ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>