<p><strong>ಹಾಸನ:`</strong>ವಕೀಲರ ಸಂಘದ ಕೆಲವೇ ಕೆಲವು ಸದಸ್ಯರು ರಾಜಕೀಯ ಉದ್ದೇಶದಿಂದ ಸಂಘವನ್ನು ದುರ್ಬಲಗೊಳಿಸುವ ಕಾರ್ಯ ಮಾಡುತ್ತಿದ್ದಾರೆ~ ಎಂದು ಸಂಘದಿಂದ ಮಂಗಳವಾರ ಅಮಾನತುಗೊಂಡಿರುವ ಸದಸ್ಯ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಚ್.ಕೆ. ಜವರೇಗೌಡ ಆರೋಪಿಸಿದ್ದಾರೆ.<br /> <br /> ಸಂಘದ ತೀರ್ಮಾನದ ಬಳಿಕ ಪಕ್ಷದ ಕಚೇರಿಯಲ್ಲಿ ಅವರು ಪತ್ರಕರ್ತರೊಡನೆ ಮಾತನಾಡಿದರು.<br /> `ಯಾರಾದರೂ ತಪ್ಪು ಮಾಡಿದಾಗ ಅವರಿಂದ ಸ್ಪಷ್ಟನೆ ಕೇಳಿದ ಬಳಿಕವೇ ಕ್ರಮ ಕೈಗೊಳ್ಳುವುದು ಸ್ವಾಭಾವಿಕ ನ್ಯಾಯ. ಆದರೆ ನಮಗೆ ನೋಟಿಸ್ ನೀಡಿಲ್ಲ.<br /> <br /> ಸ್ಪಷ್ಟನೆಯನ್ನೂ ಕೇಳಿಲ್ಲ. ಅಮಾನತು ಮಾಡಿದ ಬಳಿಕವೂ ನಮ್ಮಿಂದ ವಿವರಣೆ ಕೇಳಿಲ್ಲ. ನಾವೇನು ಹೇಳಿದ್ದೇವೆ, ಬೆಂಗಳೂರಿನಲ್ಲಿ ಏನು ನಡೆದಿದೆ ಎಂಬ ಬಗ್ಗೆ ಸತ್ಯಾಸತ್ಯತೆ ತಿಳಿಯದೆಯೇ ಏಕಪಕ್ಷೀಯವಾಗಿ ಇಂಥ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ ಎಂದು ಅವರು ನುಡಿದರು.<br /> <br /> ಮಂಗಳವಾರದ ಸಭೆಯೂ ಸೇರಿದಂತೆ ಬೆಂಗಳೂರಿನಲ್ಲಿ ಘಟನೆ ನಡೆದ ಬಳಿಕ ಒಟ್ಟು ಮೂರು ಸಭೆ ಗಳನ್ನು ನಡೆಸಲಾಗಿದೆ. ಹಿಂದಿನ ಸಭೆಗಳಲ್ಲಿ ಉಲ್ಲೇಖವೇಆಗದ ಅಮಾನತು ವಿಚಾರ ಈ ಬಾರಿ ಒಮ್ಮೆಲೇ ಮುಂದೆ ಬಂದಿದೆ. ವಕೀಲರ ಸಂಘದ ಕಾರ್ಯದರ್ಶಿ ರವಿಶಂಕರ್, ಖಜಾಂಜಿ ಯತೀಶ್ ಸೇರಿದಂತೆ ಅನೇಕ ಪದಾಧಿಕಾರಿಗಳು ಸಂಘದ ತೀರ್ಮಾನವನ್ನು ಸಭೆಯಲ್ಲೇ ವಿರೋಧಿಸಿದ್ದರೂ ಸರ್ವಾ ನುಮತದಿಂದ ತೀರ್ಮಾನ ಕೈಗೊಂಡಿದ್ದಾಗಿ ನಡಾವಳಿ ಪುಸ್ತಕದಲ್ಲಿ ನಮೂದಿಸಿದ್ದಾರೆ.<br /> <br /> ಆದ್ದರಿಂದ ಮಂಗಳವಾರದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನ ಕಾನೂನು ಪ್ರಕಾರ ಸರಿಯಾದುದಲ್ಲ, ಇದಕ್ಕೆ ಬೆಲೆ ಇಲ್ಲ ಎಂದರು.`ರಾಜಕೀಯ ಉದ್ದೇಶದಿಂದ ಇಂಥ ತೀರ್ಮಾನ ಕೈಗೊಂಡಿದ್ದರಿಂದ ಸಂಘದಲ್ಲಿ ಆಯಾ ಪಕ್ಷದ ಪರ ಇರುವ ವಕೀಲರ ಗುಂಪುಗಳ ರಚನೆಗೆ ದಾರಿ ಮಾಡಿಕೊಟ್ಟಂತಾಗಿದೆ. ಇದರಿಂದ ಸಂಘ ದುರ್ಬಲವಾಗುವುದು ಖಚಿತ. ಜತೆಗೆ ವಕೀಲರ ಸಂಘದ ಮುಂದಿನ ಚುನಾವಣೆಯ ಮೇಲೆ ಈ ಘಟನೆ ಪರಿಣಾಮ ಬೀರಲಿದೆ ಎಂದು ವಾದಿಸಿದರು.