<p>ಮೈಸೂರಿನ ಜಿಲ್ಲಾಧಿಕಾರಿಗಳಾದ ಪಿ.ಎಸ್. ವಸ್ತ್ರದ್ ಅವರು ಪ್ರತಿ ಸೋಮವಾರ ಸರ್ಕಾರಿ ನೌಕರರು ಕಚೇರಿಗೆ ಕಡ್ಡಾಯವಾಗಿ ಸೈಕಲ್ನಲ್ಲೇ ಬರಬೇಕೆಂಬ ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾದುದು.<br /> <br /> ಕೇವಲ ಜಿಲ್ಲಾಧಿಕಾರಿಗಳ ಆದೇಶ ಪತ್ರದಲ್ಲಷ್ಟೇ ಇರದೆ ಸ್ವತಃ ತಾವೇ ಅದನ್ನು ಪರಿಪಾಲಿಸಿ ಇತರರಿಗೆ ಮಾದರಿಯಾಗಿದ್ದಾರೆ.ಇದು ಕೇವಲ ಮೈಸೂರು ಜಿಲ್ಲೆಗಷ್ಟೇ ಅಲ್ಲ, ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಕಚೇರಿ ಮತ್ತು ಸಚಿವರಿಗೂ ಅನ್ವಯವಾಗಬೇಕಾಗಿದೆ. <br /> <br /> ದಿನೇ ದಿನೇ ವಾಹನಗಳು ಹೆಚ್ಚುತ್ತಿವೆ. ಆದರೆ ಪೆಟ್ರೋಲ್ ಮೊದಲಾದ ಇಂಧನಗಳ ಕೊರತೆಯುಂಟಾಗಿ ಅವುಗಳ ಬೆಲೆ ಗಗನಮುಖಿಯಾಗಿದೆ. ಇದಕ್ಕೆ ಪರಿಹಾರೋಪಾಯವಾಗಿ ಸಾರ್ವಜನಿಕ ವಾಹನಗಳ ಬಳಕೆ, ಸೈಕಲ್ನಂತಹ ಇಂಧನೇತರ ವಾಹನಗಳ ಬಳಕೆ ಹೆಚ್ಚಬೇಕಾಗಿದೆ.<br /> <br /> ಮೈಸೂರು ಜಿಲ್ಲಾಧಿಕಾರಿಗಳ ಆದೇಶ ಇದಕ್ಕೊಂದು ಪರಿಹಾರವಾಗಿದೆ. ಪೂರಕವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರಿನಲ್ಲಿ ತಿಂಗಳಿಗೊಮ್ಮೆ ಬಸ್ ದಿನವನ್ನು ಆಚರಿಸುತ್ತಿದೆ.<br /> <br /> ಸಾರ್ವಜನಿಕರು, ಅಧಿಕಾರಿಗಳು, ಸಚಿವರು ಇದಕ್ಕೆ ಸ್ಪಂದಿಸಿ ತಿಂಗಳಿಗೊಮ್ಮೆ ಸಾರ್ವಜನಿಕ ವಾಹನ / ಸೈಕಲ್ ಗಳಲ್ಲಿ ಸಂಚರಿಸಿದಲ್ಲಿ ಇಂಧನದ ಕೊರತೆ ನೀಗುವುದಲ್ಲದೆ, ಸಂಚಾರದ ಒತ್ತಡ ಕಡಿಮೆಯಾಗಿ ವಾಯುಮಾಲಿನ್ಯ ಕಡಿಮೆಯಾಗುತ್ತದೆ.<br /> <br /> ಮೂಲಭೂತ ಸೌಕರ್ಯ ಹಾಗೂ ಇಂಧನಗಳ ಕೊರತೆಯ ಸಂದರ್ಭದಲ್ಲಿ ಇಂತಹ ಮಾರ್ಗೋಪಾಯಗಳು ಅನಿವಾರ್ಯವಾಗಿದ್ದು, ಎಲ್ಲರೂ ಇದನ್ನು ಪಾಲಿಸಿದಾಗ ರಾಷ್ಟ್ರ ಬಲಿಷ್ಠವಾಗುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರಿನ ಜಿಲ್ಲಾಧಿಕಾರಿಗಳಾದ ಪಿ.