<p>ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಅವರು ಅನಿರೀಕ್ಷಿತವಾದ ಬೆಳವಣಿಗೆಯಲ್ಲಿ ಕರ್ನಾಟಕದ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗೃಹ ನಿರ್ಮಾಣ ಸಂಘಗಳ ಉಪನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಪಡೆದಿದ್ದಾರೆಂಬುದು ಅವರ ವಿರುದ್ಧದ ಆರೋಪ. <br /> <br /> ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ವಾಪಸು ನೀಡಿರುವುದರಿಂದ ರಾಜೀನಾಮೆ ಅಗತ್ಯ ಇಲ್ಲ ಎಂಬ ಮೊಂಡುವಾದವನ್ನು ಮುಂದೊಡ್ಡದೆ ಅಧಿಕಾರ ತ್ಯಜಿಸಿರುವುದು ಒಂದು ಒಳ್ಳೆಯ ಸಂಪ್ರದಾಯ. ಕಾನೂನು ಪಾಲನೆ ಪ್ರತಿಯೊಬ್ಬ ನಾಗರಿಕನ ಸಹಜ ಸ್ವಭಾವ ಆಗಬೇಕು, ನಮ್ಮಲ್ಲಿ ಕಾನೂನು ಉಲ್ಲಂಘನೆ ಸಹಜ ಸ್ವಭಾವ ಆಗಿಬಿಟ್ಟಿದೆ. <br /> <br /> ಇದರಿಂದಾಗಿ ಸಾಮಾನ್ಯ ಜನತೆ ಮಾತ್ರವಲ್ಲ, ಕಾನೂನು ಮತ್ತು ನಿಯಮವಾಳಿಗಳ ಬಗ್ಗೆ ತಿಳುವಳಿಕೆ ಇರುವವರು ಕೂಡಾ ತಮಗರಿವಿಲ್ಲದಂತೆಯೇ ಅಡ್ಡ ಹಾದಿ ತುಳಿದುಬಿಡುತ್ತಾರೆ. ಕಾನೂನು ಉಲ್ಲಂಘನೆಗೆ ಅಜ್ಞಾನ ಕಾರಣವಾಗುವುದಿಲ್ಲ ಎಂದು ನ್ಯಾಯಶಾಸ್ತ್ರ ಹೇಳುತ್ತದೆ. <br /> <br /> ಕಾನೂನಿನಲ್ಲಿ ಪಾಂಡಿತ್ಯ ಹೊಂದಿರುವ ನ್ಯಾಯಮೂರ್ತಿಗಳು ಗೃಹನಿರ್ಮಾಣ ಸಂಘಗಳ ಉಪನಿಯಮಗಳನ್ನು ತಿಳಿಯದಿರುವಷ್ಟು ಅಮಾಯಕರೆಂದು ಹೇಳಲಾಗುವುದಿಲ್ಲ. ಈ ದೃಷ್ಟಿಯಿಂದ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಹೆಚ್ಚು ಎಚ್ಚರಿಕೆಯಿಂದ ಇರಬೇಕಿತ್ತು. <br /> <br /> ಅವರೂ ಕೂಡಾ ಸಾಮಾನ್ಯ ಮನುಷ್ಯನಂತೆ ಸಂಪತ್ತಿನ ಲಾಲಸೆಗೆ ಬಿದ್ದು ಎಡವಿರುವುದು ಅವರ ಮೇಲೆ ಅಭಿಮಾನ ಇಟ್ಟುಕೊಂಡವರನ್ನು ನಿರಾಶೆಗೊಳಿಸಿದೆ. <br /> <br /> ತಪ್ಪು ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರೊಬ್ಬರದ್ದೇ ಅಲ್ಲ. ಲೋಕಾಯುಕ್ತರಾಗಿ ನೇಮಕ ಮಾಡುವಾಗ ಅಭ್ಯರ್ಥಿಗಳ ಅರ್ಹತೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕಾಗಿದ್ದ ರಾಜ್ಯ ಸರ್ಕಾರ ಕೂಡಾ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ವಿರೋಧಪಕ್ಷಗಳ ನಾಯಕರ ಜತೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿ ಲೋಕಾಯುಕ್ತರನ್ನು ನೇಮಿಸಬೇಕೆಂದು ಕಾನೂನು