<br /> <br /> `ಘಟನೆಯ ಬಗ್ಗೆ ಆಕ್ಷಣದ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಅದಕ್ಕೆ ಈಗಲೂ ಬದ್ಧನಿದ್ದೇನೆ. ನೋಟಿಸ್ ಬಂದರೂ ಅದಕ್ಕೆ ಉತ್ತರಿಸಲು ಸಿದ್ಧನಿದ್ದೇನೆ~ ಎಂದು ಸ್ಪಷ್ಟಪಡಿಸಿದರು.<br /> <br /> ಮಾಧ್ಯಮದಿಂದಲೂ ತಪ್ಪಾಗಿದೆ: ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ವಕೀಲರು ಮಾತ್ರವಲ್ಲ, ಮಾಧ್ಯಮಗಳು ಹಾಗೂ ಪೊಲೀಸರಿಂದಲೂ ತಪ್ಪುಗಳಾಗಿವೆ. ಬೆಂಗಳೂರಿನಲ್ಲಿ ವಕೀಲರು ನಡೆಸಿದ ದಾಳಿಯನ್ನು ರಾಜ್ಯದ ಹಲವು ವಕೀಲರು ಖಂಡಿಸಿದ್ದಾರೆ. ಆದರೆ `ದಾಳಿಯಿಂದ ಪೇದೆ ಸಾವು~ ಎಂದು ತಪ್ಪು ಸುದ್ದಿ ಬಿತ್ತರಿಸಿದ್ದ ಮಾಧ್ಯಮಗಳು ಆ ಮೇಲೆ ಸುದ್ದಿಯನ್ನು ತಡೆಹಿಡಿದವೇ ವಿನಾ ಆಗಿರುವ ತಪ್ಪಿನ ಬಗ್ಗೆ ಕ್ಷಮೆ ಯಾಚಿಸಿಲ್ಲ~ ಎಂದು ಜವರೇಗೌಡ ಆರೋಪಿಸಿದರು.<br /> ಮುಖಂಡರಾದ ಎಸ್.ದ್ಯಾವೇಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಜಯರಾಂ, ರವಿಶಂಕರ್ ಇದ್ದರು.<br /> ಜಾಂಜಿ ಯತೀಶ್, ವಕೀಲರಾದ ಶರತ್, ಶೇಷಾದ್ರಿ, ಇಂದು ಕುಮಾರ್ ಮುಂತಾದವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:`</strong>ವಕೀಲರ ಸಂಘದ ಕೆಲವೇ ಕೆಲವು ಸದಸ್ಯರು ರಾಜಕೀಯ ಉದ್ದೇಶದಿಂದ ಸಂಘವನ್ನು ದುರ್ಬಲಗೊಳಿಸುವ ಕಾರ್ಯ ಮಾಡುತ್ತಿದ್ದಾರೆ~ ಎಂದು ಸಂಘದಿಂದ ಮಂಗಳವಾರ ಅಮಾನತುಗೊಂಡಿರುವ ಸದಸ್ಯ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಚ್.ಕೆ. ಜವರೇಗೌಡ ಆರೋಪಿಸಿದ್ದಾರೆ.<br /> <br /> ಸಂಘದ ತೀರ್ಮಾನದ ಬಳಿಕ ಪಕ್ಷದ ಕಚೇರಿಯಲ್ಲಿ ಅವರು ಪತ್ರಕರ್ತರೊಡನೆ ಮಾತನಾಡಿದರು.<br /> `ಯಾರಾದರೂ ತಪ್ಪು ಮಾಡಿದಾಗ ಅವರಿಂದ ಸ್ಪಷ್ಟನೆ ಕೇಳಿದ ಬಳಿಕವೇ ಕ್ರಮ ಕೈಗೊಳ್ಳುವುದು ಸ್ವಾಭಾವಿಕ ನ್ಯಾಯ. ಆದರೆ ನಮಗೆ ನೋಟಿಸ್ ನೀಡಿಲ್ಲ.<br /> <br /> ಸ್ಪಷ್ಟನೆಯನ್ನೂ ಕೇಳಿಲ್ಲ. ಅಮಾನತು ಮಾಡಿದ ಬಳಿಕವೂ ನಮ್ಮಿಂದ ವಿವರಣೆ ಕೇಳಿಲ್ಲ. ನಾವೇನು ಹೇಳಿದ್ದೇವೆ, ಬೆಂಗಳೂರಿನಲ್ಲಿ ಏನು ನಡೆದಿದೆ ಎಂಬ ಬಗ್ಗೆ ಸತ್ಯಾಸತ್ಯತೆ ತಿಳಿಯದೆಯೇ ಏಕಪಕ್ಷೀಯವಾಗಿ ಇಂಥ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ ಎಂದು ಅವರು ನುಡಿದರು.