<p><strong>ನವದೆಹಲಿ (ಪಿಟಿಐ): </strong>ಜಾಗತಿಕ ಮಟ್ಟದಲ್ಲಿನ ಆರ್ಥಿಕ ಪರಿಸ್ಥಿತಿಯ ಅಸ್ಥಿರತೆಯಿಂದಾಗಿ ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಕಂಪೆನಿಗಳು ಹೊಸ ನೇಮಕಾತಿಗೆ ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಮೇ ತಿಂಗಳಲ್ಲಿ ಐ.ಟಿ ಕ್ಷೇತ್ರದ ನೇಮಕಾತಿ ಪ್ರಮಾಣ ಶೇ 29ರಷ್ಟು ಕುಸಿದಿದೆ.`ಮೈ ಹೈರಿಂಗ್ ಕ್ಲಬ್ ಡಾಟ್ ಕಾಂ~ ನಡೆಸಿದ ಸಮೀಕ್ಷೆ ಈ ವಿಷಯ ಹೊರಹಾಕಿದೆ. <br /> <br /> `ಆರ್ಥಿಕ ಅಸ್ಥಿರತೆ ಪರಿಣಾಮವಾಗಿ ಕಂಪೆನಿಗಳು ವೆಚ್ಚ ಕಡಿತಕ್ಕೆ ಮುಂದಾಗಿರುವುದು ಕೂಡ ಒಟ್ಟಾರೆ ನೇಮಕಾತಿ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಕುಮಾರ್ ಹೇಳಿದ್ದಾರೆ.<br /> <br /> ಐ.ಟಿ ಮತ್ತು ಐ.ಟಿ ಆಧಾರಿತ ಉದ್ದಿಮೆ ವಲಯದಲ್ಲಿ ಹೊಸ ನೇಮಕ ಪ್ರಕ್ರಿಯೆ ಹೆಚ್ಚಲು ಇನ್ನೂ 3-4 ತಿಂಗಳು ಬೇಕಾಗಬಹುದು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ದೇಶದ ಸಾಫ್ಟ್ವೇರ್ ಕಂಪೆನಿಗಳಿಗೆ (ಸೇವಾ ರಫ್ತು ಮೂಲಕ) ಹೆಚ್ಚಿನ ಲಾಭ ಬರುತ್ತಿದೆ. ಆದರೆ, ನೇಮಕಾತಿ ಮಂದಗತಿಯಲ್ಲಿವೆ ಎಂದು ಮಾನವ ಸಂಪನ್ಮೂಲ ಸಲಹಾ ಸಂಸ್ಥೆಯೊಂದರ ನಿರ್ದೇಶಕಿ ಪ್ರಾಚಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.<br /> <br /> <strong>ಮತ್ಸ್ಯ ಸಂಪತ್ತು ರಫ್ತು ವೃದ್ಧಿ</strong></p>.<p><strong>ನವದೆಹಲಿ (ಪಿಟಿಐ): </strong> ಸಿಗಡಿ, ಚಿಪ್ಪು ಮೀನು ಸೇರಿದಂತೆ ಪ್ರಮುಖ ಸಾಗರ ಉತ್ಪನ್ನಗಳ ರಫ್ತು ವಹಿವಾಟು ಕಳೆದ ಹಣಕಾಸು ವರ್ಷದಲ್ಲಿ ಶೇ 20ರಷ್ಟು ಹೆಚ್ಚಿದ್ದು, ರೂ1881 ಕೋಟಿ (34.20 ಕೋಟಿ ಡಾಲರ್) ವಹಿವಾಟು ನಡೆದಿದೆ ಎಂದು ಕೃಷಿ ಇಲಾಖೆ ಹೇಳಿದೆ. <br /> <br /> ದಕ್ಷಿಣ ಏಷ್ಯಾ, ಜಪಾನ್ ಮತ್ತು ಅಮೆರಿಕ ಮಾರುಕಟ್ಟೆಗಳಿಂದ ಈ ಸರಕುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿದೆ ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಇಲ್ಲಿ ತಿಳಿಸಿದ್ದಾರೆ.2010-11ನೇ ಸಾಲಿನಲ್ಲಿ ರೂ1567 ಕೋಟಿ (28.50 ಕೋಟಿ ಡಾಲರ್) ವಹಿವಾಟು ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಜಾಗತಿಕ ಮಟ್ಟದಲ್ಲಿನ ಆರ್ಥಿಕ ಪರಿಸ್ಥಿತಿಯ ಅಸ್ಥಿರತೆಯಿಂದಾಗಿ ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಕಂಪೆನಿಗಳು ಹೊಸ ನೇಮಕಾತಿಗೆ ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಮೇ ತಿಂಗಳಲ್ಲಿ ಐ.