<p><strong>ಲಕ್ಕುಂಡಿ (ಗದಗ):</strong> ಲಕ್ಕುಂಡಿ ಉತ್ಸವದ ಅಂಗವಾಗಿ ಅತ್ತಿಮಬ್ಬೆ ವೇದಿಕೆಯಲ್ಲಿ ಭಾನುವಾರ ಸಂಜೆ ರಾಜ್ಯ ವಾರ್ತಾ ಇಲಾಖೆ ಏರ್ಪಡಿಸಿದ್ದ ಲೇಸರ್ ಶೋ ಜನರ ಮನರಂಜಿಸಿತು. <br /> <br /> ಬಣ್ಣದ ಕಿರಣಗಳ ಲೋಕ ಸೃಷ್ಟಿಯಾಗಿತ್ತು. ಮಿಂಚಿನಂತೆ ಕಿರಣಗಳು ಆಕಾಶಕ್ಕೆ ನೆಗೆದು ಜನಸಮೂಹದ ಮಧ್ಯೆ ಹಾಯ್ದು ಮಾಯವಾದಾಗ ಜನ ಕಣ್ಣರಳಿಸಿ ನೋಡಿ ಹರ್ಷಪಟ್ಟರು. <br /> ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಚುಟುಕಾಗಿ ಹಾಗೂ ನವಿರಾಗಿ ತಿಳಿಸಿದ ಈ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ಆರೋಗ್ಯ ಕವಚ, ಹೈನುಗಾರಿಕೆ ನೆರವು, ಉಚಿತ ವಿದ್ಯುತ್ ಪೂರೈಕೆ, ಕಲಿಯುವ ಮಕ್ಕಳಿಗೆ ಬೈಸಿಕಲ್, ವಿವಿಧ ಮಾಸಾಶನ, ಮೂಲ ಸೌಕರ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತ ಆಕರ್ಷಕ ಲೇಸರ್ ಶೋ ಜನಮನ ಸೆಳೆಯಿತು. <br /> <br /> ಲೇಸರ್ ಬೀಮ್ ಕಿರಣಗಳ ಮೂಲಕ ವಿಸ್ಮಯ ಲೋಕವನ್ನು ಸೃಷ್ಟಿಸಲಾಯಿತು. ಡಾ. ರಾಜಕುಮಾರ ಅವರ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಲೇಸರ್ ಬೀಮ್ ವೇದಿಕೆ ತುಂಬ ಪ್ರದರ್ಶಿಸಿದಾಗ ಜನ ಚಪ್ಪಾಳೆ ತಟ್ಟಿದರು. <br /> <br /> ವಂದೇ ಮಾತರಂ ದೇಶಭಕ್ತಿ ಗೀತೆಗೆ ವರ್ಣರಂಜಿತ ಲೇಸರ್ ಕಿರಣಗಳು ವೇದಿಕೆಯ ಸುತ್ತಮುತ್ತ ಚಿತ್ತಾರ ಮೂಡಿಸಿ ತ್ರಿವರ್ಣಗಳು ವೇದಿಕೆಯಲ್ಲಿ ಮೂಡಿದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ , ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೀರಣ್ಣ ತುರಮರಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಕುಂಡಿ (ಗದಗ):</strong> ಲಕ್ಕುಂಡಿ ಉತ್ಸವದ ಅಂಗವಾಗಿ ಅತ್ತಿಮಬ್ಬೆ ವೇದಿಕೆಯಲ್ಲಿ ಭಾನುವಾರ ಸಂಜೆ ರಾಜ್ಯ ವಾರ್ತಾ ಇಲಾಖೆ ಏರ್ಪಡಿಸಿದ್ದ ಲೇಸರ್ ಶೋ ಜನರ ಮನರಂಜಿಸಿತು. <br /> <br /> ಬಣ್ಣದ ಕಿರಣಗಳ ಲೋಕ ಸೃಷ್ಟಿಯಾಗಿತ್ತು. ಮಿಂಚಿನಂತೆ ಕಿರಣಗಳು ಆಕಾಶಕ್ಕೆ ನೆಗೆದು ಜನಸಮೂಹದ ಮಧ್ಯೆ ಹಾಯ್ದು ಮಾಯವಾದಾಗ ಜನ ಕಣ್ಣರಳಿಸಿ ನೋಡಿ ಹರ್ಷಪಟ್ಟರು. <br /> ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಚುಟುಕಾಗಿ ಹಾಗೂ ನವಿರಾಗಿ ತಿಳಿಸಿದ ಈ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ಆರೋಗ್ಯ ಕವಚ, ಹೈನುಗಾರಿಕೆ ನೆರವು, ಉಚಿತ ವಿದ್ಯುತ್ ಪೂರೈಕೆ, ಕಲಿಯುವ ಮಕ್ಕಳಿಗೆ ಬೈಸಿಕಲ್, ವಿವಿಧ ಮಾಸಾಶನ, ಮೂಲ ಸೌಕರ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತ ಆಕರ್ಷಕ ಲೇಸರ್ ಶೋ ಜನಮನ ಸೆಳೆಯಿತು. <br /> <br /> ಲೇಸರ್ ಬೀಮ್ ಕಿರಣಗಳ ಮೂಲಕ ವಿಸ್ಮಯ ಲೋಕವನ್ನು ಸೃಷ್ಟಿಸಲಾಯಿತು. ಡಾ. ರಾಜಕುಮಾರ ಅವರ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಲೇಸರ್ ಬೀಮ್ ವೇದಿಕೆ ತುಂಬ ಪ್ರದರ್ಶಿಸಿದಾಗ ಜನ ಚಪ್ಪಾಳೆ ತಟ್ಟಿದರು. <br /> <br /> ವಂದೇ ಮಾತರಂ ದೇಶಭಕ್ತಿ ಗೀತೆಗೆ ವರ್ಣರಂಜಿತ ಲೇಸರ್ ಕಿರಣಗಳು ವೇದಿಕೆಯ ಸುತ್ತಮುತ್ತ ಚಿತ್ತಾರ ಮೂಡಿಸಿ ತ್ರಿವರ್ಣಗಳು ವೇದಿಕೆಯಲ್ಲಿ ಮೂಡಿದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ , ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೀರಣ್ಣ ತುರಮರಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>