ಎಸ್. ವಸ್ತ್ರದ್ ಅವರು ಪ್ರತಿ ಸೋಮವಾರ ಸರ್ಕಾರಿ ನೌಕರರು ಕಚೇರಿಗೆ ಕಡ್ಡಾಯವಾಗಿ ಸೈಕಲ್ನಲ್ಲೇ ಬರಬೇಕೆಂಬ ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾದುದು.<br /> <br /> ಕೇವಲ ಜಿಲ್ಲಾಧಿಕಾರಿಗಳ ಆದೇಶ ಪತ್ರದಲ್ಲಷ್ಟೇ ಇರದೆ ಸ್ವತಃ ತಾವೇ ಅದನ್ನು ಪರಿಪಾಲಿಸಿ ಇತರರಿಗೆ ಮಾದರಿಯಾಗಿದ್ದಾರೆ.ಇದು ಕೇವಲ ಮೈಸೂರು ಜಿಲ್ಲೆಗಷ್ಟೇ ಅಲ್ಲ, ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಕಚೇರಿ ಮತ್ತು ಸಚಿವರಿಗೂ ಅನ್ವಯವಾಗಬೇಕಾಗಿದೆ. <br /> <br /> ದಿನೇ ದಿನೇ ವಾಹನಗಳು ಹೆಚ್ಚುತ್ತಿವೆ. ಆದರೆ ಪೆಟ್ರೋಲ್ ಮೊದಲಾದ ಇಂಧನಗಳ ಕೊರತೆಯುಂಟಾಗಿ ಅವುಗಳ ಬೆಲೆ ಗಗನಮುಖಿಯಾಗಿದೆ. ಇದಕ್ಕೆ ಪರಿಹಾರೋಪಾಯವಾಗಿ ಸಾರ್ವಜನಿಕ ವಾಹನಗಳ ಬಳಕೆ, ಸೈಕಲ್ನಂತಹ ಇಂಧನೇತರ ವಾಹನಗಳ ಬಳಕೆ ಹೆಚ್ಚಬೇಕಾಗಿದೆ.<br /> <br /> ಮೈಸೂರು ಜಿಲ್ಲಾಧಿಕಾರಿಗಳ ಆದೇಶ ಇದಕ್ಕೊಂದು ಪರಿಹಾರವಾಗಿದೆ. ಪೂರಕವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರಿನಲ್ಲಿ ತಿಂಗಳಿಗೊಮ್ಮೆ ಬಸ್ ದಿನವನ್ನು ಆಚರಿಸುತ್ತಿದೆ.<br /> <br /> ಸಾರ್ವಜನಿಕರು, ಅಧಿಕಾರಿಗಳು, ಸಚಿವರು ಇದಕ್ಕೆ ಸ್ಪಂದಿಸಿ ತಿಂಗಳಿಗೊಮ್ಮೆ ಸಾರ್ವಜನಿಕ ವಾಹನ / ಸೈಕಲ್ ಗಳಲ್ಲಿ ಸಂಚರಿಸಿದಲ್ಲಿ ಇಂಧನದ ಕೊರತೆ ನೀಗುವುದಲ್ಲದೆ, ಸಂಚಾರದ ಒತ್ತಡ ಕಡಿಮೆಯಾಗಿ ವಾಯುಮಾಲಿನ್ಯ ಕಡಿಮೆಯಾಗುತ್ತದೆ.<br /> <br /> ಮೂಲಭೂತ ಸೌಕರ್ಯ ಹಾಗೂ ಇಂಧನಗಳ ಕೊರತೆಯ ಸಂದರ್ಭದಲ್ಲಿ ಇಂತಹ ಮಾರ್ಗೋಪಾಯಗಳು ಅನಿವಾರ್ಯವಾಗಿದ್ದು, ಎಲ್ಲರೂ ಇದನ್ನು ಪಾಲಿಸಿದಾಗ ರಾಷ್ಟ್ರ ಬಲಿಷ್ಠವಾಗುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>