ಟಿ ಕ್ಷೇತ್ರದ ನೇಮಕಾತಿ ಪ್ರಮಾಣ ಶೇ 29ರಷ್ಟು ಕುಸಿದಿದೆ.`ಮೈ ಹೈರಿಂಗ್ ಕ್ಲಬ್ ಡಾಟ್ ಕಾಂ~ ನಡೆಸಿದ ಸಮೀಕ್ಷೆ ಈ ವಿಷಯ ಹೊರಹಾಕಿದೆ. <br /> <br /> `ಆರ್ಥಿಕ ಅಸ್ಥಿರತೆ ಪರಿಣಾಮವಾಗಿ ಕಂಪೆನಿಗಳು ವೆಚ್ಚ ಕಡಿತಕ್ಕೆ ಮುಂದಾಗಿರುವುದು ಕೂಡ ಒಟ್ಟಾರೆ ನೇಮಕಾತಿ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಕುಮಾರ್ ಹೇಳಿದ್ದಾರೆ.<br /> <br /> ಐ.ಟಿ ಮತ್ತು ಐ.ಟಿ ಆಧಾರಿತ ಉದ್ದಿಮೆ ವಲಯದಲ್ಲಿ ಹೊಸ ನೇಮಕ ಪ್ರಕ್ರಿಯೆ ಹೆಚ್ಚಲು ಇನ್ನೂ 3-4 ತಿಂಗಳು ಬೇಕಾಗಬಹುದು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ದೇಶದ ಸಾಫ್ಟ್ವೇರ್ ಕಂಪೆನಿಗಳಿಗೆ (ಸೇವಾ ರಫ್ತು ಮೂಲಕ) ಹೆಚ್ಚಿನ ಲಾಭ ಬರುತ್ತಿದೆ. ಆದರೆ, ನೇಮಕಾತಿ ಮಂದಗತಿಯಲ್ಲಿವೆ ಎಂದು ಮಾನವ ಸಂಪನ್ಮೂಲ ಸಲಹಾ ಸಂಸ್ಥೆಯೊಂದರ ನಿರ್ದೇಶಕಿ ಪ್ರಾಚಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.<br /> <br /> <strong>ಮತ್ಸ್ಯ ಸಂಪತ್ತು ರಫ್ತು ವೃದ್ಧಿ</strong></p>.<p><strong>ನವದೆಹಲಿ (ಪಿಟಿಐ): </strong> ಸಿಗಡಿ, ಚಿಪ್ಪು ಮೀನು ಸೇರಿದಂತೆ ಪ್ರಮುಖ ಸಾಗರ ಉತ್ಪನ್ನಗಳ ರಫ್ತು ವಹಿವಾಟು ಕಳೆದ ಹಣಕಾಸು ವರ್ಷದಲ್ಲಿ ಶೇ 20ರಷ್ಟು ಹೆಚ್ಚಿದ್ದು, ರೂ1881 ಕೋಟಿ (34.20 ಕೋಟಿ ಡಾಲರ್) ವಹಿವಾಟು ನಡೆದಿದೆ ಎಂದು ಕೃಷಿ ಇಲಾಖೆ ಹೇಳಿದೆ. <br /> <br /> ದಕ್ಷಿಣ ಏಷ್ಯಾ, ಜಪಾನ್ ಮತ್ತು ಅಮೆರಿಕ ಮಾರುಕಟ್ಟೆಗಳಿಂದ ಈ ಸರಕುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿದೆ ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಇಲ್ಲಿ ತಿಳಿಸಿದ್ದಾರೆ.2010-11ನೇ ಸಾಲಿನಲ್ಲಿ ರೂ1567 ಕೋಟಿ (28.50 ಕೋಟಿ ಡಾಲರ್) ವಹಿವಾಟು ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>