<p><strong>ನವದೆಹಲಿ (ಪಿಟಿಐ): </strong>ಲಂಡನ್ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ದೇಶದ ಹೆಮ್ಮೆಗೆ ಕಾರಣರಾದ ಸುಶೀಲ್ ಕುಮಾರ್, ಮೇರಿ ಕೋಮ್ ಹಾಗೂ ಯೋಗೀಶ್ವರ್ ದತ್ ಅವರು ಅದ್ದೂರಿ ಸ್ವಾಗತದ ನಡುವೆ ತವರು ನಾಡಿಗೆ ಕಾಲಿರಿಸಿದರು.<br /> <br /> ಮಂಗಳವಾರ ಮುಂಜಾನೆ ಆಗಮಿಸಿದ ಕಂಚಿನ ಪದಕ ವಿಜೇತ ಬಾಕ್ಸರ್ ಮೇರಿ ಅವರಿಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಅಭಿಮಾನಿಗಳು ಜೈಕಾರ ಹಾಕುವ ಮೂಲಕ ಬರಮಾಡಿಕೊಂಡರು. ಕ್ರಿಕೆಟೇತರ ಕ್ರೀಡಾಪಟುಗಳಿಗೆ ಈ ಹಿಂದೆ ಇಷ್ಟೊಂದು ಅದ್ದೂರಿ ಸ್ವಾಗತ ಲಭಿಸಿರಲಿಕ್ಕಿಲ್ಲ.<br /> <br /> ಅವಳಿ ಮಕ್ಕಳ ತಾಯಿ ಮೇರಿ ಪತಿ ಆನ್ಲೇರ್ ಕೋಮ್ ಹಾಗೂ ತಾಯಿ ಅಖಾಮ್ ಕೋಮ್ ಜೊತೆ ಆಗಮಿಸಿದರು. ಒಲಿಂಪಿಕ್ಸ್ನಲ್ಲಿ ಇದೇ ಮೊದಲ ಬಾರಿ ಮಹಿಳಾ ಬಾಕ್ಸಿಂಗ್ಗೆ ಅವಕಾಶ ನೀಡಲಾಗಿತ್ತು. 51 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಕೋಮ್ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಶ್ರೇಯಕ್ಕೆ ಅವರು ಕಾರಣರಾಗಿದ್ದಾರೆ.<br /> <br /> `ಬಾಕ್ಸಿಂಗ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಸಾಧನೆ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ಆದರೆ ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ ಎಂಬ ಕೊರಗು ನನ್ನಲ್ಲಿದೆ. ಸೆಮಿಫೈನಲ್ ಬೌಟ್ನಲ್ಲಿ ಏನಾಯಿತು ಎಂಬುದು ನನಗೆ ಗೊತ್ತಾಗಲಿಲ್ಲ. ರಿಂಗ್ನೊಳಗೆ ನನ್ನ ಪಾದಚಲನೆ ಚುರುಕಾಗಿರಲಿಲ್ಲ. ತುಂಬಾ ಗೊಂದಲಕ್ಕೆ ಒಳಗಾಗಿದ್ದೆ~ ಎಂದು 29 ವರ್ಷ ವಯಸ್ಸಿನ ಮೇರಿ ನುಡಿದರು.<br /> <br /> ಸೆಮಿಫೈನಲ್ ಬೌಟ್ನಲ್ಲಿ ಮೇರಿ ಗ್ರೇಟ್ ಬ್ರಿಟನ್ನ ನಿಕೋಲಾ ಆ್ಯಡಮ್ಸ ಎದುರು ಸೋಲು ಕಂಡಿದ್ದರು. ಈ ವಿಭಾಗದಲ್ಲಿ ಆ್ಯಡಮ್ಸ ಚಿನ್ನದ ಪದಕ ಗೆದ್ದರು. <br /> <br /> `ಆ ದಿನವೇ ನನ್ನ ಪಾಲಿಗೆ ಸರಿಯಾಗಿರಲಿಲ್ಲ. ಯಾವಾಗಲೂ ಆಕ್ರಮಣಕಾರಿ ಮೂಡಿನಲ್ಲಿರುತ್ತಿದ್ದ ನನಗೆ ಸೆಮಿಫೈನಲ್ ಬೌಟ್ನಲ್ಲಿ ಏನಾಯಿತು ಎಂಬುದೇ ಗೊತ್ತಾಗಲಿಲ್ಲ. ನಿಕೋಲಾ ಅವರಿಗೆ ಜನರ ಬೆಂಬಲವೂ ಇತ್ತು. <br /> <br /> ಅವರು ಜೋರಾಗಿ ಕೂಗುವ ಮೂಲಕ ಆತಿಥೇಯ ರಾಷ್ಟ್ರದ ಬಾಕ್ಸರ್ಗೆ ಬೆಂಬಲ ನೀಡುತ್ತಿದ್ದರು. ನಾನು ಸಾಮಾನ್ಯವಾಗಿ ಇದರಿಂದ ವಿಚಲಿತವಾಗುವುದಿಲ್ಲ. ಆದರೆ ಸೆಮಿಫೈನಲ್ನಲ್ಲಿ ಏಕೆ ಆ ರೀತಿ ಆಯಿತು ಎಂಬುದು ನನಗೆ ಗೊತ್ತಾಗುತ್ತಿಲ್ಲ~ ಎಂದರು.<br /> <br /> `ಆದರೆ ಪದಕ ಗೆಲ್ಲಬೇಕೆಂಬ ನನ್ನ ಕನಸು ನನಸಾಗಿದೆ. ಇಷ್ಟಕ್ಕೆ ನಾನು ಸುಮ್ಮನಾಗುವುದಿಲ್ಲ. ರಯೋ ಡಿ ಜನೈರೊ ಒಲಿಂಪಿಕ್ಸ್ ನವರೆಗೆ ರಿಂಗ್ನೊಳಗಿನ ನನ್ನ ಹೋರಾಟ ಮುಂದುವರಿಯಲಿದೆ. ಅದಕ್ಕೆ ನನ್ನ ದೇಹ ಸ್ಪಂದಿಸಲಿದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಪ್ರಯತ್ನ ಮಾತ್ರ ಮುಂದುವರಿಯಲಿದೆ~ ಎಂದು ಮಣಿಪುರದ ಬಾಕ್ಸರ್ ನುಡಿದರು.<br /> <br /> ಪುರುಷರ ಬಾಕ್ಸಿಂಗ್ನಲ್ಲಿ ವಿವಾದಕ್ಕೆ ಕಾರಣವಾದ ರೆಫರಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಈ ಬಗ್ಗೆ ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ. ರೆಫರಿಗಳು ಸೂಕ್ತ ತರಬೇತಿ ಪಡೆಯದೇ ಇರಬಹುದು~ ಎಂದರು.<br /> <br /> `ಪುರುಷರು ಪದಕ ಗೆಲ್ಲಲು ಸಾಧ್ಯವಾಗದ್ದು ಎಲ್ಲರನ್ನೂ ನಿರಾಶೆಯಲ್ಲಿ ಮುಳುಗಿಸಿದೆ. ಏಕೆಂದರೆ ಅವರು ತುಂಬಾ ಕಷ್ಟಪಟ್ಟಿದ್ದರು. ಸಾಕಷ್ಟು ಸಿದ್ಧತೆ ಹಾಗೂ ಅಭ್ಯಾಸ ನಡೆಸಿದ್ದರು~ ಎಂದೂ ಮೇರಿ ಹೇಳಿದರು. ಮೇರಿ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದರು.<br /> <br /> <strong>ಮೇರಿಗೆ ಸನ್ಮಾನ:</strong> ಸಾಧಕಿ ಮೇರಿ ಅವರಿಗೆ ಮಂಗಳವಾರ ಬುಡಕಟ್ಟು ವ್ಯವಹಾರಗಳ ಸಚಿವಾಲಯ 10 ಲಕ್ಷ ರೂಪಾಯಿ ಬಹುಮಾನ ನೀಡಿ ಸನ್ಮಾನಿಸಿತು. ಇದು ಪದಕ ಗೆದ್ದ ಬಳಿಕ ಮೇರಿ ಪಾಲಿಗೆ ಮೊದಲ ಸನ್ಮಾನ ಸಮಾರಂಭ.<br /> <br /> ಈ ಸಂದರ್ಭದಲ್ಲಿ ಜಾನಪದ ಕಲಾವಿದರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಅವರೊಂದಿಗೆ ಮೇರಿ ಕೂಡ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಬಾಕ್ಸರ್ಗೆ ಸಚಿವ ವಿ.