<br /> <br /> ಮಂಗಳವಾರದ ಸಭೆಯೂ ಸೇರಿದಂತೆ ಬೆಂಗಳೂರಿನಲ್ಲಿ ಘಟನೆ ನಡೆದ ಬಳಿಕ ಒಟ್ಟು ಮೂರು ಸಭೆ ಗಳನ್ನು ನಡೆಸಲಾಗಿದೆ. ಹಿಂದಿನ ಸಭೆಗಳಲ್ಲಿ ಉಲ್ಲೇಖವೇಆಗದ ಅಮಾನತು ವಿಚಾರ ಈ ಬಾರಿ ಒಮ್ಮೆಲೇ ಮುಂದೆ ಬಂದಿದೆ. ವಕೀಲರ ಸಂಘದ ಕಾರ್ಯದರ್ಶಿ ರವಿಶಂಕರ್, ಖಜಾಂಜಿ ಯತೀಶ್ ಸೇರಿದಂತೆ ಅನೇಕ ಪದಾಧಿಕಾರಿಗಳು ಸಂಘದ ತೀರ್ಮಾನವನ್ನು ಸಭೆಯಲ್ಲೇ ವಿರೋಧಿಸಿದ್ದರೂ ಸರ್ವಾ ನುಮತದಿಂದ ತೀರ್ಮಾನ ಕೈಗೊಂಡಿದ್ದಾಗಿ ನಡಾವಳಿ ಪುಸ್ತಕದಲ್ಲಿ ನಮೂದಿಸಿದ್ದಾರೆ.<br /> <br /> ಆದ್ದರಿಂದ ಮಂಗಳವಾರದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನ ಕಾನೂನು ಪ್ರಕಾರ ಸರಿಯಾದುದಲ್ಲ, ಇದಕ್ಕೆ ಬೆಲೆ ಇಲ್ಲ ಎಂದರು.`ರಾಜಕೀಯ ಉದ್ದೇಶದಿಂದ ಇಂಥ ತೀರ್ಮಾನ ಕೈಗೊಂಡಿದ್ದರಿಂದ ಸಂಘದಲ್ಲಿ ಆಯಾ ಪಕ್ಷದ ಪರ ಇರುವ ವಕೀಲರ ಗುಂಪುಗಳ ರಚನೆಗೆ ದಾರಿ ಮಾಡಿಕೊಟ್ಟಂತಾಗಿದೆ. ಇದರಿಂದ ಸಂಘ ದುರ್ಬಲವಾಗುವುದು ಖಚಿತ. ಜತೆಗೆ ವಕೀಲರ ಸಂಘದ ಮುಂದಿನ ಚುನಾವಣೆಯ ಮೇಲೆ ಈ ಘಟನೆ ಪರಿಣಾಮ ಬೀರಲಿದೆ ಎಂದು ವಾದಿಸಿದರು.<br /> <br /> `ಘಟನೆಯ ಬಗ್ಗೆ ಆಕ್ಷಣದ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಅದಕ್ಕೆ ಈಗಲೂ ಬದ್ಧನಿದ್ದೇನೆ. ನೋಟಿಸ್ ಬಂದರೂ ಅದಕ್ಕೆ ಉತ್ತರಿಸಲು ಸಿದ್ಧನಿದ್ದೇನೆ~ ಎಂದು ಸ್ಪಷ್ಟಪಡಿಸಿದರು.<br /> <br /> ಮಾಧ್ಯಮದಿಂದಲೂ ತಪ್ಪಾಗಿದೆ: ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ವಕೀಲರು ಮಾತ್ರವಲ್ಲ, ಮಾಧ್ಯಮಗಳು ಹಾಗೂ ಪೊಲೀಸರಿಂದಲೂ ತಪ್ಪುಗಳಾಗಿವೆ. ಬೆಂಗಳೂರಿನಲ್ಲಿ ವಕೀಲರು ನಡೆಸಿದ ದಾಳಿಯನ್ನು ರಾಜ್ಯದ ಹಲವು ವಕೀಲರು ಖಂಡಿಸಿದ್ದಾರೆ. ಆದರೆ `ದಾಳಿಯಿಂದ ಪೇದೆ ಸಾವು~ ಎಂದು ತಪ್ಪು ಸುದ್ದಿ ಬಿತ್ತರಿಸಿದ್ದ ಮಾಧ್ಯಮಗಳು ಆ ಮೇಲೆ ಸುದ್ದಿಯನ್ನು ತಡೆಹಿಡಿದವೇ ವಿನಾ ಆಗಿರುವ ತಪ್ಪಿನ ಬಗ್ಗೆ ಕ್ಷಮೆ ಯಾಚಿಸಿಲ್ಲ~ ಎಂದು ಜವರೇಗೌಡ ಆರೋಪಿಸಿದರು.<br /> ಮುಖಂಡರಾದ ಎಸ್.ದ್ಯಾವೇಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಜಯರಾಂ, ರವಿಶಂಕರ್ ಇದ್ದರು.<br /> ಜಾಂಜಿ ಯತೀಶ್, ವಕೀಲರಾದ ಶರತ್, ಶೇಷಾದ್ರಿ, ಇಂದು ಕುಮಾರ್ ಮುಂತಾದವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>