<p><strong>ಮತಿಘಟ್ಟ(ಕಡೂರು):</strong> ಇತಿಹಾಸ ಪ್ರಸಿದ್ಧ ಬಾಳಗಲ್ಲು ಬೀರಲಿಂಗೇಶ್ವರನ ಗುಡ್ಡಕ್ಕೆ ರಸ್ತೆ ಒತ್ತುವರಿ ಮಾಡಿರುವವರ ವಿರುದ್ಧ ಶುಕ್ರವಾರ ನೂರಾರು ಭಕ್ತರು ರಸ್ತೆ ತೆರವು ಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿರುವುದಾಗಿ 18 ಹರಿವಾಣದ ಗೌಡರ ಪರವಾಗಿ ಕೆ.ಎಂ.ಕೆಂಪರಾಜು ತಿಳಿಸಿದರು. <br /> <br /> ಬಾಳಗಲ್ಲು ಬೀರಲಿಂಗೇಶ್ವರ ಗುಡ್ಡದಲ್ಲಿರುವ ದೇವಾಲಯಕ್ಕೆ ಪ್ರತಿವರ್ಷ ಕಡೂರು ಸುತ್ತಮುತ್ತಲಿನ 250 ಕುಟುಂಬಗಳಿಗೆ ಸೇರಿದ ಭಕ್ತರು ಸನ್ನಿದಿಗೆ ತೆರಳಿ ಪೂಜೆ ಸಲ್ಲಿಸುವ ಸಂಪ್ರದಾಯ ಇದೆ. ನೂರಾರು ವರ್ಷಗಳಿಂದ ಬಂಡಿ ರಸ್ತೆ ಇದ್ದು, ಇದು ನಕಾಶೆಯಲ್ಲಿ ದಾಖಲಾಗಿದೆ. <br /> <br /> ಸ್ಥಳೀಯರು ತಮ್ಮ ಜಮೀನುಗಳನ್ನು ಮಾರಾಟ ಮಾಡಿದ್ದರ ಹಿನ್ನೆಲೆಯಲ್ಲಿ ಉಳ್ಳವರ ಕೈ ಸೇರಿ ಎಸ್ಟೇಟ್ಗಳಾಗಿ ಪರಿವರ್ತಿಸಲಾಗಿದೆ. ಆದರೆ ಎಸ್ಟೇಟ್ ಮಾಲೀಕರು ಗುಡ್ಡಕ್ಕೆ ತೆರಳುವ ರಸ್ತೆಯನ್ನು ಸಂಪೂರ್ಣ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು. <br /> <br /> ರಾಜಕೀಯ ಪ್ರಭಾವದ ವ್ಯಕ್ತಿ ಬಾಳಗಲ್ಲು ಗುಡ್ಡದಲ್ಲಿ ದೊರಕುವ ಕಪ್ಪು ಶಿಲೆ ವಿಗ್ರಹ ಕೆತ್ತನೆಗೆ ಉಪಯುಕ್ತ ಎಂಬುದನ್ನು ಅರಿತು ಗುಡ್ಡ ನಮಗೆ ಸೇರುತ್ತದೆ ಎಂದು ತಕರಾರು ಮಾಡುತ್ತಿದ್ದಾರೆ ಎಂದು ಸೇರಿದ್ದ ನೂರಾರು ಭಕ್ತರು ಆರೋಪಿಸಿದರು. <br /> <br /> ನಕಾಶೆಯಲ್ಲಿರುವಂತೆ ಬೀರಲಿಂಗೇಶ್ವರ ಗುಡ್ಡಕ್ಕೆ ತೆರಳುವ ರಸ್ತೆಯನ್ನು ತಹಶೀಲ್ದಾರ್ ವಾರದೊಳಗೆ ಬಿಡಿಸಿಕೊಡಬೇಕು. ಇಲ್ಲವಾದರೆ ಒತ್ತುವರಿ ರಸ್ತೆಯನ್ನು 12 ಗ್ರಾಮಗಳ ಬುಡಕಟ್ಟಿನ ಭಕ್ತರು ಮತ್ತು 18 ಹರಿವಾಣದ ಬಳಗದವರು ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ಸಹ ನೀಡಿದರು. <br /> <br /> ಶ್ರೀಕಂಠ ಒಡೆಯರ್, ಗುತ್ತಿಗೆದಾರ ಹಿರಿಯಣ್ಣ, ಮಹೇಶ್ ಗೌಡ, ಶ್ರೀನಿವಾಸ್, ಕುಬೇರಪ್ಪ, ನಾರಾ ಯಣಪ್ಪ, ಹೇಮಂತ್ ಕುಮಾರ್, ನಾಗರಾಜು, ದೇವರಾಜು, ತಿಮ್ಮೆಗೌಡ, ಗೋವಿಂದಪ್ಪ, ಗಂಗಯ್ಯ ಹಾಗೂ ನೂರಾರು ಭಕ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮತಿಘಟ್ಟ(ಕಡೂರು):</strong> ಇತಿಹಾಸ ಪ್ರಸಿದ್ಧ ಬಾಳಗಲ್ಲು ಬೀರಲಿಂಗೇಶ್ವರನ ಗುಡ್ಡಕ್ಕೆ ರಸ್ತೆ ಒತ್ತುವರಿ ಮಾಡಿರುವವರ ವಿರುದ್ಧ ಶುಕ್ರವಾರ ನೂರಾರು ಭಕ್ತರು ರಸ್ತೆ ತೆರವು ಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿರುವುದಾಗಿ 18 ಹರಿವಾಣದ ಗೌಡರ ಪರವಾಗಿ ಕೆ.ಎಂ.ಕೆಂಪರಾಜು ತಿಳಿಸಿದರು. <br /> <br /> ಬಾಳಗಲ್ಲು ಬೀರಲಿಂಗೇಶ್ವರ ಗುಡ್ಡದಲ್ಲಿರುವ ದೇವಾಲಯಕ್ಕೆ ಪ್ರತಿವರ್ಷ ಕಡೂರು ಸುತ್ತಮುತ್ತಲಿನ 250 ಕುಟುಂಬಗಳಿಗೆ ಸೇರಿದ ಭಕ್ತರು ಸನ್ನಿದಿಗೆ ತೆರಳಿ ಪೂಜೆ ಸಲ್ಲಿಸುವ ಸಂಪ್ರದಾಯ ಇದೆ. ನೂರಾರು ವರ್ಷಗಳಿಂದ ಬಂಡಿ ರಸ್ತೆ ಇದ್ದು, ಇದು ನಕಾಶೆಯಲ್ಲಿ ದಾಖಲಾಗಿದೆ. <br /> <br /> ಸ್ಥಳೀಯರು ತಮ್ಮ ಜಮೀನುಗಳನ್ನು ಮಾರಾಟ ಮಾಡಿದ್ದರ ಹಿನ್ನೆಲೆಯಲ್ಲಿ ಉಳ್ಳವರ ಕೈ ಸೇರಿ ಎಸ್ಟೇಟ್ಗಳಾಗಿ ಪರಿವರ್ತಿಸಲಾಗಿದೆ. ಆದರೆ ಎಸ್ಟೇಟ್ ಮಾಲೀಕರು ಗುಡ್ಡಕ್ಕೆ ತೆರಳುವ ರಸ್ತೆಯನ್ನು ಸಂಪೂರ್ಣ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು. <br /> <br /> ರಾಜಕೀಯ ಪ್ರಭಾವದ ವ್ಯಕ್ತಿ ಬಾಳಗಲ್ಲು ಗುಡ್ಡದಲ್ಲಿ ದೊರಕುವ ಕಪ್ಪು ಶಿಲೆ ವಿಗ್ರಹ ಕೆತ್ತನೆಗೆ ಉಪಯುಕ್ತ ಎಂಬುದನ್ನು ಅರಿತು ಗುಡ್ಡ ನಮಗೆ ಸೇರುತ್ತದೆ ಎಂದು ತಕರಾರು ಮಾಡುತ್ತಿದ್ದಾರೆ ಎಂದು ಸೇರಿದ್ದ ನೂರಾರು ಭಕ್ತರು ಆರೋಪಿಸಿದರು. <br /> <br /> ನಕಾಶೆಯಲ್ಲಿರುವಂತೆ ಬೀರಲಿಂಗೇಶ್ವರ ಗುಡ್ಡಕ್ಕೆ ತೆರಳುವ ರಸ್ತೆಯನ್ನು ತಹಶೀಲ್ದಾರ್ ವಾರದೊಳಗೆ ಬಿಡಿಸಿಕೊಡಬೇಕು. ಇಲ್ಲವಾದರೆ ಒತ್ತುವರಿ ರಸ್ತೆಯನ್ನು 12 ಗ್ರಾಮಗಳ ಬುಡಕಟ್ಟಿನ ಭಕ್ತರು ಮತ್ತು 18 ಹರಿವಾಣದ ಬಳಗದವರು ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ಸಹ ನೀಡಿದರು. <br /> <br /> ಶ್ರೀಕಂಠ ಒಡೆಯರ್, ಗುತ್ತಿಗೆದಾರ ಹಿರಿಯಣ್ಣ, ಮಹೇಶ್ ಗೌಡ, ಶ್ರೀನಿವಾಸ್, ಕುಬೇರಪ್ಪ, ನಾರಾ ಯಣಪ್ಪ, ಹೇಮಂತ್ ಕುಮಾರ್, ನಾಗರಾಜು, ದೇವರಾಜು, ತಿಮ್ಮೆಗೌಡ, ಗೋವಿಂದಪ್ಪ, ಗಂಗಯ್ಯ ಹಾಗೂ ನೂರಾರು ಭಕ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>