<p><strong>ಮೊಳಕಾಲ್ಮುರು</strong>: ಕಡು ಬಡ ಕುಟುಂಬದಲ್ಲಿ ಜನಿಸಿ, ಕಷ್ಟಪಟ್ಟು ವಕೀಲ ಪದವಿ ಪಡೆದು ಇಂದು ರಾಜ್ಯಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ ಅಲಂಕರಿಸಿದವರು ತಾಲ್ಲೂಕಿನ ಕೊಂಡ್ಲಹಳ್ಳಿಯ ಎಚ್. ಕಾಂತರಾಜ್.<br /> <br /> ಕೊಂಡ್ಲಹಳ್ಳಿಯ ಹೊನ್ನಪ್ಪ ಮತ್ತು ಚನ್ನಮ್ಮ ದಂಪತಿ ದ್ವಿತೀಯ ಪುತ್ರರಾದ ಕಾಂತರಾಜ್ (ಜನನ: 1953) 1978 ರಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೈಕೋರ್ಟ್ನಲ್ಲಿ ಸರ್ಕಾರಿ ವಕೀಲರಾಗಿ, ನಂತರ ಹಿಂದುಳಿದ ಆಯೋಗ ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ.<br /> <br /> ಶಾಲಾ ದಿನಗಳಲ್ಲಿ ಬಿಡುವಿನ ವೇಳೆ ಕಂಬಳಿ ನೇಯ್ಗೆ, ಕೂಲಿ ಕೆಲಸಮಾಡುತ್ತಾ ಬಂದ ಕೂಲಿ ಹಣದಲ್ಲಿ ವ್ಯಾಸಂಗ ಮಾಡಿದ್ದರು. ಆಗ ಅವರ ಕುಟುಂಬದವರ ಆದಾಯ ದಿನಕ್ಕೆ ರೂ 25!<br /> <br /> ವೃತ್ತಿಯಲ್ಲಿ ತೋರಿದ ನಿಷ್ಠೆಯಿಂದಾಗಿ ಇಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ ಅಲಂಕರಿಸಿರುವ ಅವರು ಮಂಗಳವಾರ `ಪ್ರಜಾವಾಣಿ' ಜತೆ ಮಾತನಾಡಿದರು.<br /> <br /> <strong>ಕಷ್ಟಪಟ್ಟು ಮೇಲೆ ಬಂದ ನೀವು ಈಗ ಉನ್ನತ ಹುದ್ದೆ ಅಲಂಕರಿಸಿದ್ದೀರಿ, ಏನು ಅನಿಸುತ್ತಿದೆ ?</strong><br /> ರೈತ ಕುಟುಂಬದಿಂದ ಬಂದ ನನಗೆ ಈ ಹುದ್ದೆ ಸಿಕ್ಕಿರುವುದು ತುಂಬಾ ಖುಷಿ ತರುವ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ. ನಾನು ವೃತ್ತಿಯನ್ನು ಅತ್ಯಂತ ಪ್ರೀತಿಸಿ, ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಕ್ಕೆ ಇದು ಫಲ ಎಂದು ಭಾವಿಸಿದ್ದೇನೆ.<br /> <br /> <strong>ನಿಮ್ಮ ಮುಂದಿರುವ ಆಶಯಗಳು ಏನು?</strong><br /> ಬೇರುಮಟ್ಟದ ಜನರ ಶ್ರೇಯಸ್ಸಿಗಾಗಿ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ನ್ಯಾಯ, ಹಿತಾಸಕ್ತಿ ಕಾರ್ಯಕ್ರಮಗಳನ್ನು ಎತ್ತಿ ಹಿಡಿಯುವ ಕೆಲಸ, ಮಾನವ ಹಕ್ಕುಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದು.<br /> <br /> <strong>ವಕೀಲರಿಗೆ ನಿಮ್ಮ ಸಲಹೆಯೇನು?</strong><br /> ಯಾರೇ ಆಗಲಿ ಧರ್ಮ ಹಾಗೂ ಕಾನೂನಿನಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು, ಕಕ್ಷಿದಾರರ ಹಿತಕ್ಕಿಂತಲೂ ಕಾನೂನಿನ ಹಿತ ಕಾಯುವುದು ಮುಖ್ಯ ಎಂಬುದು ನನ್ನ ಸಲಹೆ.<br /> <br /> <strong>ನಿಮ್ಮ ಆಕಾಂಕ್ಷೆ?