<p><strong>ಕುಮಟಾ:</strong> ತಾಲ್ಲೂಕಿನ ದೀವಗಿ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಉದ್ದಿಮೆಯೊಂದರ ಸ್ಥಾಪನೆಗಾಗಿ ಖಾಸಗಿ ಜಾಗದಲ್ಲಿ ಕಡಿದ ಗುಡ್ಡದ ನಡುವಿನಿಂದ ನೀರಿನ ಒರತೆ ಹರಿಯುವ ದೃಶ್ಯ ನಯನ ಮನೋಹರವಾಗಿದೆ.<br /> <br /> ಕಳೆದ ಹಲವು ದಿನಗಳಿಂದ ಮಳೆಯಿಲ್ಲದಿದ್ದರೂ ಕತ್ತರಿಸಿದ ಗುಡ್ಡದ ನಡುವಿನಿಂದ ಮಾತ್ರ ಇಲ್ಲಿ ಜೀವ ಸೆಲೆಯಂತೆ ನೀರು ಹರಿಯುತ್ತಿದೆ. ಇದಕ್ಕೆ ಕಾರಣ ಈ ಪ್ರದೇಶದ ಹಿಂದೆ ಅಂದರೆ, ಸುಮಾರು ಎರಡು-ಮೂರು ಕಿಲೋ ಮೀಟರ್ ದೂರದ ಮಾನೀರ, ಮೂರೂರು ಗುಡ್ಡ ಪ್ರದೇಶದಲ್ಲಿ ಅಲ್ಲಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಹಳ್ಳಗಳಿವೆ. ಆ ಹಳ್ಳದಲ್ಲಿ ಸಂಗ್ರಹಗೊಂಡ ಮಳೆ ನೀರು ಅರ್ಧ ಬೇಸಿಗೆ ಬರುವವರೆಗೂ ಇಂಗುವುದಿಲ್ಲ. ಬೇಸಿಗೆಯಲ್ಲೂ. ನೈಸರ್ಗಿಕವಾಗಿ ಇ್ಲ್ಲಲಿ ನೆಲದಲ್ಲಿ ಇಂಗುವ ನೀರು ಕೆಳಭಾಗದ ಪ್ರದೇಶಕ್ಕೆ ಸದಾ ನೀರು ಪೂರೈಕೆ ಮಾಡುತ್ತದೆ. ಕೆಳಭಾಗದ ಗುಡ್ಡ ಕತ್ತರಿಸಿದಾಗ ಈ ಸೋಜಿಗ ಸಂಗತಿ ಬೆಳಕಿಗೆ ಬಂದಿತು. ನೀರಿಂಗಿಸುವ ಯೋಜನೆಯ ಬಗ್ಗೆ ನಮಗೆಲ್ಲ ಇದು ನಿಸರ್ಗವೇ ತೋರಿಸಿಕೊಟ್ಟ ಒಂದು ಅತ್ಯುತ್ತಮ ಮಾದರಿಯಾಗಿದೆ. ಹ್ದ್ದೆದಾರಿ ಬದಿಯ ಈ ಮನೋಹರ ದೃಶ್ಯವನ್ನು ವಾಹನಗಳಲ್ಲಿ ಪ್ರಯಾಣಿಸುವವರು ನೋಡಿ ಆನಂದಿಸುತ್ತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಮಟಾ:</strong> ತಾಲ್ಲೂಕಿನ ದೀವಗಿ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಉದ್ದಿಮೆಯೊಂದರ ಸ್ಥಾಪನೆಗಾಗಿ ಖಾಸಗಿ ಜಾಗದಲ್ಲಿ ಕಡಿದ ಗುಡ್ಡದ ನಡುವಿನಿಂದ ನೀರಿನ ಒರತೆ ಹರಿಯುವ ದೃಶ್ಯ ನಯನ ಮನೋಹರವಾಗಿದೆ.<br /> <br /> ಕಳೆದ ಹಲವು ದಿನಗಳಿಂದ ಮಳೆಯಿಲ್ಲದಿದ್ದರೂ ಕತ್ತರಿಸಿದ ಗುಡ್ಡದ ನಡುವಿನಿಂದ ಮಾತ್ರ ಇಲ್ಲಿ ಜೀವ ಸೆಲೆಯಂತೆ ನೀರು ಹರಿಯುತ್ತಿದೆ. ಇದಕ್ಕೆ ಕಾರಣ ಈ ಪ್ರದೇಶದ ಹಿಂದೆ ಅಂದರೆ, ಸುಮಾರು ಎರಡು-ಮೂರು ಕಿಲೋ ಮೀಟರ್ ದೂರದ ಮಾನೀರ, ಮೂರೂರು ಗುಡ್ಡ ಪ್ರದೇಶದಲ್ಲಿ ಅಲ್ಲಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಹಳ್ಳಗಳಿವೆ. ಆ ಹಳ್ಳದಲ್ಲಿ ಸಂಗ್ರಹಗೊಂಡ ಮಳೆ ನೀರು ಅರ್ಧ ಬೇಸಿಗೆ ಬರುವವರೆಗೂ ಇಂಗುವುದಿಲ್ಲ. ಬೇಸಿಗೆಯಲ್ಲೂ. ನೈಸರ್ಗಿಕವಾಗಿ ಇ್ಲ್ಲಲಿ ನೆಲದಲ್ಲಿ ಇಂಗುವ ನೀರು ಕೆಳಭಾಗದ ಪ್ರದೇಶಕ್ಕೆ ಸದಾ ನೀರು ಪೂರೈಕೆ ಮಾಡುತ್ತದೆ. ಕೆಳಭಾಗದ ಗುಡ್ಡ ಕತ್ತರಿಸಿದಾಗ ಈ ಸೋಜಿಗ ಸಂಗತಿ ಬೆಳಕಿಗೆ ಬಂದಿತು. ನೀರಿಂಗಿಸುವ ಯೋಜನೆಯ ಬಗ್ಗೆ ನಮಗೆಲ್ಲ ಇದು ನಿಸರ್ಗವೇ ತೋರಿಸಿಕೊಟ್ಟ ಒಂದು ಅತ್ಯುತ್ತಮ ಮಾದರಿಯಾಗಿದೆ. ಹ್ದ್ದೆದಾರಿ ಬದಿಯ ಈ ಮನೋಹರ ದೃಶ್ಯವನ್ನು ವಾಹನಗಳಲ್ಲಿ ಪ್ರಯಾಣಿಸುವವರು ನೋಡಿ ಆನಂದಿಸುತ್ತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>