ಕಿಶೋರ್ ಚಂದ್ರ ಸನ್ಮಾನಿಸಿದರು. <br /> <br /> `ನನ್ನ ಪಾಲಿಗೆ ಇದೊಂದು ವಿಶೇಷ ಕ್ಷಣ. ಎಲ್ಲಾ ಕಡೆಯಿಂದ ನನಗೆ ಬೆಂಬಲವಾಗುತ್ತಿದೆ. ಇದೇ ನನ್ನ ಈ ಸಾಧನೆಗೆ ಕಾರಣ~ ಎಂದು ಸನ್ಮಾನ ಸ್ವೀಕರಿಸಿದ ಮೇರಿ ನುಡಿದರು.<br /> <br /> ಸುಶೀಲ್, ದತ್ಗೂ ಆತ್ಮೀಯ ಸ್ವಾಗತ: ಸೋಮವಾರ ರಾತ್ರಿ ಆಗಮಿಸಿದ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಹಾಗೂ ಯೋಗೀಶ್ವರ್ ದತ್ ಅವರಿಗೂ ಆತ್ಮೀಯ ಸ್ವಾಗತ ದೊರೆಯಿತು.<br /> <br /> ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳ ಬೆಳ್ಳಿ ಪದಕ ವಿಜೇತ ಸುಶೀಲ್ ಅವರನ್ನು ಮುತ್ತಿಕೊಂಡರು. ಬಳಿಕ ತಮ್ಮ ಭುಜದ ಮೇಲೆ ಕೂರಿಸಿಕೊಂಡು ಸಂಭ್ರಮಿಸಿದರು. ಪಟಾಕಿ ಸಿಡಿಸಿ ಖುಷಿಪಟ್ಟರು. `ಸುಶೀಲ್, ಯೋಗೀಶ್ವರ್ ಕಿ ಜೈ~ ಎಂಬ ಘೋಷಣೆ ಕೂಗಿದರು. <br /> <br /> ಬಪ್ರೋಲಾದ ಇಡೀ ಗ್ರಾಮದ ಜನರು ವಿಮಾನ ನಿಲ್ದಾಣದ ಬಳಿ ಸೇರಿದಂತೆ ಭಾಸವಾಯಿತು. ಯುವ ಕುಸ್ತಿಪಟುಗಳ ತಮ್ಮ ಹೀರೊಗಳನ್ನು ಬರಮಾಡಿಕೊಂಡರು. ಬಳಿಕ ಅವರನ್ನು ತೆರೆದ ಜೀಪಿನಲ್ಲಿ ಪಾಲಮ್ ದೇವಾಲಯಕ್ಕೆ ಕರೆದುಕೊಂಡು ಹೋಗಲಾಯಿತು.</p>.<p><strong>ಸ್ಟೈಸ್ಜೆಟ್ನಲ್ಲಿ ಉಚಿತ ಪ್ರಯಾಣ</strong></p>.<p><strong>ನವದೆಹಲಿ (ಪಿಟಿಐ): </strong>ಲಂಡನ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳು ಸ್ಟೈಸ್ಜೆಟ್ನಲ್ಲಿ ಜೀವನಪೂರ್ತಿ ಉಚಿತ ಪ್ರಯಾಣ ಮಾಡಬಹುದು ಎಂದು ವಾಯುಯಾನ ಸಂಸ್ಥೆ ಸ್ಪೈಸ್ಜೆಟ್ ಪ್ರಕಟಿಸಿದೆ.<br /> <br /> `ಸುಶೀಲ್ ಕುಮಾರ್, ವಿಜಯ್ ಕುಮಾರ್, ಮೇರಿ ಕೋಮ್, ಸೈನಾ ನೆಹ್ವಾಲ್, ಗಗನ್ ನಾರಂಗ್ ಹಾಗೂ ಯೋಗೀಶ್ವರ್ ದತ್ ಅವರು ಅದ್ಭುತ ಸಾಧನೆ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪದಕ ವಿಜೇತರಿಗೆ ಉಚಿತ ವಾಗಿ ಏರ್ ಟಿಕೆಟ್ ನೀಡಲು ಸ್ಟೈಸ್ಜೆಟ್ ಲಿಮಿಟೆಡ್ ಬಯಸುತ್ತದೆ~ ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಲಂಡನ್ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ದೇಶದ ಹೆಮ್ಮೆಗೆ ಕಾರಣರಾದ ಸುಶೀಲ್ ಕುಮಾರ್, ಮೇರಿ ಕೋಮ್ ಹಾಗೂ ಯೋಗೀಶ್ವರ್ ದತ್ ಅವರು ಅದ್ದೂರಿ ಸ್ವಾಗತದ ನಡುವೆ ತವರು ನಾಡಿಗೆ ಕಾಲಿರಿಸಿದರು.