<p>ನವದೆಹಲಿ (ಪಿಟಿಐ): ಹೆಚ್ಚುತ್ತಿರುವ ರೈಲು ಅಪಘಾತಗಳನ್ನು ತಡೆಯಲು ಅಪಘಾತ ನಿಯಂತ್ರಣ ಸಾಧನಗಳನ್ನು (ಎಸಿಡಿ) ಅಳವಡಿಸುವ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಸಂಸದೀಯ ಸಮಿತಿಯು ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.<br /> <br /> ಈ ಕಾರ್ಯ ಪೂರ್ಣಗೊಳಿಸಲು ಇನ್ನು ಆರು ತಿಂಗಳಲ್ಲಿ ಸಮಗ್ರ ಕಾರ್ಯತಂತ್ರ ರೂಪಿಸುವಂತೆಯೂ ಅದು ತಾಕೀತು ಮಾಡಿದೆ.<br /> <br /> ರೈಲ್ವೆಗೆ ಸಂಬಂಧಿಸಿದ, ಡಿಎಂಕೆ ಸಂಸದ ಟಿ.ಆರ್.ಬಾಲು ನೇತೃತ್ವದ ಸ್ಥಾಯಿ ಸಮಿತಿಯು, ಎಸಿಡಿ ಅವಡಿಸುತ್ತಿರುವ ರೀತಿ ಸಮಾಧಾನಕರವಾಗಿಲ್ಲ ಎಂದು ಇತ್ತೀಚೆಗೆ ಸಂಸತ್ನಲ್ಲಿ ಮಂಡಿಸಿದ ವರದಿಯಲ್ಲಿ ಹೇಳಿದೆ. ಕಾಲಮಿತಿಯಲ್ಲಿ ಈ ಕಾರ್ಯ ಪೂರ್ಣಗೊಳಿಸಲು ರೈಲ್ವೆ ಇಲಾಖೆಯು ಸಮಗ್ರ ಯೋಜನೆಯನ್ನು ರೂಪಿಸಬೇಕೆಂದೂ ಸಲಹೆ ನೀಡಿದೆ. <br /> <br /> 2006ರ ಜುಲೈನಿಂದ ಈಶಾನ್ಯ ವಲಯ ರೈಲ್ವೆಯಲ್ಲಿ (ಎನ್ಎಫ್ಆರ್) ಎಸಿಡಿ ಅಳವಡಿಕೆ ಕಾರ್ಯವು ಪೈಲಟ್ ಯೋಜನೆಯಾಗಿ ನಡೆಯುತ್ತಿದೆ. ಇದರ ಪರಿಣಾಮವನ್ನು ನೋಡಿಕೊಂಡು ಸುಧಾರಿತ ಎಸಿಡಿಗಳನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಸಮಜಾಯಿಷಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಹೆಚ್ಚುತ್ತಿರುವ ರೈಲು ಅಪಘಾತಗಳನ್ನು ತಡೆಯಲು ಅಪಘಾತ ನಿಯಂತ್ರಣ ಸಾಧನಗಳನ್ನು (ಎಸಿಡಿ) ಅಳವಡಿಸುವ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಸಂಸದೀಯ ಸಮಿತಿಯು ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.<br /> <br /> ಈ ಕಾರ್ಯ ಪೂರ್ಣಗೊಳಿಸಲು ಇನ್ನು ಆರು ತಿಂಗಳಲ್ಲಿ ಸಮಗ್ರ ಕಾರ್ಯತಂತ್ರ ರೂಪಿಸುವಂತೆಯೂ ಅದು ತಾಕೀತು ಮಾಡಿದೆ.<br /> <br /> ರೈಲ್ವೆಗೆ ಸಂಬಂಧಿಸಿದ, ಡಿಎಂಕೆ ಸಂಸದ ಟಿ.ಆರ್.ಬಾಲು ನೇತೃತ್ವದ ಸ್ಥಾಯಿ ಸಮಿತಿಯು, ಎಸಿಡಿ ಅವಡಿಸುತ್ತಿರುವ ರೀತಿ ಸಮಾಧಾನಕರವಾಗಿಲ್ಲ ಎಂದು ಇತ್ತೀಚೆಗೆ ಸಂಸತ್ನಲ್ಲಿ ಮಂಡಿಸಿದ ವರದಿಯಲ್ಲಿ ಹೇಳಿದೆ. ಕಾಲಮಿತಿಯಲ್ಲಿ ಈ ಕಾರ್ಯ ಪೂರ್ಣಗೊಳಿಸಲು ರೈಲ್ವೆ ಇಲಾಖೆಯು ಸಮಗ್ರ ಯೋಜನೆಯನ್ನು ರೂಪಿಸಬೇಕೆಂದೂ ಸಲಹೆ ನೀಡಿದೆ. <br /> <br /> 2006ರ ಜುಲೈನಿಂದ ಈಶಾನ್ಯ ವಲಯ ರೈಲ್ವೆಯಲ್ಲಿ (ಎನ್ಎಫ್ಆರ್) ಎಸಿಡಿ ಅಳವಡಿಕೆ ಕಾರ್ಯವು ಪೈಲಟ್ ಯೋಜನೆಯಾಗಿ ನಡೆಯುತ್ತಿದೆ. ಇದರ ಪರಿಣಾಮವನ್ನು ನೋಡಿಕೊಂಡು ಸುಧಾರಿತ ಎಸಿಡಿಗಳನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಸಮಜಾಯಿಷಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>