<p>ಬೆಂಗಳೂರು: ಯುವ ಆಟಗಾರರನ್ನೊಳಗೊಂಡ ಎಚ್ಎಎಲ್ ತಂಡ ಐ-ಲೀಗ್ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚಿರಾಗ್ ಯುನೈಟೆಡ್ ಕೇರಳ ತಂಡ 1-0 ಗೋಲಿನಿಂದ ಎಚ್ಎಎಲ್ ವಿರುದ್ಧ ಜಯ ಪಡೆಯಿತು.<br /> <br /> ಎಚ್ಎಎಲ್ ತಂಡದ ಪ್ರಸಕ್ತ ಋತುವಿನ ಮೊದಲ ಪಂದ್ಯವನ್ನು ವೀಕ್ಷಿಸಲು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ನೆರೆದಿದ್ದರು. ಆದರೆ ಅವರ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ತಂಡ ವಿಫಲವಾಯಿತು.<br /> <br /> ಮತ್ತೊಂದೆಡೆ ವೇಗ ಹಾಗೂ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಚಿರಾಗ್ ಪೂರ್ಣ ಪಾಯಿಂಟ್ ಗಿಟ್ಟಿಸಿಕೊಂಡಿತು. ಪಂದ್ಯದ 14ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಾಯಿತು. ಗೋಲು ತಂದಿತ್ತದ್ದು ಸಿ.ಕೆ. ವಿನೀತ್. ಚಿರಾಗ್ ತಂಡದ ಜಗದೀಪ್ ಸಿಂಗ್ ನೀಡಿದ ಲಾಂಗ್ ಪಾಸ್ ಈ ಗೋಲಿಗೆ ಹಾದಿಯೊದಗಿಸಿತು.<br /> <br /> ಜಗದೀಪ್ ಅವರ ಹೊಡೆತದಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ಎಚ್ಎಎಲ್ ಗೋಲ್ಕೀಪರ್ ಪ್ರಮೋದ್ ವಿಫಲರಾದರು. ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ವಿನೀತ್ ಸುಲಭವಾಗಿ ಗುರಿಮುಟ್ಟಿಸಿದರು.<br /> ಆ ಬಳಿಕ ಎಚ್ಎಎಲ್ ಸಮಬಲದ ಗೋಲು ಗಳಿಸಲು ಪ್ರಯತ್ನ ನಡೆಸಿತು. ಅದೃಷ್ಟ ಈ ತಂಡದ ಪರ ಇರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಯುವ ಆಟಗಾರರನ್ನೊಳಗೊಂಡ ಎಚ್ಎಎಲ್ ತಂಡ ಐ-ಲೀಗ್ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚಿರಾಗ್ ಯುನೈಟೆಡ್ ಕೇರಳ ತಂಡ 1-0 ಗೋಲಿನಿಂದ ಎಚ್ಎಎಲ್ ವಿರುದ್ಧ ಜಯ ಪಡೆಯಿತು.<br /> <br /> ಎಚ್ಎಎಲ್ ತಂಡದ ಪ್ರಸಕ್ತ ಋತುವಿನ ಮೊದಲ ಪಂದ್ಯವನ್ನು ವೀಕ್ಷಿಸಲು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ನೆರೆದಿದ್ದರು. ಆದರೆ ಅವರ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ತಂಡ ವಿಫಲವಾಯಿತು.<br /> <br /> ಮತ್ತೊಂದೆಡೆ ವೇಗ ಹಾಗೂ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಚಿರಾಗ್ ಪೂರ್ಣ ಪಾಯಿಂಟ್ ಗಿಟ್ಟಿಸಿಕೊಂಡಿತು. ಪಂದ್ಯದ 14ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಾಯಿತು. ಗೋಲು ತಂದಿತ್ತದ್ದು ಸಿ.ಕೆ. ವಿನೀತ್. ಚಿರಾಗ್ ತಂಡದ ಜಗದೀಪ್ ಸಿಂಗ್ ನೀಡಿದ ಲಾಂಗ್ ಪಾಸ್ ಈ ಗೋಲಿಗೆ ಹಾದಿಯೊದಗಿಸಿತು.<br /> <br /> ಜಗದೀಪ್ ಅವರ ಹೊಡೆತದಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ಎಚ್ಎಎಲ್ ಗೋಲ್ಕೀಪರ್ ಪ್ರಮೋದ್ ವಿಫಲರಾದರು. ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ವಿನೀತ್ ಸುಲಭವಾಗಿ ಗುರಿಮುಟ್ಟಿಸಿದರು.<br /> ಆ ಬಳಿಕ ಎಚ್ಎಎಲ್ ಸಮಬಲದ ಗೋಲು ಗಳಿಸಲು ಪ್ರಯತ್ನ ನಡೆಸಿತು. ಅದೃಷ್ಟ ಈ ತಂಡದ ಪರ ಇರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>