<br /> <br /> ಮಂಗಳವಾರ ಮುಂಜಾನೆ ಆಗಮಿಸಿದ ಕಂಚಿನ ಪದಕ ವಿಜೇತ ಬಾಕ್ಸರ್ ಮೇರಿ ಅವರಿಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಅಭಿಮಾನಿಗಳು ಜೈಕಾರ ಹಾಕುವ ಮೂಲಕ ಬರಮಾಡಿಕೊಂಡರು. ಕ್ರಿಕೆಟೇತರ ಕ್ರೀಡಾಪಟುಗಳಿಗೆ ಈ ಹಿಂದೆ ಇಷ್ಟೊಂದು ಅದ್ದೂರಿ ಸ್ವಾಗತ ಲಭಿಸಿರಲಿಕ್ಕಿಲ್ಲ.<br /> <br /> ಅವಳಿ ಮಕ್ಕಳ ತಾಯಿ ಮೇರಿ ಪತಿ ಆನ್ಲೇರ್ ಕೋಮ್ ಹಾಗೂ ತಾಯಿ ಅಖಾಮ್ ಕೋಮ್ ಜೊತೆ ಆಗಮಿಸಿದರು. ಒಲಿಂಪಿಕ್ಸ್ನಲ್ಲಿ ಇದೇ ಮೊದಲ ಬಾರಿ ಮಹಿಳಾ ಬಾಕ್ಸಿಂಗ್ಗೆ ಅವಕಾಶ ನೀಡಲಾಗಿತ್ತು. 51 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಕೋಮ್ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಶ್ರೇಯಕ್ಕೆ ಅವರು ಕಾರಣರಾಗಿದ್ದಾರೆ.<br /> <br /> `ಬಾಕ್ಸಿಂಗ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಸಾಧನೆ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ಆದರೆ ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ ಎಂಬ ಕೊರಗು ನನ್ನಲ್ಲಿದೆ. ಸೆಮಿಫೈನಲ್ ಬೌಟ್ನಲ್ಲಿ ಏನಾಯಿತು ಎಂಬುದು ನನಗೆ ಗೊತ್ತಾಗಲಿಲ್ಲ. ರಿಂಗ್ನೊಳಗೆ ನನ್ನ ಪಾದಚಲನೆ ಚುರುಕಾಗಿರಲಿಲ್ಲ. ತುಂಬಾ ಗೊಂದಲಕ್ಕೆ ಒಳಗಾಗಿದ್ದೆ~ ಎಂದು 29 ವರ್ಷ ವಯಸ್ಸಿನ ಮೇರಿ ನುಡಿದರು.<br /> <br /> ಸೆಮಿಫೈನಲ್ ಬೌಟ್ನಲ್ಲಿ ಮೇರಿ ಗ್ರೇಟ್ ಬ್ರಿಟನ್ನ ನಿಕೋಲಾ ಆ್ಯಡಮ್ಸ ಎದುರು ಸೋಲು ಕಂಡಿದ್ದರು. ಈ ವಿಭಾಗದಲ್ಲಿ ಆ್ಯಡಮ್ಸ ಚಿನ್ನದ ಪದಕ ಗೆದ್ದರು. <br /> <br /> `ಆ ದಿನವೇ ನನ್ನ ಪಾಲಿಗೆ ಸರಿಯಾಗಿರಲಿಲ್ಲ. ಯಾವಾಗಲೂ ಆಕ್ರಮಣಕಾರಿ ಮೂಡಿನಲ್ಲಿರುತ್ತಿದ್ದ ನನಗೆ ಸೆಮಿಫೈನಲ್ ಬೌಟ್ನಲ್ಲಿ ಏನಾಯಿತು ಎಂಬುದೇ ಗೊತ್ತಾಗಲಿಲ್ಲ. ನಿಕೋಲಾ ಅವರಿಗೆ ಜನರ ಬೆಂಬಲವೂ ಇತ್ತು. <br /> <br /> ಅವರು ಜೋರಾಗಿ ಕೂಗುವ ಮೂಲಕ ಆತಿಥೇಯ ರಾಷ್ಟ್ರದ ಬಾಕ್ಸರ್ಗೆ ಬೆಂಬಲ ನೀಡುತ್ತಿದ್ದರು. ನಾನು ಸಾಮಾನ್ಯವಾಗಿ ಇದರಿಂದ ವಿಚಲಿತವಾಗುವುದಿಲ್ಲ. ಆದರೆ ಸೆಮಿಫೈನಲ್ನಲ್ಲಿ ಏಕೆ ಆ ರೀತಿ ಆಯಿತು ಎಂಬುದು ನನಗೆ ಗೊತ್ತಾಗುತ್ತಿಲ್ಲ~ ಎಂದರು.<br /> <br /> `ಆದರೆ ಪದಕ ಗೆಲ್ಲಬೇಕೆಂಬ ನನ್ನ ಕನಸು ನನಸಾಗಿದೆ. ಇಷ್ಟಕ್ಕೆ ನಾನು ಸುಮ್ಮನಾಗುವುದಿಲ್ಲ. ರಯೋ ಡಿ ಜನೈರೊ ಒಲಿಂಪಿಕ್ಸ್ ನವರೆಗೆ ರಿಂಗ್ನೊಳಗಿನ ನನ್ನ ಹೋರಾಟ ಮುಂದುವರಿಯಲಿದೆ. ಅದಕ್ಕೆ ನನ್ನ ದೇಹ ಸ್ಪಂದಿಸಲಿದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಪ್ರಯತ್ನ ಮಾತ್ರ ಮುಂದುವರಿಯಲಿದೆ~ ಎಂದು ಮಣಿಪುರದ ಬಾಕ್ಸರ್ ನುಡಿದರು.<br /> <br /> ಪುರುಷರ ಬಾಕ್ಸಿಂಗ್ನಲ್ಲಿ ವಿವಾದಕ್ಕೆ ಕಾರಣವಾದ ರೆಫರಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಈ ಬಗ್ಗೆ ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ. ರೆಫರಿಗಳು ಸೂಕ್ತ ತರಬೇತಿ ಪಡೆಯದೇ ಇರಬಹುದು~ ಎಂದರು.<br /> <br /> `ಪುರುಷರು ಪದಕ ಗೆಲ್ಲಲು ಸಾಧ್ಯವಾಗದ್ದು ಎಲ್ಲರನ್ನೂ ನಿರಾಶೆಯಲ್ಲಿ ಮುಳುಗಿಸಿದೆ. ಏಕೆಂದರೆ ಅವರು ತುಂಬಾ ಕಷ್ಟಪಟ್ಟಿದ್ದರು. ಸಾಕಷ್ಟು ಸಿದ್ಧತೆ ಹಾಗೂ ಅಭ್ಯಾಸ ನಡೆಸಿದ್ದರು~ ಎಂದೂ ಮೇರಿ ಹೇಳಿದರು. ಮೇರಿ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದರು.<br /> <br /> <strong>ಮೇರಿಗೆ ಸನ್ಮಾನ:</strong> ಸಾಧಕಿ ಮೇರಿ ಅವರಿಗೆ ಮಂಗಳವಾರ ಬುಡಕಟ್ಟು ವ್ಯವಹಾರಗಳ ಸಚಿವಾಲಯ 10 ಲಕ್ಷ ರೂಪಾಯಿ ಬಹುಮಾನ ನೀಡಿ ಸನ್ಮಾನಿಸಿತು. ಇದು ಪದಕ ಗೆದ್ದ ಬಳಿಕ ಮೇರಿ ಪಾಲಿಗೆ ಮೊದಲ ಸನ್ಮಾನ ಸಮಾರಂಭ.<br /> <br /> ಈ ಸಂದರ್ಭದಲ್ಲಿ ಜಾನಪದ ಕಲಾವಿದರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಅವರೊಂದಿಗೆ ಮೇರಿ ಕೂಡ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಬಾಕ್ಸರ್ಗೆ ಸಚಿವ ವಿ.