<p>ಚನ್ನಸಂದ್ರದಲ್ಲಿನ ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮೇಳನ ಸಡಗರ ಸಂಭ್ರಮದಿಂದ ನಡೆಯಿತು.<br /> ವಿಶ್ವದ ವಿವಿಧೆಡೆಯಿಂದ ಬಂದ 1982-85 ತಂಡದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಂ.ಗಿರೀಶ್ ವಹಿಸಿದ್ದರು.<br /> <br /> ಈ ಸಮ್ಮೇಳನ ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿತ್ತು. ಇವರೆಲ್ಲ ಕಾಲೇಜು ದಿನಗಳ ನೆನಪನ್ನು ಮೆಲುಕು ಹಾಕಿದರು. ತಮ್ಮ ಅನುಭವಗಳು ಮತ್ತು ಅವು ತಮ್ಮ ವೃತ್ತಿ ಜೀವನದ ಮೇಲೆ ಬೀರಿದ ಪರಿಣಾಮಗಳನ್ನು ಹಂಚಿಕೊಂಡರು. <br /> <br /> 1982 ತಂಡದ ರಾಬರ್ಟ್ ಅವರಿಗಂತೂ ಬಹಳ ಖುಷಿಯಾಗಿತ್ತು. ಸಮ್ಮೇಳನದ ಸೂತ್ರಧಾರಿ, ಸಿವಿಲ್ ಎಂಜಿನಿಯರ್ ನಾಗಾರ್ಜುನ ಅವರು, ಬದುಕಿನಲ್ಲಿ ಮುಂದೆ ಬರಲು ಕಾಲೇಜು ನೀಡಿದ ಸಹಕಾರ ಸ್ಮರಿಸಿಕೊಂಡರು.<br /> <br /> ಈ ಕಾಲೇಜಿನಿಂದ ಪದವಿ ಪಡೆದು ಹೊರ ಬರುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಎಲ್ಲ ಬಗೆಯಿಂದ ಸಹಕರಿಸುವುದಾಗಿ ಹಳೆ ವಿದ್ಯಾರ್ಥಿಗಳು ವಾಗ್ದಾನ ಮಾಡಿದರು.<br /> <br /> ಕಾಲೇಜಿನ ಅಧ್ಯಕ್ಷ ಬಾಲಚಂದರ್ ಮಾತನಾಡಿ, ಪ್ರತಿ ವರ್ಷ ಈ ರೀತಿಯ ಸಮ್ಮೇಳನವನ್ನು ದೊಡ್ಡ ಮಟ್ಟದಲ್ಲಿ ಅಯೋಜಿಸಲು ಯೋಜಿಸಿದ್ದೇವೆ. ಹಳೆ ವಿದ್ಯಾರ್ಥಿಗಳು ಕಾಲೇಜಿನ ಬಗ್ಗೆ ಇಟ್ಟುಕೊಂಡ ಗೌರವ, ಆದರ ಅನುಕರಣೀಯ ಎಂದರು.<br /> <br /> ಮುಂದಿನ ಸಲ ಹಳೆ ವಿದ್ಯಾರ್ಥಿಗಳ ಸಮ್ಮೇಳನವನ್ನು ಮೇ 14 ರಂದು ಆಯೋಜಿಸಿದ್ದು, 1200ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪ್ರಾಚಾರ್ಯ ಗಿರೀಶ್ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನಸಂದ್ರದಲ್ಲಿನ ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮೇಳನ ಸಡಗರ ಸಂಭ್ರಮದಿಂದ ನಡೆಯಿತು.<br /> ವಿಶ್ವದ ವಿವಿಧೆಡೆಯಿಂದ ಬಂದ 1982-85 ತಂಡದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಂ.ಗಿರೀಶ್ ವಹಿಸಿದ್ದರು.<br /> <br /> ಈ ಸಮ್ಮೇಳನ ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿತ್ತು. ಇವರೆಲ್ಲ ಕಾಲೇಜು ದಿನಗಳ ನೆನಪನ್ನು ಮೆಲುಕು ಹಾಕಿದರು. ತಮ್ಮ ಅನುಭವಗಳು ಮತ್ತು ಅವು ತಮ್ಮ ವೃತ್ತಿ ಜೀವನದ ಮೇಲೆ ಬೀರಿದ ಪರಿಣಾಮಗಳನ್ನು ಹಂಚಿಕೊಂಡರು. <br /> <br /> 1982 ತಂಡದ ರಾಬರ್ಟ್ ಅವರಿಗಂತೂ ಬಹಳ ಖುಷಿಯಾಗಿತ್ತು. ಸಮ್ಮೇಳನದ ಸೂತ್ರಧಾರಿ, ಸಿವಿಲ್ ಎಂಜಿನಿಯರ್ ನಾಗಾರ್ಜುನ ಅವರು, ಬದುಕಿನಲ್ಲಿ ಮುಂದೆ ಬರಲು ಕಾಲೇಜು ನೀಡಿದ ಸಹಕಾರ ಸ್ಮರಿಸಿಕೊಂಡರು.<br /> <br /> ಈ ಕಾಲೇಜಿನಿಂದ ಪದವಿ ಪಡೆದು ಹೊರ ಬರುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಎಲ್ಲ ಬಗೆಯಿಂದ ಸಹಕರಿಸುವುದಾಗಿ ಹಳೆ ವಿದ್ಯಾರ್ಥಿಗಳು ವಾಗ್ದಾನ ಮಾಡಿದರು.<br /> <br /> ಕಾಲೇಜಿನ ಅಧ್ಯಕ್ಷ ಬಾಲಚಂದರ್ ಮಾತನಾಡಿ, ಪ್ರತಿ ವರ್ಷ ಈ ರೀತಿಯ ಸಮ್ಮೇಳನವನ್ನು ದೊಡ್ಡ ಮಟ್ಟದಲ್ಲಿ ಅಯೋಜಿಸಲು ಯೋಜಿಸಿದ್ದೇವೆ. ಹಳೆ ವಿದ್ಯಾರ್ಥಿಗಳು ಕಾಲೇಜಿನ ಬಗ್ಗೆ ಇಟ್ಟುಕೊಂಡ ಗೌರವ, ಆದರ ಅನುಕರಣೀಯ ಎಂದರು.<br /> <br /> ಮುಂದಿನ ಸಲ ಹಳೆ ವಿದ್ಯಾರ್ಥಿಗಳ ಸಮ್ಮೇಳನವನ್ನು ಮೇ 14 ರಂದು ಆಯೋಜಿಸಿದ್ದು, 1200ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪ್ರಾಚಾರ್ಯ ಗಿರೀಶ್ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>