<p><strong>ಪುತ್ತೂರು: </strong>ಪರಸ್ಪರ ಪ್ರೀತಿಸುತ್ತಿದ್ದ ವಿಭಿನ್ನ ಜಾತಿಗೆ ಸೇರಿದ ಯುವ ಜೋಡಿಯೊಂದು ವಿವಾಹಕ್ಕೆ ಹೆತ್ತವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ಪುತ್ತೂರು ನಗರ ಠಾಣೆಗೆ ಬಂದು ವಿವಾಹ ನೆರವೇರಿಸಿ ಕೊಡಬೇಕೆಂದು ಕೇಳಿಕೊಂಡಿದ್ದಾರೆ. ಠಾಣೆಯಲ್ಲಿ ವಿವಾಹ ಮಾಡಿಕೊಡಲು ಅವಕಾಶವಿಲ್ಲದ ಕಾರಣ ಪೊಲೀಸರು ನಿರಾಕರಿಸಿದ್ದಾರೆ.<br /> <br /> ಮುಂಡೂರು ಗ್ರಾಮದ, ಬಡಕೋಡಿ ಸಮೀಪದ ನಡುಬೈಲು ನಿವಾಸಿ ಮಾಧವ ಮಡಿವಾಳ ಅವರ ಪುತ್ರ ಹರೀಶ್ (25) ಮತ್ತು ಮಂಗಳೂರಿನ ಕುಡುಪು ನಿವಾಸಿ ರತ್ನಾಕರ ದೇವಾಡಿಗರ ಪುತ್ರಿ ಅಶ್ವಿತಾ (24), ಠಾಣೆಗೆ ಬಂದು ವಿವಾಹ ನೆರವೇರಿಸಿ ಕೊಡುವಂತೆ ಕೇಳಿಕೊಂಡರು.<br /> <br /> ಸುದ್ದಿಗಾರೊಂದಿಗೆ ಮಾತನಾಡಿದ ಹರೀಶ್, ನಾವಿಬ್ಬರು ಮೂರು ವರ್ಷಗಳಿಂದ ಪ್ರೀತಿಸಿ ವಿವಾಹವಾಗಲು ನಿರ್ಧರಿಸಿದ್ದೇವೆ. ಎರಡೂ ಕಡೆಯಿಂದ ಹೆತ್ತವರ ವಿರೋಧ ವ್ಯಕ್ತವಾಗಿದೆ. ವಿವಾಹ ನಡೆಸಿಕೊಡುವಂತೆ ವಿನಂತಿಸಲು ಠಾಣೆಗೆ ಬಂದಿದ್ದೇವೆ ಎಂದರು. ಕೂಲಿ ಕೆಲಸ ಮಾಡಿಯಾದರೂ ಆಕೆಯನ್ನು ಸಾಕುತ್ತೇನೆ ಎಂದು ಹೇಳಿದರು.<br /> <br /> ಮಡಿವಾಳ ಜಾತಿಗೆ ಸೇರಿದ ಹರೀಶ್ ಮತ್ತು ದೇವಾಡಿಗ ಜಾತಿಗೆ ಸೇರಿದ ಅಶ್ವಿತಾ ವಿವಾಹಕ್ಕೆ ಜಾತಿ ಅಡ್ಡಿಯಾಗಿದೆ. ಪುತ್ತೂರಿನಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿರುವ ಈ ಜೋಡಿ ಮಂಗಳವಾರ ಮಂಗಳೂರಿಗೆ ತೆರಳಿ ನೋಂದಣಿ ಮೂಲಕ ವಿವಾಹವಾಗಲು ಬಯಸಿರುವುದಾಗಿ ತಿಳಿದು ಬಂದಿದೆ.<br /> <br /> ಭೂತ ಕೋಲದಲ್ಲಿ ವಾದ್ಯಗಾರನಾಗಿರುವ ಹರೀಶ್ಗೆ ಭೂತದ ಕೋಲವೊಂದರಲ್ಲಿ ಅಶ್ವಿತಾ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮಂಗಳೂರಿನ ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿತಾರ ಸಂಬಂಧಿಕರ ಮನೆ ಪುತ್ತೂರು ವ್ಯಾಪ್ತಿಯಲ್ಲೇ ಇರುವುದರಿಂದ ಅವರಿಬ್ಬರು ಭೇಟಿ ನಿರಂತರವಾಗಿ ನಡೆಯುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು: </strong>ಪರಸ್ಪರ ಪ್ರೀತಿಸುತ್ತಿದ್ದ ವಿಭಿನ್ನ ಜಾತಿಗೆ ಸೇರಿದ ಯುವ ಜೋಡಿಯೊಂದು ವಿವಾಹಕ್ಕೆ ಹೆತ್ತವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ಪುತ್ತೂರು ನಗರ ಠಾಣೆಗೆ ಬಂದು ವಿವಾಹ ನೆರವೇರಿಸಿ ಕೊಡಬೇಕೆಂದು ಕೇಳಿಕೊಂಡಿದ್ದಾರೆ. ಠಾಣೆಯಲ್ಲಿ ವಿವಾಹ ಮಾಡಿಕೊಡಲು ಅವಕಾಶವಿಲ್ಲದ ಕಾರಣ ಪೊಲೀಸರು ನಿರಾಕರಿಸಿದ್ದಾರೆ.<br /> <br /> ಮುಂಡೂರು ಗ್ರಾಮದ, ಬಡಕೋಡಿ ಸಮೀಪದ ನಡುಬೈಲು ನಿವಾಸಿ ಮಾಧವ ಮಡಿವಾಳ ಅವರ ಪುತ್ರ ಹರೀಶ್ (25) ಮತ್ತು ಮಂಗಳೂರಿನ ಕುಡುಪು ನಿವಾಸಿ ರತ್ನಾಕರ ದೇವಾಡಿಗರ ಪುತ್ರಿ ಅಶ್ವಿತಾ (24), ಠಾಣೆಗೆ ಬಂದು ವಿವಾಹ ನೆರವೇರಿಸಿ ಕೊಡುವಂತೆ ಕೇಳಿಕೊಂಡರು.<br /> <br /> ಸುದ್ದಿಗಾರೊಂದಿಗೆ ಮಾತನಾಡಿದ ಹರೀಶ್, ನಾವಿಬ್ಬರು ಮೂರು ವರ್ಷಗಳಿಂದ ಪ್ರೀತಿಸಿ ವಿವಾಹವಾಗಲು ನಿರ್ಧರಿಸಿದ್ದೇವೆ. ಎರಡೂ ಕಡೆಯಿಂದ ಹೆತ್ತವರ ವಿರೋಧ ವ್ಯಕ್ತವಾಗಿದೆ. ವಿವಾಹ ನಡೆಸಿಕೊಡುವಂತೆ ವಿನಂತಿಸಲು ಠಾಣೆಗೆ ಬಂದಿದ್ದೇವೆ ಎಂದರು. ಕೂಲಿ ಕೆಲಸ ಮಾಡಿಯಾದರೂ ಆಕೆಯನ್ನು ಸಾಕುತ್ತೇನೆ ಎಂದು ಹೇಳಿದರು.<br /> <br /> ಮಡಿವಾಳ ಜಾತಿಗೆ ಸೇರಿದ ಹರೀಶ್ ಮತ್ತು ದೇವಾಡಿಗ ಜಾತಿಗೆ ಸೇರಿದ ಅಶ್ವಿತಾ ವಿವಾಹಕ್ಕೆ ಜಾತಿ ಅಡ್ಡಿಯಾಗಿದೆ. ಪುತ್ತೂರಿನಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿರುವ ಈ ಜೋಡಿ ಮಂಗಳವಾರ ಮಂಗಳೂರಿಗೆ ತೆರಳಿ ನೋಂದಣಿ ಮೂಲಕ ವಿವಾಹವಾಗಲು ಬಯಸಿರುವುದಾಗಿ ತಿಳಿದು ಬಂದಿದೆ.<br /> <br /> ಭೂತ ಕೋಲದಲ್ಲಿ ವಾದ್ಯಗಾರನಾಗಿರುವ ಹರೀಶ್ಗೆ ಭೂತದ ಕೋಲವೊಂದರಲ್ಲಿ ಅಶ್ವಿತಾ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮಂಗಳೂರಿನ ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿತಾರ ಸಂಬಂಧಿಕರ ಮನೆ ಪುತ್ತೂರು ವ್ಯಾಪ್ತಿಯಲ್ಲೇ ಇರುವುದರಿಂದ ಅವರಿಬ್ಬರು ಭೇಟಿ ನಿರಂತರವಾಗಿ ನಡೆಯುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>