ಕಿಶೋರ್ ಚಂದ್ರ ಸನ್ಮಾನಿಸಿದರು. <br /> <br /> `ನನ್ನ ಪಾಲಿಗೆ ಇದೊಂದು ವಿಶೇಷ ಕ್ಷಣ. ಎಲ್ಲಾ ಕಡೆಯಿಂದ ನನಗೆ ಬೆಂಬಲವಾಗುತ್ತಿದೆ. ಇದೇ ನನ್ನ ಈ ಸಾಧನೆಗೆ ಕಾರಣ~ ಎಂದು ಸನ್ಮಾನ ಸ್ವೀಕರಿಸಿದ ಮೇರಿ ನುಡಿದರು.<br /> <br /> ಸುಶೀಲ್, ದತ್ಗೂ ಆತ್ಮೀಯ ಸ್ವಾಗತ: ಸೋಮವಾರ ರಾತ್ರಿ ಆಗಮಿಸಿದ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಹಾಗೂ ಯೋಗೀಶ್ವರ್ ದತ್ ಅವರಿಗೂ ಆತ್ಮೀಯ ಸ್ವಾಗತ ದೊರೆಯಿತು.<br /> <br /> ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳ ಬೆಳ್ಳಿ ಪದಕ ವಿಜೇತ ಸುಶೀಲ್ ಅವರನ್ನು ಮುತ್ತಿಕೊಂಡರು. ಬಳಿಕ ತಮ್ಮ ಭುಜದ ಮೇಲೆ ಕೂರಿಸಿಕೊಂಡು ಸಂಭ್ರಮಿಸಿದರು. ಪಟಾಕಿ ಸಿಡಿಸಿ ಖುಷಿಪಟ್ಟರು. `ಸುಶೀಲ್, ಯೋಗೀಶ್ವರ್ ಕಿ ಜೈ~ ಎಂಬ ಘೋಷಣೆ ಕೂಗಿದರು. <br /> <br /> ಬಪ್ರೋಲಾದ ಇಡೀ ಗ್ರಾಮದ ಜನರು ವಿಮಾನ ನಿಲ್ದಾಣದ ಬಳಿ ಸೇರಿದಂತೆ ಭಾಸವಾಯಿತು. ಯುವ ಕುಸ್ತಿಪಟುಗಳ ತಮ್ಮ ಹೀರೊಗಳನ್ನು ಬರಮಾಡಿಕೊಂಡರು. ಬಳಿಕ ಅವರನ್ನು ತೆರೆದ ಜೀಪಿನಲ್ಲಿ ಪಾಲಮ್ ದೇವಾಲಯಕ್ಕೆ ಕರೆದುಕೊಂಡು ಹೋಗಲಾಯಿತು.</p>.<p><strong>ಸ್ಟೈಸ್ಜೆಟ್ನಲ್ಲಿ ಉಚಿತ ಪ್ರಯಾಣ</strong></p>.<p><strong>ನವದೆಹಲಿ (ಪಿಟಿಐ): </strong>ಲಂಡನ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳು ಸ್ಟೈಸ್ಜೆಟ್ನಲ್ಲಿ ಜೀವನಪೂರ್ತಿ ಉಚಿತ ಪ್ರಯಾಣ ಮಾಡಬಹುದು ಎಂದು ವಾಯುಯಾನ ಸಂಸ್ಥೆ ಸ್ಪೈಸ್ಜೆಟ್ ಪ್ರಕಟಿಸಿದೆ.<br /> <br /> `ಸುಶೀಲ್ ಕುಮಾರ್, ವಿಜಯ್ ಕುಮಾರ್, ಮೇರಿ ಕೋಮ್, ಸೈನಾ ನೆಹ್ವಾಲ್, ಗಗನ್ ನಾರಂಗ್ ಹಾಗೂ ಯೋಗೀಶ್ವರ್ ದತ್ ಅವರು ಅದ್ಭುತ ಸಾಧನೆ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪದಕ ವಿಜೇತರಿಗೆ ಉಚಿತ ವಾಗಿ ಏರ್ ಟಿಕೆಟ್ ನೀಡಲು ಸ್ಟೈಸ್ಜೆಟ್ ಲಿಮಿಟೆಡ್ ಬಯಸುತ್ತದೆ~ ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>