</strong><br /> ಸಾಂವಿಧಾನಿಕ ಆಶಯಗಳಿಗೆ ಯಾವುದೇ ಕಾರಣಕ್ಕೂ ಧಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು</strong>: ಕಡು ಬಡ ಕುಟುಂಬದಲ್ಲಿ ಜನಿಸಿ, ಕಷ್ಟಪಟ್ಟು ವಕೀಲ ಪದವಿ ಪಡೆದು ಇಂದು ರಾಜ್ಯಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ ಅಲಂಕರಿಸಿದವರು ತಾಲ್ಲೂಕಿನ ಕೊಂಡ್ಲಹಳ್ಳಿಯ ಎಚ್. ಕಾಂತರಾಜ್.<br /> <br /> ಕೊಂಡ್ಲಹಳ್ಳಿಯ ಹೊನ್ನಪ್ಪ ಮತ್ತು ಚನ್ನಮ್ಮ ದಂಪತಿ ದ್ವಿತೀಯ ಪುತ್ರರಾದ ಕಾಂತರಾಜ್ (ಜನನ: 1953) 1978 ರಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೈಕೋರ್ಟ್ನಲ್ಲಿ ಸರ್ಕಾರಿ ವಕೀಲರಾಗಿ, ನಂತರ ಹಿಂದುಳಿದ ಆಯೋಗ ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ.<br /> <br /> ಶಾಲಾ ದಿನಗಳಲ್ಲಿ ಬಿಡುವಿನ ವೇಳೆ ಕಂಬಳಿ ನೇಯ್ಗೆ, ಕೂಲಿ ಕೆಲಸಮಾಡುತ್ತಾ ಬಂದ ಕೂಲಿ ಹಣದಲ್ಲಿ ವ್ಯಾಸಂಗ ಮಾಡಿದ್ದರು. ಆಗ ಅವರ ಕುಟುಂಬದವರ ಆದಾಯ ದಿನಕ್ಕೆ ರೂ 25!<br /> <br /> ವೃತ್ತಿಯಲ್ಲಿ ತೋರಿದ ನಿಷ್ಠೆಯಿಂದಾಗಿ ಇಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ ಅಲಂಕರಿಸಿರುವ ಅವರು ಮಂಗಳವಾರ `ಪ್ರಜಾವಾಣಿ' ಜತೆ ಮಾತನಾಡಿದರು.<br /> <br /> <strong>ಕಷ್ಟಪಟ್ಟು ಮೇಲೆ ಬಂದ ನೀವು ಈಗ ಉನ್ನತ ಹುದ್ದೆ ಅಲಂಕರಿಸಿದ್ದೀರಿ, ಏನು ಅನಿಸುತ್ತಿದೆ ?</strong><br /> ರೈತ ಕುಟುಂಬದಿಂದ ಬಂದ ನನಗೆ ಈ ಹುದ್ದೆ ಸಿಕ್ಕಿರುವುದು ತುಂಬಾ ಖುಷಿ ತರುವ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ. ನಾನು ವೃತ್ತಿಯನ್ನು ಅತ್ಯಂತ ಪ್ರೀತಿಸಿ, ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಕ್ಕೆ ಇದು ಫಲ ಎಂದು ಭಾವಿಸಿದ್ದೇನೆ.<br /> <br /> <strong>ನಿಮ್ಮ ಮುಂದಿರುವ ಆಶಯಗಳು ಏನು?</strong><br /> ಬೇರುಮಟ್ಟದ ಜನರ ಶ್ರೇಯಸ್ಸಿಗಾಗಿ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ನ್ಯಾಯ, ಹಿತಾಸಕ್ತಿ ಕಾರ್ಯಕ್ರಮಗಳನ್ನು ಎತ್ತಿ ಹಿಡಿಯುವ ಕೆಲಸ, ಮಾನವ ಹಕ್ಕುಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದು.<br /> <br /> <strong>ವಕೀಲರಿಗೆ ನಿಮ್ಮ ಸಲಹೆಯೇನು?</strong><br /> ಯಾರೇ ಆಗಲಿ ಧರ್ಮ ಹಾಗೂ ಕಾನೂನಿನಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು, ಕಕ್ಷಿದಾರರ ಹಿತಕ್ಕಿಂತಲೂ ಕಾನೂನಿನ ಹಿತ ಕಾಯುವುದು ಮುಖ್ಯ ಎಂಬುದು ನನ್ನ ಸಲಹೆ.<br /> <br /> <strong>ನಿಮ್ಮ ಆಕಾಂಕ್ಷೆ?</strong><br /> ಸಾಂವಿಧಾನಿಕ ಆಶಯಗಳಿಗೆ ಯಾವುದೇ ಕಾರಣಕ್ಕೂ ಧಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>