ಹೇಳುತ್ತದೆ. <br /> <br /> ನ್ಯಾ. ಸಂತೋಷ್ ಹೆಗ್ಡೆ ಅವರು ನಿವೃತ್ತಿಯಾದ ತಕ್ಷಣ ಅನುಮಾನ ಪಡುವಷ್ಟು ಅವಸರದಿಂದ ಹಿಂದಿನ ಮುಖ್ಯಮಂತ್ರಿಗಳು ಹೊಸ ಲೋಕಾಯುಕ್ತರನ್ನು ನೇಮಿಸಿಬಿಟ್ಟಿದ್ದರು. <br /> <br /> ತಮ್ಮ ಜತೆ ಸರಿಯಾಗಿ ಸಮಾಲೋಚನೆ ನಡೆಸಿಲ್ಲ ಎಂದು ವಿರೋಧಪಕ್ಷಗಳ ನಾಯಕರು ಗೊಣಗಾಡಿದರೂ ಸರಿಯಾದ ಚಿತ್ರವನ್ನು ಅವರೂ ಸಾರ್ವಜನಿಕರ ಮುಂದೆ ಇಟ್ಟಿರಲಿಲ್ಲ. <br /> <br /> ಈ ಅನುಭವ ಮುಂದಿನ ನೇಮಕದ ಸಂದರ್ಭದಲ್ಲಿ ಪಾಠ ಆಗಬೇಕು. ಹೊಸ ಲೋಕಾಯುಕ್ತರನ್ನು ನೇಮಕ ಮಾಡುವಾಗ ರಾಜ್ಯಸರ್ಕಾರ ವಿರೋಧ ಪಕ್ಷಗಳ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು,ಅಭ್ಯರ್ಥಿಗಳ ಹಿನ್ನೆಲೆಯನ್ನು ಹೆಚ್ಚು ಎಚ್ಚರಿಕೆಯಿಂದ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು. <br /> <br /> ಭ್ರಷ್ಟಾಚಾರದಿಂದಾಗಿ ರಾಜ್ಯ ಕಳೆದುಕೊಂಡಿರುವ ಮಾನವನ್ನು ಹಿಂದಿನ ಲೋಕಾಯುಕ್ತರು ತಂದುಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವುದು ಸರ್ಕಾರದ ಕರ್ತವ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಅವರು ಅನಿರೀಕ್ಷಿತವಾದ ಬೆಳವಣಿಗೆಯಲ್ಲಿ ಕರ್ನಾಟಕದ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗೃಹ ನಿರ್ಮಾಣ ಸಂಘಗಳ ಉಪನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಪಡೆದಿದ್ದಾರೆಂಬುದು ಅವರ ವಿರುದ್ಧದ ಆರೋಪ. <br /> <br /> ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ವಾಪಸು ನೀಡಿರುವುದರಿಂದ ರಾಜೀನಾಮೆ ಅಗತ್ಯ ಇಲ್ಲ ಎಂಬ ಮೊಂಡುವಾದವನ್ನು ಮುಂದೊಡ್ಡದೆ ಅಧಿಕಾರ ತ್ಯಜಿಸಿರುವುದು ಒಂದು ಒಳ್ಳೆಯ ಸಂಪ್ರದಾಯ. ಕಾನೂನು ಪಾಲನೆ ಪ್ರತಿಯೊಬ್ಬ ನಾಗರಿಕನ ಸಹಜ ಸ್ವಭಾವ ಆಗಬೇಕು, ನಮ್ಮಲ್ಲಿ ಕಾನೂನು ಉಲ್ಲಂಘನೆ ಸಹಜ ಸ್ವಭಾವ ಆಗಿಬಿಟ್ಟಿದೆ. <br /> <br /> ಇದರಿಂದಾಗಿ ಸಾಮಾನ್ಯ ಜನತೆ ಮಾತ್ರವಲ್ಲ, ಕಾನೂನು ಮತ್ತು ನಿಯಮವಾಳಿಗಳ ಬಗ್ಗೆ ತಿಳುವಳಿಕೆ ಇರುವವರು ಕೂಡಾ ತಮಗರಿವಿಲ್ಲದಂತೆಯೇ ಅಡ್ಡ ಹಾದಿ ತುಳಿದುಬಿಡುತ್ತಾರೆ. ಕಾನೂನು ಉಲ್ಲಂಘನೆಗೆ ಅಜ್ಞಾನ ಕಾರಣವಾಗುವುದಿಲ್ಲ ಎಂದು ನ್ಯಾಯಶಾಸ್ತ್ರ ಹೇಳುತ್ತದೆ. <br /> <br /> ಕಾನೂನಿನಲ್ಲಿ ಪಾಂಡಿತ್ಯ ಹೊಂದಿರುವ ನ್ಯಾಯಮೂರ್ತಿಗಳು ಗೃಹನಿರ್ಮಾಣ ಸಂಘಗಳ ಉಪನಿಯಮಗಳನ್ನು ತಿಳಿಯದಿರುವಷ್ಟು ಅಮಾಯಕರೆಂದು ಹೇಳಲಾಗುವುದಿಲ್ಲ. ಈ ದೃಷ್ಟಿಯಿಂದ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಹೆಚ್ಚು ಎಚ್ಚರಿಕೆಯಿಂದ ಇರಬೇಕಿತ್ತು. <br /> <br /> ಅವರೂ ಕೂಡಾ ಸಾಮಾನ್ಯ ಮನುಷ್ಯನಂತೆ ಸಂಪತ್ತಿನ ಲಾಲಸೆಗೆ ಬಿದ್ದು ಎಡವಿರುವುದು ಅವರ ಮೇಲೆ ಅಭಿಮಾನ ಇಟ್ಟುಕೊಂಡವರನ್ನು ನಿರಾಶೆಗೊಳಿಸಿದೆ. <br /> <br /> ತಪ್ಪು ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರೊಬ್ಬರದ್ದೇ ಅಲ್ಲ. ಲೋಕಾಯುಕ್ತರಾಗಿ ನೇಮಕ ಮಾಡುವಾಗ ಅಭ್ಯರ್ಥಿಗಳ ಅರ್ಹತೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕಾಗಿದ್ದ ರಾಜ್ಯ ಸರ್ಕಾರ ಕೂಡಾ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ವಿರೋಧಪಕ್ಷಗಳ ನಾಯಕರ ಜತೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿ ಲೋಕಾಯುಕ್ತರನ್ನು ನೇಮಿಸಬೇಕೆಂದು ಕಾನೂನು ಹೇಳುತ್ತದೆ. <br /> <br /> ನ್ಯಾ. ಸಂತೋಷ್ ಹೆಗ್ಡೆ ಅವರು ನಿವೃತ್ತಿಯಾದ ತಕ್ಷಣ ಅನುಮಾನ ಪಡುವಷ್ಟು ಅವಸರದಿಂದ ಹಿಂದಿನ ಮುಖ್ಯಮಂತ್ರಿಗಳು ಹೊಸ ಲೋಕಾಯುಕ್ತರನ್ನು ನೇಮಿಸಿಬಿಟ್ಟಿದ್ದರು. <br /> <br /> ತಮ್ಮ ಜತೆ ಸರಿಯಾಗಿ ಸಮಾಲೋಚನೆ ನಡೆಸಿಲ್ಲ ಎಂದು ವಿರೋಧಪಕ್ಷಗಳ ನಾಯಕರು ಗೊಣಗಾಡಿದರೂ ಸರಿಯಾದ ಚಿತ್ರವನ್ನು ಅವರೂ ಸಾರ್ವಜನಿಕರ ಮುಂದೆ ಇಟ್ಟಿರಲಿಲ್ಲ. <br /> <br /> ಈ ಅನುಭವ ಮುಂದಿನ ನೇಮಕದ ಸಂದರ್ಭದಲ್ಲಿ ಪಾಠ ಆಗಬೇಕು. ಹೊಸ ಲೋಕಾಯುಕ್ತರನ್ನು ನೇಮಕ ಮಾಡುವಾಗ ರಾಜ್ಯಸರ್ಕಾರ ವಿರೋಧ ಪಕ್ಷಗಳ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು,ಅಭ್ಯರ್ಥಿಗಳ ಹಿನ್ನೆಲೆಯನ್ನು ಹೆಚ್ಚು ಎಚ್ಚರಿಕೆಯಿಂದ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು. <br /> <br /> ಭ್ರಷ್ಟಾಚಾರದಿಂದಾಗಿ ರಾಜ್ಯ ಕಳೆದುಕೊಂಡಿರುವ ಮಾನವನ್ನು ಹಿಂದಿನ ಲೋಕಾಯುಕ್ತರು ತಂದುಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವುದು ಸರ್ಕಾರದ ಕರ್ತವ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>